ETV Bharat / state

ಭಾರಿ ಮಳೆಗೆ ಬೆಳೆ ನಾಶ: ರೈತನ ಆತ್ಮಹತ್ಯೆಗೆ ಕಾರಣನಾದ ವರುಣ! - ಬಳ್ಳಾರಿ ರೈತ ಆತ್ಮಹತ್ಯೆ

ಹತ್ತಿ ಬೆಳೆ ನಾಶವಾಗಿದ್ದರಿಂದ ಸಾಲ ತೀರಿಸಲು ದಾರಿ ಕಾಣದ ರೈತನೋರ್ವ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬಳ್ಳಾರಿ ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿದೆ.

ರೈತ ಆತ್ಮಹತ್ಯೆ
author img

By

Published : Nov 7, 2019, 8:17 PM IST

ಬಳ್ಳಾರಿ: ಜಿಲ್ಲೆಯ ಸಿರುಗುಪ್ಪ ತಾಲೂಕಿನ ಹಳೇಕೋಟೆ ಗ್ರಾಮದ ರೈತನೋರ್ವ ಸಾಲಬಾಧೆ ತಾಳಲಾರದೆ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಹಳೇಕೋಟೆ ಗ್ರಾಮದ ನಿವಾಸಿ ಕಾಳಿಂಗಪ್ಪ (56) ಎಂಬುವರು ಮನೆಯಲ್ಲಿ‌ ಯಾರು ಇರದ ವೇಳೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾಳಿಂಗಪ್ಪ ಉಪ್ಪಾರು ಹೊಸಳ್ಳಿ ಗ್ರಾಮದಲ್ಲಿ 8.64 ಎಕರೆ ಭೂಮಿಯಲ್ಲಿ ಹತ್ತಿ ಬೆಳೆ ಬೆಳೆದಿದ್ದರು. ಮಳೆಯಿಂದ ಬೆಳೆ‌ ನಾಶವಾದ ಪರಿಣಾಮ‌ ಅಪಾರ ಪ್ರಮಾಣದ ನಷ್ಟ ಉಂಟಾಗಿತ್ತು ಎನ್ನಲಾಗ್ತಿದೆ.

ಸಿರುಗುಪ್ಪ ನಗರದಲ್ಲಿರುವ ಬ್ಯಾಂಕಿನಲ್ಲಿ 3.30 ಲಕ್ಷ ರೂ. ಸಾಲ ಪಡೆದಿದ್ದ ಕಾಳಿಂಗಪ್ಪ, ಸಾಲ ತೀರಿಸಲು ದಾರಿ ಕಾಣದೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಬಗ್ಗೆ ತೆಕ್ಕಲಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಶಾಸಕ ಎಂ.ಎಸ್. ಸೋಮಲಿಂಗಪ್ಪ, ತಹಶಿಲ್ದಾರ್ ಎಸ್.ಬಿ. ಕೂಡಲಗಿ, ಕಂದಾಯ ಅಧಿಕಾರಿ ರಾಜೇಂದ್ರ ದೊರೆ, ಕೃಷಿ ಅಧಿಕಾರಿ ನಜೀರ್ ಅಹಮ್ಮದ್​ ಭೇಟಿ ನೀಡಿದ್ದರು.

ಬಳ್ಳಾರಿ: ಜಿಲ್ಲೆಯ ಸಿರುಗುಪ್ಪ ತಾಲೂಕಿನ ಹಳೇಕೋಟೆ ಗ್ರಾಮದ ರೈತನೋರ್ವ ಸಾಲಬಾಧೆ ತಾಳಲಾರದೆ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಹಳೇಕೋಟೆ ಗ್ರಾಮದ ನಿವಾಸಿ ಕಾಳಿಂಗಪ್ಪ (56) ಎಂಬುವರು ಮನೆಯಲ್ಲಿ‌ ಯಾರು ಇರದ ವೇಳೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾಳಿಂಗಪ್ಪ ಉಪ್ಪಾರು ಹೊಸಳ್ಳಿ ಗ್ರಾಮದಲ್ಲಿ 8.64 ಎಕರೆ ಭೂಮಿಯಲ್ಲಿ ಹತ್ತಿ ಬೆಳೆ ಬೆಳೆದಿದ್ದರು. ಮಳೆಯಿಂದ ಬೆಳೆ‌ ನಾಶವಾದ ಪರಿಣಾಮ‌ ಅಪಾರ ಪ್ರಮಾಣದ ನಷ್ಟ ಉಂಟಾಗಿತ್ತು ಎನ್ನಲಾಗ್ತಿದೆ.

ಸಿರುಗುಪ್ಪ ನಗರದಲ್ಲಿರುವ ಬ್ಯಾಂಕಿನಲ್ಲಿ 3.30 ಲಕ್ಷ ರೂ. ಸಾಲ ಪಡೆದಿದ್ದ ಕಾಳಿಂಗಪ್ಪ, ಸಾಲ ತೀರಿಸಲು ದಾರಿ ಕಾಣದೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಬಗ್ಗೆ ತೆಕ್ಕಲಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಶಾಸಕ ಎಂ.ಎಸ್. ಸೋಮಲಿಂಗಪ್ಪ, ತಹಶಿಲ್ದಾರ್ ಎಸ್.ಬಿ. ಕೂಡಲಗಿ, ಕಂದಾಯ ಅಧಿಕಾರಿ ರಾಜೇಂದ್ರ ದೊರೆ, ಕೃಷಿ ಅಧಿಕಾರಿ ನಜೀರ್ ಅಹಮ್ಮದ್​ ಭೇಟಿ ನೀಡಿದ್ದರು.

Intro:ಹಳೇಕೋಟೆ: ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ
ಬಳ್ಳಾರಿ: ಜಿಲ್ಲೆಯ ಸಿರುಗುಪ್ಪ ತಾಲೂಕಿನ ಹಳೇಕೋಟೆ
ಗ್ರಾಮದ ರೈತನೋರ್ವನು‌ ಸಾಲಬಾಧೆ ತಾಳಲಾರದೇ ಆತ್ಮ
ಹತ್ಯೆ ಮಾಡಿಕೊಂಡ ಘಟನೆಯು ನಡೆದಿದೆ.
ಹಳೇಕೋಟೆ ಗ್ರಾಮದ ನಿವಾಸಿಯಾದ ಕಾಳಿಂಗಪ್ಪ (56) ಎಂಬುವರು ಮನೆಯಲ್ಲಿ‌ ಯಾರು ಇರದ ವೇಳೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಆತ್ಮಹತ್ಯೆಗೆ ಶರಣಾದ ರೈತ ಕಾಳಿಂಗಪ್ಪನವರಿಗೆ ಉಪ್ಪಾರು ಹೊಸಳ್ಳಿ ಗ್ರಾಮದಲ್ಲಿ ಅಂದಾಜು 8.64 ಎಕರೆ ಭೂಮಿ ಇದೆ.‌
ಹತ್ತಿ ಬೆಳೆಯನ್ನು ಬೆಳೆಯಲಾಗಿದ್ದು, ಮಹಾಮಳೆಯಿಂದಾಗಿ ಸಂಪೂರ್ಣ ಬೆಳೆ ನೆಲಕಚ್ಚಿ‌ ನಾಶವಾಗಿದೆ.‌ ಅಪಾರ ಪ್ರಮಾಣದ
ಬೆಳೆ ನಷ್ಟ ಉಂಟಾಗಿದ್ದರಿಂದ ಸಿರುಗುಪ್ಪ ನಗರದ ಐಡಿಬಿಐ ಬ್ಯಾಂಕಿನಲ್ಲಿ ಅಂದಾಜು 3.30 ಲಕ್ಷ ರೂ. ಪಡೆದ ಸಾಲವನ್ನು ತೀರಿಸೋದು ಹೇಗೆ ಎಂಬ ಒತ್ತಡಕ್ಕೆ ಸಿಲುಕಿದ ಕಾಳಿಂಗಪ್ಪ ಈ ಆತ್ಮಹತ್ಯೆಗೆ ಮುಂದಾಗಿದ್ದಾರೆ. ಪತ್ನಿ, ಪುತ್ರಿಯರು, ಪುತ್ರರಿದ್ದಾರೆ.
Body:ಈ ಬಗ್ಗೆ ತೆಕ್ಕಲಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಶಾಸಕ ಎಂ.ಎಸ್.ಸೋಮ ಲಿಂಗಪ್ಪ, ತಹಸೀಲ್ದಾರ್ ಎಸ್.ಬಿ.ಕೂಡಲಗಿ, ಕಂದಾಯ
ಅಧಿಕಾರಿ ರಾಜೇಂದ್ರದೊರೆ, ಕೃಷಿ ಅಧಿಕಾರಿ ನಜೀರ್ ಅಹಮ್ಮದ ಭೇಟಿ ನೀಡಿದ್ದಾರೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_4_FARMERS_SUICIDE_PH_7203310
ETV Bharat Logo

Copyright © 2025 Ushodaya Enterprises Pvt. Ltd., All Rights Reserved.