ಬಳ್ಳಾರಿ: ಗಡಿನಾಡು ಬಳ್ಳಾರಿ ಜಿಲ್ಲಾದ್ಯಂತ ಬಿಸಿಲಿನ ಧಗೆ ದಿನ ದಿಂದ ದಿನಕ್ಕೆ ಜೋರಾಗಿದೆ. ತಾಲೂಕಿನ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರಿಗೆ ಕುಡಿಯಲು ಮಜ್ಜಿಗೆ ಹಾಗೂ ನೀರಿನ ಬಾಟಲ್ ನಿಡಲಾಯಿತು.
ಬಿಸಿಲಿನ ಧಗೆಯನ್ನ ತಣಿಸಲು ಜಿಲ್ಲೆಯ ಸಾರ್ವಜನಿಕರು ನೀರು, ಮಜ್ಜಿಗೆ ಹಾಗೂ ತಂಪು ಪಾನೀಯಗಳ ಸೇವನೆಗೆ ಮೊರೆ ಹೋಗೋದು ಸರ್ವೇ ಸಾಮಾನ್ಯ. ಅದರ ಭಾಗವಾಗಿ ಜಿಲ್ಲೆಯ ಸಂಡೂರು ಪಟ್ಟಣದಲ್ಲಿಂದು ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ತಾಲೂಕಿನ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರ ಸಭೆಗೆ ಹಾಜರಾಗುವ ಪ್ರತಿಯೊಬ್ಬ ಕಾರ್ಯಕರ್ತರಿಗೂ ಮಜ್ಜಿಗೆ ಹಾಗೂ ನೀರಿನ ಬಾಟಲ್ ವಿತರಣೆ ಮಾಡುವ ಮುಖೇನ ವಿಶೇಷ ಗಮನ ಸೆಳೆದರು.