ETV Bharat / state

ಸಿರುಗುಪ್ಪದಲ್ಲಿ ಮಗುಚಿ ಬಿದ್ದ ಮಡಿತೇರು... 7 ಮಂದಿಗೆ ಗಾಯ - ವಿಡಿಯೋ - ballary latest news

ಮಡಿತೇರು ಎಳೆಯುವ ಸಮಯದಲ್ಲಿ ತೇರಿನ ತಳಭಾಗ ಏಕಾಏಕಿ ಮುರಿದು, ತೇರು ಭಕ್ತರ ಮೇಲೆ ಬಿದ್ದಿದೆ. ಪರಿಣಾಮ 7 ಜನರಿಗೆ ಗಾಯಗಳಾಗಿದ್ದು, ತೀವ್ರವಾಗಿ ಗಾಯಗೊಂಡ ವ್ಯಕ್ತಿಯೊಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿ ವಿಮ್ಸ್​​ಗೆ ದಾಖಲಿಸಲಾಗಿದೆ.

charat fell down in ballary: 7 are injured
ಮಗುಚಿ ಬಿದ್ದ ಮಡಿತೇರು; 7 ಮಂದಿಗೆ ಗಾಯ
author img

By

Published : Sep 8, 2020, 10:54 AM IST

ಬಳ್ಳಾರಿ: ಮಡಿತೇರು ಎಳೆಯುವ ಸಂದರ್ಭದಲ್ಲಿ ಅದರ ತಳಭಾಗ ಏಕಾಏಕಿ ಮುರಿದ ಪರಿಣಾಮ ತೇರು ಭಕ್ತರ ಮೇಲೆ ಬಿದ್ದಿದೆ. ಈ ವೇಳೆ 7 ಮಂದಿ ಗಾಯಗೊಂಡಿರುವ ಘಟನೆ ಸಿರುಗುಪ್ಪ ತಾಲೂಕಿನಲ್ಲಿ ನಡೆದಿದೆ.‌

ಮಗುಚಿ ಬಿದ್ದ ಮಡಿತೇರು, ಏಲು ಮಂದಿಗೆ ಗಾಯ

ಜಿಲ್ಲೆಯ ಸಿರುಗುಪ್ಪ ತಾಲೂಕಿನ ಕೊತ್ತಚಿಂತ ಗ್ರಾಮದ ಹುನುಮಂತಾವಧೂತರ ಆರಾಧನಾ ಮಹೋತ್ಸವ ದಿನದ ಪ್ರಯುಕ್ತ ಮಡಿತೇರು ಎಳೆಯುವ ಸಮಯದಲ್ಲಿ ತೇರಿನ ತಳಭಾಗ ಏಕಾಏಕಿ ಮುರಿದಿದೆ.

ಗ್ರಾಮದ ರಾಘವೇಂದ್ರ ರೆಡ್ಡಿ, ಗುಂಡಪ್ಪ ಸ್ವಾಮಿ, ಲಕ್ಷ್ಮೀಕಾಂತ ರೆಡ್ಡಿ, ಹುಸೇನಪ್ಪ, ತಾಯಪ್ಪ, ತಿಕ್ಕಯ್ಯ ಎಂಬುವರು ಗಾಯಗೊಂಡಿದ್ದಾರೆ. ಮಹೇಶ್ ಎಂಬಾತನ ತಲೆಗೆ ಬಲವಾದ ಪೆಟ್ಟು ಬಿದ್ದ ಪರಿಣಾಮ ಆತನನ್ನು ಬಳ್ಳಾರಿ‌ ವಿಮ್ಸ್​​ಗೆ ಕಳುಹಿಸಲಾಗಿದೆ ಎಂಬ ಮಾಹಿತಿ ಸಿಕ್ಕಿದೆ.

ಬಳ್ಳಾರಿ: ಮಡಿತೇರು ಎಳೆಯುವ ಸಂದರ್ಭದಲ್ಲಿ ಅದರ ತಳಭಾಗ ಏಕಾಏಕಿ ಮುರಿದ ಪರಿಣಾಮ ತೇರು ಭಕ್ತರ ಮೇಲೆ ಬಿದ್ದಿದೆ. ಈ ವೇಳೆ 7 ಮಂದಿ ಗಾಯಗೊಂಡಿರುವ ಘಟನೆ ಸಿರುಗುಪ್ಪ ತಾಲೂಕಿನಲ್ಲಿ ನಡೆದಿದೆ.‌

ಮಗುಚಿ ಬಿದ್ದ ಮಡಿತೇರು, ಏಲು ಮಂದಿಗೆ ಗಾಯ

ಜಿಲ್ಲೆಯ ಸಿರುಗುಪ್ಪ ತಾಲೂಕಿನ ಕೊತ್ತಚಿಂತ ಗ್ರಾಮದ ಹುನುಮಂತಾವಧೂತರ ಆರಾಧನಾ ಮಹೋತ್ಸವ ದಿನದ ಪ್ರಯುಕ್ತ ಮಡಿತೇರು ಎಳೆಯುವ ಸಮಯದಲ್ಲಿ ತೇರಿನ ತಳಭಾಗ ಏಕಾಏಕಿ ಮುರಿದಿದೆ.

ಗ್ರಾಮದ ರಾಘವೇಂದ್ರ ರೆಡ್ಡಿ, ಗುಂಡಪ್ಪ ಸ್ವಾಮಿ, ಲಕ್ಷ್ಮೀಕಾಂತ ರೆಡ್ಡಿ, ಹುಸೇನಪ್ಪ, ತಾಯಪ್ಪ, ತಿಕ್ಕಯ್ಯ ಎಂಬುವರು ಗಾಯಗೊಂಡಿದ್ದಾರೆ. ಮಹೇಶ್ ಎಂಬಾತನ ತಲೆಗೆ ಬಲವಾದ ಪೆಟ್ಟು ಬಿದ್ದ ಪರಿಣಾಮ ಆತನನ್ನು ಬಳ್ಳಾರಿ‌ ವಿಮ್ಸ್​​ಗೆ ಕಳುಹಿಸಲಾಗಿದೆ ಎಂಬ ಮಾಹಿತಿ ಸಿಕ್ಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.