ETV Bharat / state

ಸಾವಿರಾರು ಇಎಸ್ಐಸಿ ಫಲಾನುಭವಿಗಳಲ್ಲಿ ಸೌಲಭ್ಯದ ಮಾಹಿತಿ ಕೊರತೆ

author img

By

Published : Oct 16, 2020, 12:47 PM IST

ಬಳ್ಳಾರಿ ಜಿಲ್ಲೆಯಲ್ಲಿ ಅಂದಾಜು 90 ಸಾವಿರ ಮಂದಿ ಇಎಸ್ಐಸಿ ಫಲಾನುಭವಿಗಳಿದ್ದಾರೆ. ಸರಿಸುಮಾರು 7 ಲಕ್ಷಕ್ಕೂ ಅಧಿಕ ಕುಟುಂಬಗಳು ಇದರ ವ್ಯಾಪ್ತಿಗೆ ಒಳಪಡಲಿವೆ. ಜಿಲ್ಲೆಯಲ್ಲಿ ಸ್ಪಾಂಜ್ ಐರನ್ ಹಾಗೂ ಇನ್ನಿತರೆ ಗಣಿಗಾರಿಕೆ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. ಈ ಎಲ್ಲಾ ಕಂಪನಿಗಳು ಕಾರ್ಮಿಕರಿಗೆ ಇಎಸ್ಐಸಿ ಸೌಲಭ್ಯದ ವ್ಯವಸ್ಥೆ ಮಾಡಿವೆಯಾದ್ರೂ, ಕಾರ್ಮಿಕರಲ್ಲಿ ಅದರ ಸೂಕ್ತ ಮಾಹಿತಿಯ ಕೊರತೆ ಇಲ್ಲಿ ಕಾಣುತ್ತಿದೆ.

Bellary: ESIC beneficiaries problem
ಬಳ್ಳಾರಿ: ಸಾವಿರಾರು ಇಎಸ್ಐಸಿ ಫಲಾನುಭವಿಗಳಲ್ಲಿ ಸೌಲಭ್ಯ ಮಾಹಿತಿ ಕೊರತೆ....

ಬಳ್ಳಾರಿ: ಗಣಿಜಿಲ್ಲೆಯಲ್ಲಿ ಅಂದಾಜು 90 ಸಾವಿರ ಮಂದಿ ಇಎಸ್ಐಸಿ ಫಲಾನುಭವಿಗಳಿದ್ದು, ಸರಿಸುಮಾರು 7 ಲಕ್ಷಕ್ಕೂ ಅಧಿಕ ಕುಟುಂಬಗಳು ಇದರ ವ್ಯಾಪ್ತಿಗೆ ಒಳಪಡಲಿದ್ದಾರೆ. ಜಿಲ್ಲೆಯಲ್ಲಿ ಸ್ಪಾಂಜ್ ಐರನ್ ಹಾಗೂ ಇನ್ನಿತರೆ ಗಣಿಗಾರಿಕೆ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. ಈ ಎಲ್ಲಾ ಕಂಪನಿಗಳು ಕಾರ್ಮಿಕರಿಗೆ ಇಎಸ್ಐಸಿ ಸೌಲಭ್ಯದ ವ್ಯವಸ್ಥೆ ಮಾಡಿವೆಯಾದ್ರೂ ಅದರ ಸೂಕ್ತ ಮಾಹಿತಿ ಕೊರತೆ ಇಲ್ಲಿ ಕಾಣುತ್ತಿದೆ.

ಬಳ್ಳಾರಿ: ಸಾವಿರಾರು ಇಎಸ್ಐಸಿ ಫಲಾನುಭವಿಗಳಲ್ಲಿ ಸೌಲಭ್ಯ ಮಾಹಿತಿ ಕೊರತೆ!

ಇದರಿಂದ ಕರ್ನಾಟಕ ರಾಜ್ಯ ವಿಮಾ ಚಿಕಿತ್ಸಾಲಯದ ವೈದ್ಯಾಧಿಕಾರಿಗಳಿಗೆ ತಲೆಬಿಸಿಯಾಗಿದೆ. ನಿಯಮಾನುಸಾರ ಚಿಕಿತ್ಸೆ ಪಡೆದುಕೊಂಡು ಇಎಸ್ಐಸಿ ಸೌಲಭ್ಯ ಪಡೆದುಕೊಳ್ಳುತ್ತಿರುವವರ ಸಂಖ್ಯೆ ಅತೀ ವಿರಳವಾಗಿದೆ. ಇದಕ್ಕೆಲ್ಲಾ ಪ್ರಮುಖ ಕಾರಣ ಆಯಾ ಕಂಪನಿಗಳ ಮಾನವ ಸಂಪನ್ಮೂಲ ಅಧಿಕಾರಿಗಳು ಈ ಸೌಲಭ್ಯದ ಕುರಿತು ಸೂಕ್ತ ಮಾಹಿತಿ ನೀಡದೆ ಇರುವುದು ಎನ್ನಬಹುದು. ಎಷ್ಟೋ ಬಾರಿ ಇಎಸ್ಐಸಿ ಸೌಲಭ್ಯ ವಂಚಿತರು ಜಿಲ್ಲೆಯ ವಿಮಾ ಚಿಕಿತ್ಸಾಲಯದ ವೈದ್ಯಾಧಿಕಾರಿಗಳೊಂದಿಗೆ ಕಾದಾಟಕ್ಕೆ ಇಳಿದ ಪ್ರಸಂಗವೂ ಜರುಗಿದೆ. ಇತ್ತ ಪ್ರತಿಯೊಬ್ಬರಿಗೂ ಸಾವಧಾನವಾಗಿ ಉತ್ತರಿಸಲು ಸಾಧ್ಯವಾಗದೇ ಕೆಲವೊಮ್ಮೆ ವೈದ್ಯಾಧಿಕಾರಿಗಳು ಕೂಡ ಫಲಾನುಭವಿಗಳ ಮೇಲೆ ರೇಗಾಡಿರುವ ಘಟನೆಗಳು ನಡೆದಿವೆ.

ತುರ್ತು ಚಿಕಿತ್ಸೆ ಪಡೆದು ಖಾಸಗಿ ಆಸ್ಪತ್ರೆಗಳು ನೀಡಿರುವ ಬಿಲ್‌ಗಳನ್ನು ಹಿಡಿದುಕೊಂಡು ಇಎಸ್ಐಸಿ ಸೌಲಭ್ಯ ಅರಸಿ ಬಂದವರಿಗೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಕೊಡಿಸುವಲ್ಲಿ ಬಳ್ಳಾರಿಯ ಸತ್ಯನಾರಾಯಣಪೇಟೆಯಲ್ಲಿರುವ ಕರ್ನಾಟಕ ರಾಜ್ಯ ವಿಮಾ ಚಿಕಿತ್ಸಾಲಯದ ಆಡಳಿತಾತ್ಮಕ ವಿಮಾ ಅಧಿಕಾರಿ ಡಾ. ರಾಮಕೃಷ್ಣ ಅವರ ನೇತೃತ್ವದ ವೈದ್ಯ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

ಪ್ರತಿದಿನವೂ ಇಎಸ್ಐಸಿ ಸೌಲಭ್ಯವನ್ನು ಕೋರಿ ಅಂದಾಜು 40- 50 ಮಂದಿ ರಾಜ್ಯ ವಿಮಾ ಚಿಕಿತ್ಸಾಲಯದ ಕಚೇರಿಗೆ ಬರುತ್ತಿದ್ದು, ಕಡ್ಡಾಯವಾಗಿ ಅವರ ಬಿಪಿ-ಶುಗರ್​ ಪರೀಕ್ಷೆ ಮಾಡಲಾಗುತ್ತಿದೆ. ಐಎಸ್ಐಸಿ ಸೌಲಭ್ಯವುಳ್ಳ ಕೋವಿಡ್ ಸೋಂಕಿತರಿಗೂ ಕೂಡ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಕೊಡಿಸಿಯೂ ಕೂಡ ಗುಣಮುಖರನ್ನಾಗಿ ಮಾಡಿದ್ದಾರೆ.

ಬಳ್ಳಾರಿ: ಗಣಿಜಿಲ್ಲೆಯಲ್ಲಿ ಅಂದಾಜು 90 ಸಾವಿರ ಮಂದಿ ಇಎಸ್ಐಸಿ ಫಲಾನುಭವಿಗಳಿದ್ದು, ಸರಿಸುಮಾರು 7 ಲಕ್ಷಕ್ಕೂ ಅಧಿಕ ಕುಟುಂಬಗಳು ಇದರ ವ್ಯಾಪ್ತಿಗೆ ಒಳಪಡಲಿದ್ದಾರೆ. ಜಿಲ್ಲೆಯಲ್ಲಿ ಸ್ಪಾಂಜ್ ಐರನ್ ಹಾಗೂ ಇನ್ನಿತರೆ ಗಣಿಗಾರಿಕೆ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. ಈ ಎಲ್ಲಾ ಕಂಪನಿಗಳು ಕಾರ್ಮಿಕರಿಗೆ ಇಎಸ್ಐಸಿ ಸೌಲಭ್ಯದ ವ್ಯವಸ್ಥೆ ಮಾಡಿವೆಯಾದ್ರೂ ಅದರ ಸೂಕ್ತ ಮಾಹಿತಿ ಕೊರತೆ ಇಲ್ಲಿ ಕಾಣುತ್ತಿದೆ.

ಬಳ್ಳಾರಿ: ಸಾವಿರಾರು ಇಎಸ್ಐಸಿ ಫಲಾನುಭವಿಗಳಲ್ಲಿ ಸೌಲಭ್ಯ ಮಾಹಿತಿ ಕೊರತೆ!

ಇದರಿಂದ ಕರ್ನಾಟಕ ರಾಜ್ಯ ವಿಮಾ ಚಿಕಿತ್ಸಾಲಯದ ವೈದ್ಯಾಧಿಕಾರಿಗಳಿಗೆ ತಲೆಬಿಸಿಯಾಗಿದೆ. ನಿಯಮಾನುಸಾರ ಚಿಕಿತ್ಸೆ ಪಡೆದುಕೊಂಡು ಇಎಸ್ಐಸಿ ಸೌಲಭ್ಯ ಪಡೆದುಕೊಳ್ಳುತ್ತಿರುವವರ ಸಂಖ್ಯೆ ಅತೀ ವಿರಳವಾಗಿದೆ. ಇದಕ್ಕೆಲ್ಲಾ ಪ್ರಮುಖ ಕಾರಣ ಆಯಾ ಕಂಪನಿಗಳ ಮಾನವ ಸಂಪನ್ಮೂಲ ಅಧಿಕಾರಿಗಳು ಈ ಸೌಲಭ್ಯದ ಕುರಿತು ಸೂಕ್ತ ಮಾಹಿತಿ ನೀಡದೆ ಇರುವುದು ಎನ್ನಬಹುದು. ಎಷ್ಟೋ ಬಾರಿ ಇಎಸ್ಐಸಿ ಸೌಲಭ್ಯ ವಂಚಿತರು ಜಿಲ್ಲೆಯ ವಿಮಾ ಚಿಕಿತ್ಸಾಲಯದ ವೈದ್ಯಾಧಿಕಾರಿಗಳೊಂದಿಗೆ ಕಾದಾಟಕ್ಕೆ ಇಳಿದ ಪ್ರಸಂಗವೂ ಜರುಗಿದೆ. ಇತ್ತ ಪ್ರತಿಯೊಬ್ಬರಿಗೂ ಸಾವಧಾನವಾಗಿ ಉತ್ತರಿಸಲು ಸಾಧ್ಯವಾಗದೇ ಕೆಲವೊಮ್ಮೆ ವೈದ್ಯಾಧಿಕಾರಿಗಳು ಕೂಡ ಫಲಾನುಭವಿಗಳ ಮೇಲೆ ರೇಗಾಡಿರುವ ಘಟನೆಗಳು ನಡೆದಿವೆ.

ತುರ್ತು ಚಿಕಿತ್ಸೆ ಪಡೆದು ಖಾಸಗಿ ಆಸ್ಪತ್ರೆಗಳು ನೀಡಿರುವ ಬಿಲ್‌ಗಳನ್ನು ಹಿಡಿದುಕೊಂಡು ಇಎಸ್ಐಸಿ ಸೌಲಭ್ಯ ಅರಸಿ ಬಂದವರಿಗೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಕೊಡಿಸುವಲ್ಲಿ ಬಳ್ಳಾರಿಯ ಸತ್ಯನಾರಾಯಣಪೇಟೆಯಲ್ಲಿರುವ ಕರ್ನಾಟಕ ರಾಜ್ಯ ವಿಮಾ ಚಿಕಿತ್ಸಾಲಯದ ಆಡಳಿತಾತ್ಮಕ ವಿಮಾ ಅಧಿಕಾರಿ ಡಾ. ರಾಮಕೃಷ್ಣ ಅವರ ನೇತೃತ್ವದ ವೈದ್ಯ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

ಪ್ರತಿದಿನವೂ ಇಎಸ್ಐಸಿ ಸೌಲಭ್ಯವನ್ನು ಕೋರಿ ಅಂದಾಜು 40- 50 ಮಂದಿ ರಾಜ್ಯ ವಿಮಾ ಚಿಕಿತ್ಸಾಲಯದ ಕಚೇರಿಗೆ ಬರುತ್ತಿದ್ದು, ಕಡ್ಡಾಯವಾಗಿ ಅವರ ಬಿಪಿ-ಶುಗರ್​ ಪರೀಕ್ಷೆ ಮಾಡಲಾಗುತ್ತಿದೆ. ಐಎಸ್ಐಸಿ ಸೌಲಭ್ಯವುಳ್ಳ ಕೋವಿಡ್ ಸೋಂಕಿತರಿಗೂ ಕೂಡ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಕೊಡಿಸಿಯೂ ಕೂಡ ಗುಣಮುಖರನ್ನಾಗಿ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.