ETV Bharat / state

ಬಳ್ಳಾರಿ: ಯುವತಿ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್... ಅಜ್ಞಾತ ಸ್ಥಳದಿಂದ ವಿಡಿಯೋ ರವಾನೆ

ಬಳ್ಳಾರಿ ಗುಗ್ಗರಟ್ಟಿಯ ಯವತಿಯ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ತಾನೇ ಇಷ್ಟಪಟ್ಟ ವ್ಯಕ್ತಿಯ ಜೊತೆ ತೆರಳಿರುವುದಾಗಿ ಯುವತಿ ಹೇಳಿಕೊಂಡಿದ್ದಾಳೆ. ರಕ್ಷಣೆ ನೀಡುವಂತೆ ಪೊಲೀಸರಿಗೆ ಮನವಿ ಮಾಡಿದ್ದಾಳೆ.

author img

By

Published : Dec 28, 2020, 9:24 PM IST

Big twist in Bellary Young girl Missing case
ಬಳ್ಳಾರಿ ಯುವತಿ ನಾಪತ್ತೆ ಪ್ರಕರಣದಲ್ಲಿ ಟ್ವಿಸ್ಟ್

ಬಳ್ಳಾರಿ: ಕೆಲಸಕ್ಕೆ ಹೋದ ಗುಗ್ಗರಟ್ಟಿಯ 24ರ ಹರೆಯದ ಯುವತಿ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಅಜ್ಞಾತ ಸ್ಥಳದಿಂದ ವಿಡಿಯೋ ಮಾಡಿರುವ ಯುವತಿ ಪೋಷಕರ ವಿರುದ್ಧವೇ ಪ್ರತ್ಯಾರೋಪ ಮಾಡಿದ್ದಾಳೆ.

ಫಾಸ್ಟರ್ ನನ್ನನ್ನು ಬಲವಂತವಾಗಿ ಕರೆದುಕೊಂಡು ಬಂದಿಲ್ಲ. ನಾನೇ ಫಾಸ್ಟರ್​​ನನ್ನು ಕರೆದುಕೊಂಡು ಬಂದಿದ್ದೇನೆ. ನಾನು ಚರ್ಚ್​ಗೆ ಹೋಗುವುದು ನನ್ನ ತಂದೆ-ತಾಯಿಗೆ ಇಷ್ಟವಿರಲಿಲ್ಲ. ಹೀಗಾಗಿ ಚರ್ಚ್​ಗೆ ಹೋಗದಂತೆ ಮಾಡಲು ಫಾಸ್ಟರ್​ಗೂ ನನಗೂ ಸಂಬಂಧ ಕಲ್ಪಿಸಿದ್ರು. ಅಲ್ಲದೆ ಫಾಸ್ಟರ್ ಹಾಗೂ ಅವರ ಕುಟುಂಬದ ಮೇಲೆ ಹಲ್ಲೆ ಮಾಡಿದ್ರು. ಪೋಷಕರೇ ಸಂಬಂಧ ಕಲ್ಪಿಸಿದ ಕಾರಣ ನಾನೇ ಫಾಸ್ಟರ್​ನನ್ನು ಮದುವೆಯಾಗುವಂತೆ ಕರೆದುಕೊಂಡು ಬಂದಿದ್ದೇನೆ ಎಂದು ಹೇಳಿದ್ದಾಳೆ. ನಾವು ಮದುವೆಯಾಗಿದ್ದೇವೆ. ನನ್ನ ಹಾಗೂ ನನ್ನ ಗಂಡನಿಗೆ ನನ್ನ ಕುಟುಂಬದಿಂದ ಪ್ರಾಣ ಬೆದರಿಕೆ ಇದೆ. ಹೀಗಾಗಿ ನನಗೆ ರಕ್ಷಣೆ ಕೊಡಿ ಎಂದು ಅಧಿಕಾರಿಗಳಿಗೆ ವಿಡಿಯೋ ಮೂಲಕ ಮನವಿ ಮಾಡಿದ್ದಾಳೆ.

ವಿಡಿಯೋ ರವಾನಿಸಿದ ಯುವತಿ

ಓದಿ : ಬಂಟ್ವಾಳ: ಔಷಧಿ ಎಂದು ಕಳೆನಾಶಕ ಸೇವಿಸಿ ಗ್ರಾಪಂ ಚುನಾವಣಾ ಅಭ್ಯರ್ಥಿ ಸಾವು

ಡಿಸೆಂಬರ್ 16ರಂದು ಗುಗ್ಗರಟ್ಟಿಯ ಯುವತಿ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಳು. ಈ ಕುರಿತು ಯುವತಿಯ ತಂದೆ ಮಹಿಳಾ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಲಿವಿಂಗ್ ವಾಟರ್ ಚರ್ಚ್​ನ ಫಾಸ್ಟರ್ ರವಿಕುಮಾರ್ ಎಂಬಾತ ನಮ್ಮ ಮಗಳನ್ನು ಕರೆದೊಯ್ದಿದ್ದಾನೆ ಎಂದು ಆರೋಪಿಸಿದ್ದರು. ಇದೀಗ ಯುವತಿ ವಿಡಿಯೋ ಹರಿಬಿಟ್ಟು ತನ್ನ ಪೋಷಕರ ವಿರುದ್ಧವೇ ಪ್ರತ್ಯಾರೋಪ ಮಾಡಿದ್ದಾಳೆ. ಈ ಮೂಲಕ ಪ್ರಕರಣಕ್ಕೆ ಹೊಸ ಟ್ವಿಸ್ಟ್​ ಸಿಕ್ಕಿದೆ.

ಬಳ್ಳಾರಿ: ಕೆಲಸಕ್ಕೆ ಹೋದ ಗುಗ್ಗರಟ್ಟಿಯ 24ರ ಹರೆಯದ ಯುವತಿ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಅಜ್ಞಾತ ಸ್ಥಳದಿಂದ ವಿಡಿಯೋ ಮಾಡಿರುವ ಯುವತಿ ಪೋಷಕರ ವಿರುದ್ಧವೇ ಪ್ರತ್ಯಾರೋಪ ಮಾಡಿದ್ದಾಳೆ.

ಫಾಸ್ಟರ್ ನನ್ನನ್ನು ಬಲವಂತವಾಗಿ ಕರೆದುಕೊಂಡು ಬಂದಿಲ್ಲ. ನಾನೇ ಫಾಸ್ಟರ್​​ನನ್ನು ಕರೆದುಕೊಂಡು ಬಂದಿದ್ದೇನೆ. ನಾನು ಚರ್ಚ್​ಗೆ ಹೋಗುವುದು ನನ್ನ ತಂದೆ-ತಾಯಿಗೆ ಇಷ್ಟವಿರಲಿಲ್ಲ. ಹೀಗಾಗಿ ಚರ್ಚ್​ಗೆ ಹೋಗದಂತೆ ಮಾಡಲು ಫಾಸ್ಟರ್​ಗೂ ನನಗೂ ಸಂಬಂಧ ಕಲ್ಪಿಸಿದ್ರು. ಅಲ್ಲದೆ ಫಾಸ್ಟರ್ ಹಾಗೂ ಅವರ ಕುಟುಂಬದ ಮೇಲೆ ಹಲ್ಲೆ ಮಾಡಿದ್ರು. ಪೋಷಕರೇ ಸಂಬಂಧ ಕಲ್ಪಿಸಿದ ಕಾರಣ ನಾನೇ ಫಾಸ್ಟರ್​ನನ್ನು ಮದುವೆಯಾಗುವಂತೆ ಕರೆದುಕೊಂಡು ಬಂದಿದ್ದೇನೆ ಎಂದು ಹೇಳಿದ್ದಾಳೆ. ನಾವು ಮದುವೆಯಾಗಿದ್ದೇವೆ. ನನ್ನ ಹಾಗೂ ನನ್ನ ಗಂಡನಿಗೆ ನನ್ನ ಕುಟುಂಬದಿಂದ ಪ್ರಾಣ ಬೆದರಿಕೆ ಇದೆ. ಹೀಗಾಗಿ ನನಗೆ ರಕ್ಷಣೆ ಕೊಡಿ ಎಂದು ಅಧಿಕಾರಿಗಳಿಗೆ ವಿಡಿಯೋ ಮೂಲಕ ಮನವಿ ಮಾಡಿದ್ದಾಳೆ.

ವಿಡಿಯೋ ರವಾನಿಸಿದ ಯುವತಿ

ಓದಿ : ಬಂಟ್ವಾಳ: ಔಷಧಿ ಎಂದು ಕಳೆನಾಶಕ ಸೇವಿಸಿ ಗ್ರಾಪಂ ಚುನಾವಣಾ ಅಭ್ಯರ್ಥಿ ಸಾವು

ಡಿಸೆಂಬರ್ 16ರಂದು ಗುಗ್ಗರಟ್ಟಿಯ ಯುವತಿ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಳು. ಈ ಕುರಿತು ಯುವತಿಯ ತಂದೆ ಮಹಿಳಾ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಲಿವಿಂಗ್ ವಾಟರ್ ಚರ್ಚ್​ನ ಫಾಸ್ಟರ್ ರವಿಕುಮಾರ್ ಎಂಬಾತ ನಮ್ಮ ಮಗಳನ್ನು ಕರೆದೊಯ್ದಿದ್ದಾನೆ ಎಂದು ಆರೋಪಿಸಿದ್ದರು. ಇದೀಗ ಯುವತಿ ವಿಡಿಯೋ ಹರಿಬಿಟ್ಟು ತನ್ನ ಪೋಷಕರ ವಿರುದ್ಧವೇ ಪ್ರತ್ಯಾರೋಪ ಮಾಡಿದ್ದಾಳೆ. ಈ ಮೂಲಕ ಪ್ರಕರಣಕ್ಕೆ ಹೊಸ ಟ್ವಿಸ್ಟ್​ ಸಿಕ್ಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.