ETV Bharat / state

ಕೂಡ್ಲಿಗಿ: ಭಾರೀ ಮಳೆಗೆ ತುಂಬಿ ಹರಿದ ಹಳ್ಳ-ಕೊಳ್ಳಗಳು

ಸಕಾಲದಲ್ಲಿ ಮಳೆಯಿಲ್ಲದೆ ಕಂಗಾಲಾಗಿದ್ದ ರೈತರಿಗೆ ಇದೀಗ ಆಶಾಭಾವನೆ ಮೂಡಿದೆ. ಈಗಾಗಲೇ ಸಣ್ಣಪುಟ್ಟ ಕೆರೆ - ಕಟ್ಟೆಗಳು ತುಂಬಿವೆ. ದೊಡ್ಡ ಕೆರೆಗಳು ತುಂಬಲು ಇನ್ನಷ್ಟು ಮಳೆಯ ಅಗತ್ಯತೆ ಇದೆ.

author img

By

Published : Sep 4, 2020, 7:32 AM IST

ಉತ್ತಮ ಮಳೆ - ತುಂಬಿ ಹರಿದ ಹಳ್ಳಕೊಳ್ಳಗಳು
ಉತ್ತಮ ಮಳೆ - ತುಂಬಿ ಹರಿದ ಹಳ್ಳಕೊಳ್ಳಗಳು

ಬಳ್ಳಾರಿ: ಜಿಲ್ಲೆಯ ಕೂಡ್ಲಿಗಿ ತಾಲೂಕಿನಾದ್ಯಂತ ಉತ್ತಮ ಮಳೆಯಾಗಿದ್ದು, ಹಳ್ಳ-ಕೊಳ್ಳಗಳು ತುಂಬಿ ಹರಿದಿವೆ.

ಕೂಡ್ಲಿಗಿ ತಾಲೂಕಿನಾದ್ಯಂತ ಭಾರೀ ಮಳೆ ಸುರಿದಿದ್ದು, ಕೂಡ್ಲಿಗಿ-15.7ಮಿ.ಮೀ., ಕೊಟ್ಟೂರು-29.8 ಮಿ.ಮೀ., ಖಾನಾ ಹೊಸಳ್ಳಿ- 5.2 ಮಿ.ಮೀ., ಗುಡೇಕೋಟೆ- 23.1 ಮಿ.ಮೀ., ಬಣವಿಕಲ್ಲು - 31.4 ಮಿ.ಮೀ., ಚಿಕ್ಕ ಜೋಗಿಹಳ್ಳಿ - 5.4 ಮಿ.ಮೀ. ಮಳೆಯಾಗಿದೆ.

ಸಕಾಲದಲ್ಲಿ ಮಳೆಯಿಲ್ಲದೆ ಕಂಗಾಲಾಗಿದ್ದ ರೈತರಿಗೆ ಇದೀಗ ಆಶಾಭಾವನೆ ಮೂಡಿದೆ. ಈಗಾಗಲೇ ಸಣ್ಣಪುಟ್ಟ ಕೆರೆ - ಕಟ್ಟೆಗಳು ತುಂಬಿವೆ. ದೊಡ್ಡ ಕೆರೆಗಳು ತುಂಬಲು ಇನ್ನಷ್ಟು ಮಳೆಯ ಅಗತ್ಯತೆ ಇದೆ. ಹೀಗಾಗಿ ಮುಂದಿನ ದಿನಗಳಲ್ಲಿ ಮತ್ತಷ್ಟು ಮಳೆ ಆದರೆ ಈ ದೊಡ್ಡಮಟ್ಟದ ಕೆರೆ-ಕಟ್ಟೆಗಳು ತುಂಬುವ ನಿರೀಕ್ಷೆಯಲ್ಲಿ ಕೂಡ್ಲಿಗಿ ತಾಲೂಕಿನ ರೈತರಿದ್ದಾರೆ.

ಈ ಮಳೆಯಿಂದ ಕೆಲ ಬೆಳೆಗಳಿಗೆ ವರದಾನವಾದ್ರೆ,‌ ಇನ್ನೂ ಕೆಲ ಬೆಳೆಗಳ ನಷ್ಟ ಸಂಭವಿಸುವ ಸಾಧ್ಯತೆಯಿದೆ. ಒಟ್ಟಿನಲ್ಲಿ ಬುಧವಾರ ಹಾಗೂ ಗುರುವಾರದಂದು ಸುರಿದ ಮಳೆ ಕೂಡ್ಲಿಗಿ ತಾಲೂಕಿನ ರೈತರಲ್ಲಿ ಮಂದಹಾಸ ಮೂಡಿಸಿದೆ.

ಬಳ್ಳಾರಿ: ಜಿಲ್ಲೆಯ ಕೂಡ್ಲಿಗಿ ತಾಲೂಕಿನಾದ್ಯಂತ ಉತ್ತಮ ಮಳೆಯಾಗಿದ್ದು, ಹಳ್ಳ-ಕೊಳ್ಳಗಳು ತುಂಬಿ ಹರಿದಿವೆ.

ಕೂಡ್ಲಿಗಿ ತಾಲೂಕಿನಾದ್ಯಂತ ಭಾರೀ ಮಳೆ ಸುರಿದಿದ್ದು, ಕೂಡ್ಲಿಗಿ-15.7ಮಿ.ಮೀ., ಕೊಟ್ಟೂರು-29.8 ಮಿ.ಮೀ., ಖಾನಾ ಹೊಸಳ್ಳಿ- 5.2 ಮಿ.ಮೀ., ಗುಡೇಕೋಟೆ- 23.1 ಮಿ.ಮೀ., ಬಣವಿಕಲ್ಲು - 31.4 ಮಿ.ಮೀ., ಚಿಕ್ಕ ಜೋಗಿಹಳ್ಳಿ - 5.4 ಮಿ.ಮೀ. ಮಳೆಯಾಗಿದೆ.

ಸಕಾಲದಲ್ಲಿ ಮಳೆಯಿಲ್ಲದೆ ಕಂಗಾಲಾಗಿದ್ದ ರೈತರಿಗೆ ಇದೀಗ ಆಶಾಭಾವನೆ ಮೂಡಿದೆ. ಈಗಾಗಲೇ ಸಣ್ಣಪುಟ್ಟ ಕೆರೆ - ಕಟ್ಟೆಗಳು ತುಂಬಿವೆ. ದೊಡ್ಡ ಕೆರೆಗಳು ತುಂಬಲು ಇನ್ನಷ್ಟು ಮಳೆಯ ಅಗತ್ಯತೆ ಇದೆ. ಹೀಗಾಗಿ ಮುಂದಿನ ದಿನಗಳಲ್ಲಿ ಮತ್ತಷ್ಟು ಮಳೆ ಆದರೆ ಈ ದೊಡ್ಡಮಟ್ಟದ ಕೆರೆ-ಕಟ್ಟೆಗಳು ತುಂಬುವ ನಿರೀಕ್ಷೆಯಲ್ಲಿ ಕೂಡ್ಲಿಗಿ ತಾಲೂಕಿನ ರೈತರಿದ್ದಾರೆ.

ಈ ಮಳೆಯಿಂದ ಕೆಲ ಬೆಳೆಗಳಿಗೆ ವರದಾನವಾದ್ರೆ,‌ ಇನ್ನೂ ಕೆಲ ಬೆಳೆಗಳ ನಷ್ಟ ಸಂಭವಿಸುವ ಸಾಧ್ಯತೆಯಿದೆ. ಒಟ್ಟಿನಲ್ಲಿ ಬುಧವಾರ ಹಾಗೂ ಗುರುವಾರದಂದು ಸುರಿದ ಮಳೆ ಕೂಡ್ಲಿಗಿ ತಾಲೂಕಿನ ರೈತರಲ್ಲಿ ಮಂದಹಾಸ ಮೂಡಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.