ETV Bharat / state

ಜಿಂದಾಲ್ ನೌಕರ ನಿಗೂಢ ನಾಪತ್ತೆ: ಪುತ್ರನಿಗಾಗಿ ಹೆತ್ತವರ ಆಕ್ರಂದನ !

author img

By

Published : Dec 7, 2019, 9:00 PM IST

ಪ್ರತಿಷ್ಠಿತ ಜಿಂದಾಲ್ ಕಂಪನಿಯ ನೌಕರರೊಬ್ಬರು ನಿಗೂಢವಾಗಿ ನಾಪತ್ತೆಯಾಗಿದ್ದು, ಅನೇಕ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

Jindal employee is missing : Ballary
ಜಿಂದಾಲ್ ನೌಕರ ನಿಗೂಢ ನಾಪತ್ತೆ: ಪುತ್ರನಿಗಾಗಿ ಹೆತ್ತವರ ಆಕ್ರಂದನ !

ಬಳ್ಳಾರಿ : ಗಣಿ ಜಿಲ್ಲೆಯ ಪ್ರತಿಷ್ಠಿತ ಜಿಂದಾಲ್ ಕಂಪನಿಯ ನೌಕರರೊಬ್ಬರು ನಿಗೂಢವಾಗಿ ನಾಪತ್ತೆಯಾಗಿದ್ದು ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಈತ 13 ವರ್ಷಗಳಿಂದಲೂ ಜಿಂದಾಲ್​ ಕಂಪನಿಯಲ್ಲಿ ಅಪರೇಟರ್ ಆಗಿ ಕೆಲಸ ಮಾಡಿಕೊಂಡಿದ್ದು, ಎಂದಿನಂತೆ ಮೊನ್ನೆರಾತ್ರಿ ಪಾಳಿಯಲ್ಲಿ ಕೆಲಸಕ್ಕೆ ಹೋಗಿದ್ದಾನೆ. ನಿನ್ನೆ ಬೆಳಗಿನ ಜಾವದವರೆಗೂ ಕೆಲಸ ಮಾಡಿದ ಈತ ನಂತರ ಎಲ್ಲಿಗೆ ಹೋಗಿದ್ದಾನೆಂಬುದರ ಕುರಿತು ಯಾವುದೇ ಮಾಹಿತಿಯಿಲ್ಲ.

ಜಿಂದಾಲ್ ನೌಕರ ನಿಗೂಢ ನಾಪತ್ತೆ: ಪುತ್ರನಿಗಾಗಿ ಹೆತ್ತವರ ಆಕ್ರಂದನ !

ಆತಂಕಗೊಂಡ ದುರ್ಗಣ್ಣ ಕುಟುಂಬಸ್ಥರು ಜಿಂದಾಲ್ ಕಂಪನಿಗೆ ದೌಡಾಯಿಸಿದ್ದಾರೆ. ಆದ್ರೆ ಕಂಪನಿಯ ಆಡಳಿತ ಮಂಡಳಿಯವರು ಒಳಗಡೆ ಬಿಡದೆ ನಿರ್ಲಕ್ಷ್ಯ ವಹಿಸಿದ್ದಾರೆ. ಆಕ್ರೋಶಗೊಂಡ ಕುಟುಂಬಸ್ಥರು ತೋರಣಗಲ್ಲು ಪೊಲೀಸ್ ಠಾಣೆಯಲ್ಲಿ ಆತನನ್ನು ಅಪಹರಿಸಿದ್ದಾರೆಂದು ದೂರು ದಾಖಲಿಸಿದ್ದಾರೆ. ಸದ್ಯ ಈ ಕುರಿತು ತೋರಣಗಲ್ಲು ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇಷ್ಟಾದರೂ ಜಿಂದಾಲ್​ ಕಂಪನಿಯವರು ನಿರ್ಲಕ್ಷ್ಯ ತೋರಿದ ಪರಿಣಾಮ ಕುಟುಂಬಸ್ಥರು ಹಾಗೂ ಸಂಬಂಧಿಕರು ಇವತ್ತು ಬಳ್ಳಾರಿ ಹೊರವಲಯದ ಅಲ್ಲೀಪುರ ಬಳಿ ಜಿಂದಾಲ್ ಕಂಪನಿಗೆ ತೆರಳುವ ಬಸ್ ಗಳನ್ನ ತಡೆದು ಪ್ರತಿಭಟನೆ ನಡೆಸಿದರು. ಸುಮಾರು 15ಕ್ಕೂ ಹೆಚ್ಚು ಬಸ್​ಗಳನ್ನ ತಡೆದುದರಿಂದ ನೂರಾರು ಉದ್ಯೋಗಿಗಳು ಕಂಪನಿಯ ಕೆಲಸಕ್ಕೆ ತೆರಳದೆ ಅಲ್ಲಿಯೇ ಇರಬೇಕಾಯ್ತು. ಮಾಹಿತಿ ತಿಳಿದ ಆರೋಗ್ಯ ಸಚಿವ ಶ್ರೀರಾಮುಲು ಸ್ಥಳಕ್ಕೆ ಭೇಟಿ ನೀಡಿ ಕುಟುಂಬ ಸದಸ್ಯರೊಂದಿಗೆ ಮಾತುಕತೆ ನಡೆಸಿದ್ದಾರೆ. ಇದೀಗ ದುರ್ಗಣ್ಣ ಅವರ ನಿಗೂಢ ನಾಪತ್ತೆ ಅನೇಕ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಬಳ್ಳಾರಿ : ಗಣಿ ಜಿಲ್ಲೆಯ ಪ್ರತಿಷ್ಠಿತ ಜಿಂದಾಲ್ ಕಂಪನಿಯ ನೌಕರರೊಬ್ಬರು ನಿಗೂಢವಾಗಿ ನಾಪತ್ತೆಯಾಗಿದ್ದು ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಈತ 13 ವರ್ಷಗಳಿಂದಲೂ ಜಿಂದಾಲ್​ ಕಂಪನಿಯಲ್ಲಿ ಅಪರೇಟರ್ ಆಗಿ ಕೆಲಸ ಮಾಡಿಕೊಂಡಿದ್ದು, ಎಂದಿನಂತೆ ಮೊನ್ನೆರಾತ್ರಿ ಪಾಳಿಯಲ್ಲಿ ಕೆಲಸಕ್ಕೆ ಹೋಗಿದ್ದಾನೆ. ನಿನ್ನೆ ಬೆಳಗಿನ ಜಾವದವರೆಗೂ ಕೆಲಸ ಮಾಡಿದ ಈತ ನಂತರ ಎಲ್ಲಿಗೆ ಹೋಗಿದ್ದಾನೆಂಬುದರ ಕುರಿತು ಯಾವುದೇ ಮಾಹಿತಿಯಿಲ್ಲ.

ಜಿಂದಾಲ್ ನೌಕರ ನಿಗೂಢ ನಾಪತ್ತೆ: ಪುತ್ರನಿಗಾಗಿ ಹೆತ್ತವರ ಆಕ್ರಂದನ !

ಆತಂಕಗೊಂಡ ದುರ್ಗಣ್ಣ ಕುಟುಂಬಸ್ಥರು ಜಿಂದಾಲ್ ಕಂಪನಿಗೆ ದೌಡಾಯಿಸಿದ್ದಾರೆ. ಆದ್ರೆ ಕಂಪನಿಯ ಆಡಳಿತ ಮಂಡಳಿಯವರು ಒಳಗಡೆ ಬಿಡದೆ ನಿರ್ಲಕ್ಷ್ಯ ವಹಿಸಿದ್ದಾರೆ. ಆಕ್ರೋಶಗೊಂಡ ಕುಟುಂಬಸ್ಥರು ತೋರಣಗಲ್ಲು ಪೊಲೀಸ್ ಠಾಣೆಯಲ್ಲಿ ಆತನನ್ನು ಅಪಹರಿಸಿದ್ದಾರೆಂದು ದೂರು ದಾಖಲಿಸಿದ್ದಾರೆ. ಸದ್ಯ ಈ ಕುರಿತು ತೋರಣಗಲ್ಲು ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇಷ್ಟಾದರೂ ಜಿಂದಾಲ್​ ಕಂಪನಿಯವರು ನಿರ್ಲಕ್ಷ್ಯ ತೋರಿದ ಪರಿಣಾಮ ಕುಟುಂಬಸ್ಥರು ಹಾಗೂ ಸಂಬಂಧಿಕರು ಇವತ್ತು ಬಳ್ಳಾರಿ ಹೊರವಲಯದ ಅಲ್ಲೀಪುರ ಬಳಿ ಜಿಂದಾಲ್ ಕಂಪನಿಗೆ ತೆರಳುವ ಬಸ್ ಗಳನ್ನ ತಡೆದು ಪ್ರತಿಭಟನೆ ನಡೆಸಿದರು. ಸುಮಾರು 15ಕ್ಕೂ ಹೆಚ್ಚು ಬಸ್​ಗಳನ್ನ ತಡೆದುದರಿಂದ ನೂರಾರು ಉದ್ಯೋಗಿಗಳು ಕಂಪನಿಯ ಕೆಲಸಕ್ಕೆ ತೆರಳದೆ ಅಲ್ಲಿಯೇ ಇರಬೇಕಾಯ್ತು. ಮಾಹಿತಿ ತಿಳಿದ ಆರೋಗ್ಯ ಸಚಿವ ಶ್ರೀರಾಮುಲು ಸ್ಥಳಕ್ಕೆ ಭೇಟಿ ನೀಡಿ ಕುಟುಂಬ ಸದಸ್ಯರೊಂದಿಗೆ ಮಾತುಕತೆ ನಡೆಸಿದ್ದಾರೆ. ಇದೀಗ ದುರ್ಗಣ್ಣ ಅವರ ನಿಗೂಢ ನಾಪತ್ತೆ ಅನೇಕ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

Intro:ಸ್ಲಗ್: ಜಿಂದಾಲ್ ನೌಕರ ನಿಗೂಢ ನಾಪತ್ತೆ: ಪುತ್ರನಿಗಾಗಿ ಹೆತ್ತವರ ಆಕ್ರಂದನ...

ಆ್ಯಂಕರ್: ಗಣಿ ಜಿಲ್ಲೆಯ ಪ್ರತಿಷ್ಠಿತ ಜಿಂದಾಲ್ ಕಂಪನಿಯ ನೌಕರರೊಬ್ಬರು ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ಕಳೆದ
13 ವರ್ಷಗಳಿಂದಲೂ ಇದೇ ಕಂಪನಿಯಲ್ಲಿ ಅಪರೇಟರ್ ಆಗಿ
ಕೆಲಸ ಮಾಡಿಕೊಂಡಿದ್ದ. ಎಂದಿನಂತೆ ಮೊನ್ನೆರಾತ್ರಿ ಪಾಳೆಯದಲ್ಲಿ ಕೆಲಸಕ್ಕೆ ಹೋಗಿದ್ದಾನೆ. ನಿನ್ನೆ ಬೆಳಗಿನಜಾವದವರೆಗೂ ಕೆಲಸ ಮಾಡಿದ್ದಾರೆ. ಆದ್ರೆ ತದ ನಂತ್ರ ಎಲ್ಲಿಗೆ ಹೋದ ಅನ್ನೋದೇ ಗೊತ್ತಾಗುತ್ತಿಲ್ಲ. ಇದು ಹೆತ್ತವರ ಆಕ್ರಂದನಕ್ಕೆ ಕಾರಣವಾಗಿದೆ. ಪುತ್ರನಿಗಾಗಿ ಹೆತ್ತವರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ರು.

ವಾ.ಓ.01: ಹೀಗೆ ಕಣ್ಣೀರಿಡುತ್ತಿರುವ ಕುಟುಂಬ. ಜಿಂದಾಲ್ ಕಂಪನಿಗೆ ತೆರಳುವ ಬಸ್ ತಡೆದು ಆಕ್ರೋಶ ವ್ಯಕ್ತಪಡಿಸಿದ್ರು. ಪ್ರತಿಭಟನಾ ಸ್ಥಳಕ್ಕೆ ಸಚಿವ ಶ್ರೀರಾಮುಲು ಭೇಟಿ ನೀಡಿ ಪೋಷಕರೊಂದಿಗೆ ಮಾತುಕತೆ.
ಹೌದು, ಬಳ್ಳಾರಿ ನಗರದ ದೇವಿನಗರದ ನಿವಾಸಿಯಾಗಿರೊ ದುರ್ಗಣ್ಣ ಎಂಬುವರು ಜಿಂದಾಲ್ ಕಂಪನಿಯಲ್ಲಿ ಕಳೆದ 13 ವರ್ಷಗಳಿಂದಲೂ ಅಪರೇಟರ್ ಆಗಿ ಕೆಲಸ ಮಾಡಿಕೊಂಡಿದ್ದರು. ಜಿಂದಾಲ್ ಕಂಪನಿಯ ಕೋಕ್ ಯುನಿಟ್ -4 ರಲ್ಲಿ ಅಪರೇಟರ್ ಆಗಿದ್ದ ದುರ್ಗಣ್ಣ ನಿನ್ನೆ ಬೆಳಗಿನ ಜಾವ 2 ಗಂಟೆ ಸುಮಾರಿಗೆ ನಾಪತ್ತೆಯಾಗಿದ್ಧಾನೆ. ಗುರುವಾರ ರಾತ್ರಿ ಪಾಳಯದಲ್ಲಿ ಕೆಲಸ ಮಾಡಲು ಜಿಂದಾಲ್ ಕಂಪನಿಗೆ ದುರ್ಗಣ್ಣ ಎಂದಿನಂತೆ ತೆರಳಿದ್ದಾನೆ. ಎಂದಿನಂತೆ ಕಂಪನಿಯಲ್ಲಿ ಚೆಕ್ ಇನ್ ಆಗುವಾಗ ಥಂಬ್ ಪ್ರೆಸ್ ಮಾಡಿ ಹೊಳಗಡೆ ಹೋಗಿದ್ದಾರೆ. ಆದ್ರೆ ನಿನ್ನೆ ಬೆಳಗಿನ ಜಾವ 7 ಗಂಟೆಯಾದ್ರೂ ದುರ್ಗಣ್ಣ ಪೋನ್ ಗಳು ಹಾನ್ ಆಗಿಲ್ಲ. ಎರಡು ಬಂದ್ ಆಗಿವೆ. ಬೆಳಿಗ್ಗೆ 7.30ಕ್ಕೆ ಮನೆಗೆ ವಾಪಾಸ್ ಬರುತ್ತಿದ್ದ ದುರ್ಗಣ್ಣ ಮನೆಗೂ ವಾಪಾಸ್ ಬಂದಿಲ್ಲ. ನಿಗೂಢವಾಗಿ ಕಣ್ಮರೆಯಾಗಿದ್ದಾನೆ. ತತ್ ಕ್ಷಣ ಕುಟುಂಬಸ್ಥರು ಪೋನ್ ಕರೆ ಮಾಡುವ ಪ್ರಯತ್ನ ಮಾಡಿದ್ದಾರೆ. ಆದ್ರೆ ದುರ್ಗಣ್ಣ ಬಳಸುತ್ತಿದ್ದ ಎರಡು ಪೋನ್ ಗಳು ಸ್ವಿಚ್ ಆಫ್ ಆಗಿವೆ. ಇದರಿಂದ ಆತಂಕ ಗೊಂಡ ದುರ್ಗಣ್ಣ ಕುಟುಂಬಸ್ಥರು ಜಿಂದಾಲ್ ಕಂಪನಿಗೆ ದೌಡಾ ಯಿಸಿದ್ದಾರೆ. ಆದ್ರೆ ಕಂಪನಿಯ ಆಡಳಿತ ಮಂಡಳಿಯವರು ಒಳಗಡೆ ಬಿಡದೇ ನಿರ್ಲಕ್ಷ್ಯ ವಹಿಸಿದ್ದಾರೆ. ಆದ್ರೆ ಕುಟುಂಬಸ್ಥರು ತೋರಣಗಲ್ಲು ಪೊಲೀಸ್ ಠಾಣೆಯಲ್ಲಿ ಅಪಹರಿಸಿದ ದೂರು ದಾಖಲಿಸಲಾಗಿದೆ. ಈ ಸಂಬಂಧ ತೋರಣಗಲ್ಲು ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.ಆದ್ರೆ ಜಿಂದಾಲ್ ಕಂಪನಿ ಆಡಳಿತ ಮಂಡಳಿ ನಿರ್ಲಕ್ಷ್ಯದಿಂದ ನನ್ನ ಮಗ ನಾಪತ್ತೆಯಾಗಿ
ದ್ದಾನೆ ಅಂತಾ ಆರೋಪಿಸುತ್ತಿದ್ದಾರೆ.

(ಬೈಟ್: ಮಂಜುಳಾ, ದುರ್ಗಣ್ಣ ತಾಯಿ)

ವಾ.ಓ.02: ಇಷ್ಟೆಲ್ಲಾದ್ರೂ ಜಿಂದಾಲ್ ಕಂಪನಿಯ ಆಡಳಿತ ಮಂಡಳಿ ಮಾತ್ರ ಈ ವಿಚಾರವನ್ನ ಗಂಭೀರವಾಗಿ ತೆಗೆದು ಕೊಂಡಿರಲಿಲ್ಲ. ಹೀಗಾಗಿ ಆಕ್ರೋಶಗೊಂಡಿರುವ ಕುಟುಂಬಸ್ಥರು ಹಾಗೂ ಸಂಬಂಧಿಕರು ಇವತ್ತು ಬಳ್ಳಾರಿ ಹೊರವಲಯದ ಅಲ್ಲೀಪುರ ಬಳಿ ಜಿಂದಾಲ್ ಕಂಪನಿಗೆ ತೆರಳುವ ಬಸ್ ಗಳನ್ನ ತಡೆದು ಪ್ರತಿಭಟನೆ ನಡೆಸಿದ್ರು. ಸುಮಾರು 15ಕ್ಕೂ ಹೆಚ್ಚು ಬಸ್ ಗಳನ್ನ ತಡೆದದ್ದರಿಂದ ನೂರಾರು ಉದ್ಯೋಗಿಗಳು ಕಂಪನಿಯ ಕೆಲ್ಸಕ್ಕೆ ತೆರಳದೇ ಅಲ್ಲಿಯೇ ಇರಬೇಕಾಯ್ತು. ಸ್ಥಳಕ್ಕೆ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಾವಣ್ಯ ಭೇಟಿ ನೀಡಿ ಅವರನ್ನ ಮನವೊಲಿಸುವ ಪ್ರಯತ್ನ ನಡೆಸಿದ್ರು. ಆದ್ರೂ ಕುಟುಂಬಸ್ಥರು ಮಾತ್ರ ಪಟ್ಟು ಸಡಿಸಲದೇ ಬಸ್ ಗಳನ್ನ ಬಿಡದೇ ಪ್ರತಿಭಟನೆ ಮುಂದುವರಿಸಿದ್ರು. ಆಗ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಆರೋಗ್ಯ ಸಚಿವ ಶ್ರೀರಾಮುಲು ಸ್ಥಳಕ್ಕೆ ಭೇಟಿ ನೀಡಿ ಕುಟುಂಬ ಸದಸ್ಯರೊಂದಿಗೆ ಮಾತುಕತೆ ನಡೆಸಿದ್ರು. ಜೊತೆಗೆ ಜಿಂದಾಲ್ ಕಂಪನಿಯ ಪ್ರತಿನಿಧಿಗಳನ್ನ ಸ್ಥಳಕ್ಕೆ ಕರೆಯಿಸಿಕೊಂಡು ಮಾತು
ಕತೆ ನಡೆಸಿದ್ರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸಮಗ್ರವಾಗಿ ತನಿಖೆ ನಡೆಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಳಿಗೆ ಸೂಚನೆ ನೀಡಲಾಗಿದ್ದು, ಜೊತೆಗೆ ನಾಪತ್ತೆಯಾಗಿರುವ ದುರ್ಗಣ್ಣ ಪತ್ತೆ ಹಚ್ಚುವ ಬಗ್ಗೆ ಕಂಪನಿಯ ಪ್ರತಿನಿಧಿಗಳಿಗೆ ಹಾಗೂ ಪೊಲೀಸರಿಗೆ ತಿಳಿಸಲಾಗಿದೆ. ಇದಾದ ಬಳಿಕ ಕುಟುಂಬಸ್ಥರಿಗೆ ಏನ್ ಮಾಡ್ಬೇಕು ಅನ್ನೋ ಬಗ್ಗೆ ಕಂಪನಿಯ ಸಿಇಒ ಜೊತೆಗೆ ಮಾತುಕತೆ ನಡೆಸುವುದಾಗಿ ಸಚಿವ ಶ್ರೀರಾಮುಲು ತಿಳಿಸಿದ್ರು.

(ಬೈಟ್: ಬಿ.ಶ್ರೀರಾಮುಲು, ಆರೋಗ್ಯ ಸಚಿವ)

Body:ಓ.ವಿ.03: ಕುಟುಂಬ ಸದಸ್ಯರನ್ನ ದುರ್ಗಣ್ಣ ಕೆಲ್ಸ ಮಾಡುತ್ತಿದ್ದ ಪ್ಲಾಂಟ್ ನ್ನ ತೋರಿಸಲು ಜಿಂದಾಲ್ ಕಂಪನಿಗೆ ಕರೆದುಕೊಂಡು ಹೋಗಲಾಯ್ತು. ದುರ್ಗಣ್ಣ ಕಂಪನಿಗೆ ಕೆಲಸಕ್ಕೆ ಹಾಜರಾಗಿರುವ
ಸಿಸಿ ಕ್ಯಾಮರಾ ದೃಶ್ಯ ಹಾಗೂ ಬಳಿಕ ಆತ ನಾಪತ್ತೆಯಾಗಿರುವುದು ಇವೆಲ್ಲವನ್ನ ಪೊಲೀಸರು ಹಾಗೂ ಕಂಪನಿಯ ಪ್ರತಿನಿಧಿಗಳು ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿದ್ದಾರೆ. ಆದರೆ, ದುರ್ಗಣ್ಣ ನಿಗೂಢ ನಾಪತ್ತೆ ಅನೇಕ ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ದುರ್ಗಣ್ಣ ಎಲ್ಲಿ ಹೋದ ಎಂದು ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_5_JINDAL_EMPLOYEE_MISSING_STY_VSL_7203310

KN_BLY_5g_JINDAL_EMPLOYEE_MISSING_STY_VSL_7203310

KN_BLY_5h_JINDAL_EMPLOYEE_MISSING_STY_VSL_7203310

KN_BLY_5i_JINDAL_EMPLOYEE_MISSING_STY_VSL_7203310

KN_BLY_5j_JINDAL_EMPLOYEE_MISSING_STY_VSL_7203310
ETV Bharat Logo

Copyright © 2024 Ushodaya Enterprises Pvt. Ltd., All Rights Reserved.