ETV Bharat / state

ಪ್ರತ್ಯೇಕ ವಿಜಯನಗರ ಜಿಲ್ಲೆಗೆ ಕಂಪ್ಲಿ ತಾಲೂಕು ಸೇರಿಸಲು ಶಾಸಕ‌ ಗಣೇಶ್ ಆಗ್ರಹ

ಪ್ರತ್ಯೇಕ ವಿಜಯನಗರ ಜಿಲ್ಲಾ ವ್ಯಾಪ್ತಿಗೆ ಕಂಪ್ಲಿ ತಾಲೂಕನ್ನು‌ ಸೇರಿಸಬೇಕೆಂದು ಕಾಂಗ್ರೆಸ್ ಶಾಸಕ‌ ಜೆ.ಎನ್.ಗಣೇಶ್ ಆಗ್ರಹಿಸಿದ್ದಾರೆ.

author img

By

Published : Jan 7, 2020, 8:20 AM IST

ganesh
ಶಾಸಕ‌ ಗಣೇಶ್

ಬಳ್ಳಾರಿ: ಪ್ರತ್ಯೇಕ ವಿಜಯನಗರ ಜಿಲ್ಲಾ ವ್ಯಾಪ್ತಿಗೆ ಕಂಪ್ಲಿ ತಾಲೂಕನ್ನು‌ ಸೇರಿಸಬೇಕೆಂದು ಕಾಂಗ್ರೆಸ್ ಶಾಸಕ‌ ಜೆ.ಎನ್.ಗಣೇಶ್ ಆಗ್ರಹಿಸಿದ್ದಾರೆ.

ಜಿಲ್ಲೆಯ ‌ಕಂಪ್ಲಿ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಅವರು, ಪ್ರತ್ಯೇಕ ವಿಜಯನಗರ‌ ಜಿಲ್ಲೆ ರಚನೆಯನ್ನ ಬೆಂಬಲಿಸಿ ಈ ಹಿಂದೆ ಶಾಸಕ ಆನಂದಸಿಂಗ್ ಅವರ ನೇತೃತ್ವದ‌ ನಿಯೋಗದೊಂದಿಗೆ ನಾನೂ ಕೂಡ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ‌ಅವರನ್ನು‌ ಭೇಟಿ‌ ಮಾಡಿದ್ದೆ ಎಂದರು.

ನಂತರ ಮಾತು ಮುಂದುವರೆಸಿದ ಅವರು, ಪ್ರತ್ಯೇಕ ವಿಜಯನಗರ ಜಿಲ್ಲೆಯನ್ನಾಗಿ ರಚನೆ ಮಾಡುವುದೇ ಆದ್ರೆ, ಕಂಪ್ಲಿ ತಾಲೂಕನ್ನು‌ ವಿಜಯನಗರ ಜಿಲ್ಲಾ ವ್ಯಾಪ್ತಿಗೆ ಸೇರಿಸಿಕೊಳ್ಳುವಂತೆ ಮನವಿ‌ ಮಾಡಿಕೊಂಡಿರುವೆ.‌ ಅದರೊಂದಿಗೆ ಯಾವ ಯಾವ ತಾಲೂಕಗಳನ್ನೂ ಕೂಡ ಸೇರಿಸಬೇಕೆಂಬ ಪಟ್ಟಿಯನ್ನೂ‌ ಮಾಡಲಾಗಿತ್ತು. ಆದ್ರೆ,‌ ಜಿಲ್ಲಾಡಳಿತ ‌ತಯಾರಿಸಿದ ಪಟ್ಟಿಯಿಂದ ಕಂಪ್ಲಿ ತಾಲೂಕು ಕೈಬಿಡಲಾಗಿದೆ. ಅದಕ್ಕೆ ನಾನು ಸುತಾರಾಂ ಒಪ್ಪುವುದಿಲ್ಲ ಎಂದಿದ್ದಾರೆ.

ಶಾಸಕ‌ ಗಣೇಶ್

ಕೂಸು ಹುಟ್ಟೋಕೆ ಮುಂಚೆಯೇ ಕುಲಾಯಿ ತೊಡಿಸಿದ್ರು ಎಂಬಂತೆ ಪ್ರತ್ಯೇಕ ವಿಜಯನಗರ ಜಿಲ್ಲೆ ರಚನೆಯೇ ಆಗಿಲ್ಲ. ಆದರೂ ಜಿಲ್ಲೆಯ ತಾಲೂಕುಗಳ ಸೇರಿಸಲು ತೀವ್ರ ತರನಾದ ಪೈಪೋಟಿ ಶುರುವಾಗಿದೆ. ಜಿಲ್ಲೆಯ ಕಂಪ್ಲಿ - ಕೂಡ್ಲಿಗಿ ತಾಲೂಕುಗಳನ್ನ ನೂತನ ವಿಜಯನಗರ ಜಿಲ್ಲೆಗೆ ಸೇರಿಸುವಂತೆ ಆಯಾ ವಿಧಾನಸಭಾ ಕ್ಷೇತ್ರದ ಶಾಸಕರು ಆಗ್ರಹಿಸಿದ್ದಾರೆ. ವಿಜಯನಗರ ಜಿಲ್ಲಾ ವ್ಯಾಪ್ತಿಗೆ ಕಂಪ್ಲಿ ತಾಲೂಕು ಸೇರಿಸುವಂತೆ ಆಗ್ರಹಿಸಿ ಶಾಸಕ ಗಣೇಶ ಹೋರಾಟ ಮಾಡಲು ನಿರ್ಧರಿಸಿದ್ದಾರೆ.

ಮತ್ತೊಮ್ಮೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಬಳಿ ನಿಯೋಗ ಕೊಂಡೊಯ್ಯಲು ಶಾಸಕ ಗಣೇಶ್ ಸಜ್ಜಾಗಿದ್ದು, ಅದರ ಜೊತೆಗೆ ಹೋರಾಟಕ್ಕೂ ರೆಡಿ ಎಂದಿದ್ದಾರೆ. ವಿಜಯನಗರ ಜಿಲ್ಲೆ ರಚನೆ ಮಾಡುವಂತೆ ಆಗ್ರಹಿಸಲು ನಾನೂ ಕೂಡಾ ಆನಂದಣ್ಣನ ಜೊತೆ ಸಿಎಂ ಭೇಟಿ ಮಾಡಿದ್ದೆ. ಈಗ ನಮ್ಮ ತಾಲೂಕು ಬಿಟ್ರೆ ಹೇಗೆ ಅಂತಾ ಅವರು ಪ್ರಶ್ನಿಸಿದ್ದಾರೆ.

ಬಳ್ಳಾರಿ: ಪ್ರತ್ಯೇಕ ವಿಜಯನಗರ ಜಿಲ್ಲಾ ವ್ಯಾಪ್ತಿಗೆ ಕಂಪ್ಲಿ ತಾಲೂಕನ್ನು‌ ಸೇರಿಸಬೇಕೆಂದು ಕಾಂಗ್ರೆಸ್ ಶಾಸಕ‌ ಜೆ.ಎನ್.ಗಣೇಶ್ ಆಗ್ರಹಿಸಿದ್ದಾರೆ.

ಜಿಲ್ಲೆಯ ‌ಕಂಪ್ಲಿ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಅವರು, ಪ್ರತ್ಯೇಕ ವಿಜಯನಗರ‌ ಜಿಲ್ಲೆ ರಚನೆಯನ್ನ ಬೆಂಬಲಿಸಿ ಈ ಹಿಂದೆ ಶಾಸಕ ಆನಂದಸಿಂಗ್ ಅವರ ನೇತೃತ್ವದ‌ ನಿಯೋಗದೊಂದಿಗೆ ನಾನೂ ಕೂಡ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ‌ಅವರನ್ನು‌ ಭೇಟಿ‌ ಮಾಡಿದ್ದೆ ಎಂದರು.

ನಂತರ ಮಾತು ಮುಂದುವರೆಸಿದ ಅವರು, ಪ್ರತ್ಯೇಕ ವಿಜಯನಗರ ಜಿಲ್ಲೆಯನ್ನಾಗಿ ರಚನೆ ಮಾಡುವುದೇ ಆದ್ರೆ, ಕಂಪ್ಲಿ ತಾಲೂಕನ್ನು‌ ವಿಜಯನಗರ ಜಿಲ್ಲಾ ವ್ಯಾಪ್ತಿಗೆ ಸೇರಿಸಿಕೊಳ್ಳುವಂತೆ ಮನವಿ‌ ಮಾಡಿಕೊಂಡಿರುವೆ.‌ ಅದರೊಂದಿಗೆ ಯಾವ ಯಾವ ತಾಲೂಕಗಳನ್ನೂ ಕೂಡ ಸೇರಿಸಬೇಕೆಂಬ ಪಟ್ಟಿಯನ್ನೂ‌ ಮಾಡಲಾಗಿತ್ತು. ಆದ್ರೆ,‌ ಜಿಲ್ಲಾಡಳಿತ ‌ತಯಾರಿಸಿದ ಪಟ್ಟಿಯಿಂದ ಕಂಪ್ಲಿ ತಾಲೂಕು ಕೈಬಿಡಲಾಗಿದೆ. ಅದಕ್ಕೆ ನಾನು ಸುತಾರಾಂ ಒಪ್ಪುವುದಿಲ್ಲ ಎಂದಿದ್ದಾರೆ.

ಶಾಸಕ‌ ಗಣೇಶ್

ಕೂಸು ಹುಟ್ಟೋಕೆ ಮುಂಚೆಯೇ ಕುಲಾಯಿ ತೊಡಿಸಿದ್ರು ಎಂಬಂತೆ ಪ್ರತ್ಯೇಕ ವಿಜಯನಗರ ಜಿಲ್ಲೆ ರಚನೆಯೇ ಆಗಿಲ್ಲ. ಆದರೂ ಜಿಲ್ಲೆಯ ತಾಲೂಕುಗಳ ಸೇರಿಸಲು ತೀವ್ರ ತರನಾದ ಪೈಪೋಟಿ ಶುರುವಾಗಿದೆ. ಜಿಲ್ಲೆಯ ಕಂಪ್ಲಿ - ಕೂಡ್ಲಿಗಿ ತಾಲೂಕುಗಳನ್ನ ನೂತನ ವಿಜಯನಗರ ಜಿಲ್ಲೆಗೆ ಸೇರಿಸುವಂತೆ ಆಯಾ ವಿಧಾನಸಭಾ ಕ್ಷೇತ್ರದ ಶಾಸಕರು ಆಗ್ರಹಿಸಿದ್ದಾರೆ. ವಿಜಯನಗರ ಜಿಲ್ಲಾ ವ್ಯಾಪ್ತಿಗೆ ಕಂಪ್ಲಿ ತಾಲೂಕು ಸೇರಿಸುವಂತೆ ಆಗ್ರಹಿಸಿ ಶಾಸಕ ಗಣೇಶ ಹೋರಾಟ ಮಾಡಲು ನಿರ್ಧರಿಸಿದ್ದಾರೆ.

ಮತ್ತೊಮ್ಮೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಬಳಿ ನಿಯೋಗ ಕೊಂಡೊಯ್ಯಲು ಶಾಸಕ ಗಣೇಶ್ ಸಜ್ಜಾಗಿದ್ದು, ಅದರ ಜೊತೆಗೆ ಹೋರಾಟಕ್ಕೂ ರೆಡಿ ಎಂದಿದ್ದಾರೆ. ವಿಜಯನಗರ ಜಿಲ್ಲೆ ರಚನೆ ಮಾಡುವಂತೆ ಆಗ್ರಹಿಸಲು ನಾನೂ ಕೂಡಾ ಆನಂದಣ್ಣನ ಜೊತೆ ಸಿಎಂ ಭೇಟಿ ಮಾಡಿದ್ದೆ. ಈಗ ನಮ್ಮ ತಾಲೂಕು ಬಿಟ್ರೆ ಹೇಗೆ ಅಂತಾ ಅವರು ಪ್ರಶ್ನಿಸಿದ್ದಾರೆ.

Intro:ಪ್ರತ್ಯೇಕ ವಿಜಯನಗರ ಜಿಲ್ಲೆಗೆ ಕಂಪ್ಲಿ ತಾಲೂಕನ್ನೂ ಸೇರಿಸಲು ಶಾಸಕ‌ ಗಣೇಶ ಆಗ್ರಹ
ಬಳ್ಳಾರಿ: ಪ್ರತ್ಯೇಕ ವಿಜಯನಗರ ಜಿಲ್ಲಾ ವ್ಯಾಪ್ತಿಗೆ ಕಂಪ್ಲಿ ತಾಲೂಕನ್ನು‌ ಸೇರಿಸಬೇಕೆಂದು ಕಾಂಗ್ರೆಸ್ ಶಾಸಕ‌ ಜೆ.ಎನ್.
ಗಣೇಶ ಆಗ್ರಹಿಸಿದ್ದಾರೆ.
ಜಿಲ್ಲೆಯ ‌ಕಂಪ್ಲಿ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಅವರು‌ ಮಾತಾಡಿ, ಪ್ರತ್ಯೇಕ ವಿಜಯನಗರ‌ ಜಿಲ್ಲೆ ರಚನೆಯನ್ನ ಬೆಂಬಲಿಸಿ ಈ ಹಿಂದೆ ಶಾಸಕ ಆನಂದಸಿಂಗ್ ಅವರ ನೇತೃತ್ವದ‌ ನಿಯೋಗ ದೊಂದಿಗೆ ನಾನೂ ಕೂಡ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ‌ಅವರನ್ನು‌ ಭೇಟಿ‌ ಮಾಡಿದ್ದೆ.‌ ಪ್ರತ್ಯೇಕ ವಿಜಯನಗರ ಜಿಲ್ಲೆಯನ್ನಾಗಿ ರಚನೆ ಮಾಡುವುದೇ ಆದ್ರೆ, ಕಂಪ್ಲಿ ತಾಲೂಕನ್ನು‌ ವಿಜಯನಗರ ಜಿಲ್ಲಾ ವ್ಯಾಪ್ತಿಗೆ ಸೇರಿಸಿಕೊಳ್ಳುವಂತೆ ಮನವಿ‌ ಮಾಡಿಕೊಂಡಿರುವೆ.‌ ಅದರೊಂದಿಗೆ ಯಾವಯಾವ ತಾಲೂಕಗಳನ್ನೂ ಕೂಡ ಸೇರಿಸ ಬೇಕೆಂಬ ಪಟ್ಟಿಯನ್ನೂ‌ ಮಾಡಲಾಗಿತ್ತು. ಆದ್ರೆ,‌ ಜಿಲ್ಲಾಡಳಿತ ‌ತಯಾರಿಸಿದ ಪಟ್ಟಿಯಿಂದ ಕಂಪ್ಲಿ ತಾಲೂಕನ್ನು‌ ಕೈಬಿಡಲಾಗಿದೆ. ಅದಕ್ಕೆ ನಾನು ಸುತಾರಾಂ ಒಪ್ಪುವುದಿಲ್ಲ. ವಿಜಯನಗರ ಜಿಲ್ಲಾ ವ್ಯಾಪ್ತಿಯಿಂದ ಕಂಪ್ಲಿ ತಾಲೂಕನ್ನು‌‌ ಯಾವುದೇ ಕಾರಣಕ್ಕೂ ಕೈ ಬಿಡಲು ನಾನು ಬಿಡಲ್ಲ ಎಂದು ಶಾಸಕ‌‌ ಗಣೇಶ ಪಟ್ಟು ಹಿಡಿದಿದ್ದಾರೆ.
ಕೂಸು ಹುಟ್ಟೋಕೆ ಮುಂಚೆಯೇ ಕುಲಾಹಿ ತೊಡಿಸಿದ್ರು ಎಂಬಂತೆ
ಪ್ರತ್ಯೇಕ ವಿಜಯನಗರ ಜಿಲ್ಲೆ ರಚನೆಯೇ ಆಗಿಲ್ಲ. ಆದರೂ ಜಿಲ್ಲೆಯ ತಾಲೂಕುಗಳ ಸೇರಿಸಲು ತೀವ್ರ ತರನಾದ ಪೈಪೋಟಿ ಶುರುವಾಗಿದೆ.
ಜಿಲ್ಲೆಯ ಕಂಪ್ಲಿ - ಕೂಡ್ಲಿಗಿ ತಾಲೂಕುಗಳನ್ನ ನೂತನ ವಿಜಯನಗರ ಜಿಲ್ಲೆಗೆ ಸೇರಿಸುವಂತೆ ಆಯಾ ವಿಧಾನಸಭಾ ಕ್ಷೇತ್ರದ ಶಾಸಕರು ಆಗ್ರಹಿಸಿದ್ದಾರೆ.
ವಿಜಯನಗರ ಜಿಲ್ಲಾ ವ್ಯಾಪ್ತಿಗೆ ಕಂಪ್ಲಿ ತಾಲೂಕು ಸೇರಿಸುವಂತೆ ಆಗ್ರಹಿಸಿ ಶಾಸಕ ಗಣೇಶ ಹೋರಾಟ ಮಾಡಲು ನಿರ್ಧರಿಸಿದ್ದಾರೆ.
ಮತ್ತೊಮ್ಮೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಬಳಿ ನಿಯೋಗ ಕೊಂಡೊಯ್ಯಲು ಶಾಸಕ ಗಣೇಶ್ ಸಜ್ಜಾಗಿದ್ದು, ಅದರ ಜೊತೆಗೆ ಹೋರಾಟಕ್ಕೂ ರೆಡಿ ಎಂದಿದ್ದಾರೆ ಅವರು
ವಿಜಯನಗರ ಜಿಲ್ಲೆ ರಚನೆ ಮಾಡುವಂತೆ ಆಗ್ರಹಿಸಲು ನಾನೂ ಕೂಡಾ ಆನಂದಣ್ಣನ ಜೊತೆ ಸಿಎಂ ಭೇಟಿ ಮಾಡಿದ್ದೆ. ಈಗ ನಮ್ಮ ತಾಲೂಕು ಬಿಟ್ರೆ ಹೇಗೆ ಅಂತಾ ಶಾಸಕ ಗಣೇಶ ಪ್ರಶ್ನಿಸಿದ್ದಾರೆ.
ಇನ್ನೊಂದೆಡೆ ಕೂಡ್ಲಿಗಿಯನ್ನೂ ವಿಜಯನಗರದಕ್ಕೆ ಸೇರಿಸಿ
ಅಂತಾ ಶಾಸಕ ಎನ್ ವೈ ಗೊಪಾಲ ಕೃಷ್ಣ ಒತ್ತಾಯ ಮಾಡ್ತಿದ್ದಾರೆ.
ಅಷ್ಟೇ ಅಲ್ಲದೇ ಸಿಎಂ ಭೇಟಿ ಮಾಡಿ ಈ ಹಿಂದೆ ಮನವಿ ಕೊಟ್ಟಿ ದ್ದಾರೆ ಗೋಪಾಲಕೃಷ್ಣ.
ಈ ಹಿಂದೆ ವಿಜಯನಗರ ಜಿಲ್ಲೆಗೆ ಸೇರಿಸಬಹುದಾದ ತಾಲೂಕು
ಗಳ ಪಟ್ಟಿಯಲ್ಲಿ ಕಂಪ್ಲಿ ಕ್ಷೇತ್ರವನ್ನ ಕೈಬಿಡಲಾಗಿತ್ತು. ಉದ್ದೇಶಿತ ವಿಜಯನಗರ ಜಿಲ್ಲೆಗೆ ಹೊಸಪೇಟೆಯನ್ನ ಕೇಂದ್ರವಾಗಿಸಿಕೊಂಡು ಹಗರಿಬೊಮ್ಮನಹಳ್ಳಿ, ಹೂವಿನಹಡಗಲಿ, ಹರಪನಹಳ್ಳಿ, ಕೂಡ್ಲಿಗಿ, ಕೊಟ್ಟೂರು ತಾಲೂಕುಗಳನ್ನ ಸೇರಿಸಲು ಪಟ್ಟಿ ಮಾಡಲಾಗಿತ್ತು.
Body:ಆದ್ರೆ ಕಂಪ್ಲಿ ತಾಲೂಕನ್ನು ಬಿಡಲಾಗಿತ್ತು. ಜಿಲ್ಲಾಡಳಿತದ ಪಟ್ಟಿ ಯಿಂದ ಕಂಪ್ಲಿಯನ್ನ ಬಿಡಲಾಗಿದೆ ಎನ್ನಲಾಗುತ್ತಿದೆ.
ಒಟ್ಟಿನಲ್ಲಿ ಈ ವಿಜಯನಗರ ಜಿಲ್ಲೆ ರಚನೆಯ ಕನಸು ನನಸಾಗುತ್ತದೆಯೋ ಇಲ್ಲವೋ ಗೊತ್ತಿಲ್ಲ. ಆದ್ರೆ, ತಾಲೂಕುಗಳ ಸೇರ್ಪಡೆಯ ಹೋರಾಟ ಮಾತ್ರ ತೀವ್ರ ತರನಾಗಿ ನಡೆಯುತ್ತೆ. ಒಳಗೊಳಗೆ ಆಯಾ ಕ್ಷೇತ್ರದ ಜನಪ್ರತಿನಿಧಿಗಳೇ ತಮ್ಮ ತಾಲೂಕನ್ನ ಕೂಡ ವಿಜಯನಗರ ಜಿಲ್ಲಾ ವ್ಯಾಪ್ತಿಗೆ ಸೇರಿಸುವಂತೆ ಒತ್ತಾಯಿಸುತ್ತಿ ರೋದು ರಾಜ್ಯ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_1_KMPL_MLA_GANESH_BYTE_VSL_7203310

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.