ETV Bharat / state

ಬಳ್ಳಾರಿಯಲ್ಲಿ ಮತದಾನದ ಬಗ್ಗೆ ಅರಿವು ಮೂಡಿಸಲು ಸ್ಪರ್ಧಾ ಕಾರ್ಯಕ್ರಮ

author img

By

Published : Dec 21, 2019, 7:26 PM IST

Updated : Dec 21, 2019, 9:50 PM IST

ರಾಷ್ಟ್ರೀಯ ಮತದಾರರ ದಿನಾಚರಣೆ 2020ರ ಪ್ರಯುಕ್ತ ಬಳ್ಳಾರಿಯಲ್ಲಿ ಜಿಲ್ಲಾಮಟ್ಟದ ಸ್ಪರ್ಧಾ ಚಟುವಟಿಕೆಗಳ ಕಾರ್ಯಾಗಾರ ನಡೆಯಿತು. ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಹಾಗೂ ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿತ್ತು.

election-awareness
ಮತದಾನದ ಬಗ್ಗೆ ಅರಿವು

ಬಳ್ಳಾರಿ: ಮತದಾನ ಮಾಡುವಾಗ ಯಾವುದೇ ಆಸೆ, ಆಕಾಂಕ್ಷೆಗಳಿಗೆ ಮಕ್ಕಳು ಒಳಗಾಗದೇ ಮತದಾನ ಮಾಡಬೇಕು ಎಂಬ ನಿಟ್ಟಿನಲ್ಲಿ ಇಂದು ಮತದಾನದ ಸ್ಪರ್ಧಾ ಚಟುವಟಿಕೆಗಳಾದ ರಸಪ್ರಶ್ನೆ, ಪ್ರಬಂಧ ಸ್ಪರ್ಧೆಯನ್ನು ಬಳ್ಳಾರಿ ನಗರದಲ್ಲಿ ಆಯೋಜನೆ ಮಾಡಲಾಗಿದೆ ಎಂದು ಜಿಲ್ಲಾಪಂಚಾಯತ್ ಉಪಕಾರ್ಯದರ್ಶಿ ಹೆಚ್.ಎಸ್ ಶರಣಬಸಪ್ಪ ತಿಳಿಸಿದರು.

ನಗರದ ಮುನಿಸಿಪಲ್ ಕಾಲೇಜಿನಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಹಾಗೂ ಪದವಿಪೂರ್ವ ಶಿಕ್ಷಣ ಇಲಾಖೆ ನೇತೃತ್ವದಲ್ಲಿ ಸ್ಪರ್ಧೆಗಳನ್ನು ಆಯೊಜಿಸಲಾಗಿತ್ತು. ರಾಷ್ಟ್ರೀಯ ಮತದಾರರ ದಿನಾಚರಣೆ 2020ರ ಪ್ರಯುಕ್ತ ಬಳ್ಳಾರಿ ಜಿಲ್ಲಾಮಟ್ಟದ ಸ್ಪರ್ಧಾ ಚಟುವಟಿಕೆಗಳ ಕಾರ್ಯಾಗಾರವನ್ನು ಜಿಲ್ಲಾಪಂಚಾಯತ್ ಉಪಕಾರ್ಯದರ್ಶಿ ಹೆಚ್.ಎಸ್ ಶರಣಬಸಪ್ಪ ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿದರು.

ಮತದಾನ ಅರಿವು ಮೂಡಿಸಲು ಸ್ಪರ್ಧಾ ಕಾರ್ಯಕ್ರಮ

ನಂತರ ಮಾತನಾಡಿದ ಉಪಕಾರ್ಯದರ್ಶಿ, ಈ ಹಿಂದೆ ಬಳ್ಳಾರಿಯಲ್ಲಿ ನಡೆದ ಉಪಚುನಾವಣೆಯಲ್ಲಿ ಮತದಾನ ಪ್ರಮಾಣ ಕಡಿಮೆಯಾಗಿದೆ. ಮತದಾನದ ಬಗ್ಗೆ ಏನೆಲ್ಲಾ ಜಾಗೃತಿ ನೀಡಿದರೂ ಮತದಾನ ಕಡಿಮೆಯಾಗುತ್ತಿದೆ. ಮುಖ್ಯವಾಗಿ ಮಕ್ಕಳಿಗೆ ಮತದಾನ ಜಾಗೃತಿ ಮೂಡಿಸಿದರೆ ಅದರಿಂದ ಮುಂದೆ ನಡೆಯುವ ಚುನಾವಣೆಗಳಲ್ಲಿ ಮತದಾನ ಪ್ರಮಾಣ ಏರಿಕೆ ಆಗಬಹುದು ಎಂದು ತಿಳಿಸಿದರು.

ನಿಮ್ಮ ಮನೆಯ ಬಾಗಿಲಿಗೆ ಚುನಾವಣೆಯ ಸಮಯದಲ್ಲಿ ಸೀರೆ, ಹಣ, ಮಧ್ಯ ಮತ್ತು ಇನ್ನಿತರ ಉಡುಗೊರೆಗಳನ್ನು ನೀಡಲು ಬರುತ್ತಾರೆ. ಅಂತಹ ಆಮಿಷಗಳಿಗೆ ಒಳಗಾಗಬೇಡಿ, ಹಾಗೆಯೇ ನಿಮ್ಮ ಪೋಷಕರಿಗೂ ಇದರ ಬಗ್ಗೆ ಮಾಹಿತಿ ನೀಡಿ ಎಂದು ಹೇಳಿದರು.

ಈ ಕಾರ್ಯಗಾರದಲ್ಲಿ ಬಳ್ಳಾರಿ ಜಿಲ್ಲೆಯ ವಿವಿಧ ತಾಲೂಕಿನ ವಿದ್ಯಾರ್ಥಿಗಳು, ಜಿಲ್ಲಾಪಂಚಾಯತ್ ಉಪಕಾರ್ಯದರ್ಶಿ ಎಸ್.ಹೆಚ್. ಶರಣಬಸಪ್ಪ, ಡಿಡಿಪಿಯು ನಾಗರಾಜಪ್ಪ, ಪ್ರಾಂಶುಪಾಲ ಮೋಹನ್ ರೆಡ್ಡಿ, ಗೋಪಾಲ ಸಗರ್, ಕಾರ್ಯದರ್ಶಿ ವೆಂಕಟೇಶ ಹಾಜರಿದ್ದರು.

ಬಳ್ಳಾರಿ: ಮತದಾನ ಮಾಡುವಾಗ ಯಾವುದೇ ಆಸೆ, ಆಕಾಂಕ್ಷೆಗಳಿಗೆ ಮಕ್ಕಳು ಒಳಗಾಗದೇ ಮತದಾನ ಮಾಡಬೇಕು ಎಂಬ ನಿಟ್ಟಿನಲ್ಲಿ ಇಂದು ಮತದಾನದ ಸ್ಪರ್ಧಾ ಚಟುವಟಿಕೆಗಳಾದ ರಸಪ್ರಶ್ನೆ, ಪ್ರಬಂಧ ಸ್ಪರ್ಧೆಯನ್ನು ಬಳ್ಳಾರಿ ನಗರದಲ್ಲಿ ಆಯೋಜನೆ ಮಾಡಲಾಗಿದೆ ಎಂದು ಜಿಲ್ಲಾಪಂಚಾಯತ್ ಉಪಕಾರ್ಯದರ್ಶಿ ಹೆಚ್.ಎಸ್ ಶರಣಬಸಪ್ಪ ತಿಳಿಸಿದರು.

ನಗರದ ಮುನಿಸಿಪಲ್ ಕಾಲೇಜಿನಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಹಾಗೂ ಪದವಿಪೂರ್ವ ಶಿಕ್ಷಣ ಇಲಾಖೆ ನೇತೃತ್ವದಲ್ಲಿ ಸ್ಪರ್ಧೆಗಳನ್ನು ಆಯೊಜಿಸಲಾಗಿತ್ತು. ರಾಷ್ಟ್ರೀಯ ಮತದಾರರ ದಿನಾಚರಣೆ 2020ರ ಪ್ರಯುಕ್ತ ಬಳ್ಳಾರಿ ಜಿಲ್ಲಾಮಟ್ಟದ ಸ್ಪರ್ಧಾ ಚಟುವಟಿಕೆಗಳ ಕಾರ್ಯಾಗಾರವನ್ನು ಜಿಲ್ಲಾಪಂಚಾಯತ್ ಉಪಕಾರ್ಯದರ್ಶಿ ಹೆಚ್.ಎಸ್ ಶರಣಬಸಪ್ಪ ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿದರು.

ಮತದಾನ ಅರಿವು ಮೂಡಿಸಲು ಸ್ಪರ್ಧಾ ಕಾರ್ಯಕ್ರಮ

ನಂತರ ಮಾತನಾಡಿದ ಉಪಕಾರ್ಯದರ್ಶಿ, ಈ ಹಿಂದೆ ಬಳ್ಳಾರಿಯಲ್ಲಿ ನಡೆದ ಉಪಚುನಾವಣೆಯಲ್ಲಿ ಮತದಾನ ಪ್ರಮಾಣ ಕಡಿಮೆಯಾಗಿದೆ. ಮತದಾನದ ಬಗ್ಗೆ ಏನೆಲ್ಲಾ ಜಾಗೃತಿ ನೀಡಿದರೂ ಮತದಾನ ಕಡಿಮೆಯಾಗುತ್ತಿದೆ. ಮುಖ್ಯವಾಗಿ ಮಕ್ಕಳಿಗೆ ಮತದಾನ ಜಾಗೃತಿ ಮೂಡಿಸಿದರೆ ಅದರಿಂದ ಮುಂದೆ ನಡೆಯುವ ಚುನಾವಣೆಗಳಲ್ಲಿ ಮತದಾನ ಪ್ರಮಾಣ ಏರಿಕೆ ಆಗಬಹುದು ಎಂದು ತಿಳಿಸಿದರು.

ನಿಮ್ಮ ಮನೆಯ ಬಾಗಿಲಿಗೆ ಚುನಾವಣೆಯ ಸಮಯದಲ್ಲಿ ಸೀರೆ, ಹಣ, ಮಧ್ಯ ಮತ್ತು ಇನ್ನಿತರ ಉಡುಗೊರೆಗಳನ್ನು ನೀಡಲು ಬರುತ್ತಾರೆ. ಅಂತಹ ಆಮಿಷಗಳಿಗೆ ಒಳಗಾಗಬೇಡಿ, ಹಾಗೆಯೇ ನಿಮ್ಮ ಪೋಷಕರಿಗೂ ಇದರ ಬಗ್ಗೆ ಮಾಹಿತಿ ನೀಡಿ ಎಂದು ಹೇಳಿದರು.

ಈ ಕಾರ್ಯಗಾರದಲ್ಲಿ ಬಳ್ಳಾರಿ ಜಿಲ್ಲೆಯ ವಿವಿಧ ತಾಲೂಕಿನ ವಿದ್ಯಾರ್ಥಿಗಳು, ಜಿಲ್ಲಾಪಂಚಾಯತ್ ಉಪಕಾರ್ಯದರ್ಶಿ ಎಸ್.ಹೆಚ್. ಶರಣಬಸಪ್ಪ, ಡಿಡಿಪಿಯು ನಾಗರಾಜಪ್ಪ, ಪ್ರಾಂಶುಪಾಲ ಮೋಹನ್ ರೆಡ್ಡಿ, ಗೋಪಾಲ ಸಗರ್, ಕಾರ್ಯದರ್ಶಿ ವೆಂಕಟೇಶ ಹಾಜರಿದ್ದರು.

Intro:


ಜಿಲ್ಲಾ ಮಟ್ಟದ ಸ್ಪರ್ಧಾಚಟುವಟಿಕೆಗಳ ಕಾರ್ಯಗಾರ.

ಮತದಾನ ಮಾಡುವಾಗ ಯಾವುದೇ ಆಸೆ, ಆಕಾಂಕ್ಷಿಗಳಿಗೆ ಮಕ್ಕಳ ಒಳಗಾಗದೇ ಮತದಾನ ಮಾಡಿಬೇಕು ಇಂದು ಮತದಾನದ ಸ್ಪರ್ಧಾ ಚಟುವಟಿಕೆಗಳಾದ ರಸಪ್ರಶ್ನೆ, ಪ್ರಬಂದವನ್ನು ಬಳ್ಖಾರಿ‌ನಗರದಲ್ಲಿ ಆಯೋಜನೆ ಮಾಡಲಾಗಿದೆ ಎಂದು ಜಿಲ್ಲಾಪಂಚಾಯತ್ ಉಪ ಕಾರ್ಯದರ್ಶಿ ಉಪಕಾರ್ಯದರ್ಶಿ ಹೆಚ್.ಎಸ್ ಶರಣಬಸಪ್ಪ ತಿಳಿಸಿದರು


Body:.

ನಗರದ ಮುನಿಸಿಪಲ್ ಕಾಲೇಜ್ ನಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಹಾಗೂ ಪದವಿಪೂರ್ವ ಶಿಕ್ಷಣ ಇಲಾಕೇ ನೇತೃತ್ವದಲ್ಲಿ ಇಂದು ರಾಷ್ಟ್ರೀಯ ಮತದಾರರ ದಿನಾಚರಣೆ 2020ರ ಪ್ರಯುಕ್ತ ಬಳ್ಳಾರಿ ಜಿಲ್ಲಾಮಟ್ಟದ ಸ್ಪರ್ಧಾ ಚಟುವಟಿಕೆಗಳ ಕಾರ್ಯಗಾರವನ್ನು ಜಿಲ್ಲಾಪಂಚಾಯತ್ ಉಪ ಕಾರ್ಯದರ್ಶಿ ಉಪಕಾರ್ಯದರ್ಶಿ ಹೆಚ್.ಎಸ್ ಶರಣಬಸಪ್ಪ ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿದರು.

ನಂತರ ಮಾತನಾಡಿದ ಉಪಕಾರ್ಯದರ್ಶಿ ಅವರು ಈ ಹಿಂದೆ ಬಳ್ಳಾರಿಯಲ್ಲಿ ನಡೆದ ಉಪಚುನಾವಣೆಯಲ್ಲಿ ಮತದಾನ ಪ್ರಮಾಣ ಕಡಿಮೆಯಾಗಿದೆ. ಏನೆಲ್ಲಾ ಮತದಾನದ ಬಗ್ಗೆ ಜಾಗೃತಿ ನೀಡಿದರು ಜನರು ಮತದಾನ ಕಡಿಮೆಯಾಗುತ್ತಿದೆ. ಮುಖ್ಯವಾಗಿ ಮಕ್ಕಳಿಗೆ ಮತದಾನ ಜಾಗೃತಿ ಮೂಡಿಸಿದರೇ ಅದರಿಂದ ಮುಂದೆ ನಡೆಯುವ ಚುನಾವಣೆಗಳಲ್ಲಿ ಮತದಾನ ಪ್ರಮಾಣ ಏರಿಕೆ ಆಗಬಹುದು ಎಂದು ತಿಳಿಸಿದರು.

ಇನ್ನು ನಿಮ್ಮ ಮನೆಯ ಬಾಗಿಲಿಗೆ ಚುನಾವಣೆಯ ಸಮಯದಲ್ಲಿ ಸಿರೇ, ಹಣ, ಮಧ್ಯ ಮತ್ತು ಇನ್ನಿತರ ಉಡುಗೊರೆಗಳನ್ನು ನೀಡಲು ಬರುತ್ತಾರೆ ಅಂತ ಆಮಿಷಗಳಿಗೆ ಒಳಗಾಗಬೇಡಿ ಹಾಗೆ ನಿಮ್ಮ ಪೋಷಕರಿಗೂ ಇದರ ಬಗ್ಗೆ ಮಾಹಿತಿ ನೀಡಿ ಎಂದು ಹೇಳಿದರು.

ಈ ಕಾರ್ಯಗಾರಕ್ಕೆ ಬಳ್ಳಾರಿ ಜಿಲ್ಲೆಯ ವಿವಿಧ ತಾಲೂಕಿನ ವಿದ್ಯಾರ್ಥಿಗಳು ಹಾಜರಿದ್ದರು.
ಇಂದು ಈ ಕಾಲೇಜ್ ನಲ್ಲಿ ರಸಪ್ರಶ್ನೆ ಮತ್ತು ಚರ್ಚಾಸ್ಪರ್ಧೆ ಪ್ರಬಂಧ ನಡೆದವು.




Conclusion:ಈ ಕಾರ್ಯಕ್ರಮದಲ್ಲಿ ಜಿಲ್ಲಾಪಂಚಾಯತ್ ಉಪಕಾರ್ಯದರ್ಶಿ ಎಸ್.ಹೆಚ್. ಶರಣಬಸಪ್ಪ, ಡಿಡಿಪಿಯು ನಾಗರಾಜಪ್ಪ, ಪ್ರಾಂಶುಪಾಲರಾದ ಮೋಹನ್ ರೆಡ್ಡಿ, ಗೋಪಾಲ ಸಗರ್, ಕಾರ್ಯದರ್ಶಿ ವೆಂಕಟೇಶ ಮತ್ತು ವಿವಿಧ ಕಾಲೇಜ್ ನ ವಿದ್ಯಾರ್ಥಿಗಳು ಹಾಜರಿದ್ದರು.

Last Updated : Dec 21, 2019, 9:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.