ETV Bharat / state

ಹೊಸಪೇಟೆಯಲ್ಲಿ ದೇವದಾಸಿ ಪದ್ಧತಿ ಇನ್ನು ಜೀವಂತ!

author img

By

Published : Nov 26, 2020, 2:28 PM IST

ದೇವದಾಸಿ ಪದ್ಧತಿ ಹೊಸಪೇಟೆ ಭಾಗದ ಹಳ್ಳಿಗಳಲ್ಲಿ ಇನ್ನು ಜೀವಂತವಾಗಿದ್ದು, ಕಳೆದ ಆರು ವರ್ಷಗಳಲ್ಲಿ 26 ಸಣ್ಣ ವಯಸ್ಸಿನ ಹೆಣ್ಣು ಮಕ್ಕಳು ದೇವದಾಸಿ ಪದ್ಧತಿಗೆ ಒಳಗಾಗಿದ್ದಾರೆ ಎಂದು ತಿಳಿದು ಬಂದಿದೆ.

hospet
ಸಖಿ ಟ್ರಸ್ಟ್ ಸಂಸ್ಥಾಪಕಿ ಭಾಗ್ಯಲಕ್ಷ್ಮೀ

ಹೊಸಪೇಟೆ: ಸಾಮಾಜಿಕ‌ ಪಿಡುಗಾದ ದೇವದಾಸಿ ಪದ್ಧತಿ ಹೊಸಪೇಟೆ ಭಾಗದ ಹಳ್ಳಿಗಳಲ್ಲಿ ಇನ್ನು ಜೀವಂತವಾಗಿದೆ. ಕಳೆದ ಆರು ವರ್ಷಗಳಲ್ಲಿ 26 ಸಣ್ಣ ವಯಸ್ಸಿನ ಹೆಣ್ಣು ಮಕ್ಕಳು ದೇವದಾಸಿ ಪದ್ಧತಿಗೆ ಒಳಗಾಗಿದ್ದಾರೆ ಎಂದು ತಿಳಿದು ಬಂದಿದೆ.

ಸಖಿ ಟ್ರಸ್ಟ್ ಸಂಸ್ಥಾಪಕಿ ಭಾಗ್ಯಲಕ್ಷ್ಮೀ

ಅರಣ್ಯ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ಅವರ ಕ್ಷೇತ್ರದಲ್ಲಿ ದೇವದಾಸಿ ಪದ್ಧತಿ ಜೀವಂತ ಇರುವುದು ಖೇದಕರ ಸಂಗತಿಯಾಗಿದೆ. 18 ರಿಂದ 20 ವರ್ಷದ ಒಳಗಿನ ಹೆಣ್ಣು ಮಕ್ಕಳು ಈ ಸಾಮಾಜಿಕ ಪಿಡುಗಿಗೆ ಬಲಿಯಾಗುತ್ತಿದ್ದಾರೆ. ಸಖಿ ಟ್ರಸ್ಟ್​​​​​​​​ನಿಂದ ಒಂದು ವರ್ಷದಲ್ಲಿ ಮೂರು ದೇವದಾಸಿ ಪದ್ಧತಿಗೆ ಒಳಪಡುವ ಹಣ್ಣು ಮಕ್ಕಳನ್ನು ಪೊಲೀಸ್ ಇಲಾಖೆ ಮೂಲಕ ಸಂರಕ್ಷಣೆ ಮಾಡಲಾಗಿದೆ.‌

ರಾತ್ರೋ ರಾತ್ರಿ ನಡೆಯುತ್ತೆ ದೇವದಾಸಿ ಪದ್ಧತಿ:

ಯಾರಿಗೂ ತಿಳಿಯದಂತೆ ರಾತ್ರೋರಾತ್ರಿ ಹೆಣ್ಣು ಮಕ್ಕಳನ್ನು ದೇವದಾಸಿಯನ್ನಾಗಿ ಮಾಡಲಾಗುತ್ತದೆ. ಹೆಣ್ಣು ದೇವರ ಹೆಸರಿನಲ್ಲಿ ದೇವದಾಸಿ ಪದ್ಧತಿಗೆ ಹೆಣ್ಣು ಮಕ್ಕಳನ್ನು ದೂಡಲಾಗುತ್ತಿದೆ. ಈ ಮುಂಚೆ ದೇವಸ್ಥಾನಗಳಲ್ಲಿ ಈ ಪದ್ಧತಿಯನ್ನು ಮಾಡಲಾಗುತ್ತಿತ್ತು.‌ ಆದರೆ, ಈಗ ಮನೆಯಲ್ಲಿ ಸಹ ಮಾಡಲಾಗುತ್ತಿದೆ.‌

ಅಪನಂಬಿಕೆ ಸೃಷ್ಟಿಸುವುದು:

ದೇವದಾಸಿಯನ್ನಾಗಿ ಮಾಡದಿದ್ದರೇ ದೇವರ ಕಾಟ ಇರುತ್ತದೆ ಎಂದು ಅಂಜಿಸುವುದು. ಸಮುದಾಯದ ಮಟ್ಟದ ಜನರು ನೋಡಲು ಚೆನ್ನಾಗಿ ಇರುವ ಹೆಣ್ಣು ಮಕ್ಕಳನ್ನು ಗುರಿಯಾಗಿಸಿಕೊಂಡು ಈ ಪದ್ಧತಿಗೆ ದೂಡುತ್ತಾರೆ.‌ ಅಲ್ಲದೇ, ಈ‌ ಪದ್ಧತಿ ಇನ್ನು ಜೀವಂತವಾಗಿರಲು ಅನಕ್ಷರಸ್ಥರು ಮೂಲ ಕಾರಣವಾಗಿದ್ದಾರೆ. ಒಂದು ಮನೆಯಲ್ಲಿ‌ ತಾಯಿ ಮತ್ತು ಮಗಳು ಇರುತ್ತಾರೆ. ಮಗಳಿಗೆ ಮದುವೆ ಮಾಡಿಕೊಡುವುದರಿಂದ ಆಸ್ತಿ ಹಂಚಿ ಹೋಗುತ್ತದೆ.‌ ಇದನ್ನು ತಪ್ಪಿಸಲು ದೇವದಾಸಿಯನ್ನಾಗಿ ಮಾಡಲಾಗುತ್ತದೆ.‌

ಕಠಿಣ ಕಾನೂನು ಜಾರಿಯಿಲ್ಲ:

ದೇವದಾಸಿ ಪದ್ಧತಿಯನ್ನು ತಡೆಯಲು ಕಠಿಣ ಕಾನೂನು ಸದ್ಯ ಜಾರಿ ಇಲ್ಲ.‌ ಇದರಿಂದಾಗಿ ಈ‌ ಪದ್ಧತಿ ಇನ್ನು ಜೀವಂತವಾಗಿದೆ. ಆ ಕಾಯಿದೆ ಕೇವಲ ಕಡತದ ನಿರ್ಮೂಲವಾಗಿದೆಯೇ ಹೊರತು ನಿಜ ಜೀವನದಲ್ಲಿ ಈ ಪದ್ಧತಿ ಇನ್ನು ಜೀವಂತವಾಗಿದೆ. ಹಾಗಾಗಿ ದೇವದಾಸಿ ಪದ್ಧತಿಗೆ ಒಳಪಡಿಸುವವರಿಗೆ ಕಠಿಣ ಶಿಕ್ಷೆಯನ್ನು‌ ನೀಡಬೇಕು.‌ 2018 ರ ಕರಡು ದೇವದಾಸಿ ಪರಿಣಾಮಕಾರಿಯಾಗಿದೆ. ಅದನ್ನು ಅನುಷ್ಠಾನ ಮಾಡಬೇಕು. ಅಲ್ಲದೇ, ಪ್ರತಿಯೊಂದು ಹಳ್ಳಿಗಳಲ್ಲಿ ಜಾಗೃತಿ ಮೂಡಿಸುವುದು ಅತ್ಯಗತ್ಯವಾಗಿದೆ.‌

ದೇವದಾಸಿ ಪುನರ್ವಸತಿ ಯೋಜನೆಗಳು‌ ಅನುಷ್ಠಾನವಾಗಲಿ:

ದೇವದಾಸಿ ಹಾಗೂ ಅವರ ಮಕ್ಕಳು ಪುನರ್ವಸತಿಗೆ ಒಳಗಾಗಬೇಕು.‌ ಆಗ ಈ‌‌ ಪದ್ಧತಿಯನ್ನು‌‌ ಪರಿಣಾಮಕಾರಿಯಾಗಿ ತಡೆಯಬಹುದು. ‌ಅಲ್ಲದೇ, ಪ್ರತಿಯೊಬ್ಬರಿಗೂ ಶಿಕ್ಷಣ ಸಿಗುವಂತೆ ಮಾಡಬೇಕು. ‌ಇದರಿಂದ ಅರಿವು ಮೂಡಿಸಲು ಸಾಧ್ಯವಾಗುತ್ತದೆ.‌

ಸಖಿ ಟ್ರಸ್ಟ್ ಅಜೀಂ‌ ಪ್ರೇಮ್ ಜೀ ಫೌಂಡೇಶನ್ ಸೇರಿದಂತೆ ನಾನಾ ಸಂಸ್ಥೆಗಳ ಮೂಲಕ ದೇವದಾಸಿ ಮಕ್ಕಳಿಗೆ ಶಿಕ್ಷಣ ನೀಡುವಂತ ಕಾರ್ಯ ಮಾಡುತ್ತಿದೆ. ಅಲ್ಲದೇ ಅವರಿಗೆ ಅರಿವು ಮೂಡಿಸುವಂತಹ ಕಾರ್ಯಕ್ರಮ ಮಾಡುತ್ತಿದೆ.‌

ಈ ಟಿವಿ ಭಾರತದೊಂದಿಗೆ ದೂರವಾಣಿ‌‌‌ ಮೂಲಕ ಕಲ್ಯಾಣ ಕರ್ನಾಟಕದ ದೇವದಾಸಿ ಪುನರ್ವಸತಿ ಯೋಜನೆಯ ನೋಡಲ್ ಅಧಿಕಾರಿ ಗೋಪಲ್ ಅವರು ಮಾತನಾಡಿ, ಹೊಸಪೇಟೆಯಲ್ಲಿ ದೇವದಾಸಿ ಪದ್ಧತಿ ಕುರಿತು ಅರಿವನ್ನು ಮೂಡಿಸಲಾಗುವುದು.‌ ಈ ಅನಿಷ್ಟ ಪದ್ಧತಿಯನ್ನು ಹೋಗಲಾಡಿಸಲು ಅಗತ್ಯ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.

ಹೊಸಪೇಟೆ: ಸಾಮಾಜಿಕ‌ ಪಿಡುಗಾದ ದೇವದಾಸಿ ಪದ್ಧತಿ ಹೊಸಪೇಟೆ ಭಾಗದ ಹಳ್ಳಿಗಳಲ್ಲಿ ಇನ್ನು ಜೀವಂತವಾಗಿದೆ. ಕಳೆದ ಆರು ವರ್ಷಗಳಲ್ಲಿ 26 ಸಣ್ಣ ವಯಸ್ಸಿನ ಹೆಣ್ಣು ಮಕ್ಕಳು ದೇವದಾಸಿ ಪದ್ಧತಿಗೆ ಒಳಗಾಗಿದ್ದಾರೆ ಎಂದು ತಿಳಿದು ಬಂದಿದೆ.

ಸಖಿ ಟ್ರಸ್ಟ್ ಸಂಸ್ಥಾಪಕಿ ಭಾಗ್ಯಲಕ್ಷ್ಮೀ

ಅರಣ್ಯ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ಅವರ ಕ್ಷೇತ್ರದಲ್ಲಿ ದೇವದಾಸಿ ಪದ್ಧತಿ ಜೀವಂತ ಇರುವುದು ಖೇದಕರ ಸಂಗತಿಯಾಗಿದೆ. 18 ರಿಂದ 20 ವರ್ಷದ ಒಳಗಿನ ಹೆಣ್ಣು ಮಕ್ಕಳು ಈ ಸಾಮಾಜಿಕ ಪಿಡುಗಿಗೆ ಬಲಿಯಾಗುತ್ತಿದ್ದಾರೆ. ಸಖಿ ಟ್ರಸ್ಟ್​​​​​​​​ನಿಂದ ಒಂದು ವರ್ಷದಲ್ಲಿ ಮೂರು ದೇವದಾಸಿ ಪದ್ಧತಿಗೆ ಒಳಪಡುವ ಹಣ್ಣು ಮಕ್ಕಳನ್ನು ಪೊಲೀಸ್ ಇಲಾಖೆ ಮೂಲಕ ಸಂರಕ್ಷಣೆ ಮಾಡಲಾಗಿದೆ.‌

ರಾತ್ರೋ ರಾತ್ರಿ ನಡೆಯುತ್ತೆ ದೇವದಾಸಿ ಪದ್ಧತಿ:

ಯಾರಿಗೂ ತಿಳಿಯದಂತೆ ರಾತ್ರೋರಾತ್ರಿ ಹೆಣ್ಣು ಮಕ್ಕಳನ್ನು ದೇವದಾಸಿಯನ್ನಾಗಿ ಮಾಡಲಾಗುತ್ತದೆ. ಹೆಣ್ಣು ದೇವರ ಹೆಸರಿನಲ್ಲಿ ದೇವದಾಸಿ ಪದ್ಧತಿಗೆ ಹೆಣ್ಣು ಮಕ್ಕಳನ್ನು ದೂಡಲಾಗುತ್ತಿದೆ. ಈ ಮುಂಚೆ ದೇವಸ್ಥಾನಗಳಲ್ಲಿ ಈ ಪದ್ಧತಿಯನ್ನು ಮಾಡಲಾಗುತ್ತಿತ್ತು.‌ ಆದರೆ, ಈಗ ಮನೆಯಲ್ಲಿ ಸಹ ಮಾಡಲಾಗುತ್ತಿದೆ.‌

ಅಪನಂಬಿಕೆ ಸೃಷ್ಟಿಸುವುದು:

ದೇವದಾಸಿಯನ್ನಾಗಿ ಮಾಡದಿದ್ದರೇ ದೇವರ ಕಾಟ ಇರುತ್ತದೆ ಎಂದು ಅಂಜಿಸುವುದು. ಸಮುದಾಯದ ಮಟ್ಟದ ಜನರು ನೋಡಲು ಚೆನ್ನಾಗಿ ಇರುವ ಹೆಣ್ಣು ಮಕ್ಕಳನ್ನು ಗುರಿಯಾಗಿಸಿಕೊಂಡು ಈ ಪದ್ಧತಿಗೆ ದೂಡುತ್ತಾರೆ.‌ ಅಲ್ಲದೇ, ಈ‌ ಪದ್ಧತಿ ಇನ್ನು ಜೀವಂತವಾಗಿರಲು ಅನಕ್ಷರಸ್ಥರು ಮೂಲ ಕಾರಣವಾಗಿದ್ದಾರೆ. ಒಂದು ಮನೆಯಲ್ಲಿ‌ ತಾಯಿ ಮತ್ತು ಮಗಳು ಇರುತ್ತಾರೆ. ಮಗಳಿಗೆ ಮದುವೆ ಮಾಡಿಕೊಡುವುದರಿಂದ ಆಸ್ತಿ ಹಂಚಿ ಹೋಗುತ್ತದೆ.‌ ಇದನ್ನು ತಪ್ಪಿಸಲು ದೇವದಾಸಿಯನ್ನಾಗಿ ಮಾಡಲಾಗುತ್ತದೆ.‌

ಕಠಿಣ ಕಾನೂನು ಜಾರಿಯಿಲ್ಲ:

ದೇವದಾಸಿ ಪದ್ಧತಿಯನ್ನು ತಡೆಯಲು ಕಠಿಣ ಕಾನೂನು ಸದ್ಯ ಜಾರಿ ಇಲ್ಲ.‌ ಇದರಿಂದಾಗಿ ಈ‌ ಪದ್ಧತಿ ಇನ್ನು ಜೀವಂತವಾಗಿದೆ. ಆ ಕಾಯಿದೆ ಕೇವಲ ಕಡತದ ನಿರ್ಮೂಲವಾಗಿದೆಯೇ ಹೊರತು ನಿಜ ಜೀವನದಲ್ಲಿ ಈ ಪದ್ಧತಿ ಇನ್ನು ಜೀವಂತವಾಗಿದೆ. ಹಾಗಾಗಿ ದೇವದಾಸಿ ಪದ್ಧತಿಗೆ ಒಳಪಡಿಸುವವರಿಗೆ ಕಠಿಣ ಶಿಕ್ಷೆಯನ್ನು‌ ನೀಡಬೇಕು.‌ 2018 ರ ಕರಡು ದೇವದಾಸಿ ಪರಿಣಾಮಕಾರಿಯಾಗಿದೆ. ಅದನ್ನು ಅನುಷ್ಠಾನ ಮಾಡಬೇಕು. ಅಲ್ಲದೇ, ಪ್ರತಿಯೊಂದು ಹಳ್ಳಿಗಳಲ್ಲಿ ಜಾಗೃತಿ ಮೂಡಿಸುವುದು ಅತ್ಯಗತ್ಯವಾಗಿದೆ.‌

ದೇವದಾಸಿ ಪುನರ್ವಸತಿ ಯೋಜನೆಗಳು‌ ಅನುಷ್ಠಾನವಾಗಲಿ:

ದೇವದಾಸಿ ಹಾಗೂ ಅವರ ಮಕ್ಕಳು ಪುನರ್ವಸತಿಗೆ ಒಳಗಾಗಬೇಕು.‌ ಆಗ ಈ‌‌ ಪದ್ಧತಿಯನ್ನು‌‌ ಪರಿಣಾಮಕಾರಿಯಾಗಿ ತಡೆಯಬಹುದು. ‌ಅಲ್ಲದೇ, ಪ್ರತಿಯೊಬ್ಬರಿಗೂ ಶಿಕ್ಷಣ ಸಿಗುವಂತೆ ಮಾಡಬೇಕು. ‌ಇದರಿಂದ ಅರಿವು ಮೂಡಿಸಲು ಸಾಧ್ಯವಾಗುತ್ತದೆ.‌

ಸಖಿ ಟ್ರಸ್ಟ್ ಅಜೀಂ‌ ಪ್ರೇಮ್ ಜೀ ಫೌಂಡೇಶನ್ ಸೇರಿದಂತೆ ನಾನಾ ಸಂಸ್ಥೆಗಳ ಮೂಲಕ ದೇವದಾಸಿ ಮಕ್ಕಳಿಗೆ ಶಿಕ್ಷಣ ನೀಡುವಂತ ಕಾರ್ಯ ಮಾಡುತ್ತಿದೆ. ಅಲ್ಲದೇ ಅವರಿಗೆ ಅರಿವು ಮೂಡಿಸುವಂತಹ ಕಾರ್ಯಕ್ರಮ ಮಾಡುತ್ತಿದೆ.‌

ಈ ಟಿವಿ ಭಾರತದೊಂದಿಗೆ ದೂರವಾಣಿ‌‌‌ ಮೂಲಕ ಕಲ್ಯಾಣ ಕರ್ನಾಟಕದ ದೇವದಾಸಿ ಪುನರ್ವಸತಿ ಯೋಜನೆಯ ನೋಡಲ್ ಅಧಿಕಾರಿ ಗೋಪಲ್ ಅವರು ಮಾತನಾಡಿ, ಹೊಸಪೇಟೆಯಲ್ಲಿ ದೇವದಾಸಿ ಪದ್ಧತಿ ಕುರಿತು ಅರಿವನ್ನು ಮೂಡಿಸಲಾಗುವುದು.‌ ಈ ಅನಿಷ್ಟ ಪದ್ಧತಿಯನ್ನು ಹೋಗಲಾಡಿಸಲು ಅಗತ್ಯ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.