ETV Bharat / state

ಬಳ್ಳಾರಿ: ಕೋವಿಡ್​ನಿಂದ ಮೃತಪಟ್ಟ ವೃದ್ಧೆಯ ಶವ ಸಾಗಿಸಲು ನೆರವಾದ ಆರೋಗ್ಯಾಧಿಕಾರಿ!

author img

By

Published : May 5, 2021, 10:03 AM IST

ಬಳ್ಳಾರಿ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ಆರೋಗ್ಯಾಧಿಕಾರಿ ಡಾ. ದೇವರಾಜ್,​ ಕೊರೊನಾದಿಂದ ಮೃತಪಟ್ಟ ವೃದ್ಧೆಯೋರ್ವರ ಶವ ಸಾಗಿಸಲು ತಾವೇ ಪಿಪಿಇ ಕಿಟ್ ಧರಿಸಿ ನೆರವಾಗಿದ್ದಾರೆ. ಇವರ ಈ ಮಾನವೀಯ ಕಾರ್ಯಕ್ಕೆ ಅನೇಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Bellary
ಕೋವಿಡ್​ನಿಂದ ಮೃತಪಟ್ಟ ವೃದ್ಧೆಯ ಶವ ಸಾಗಿಸಲು ನೆರವಾದ ಆರೋಗ್ಯಾಧಿಕಾರಿ

ಬಳ್ಳಾರಿ: ಕೊರೊನಾದಿಂದ ಮೃತಪಟ್ಟ ವೃದ್ಧೆಯ ಶವವನ್ನು ಆಸ್ಪತ್ರೆಯಿಂದ ವಾಹನಕ್ಕೆ ವರ್ಗಾವಣೆ ಮಾಡಿದ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ಆರೋಗ್ಯಾಧಿಕಾರಿ ಡಾ. ದೇವರಾಜ್ ಅವರ ಮಾನವೀಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ 100 ಹಾಸಿಗೆಯ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೊರೊನಾ ಸೋಂಕು ತಗುಲಿದ ವೃದ್ಧೆಯೊಬ್ಬರು ಚಿಕಿತ್ಸೆ ಪಡೆಯುತ್ತಿದ್ದರು. ಹಲವು ದಿನ ಚಿಕಿತ್ಸೆ ಪಡೆದ ಬಳಿಕವೂ ವೃದ್ಧೆಯು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

ವೃದ್ಧೆಯ ಶವವನ್ನು ಚಿಕಿತ್ಸಾ ಕೊಠಡಿಯಿಂದ ಸಾಗಿಸಬೇಕಿತ್ತು. ಆದರೆ ಆಕೆಯ ಕುಟುಂಬಸ್ಥರು ಮತ್ತು ಬಂಧುಗಳು ಯಾರು ಆಕೆಯ ದೇಹವನ್ನು ಮುಟ್ಟಲು ಹಿಂದೇಟು ಹಾಕುತ್ತಿದ್ದರು‌. ತುಂಬಾ ಸಮಯ ಕಳೆದರೂ ಯಾರೊಬ್ಬರೂ ಶವ ಸಾಗಿಸಲು ಬಾರದೆ ಅವರಿವರ ಹೆಸರು ಹೇಳಿ ಸಮಯ ಕಳೆಯತೊಡಗಿದ್ದರು. ವೃದ್ಧೆ ಮೃತಪಟ್ಟ ಕಾರಣ ಬೆಡ್ ಖಾಲಿಯಾಗಿ ಹೊಸ ರೋಗಿಗೆ ಬೆಡ್​ನ ಅವಶ್ಯಕತೆಯಿತ್ತು. ಹಾಗಾಗಿ ಆಸ್ಪತ್ರೆಯ ಆರೋಗ್ಯಾಧಿಕಾರಿ ಡಾ. ದೇವರಾಜ್ ತಾವೇ ಸ್ವತಃ ಪಿಪಿಇ ಕಿಟ್ ಧರಿಸಿ ಆಸ್ಪತ್ರೆಯ ಆ್ಯಂಬುಲೆನ್ಸ್ ಚಾಲಕರ ಸಹಾಯದೊಂದಿಗೆ ವೃದ್ಧೆಯ ಶವವನ್ನು ಕೊರೊನಾ ವಾರ್ಡ್​ನಿಂದ ಕೆಳಗಿನ ವಾಹನ ನಿಲ್ದಾಣದ ಆವರಣಕ್ಕೆ ತಂದು ಅಲ್ಲಿದ್ದ ಅವರ ಕುಟುಂಬಸ್ಥರ ಇನ್ನೊಂದು ವಾಹನಕ್ಕೆ ವರ್ಗಾಯಿಸಿ ಮಾನವೀಯತೆ ಮೆರೆದಿದ್ದಾರೆ.

ಬಳಿಕ ಮೃತ ವೃದ್ಧೆಯ ಬಂಧುಗಳು ಮತ್ತು ಕುಟುಂಬಸ್ಥರೊಂದಿಗೆ ಮಾತನಾಡಿದ ಆರೋಗ್ಯಾಧಿಕಾರಿ ಡಾ. ದೇವರಾಜ್​ ಕೋವಿಡ್ ಸೋಂಕಿಗೆ ಹೆದರುವ ಅವಶ್ಯಕತೆಯಿಲ್ಲ. ಆದರೆ ಮುನ್ನೆಚ್ಚರಿಕೆಯಿಂದ ಇರಬೇಕು ಎಂದು ತಿಳಿಹೇಳಿದರು. ಹಾಗೇ ನಿಮಗೆ ಶವ ಸಂಸ್ಕಾರ ಮಾಡಲು ಆಗುವುದಿಲ್ಲ ಎಂದರೆ ನಾನೇ ಬಂದು ಮಾಡುತ್ತೇನೆ ಎಂದು ಹೇಳಿ ಅವರುಗಳಿಗೆ ಆತ್ಮಸ್ಥೈರ್ಯ ತುಂಬಿ ತಾವೇ ಸ್ವತಃ ವೃದ್ಧೆಯ ಮೃತದೇಹವನ್ನು ಹಸ್ತಾಂತರಿಸಿದ್ದಾರೆ.

ಆರೋಗ್ಯಾಧಿಕಾರಿಯ ಈ ಕಾರ್ಯಕ್ಕೆ ಆಸ್ಪತ್ರೆಯ ಅನೇಕ ಒಳರೋಗಿಗಳು, ಅವರ ಬಂಧುಗಳು ಹಾಗೂ ಆಪ್ತರು ಮತ್ತು ಆಸ್ಪತ್ರೆಗೆ ಬಂದಿದ್ದ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಓದಿ: ಕೊರೊನಾಗೆ ಬಲಿಯಾದ ಎಲ್ಲಾ ಧರ್ಮಗಳ ಜನರ ಅಂತ್ಯಕ್ರಿಯೆ ನಡೆಸುತ್ತಿವೆ ಈ ಮುಸ್ಲಿಂ‌ ಸಂಘಟನೆಗಳು!

ಬಳ್ಳಾರಿ: ಕೊರೊನಾದಿಂದ ಮೃತಪಟ್ಟ ವೃದ್ಧೆಯ ಶವವನ್ನು ಆಸ್ಪತ್ರೆಯಿಂದ ವಾಹನಕ್ಕೆ ವರ್ಗಾವಣೆ ಮಾಡಿದ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ಆರೋಗ್ಯಾಧಿಕಾರಿ ಡಾ. ದೇವರಾಜ್ ಅವರ ಮಾನವೀಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ 100 ಹಾಸಿಗೆಯ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೊರೊನಾ ಸೋಂಕು ತಗುಲಿದ ವೃದ್ಧೆಯೊಬ್ಬರು ಚಿಕಿತ್ಸೆ ಪಡೆಯುತ್ತಿದ್ದರು. ಹಲವು ದಿನ ಚಿಕಿತ್ಸೆ ಪಡೆದ ಬಳಿಕವೂ ವೃದ್ಧೆಯು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

ವೃದ್ಧೆಯ ಶವವನ್ನು ಚಿಕಿತ್ಸಾ ಕೊಠಡಿಯಿಂದ ಸಾಗಿಸಬೇಕಿತ್ತು. ಆದರೆ ಆಕೆಯ ಕುಟುಂಬಸ್ಥರು ಮತ್ತು ಬಂಧುಗಳು ಯಾರು ಆಕೆಯ ದೇಹವನ್ನು ಮುಟ್ಟಲು ಹಿಂದೇಟು ಹಾಕುತ್ತಿದ್ದರು‌. ತುಂಬಾ ಸಮಯ ಕಳೆದರೂ ಯಾರೊಬ್ಬರೂ ಶವ ಸಾಗಿಸಲು ಬಾರದೆ ಅವರಿವರ ಹೆಸರು ಹೇಳಿ ಸಮಯ ಕಳೆಯತೊಡಗಿದ್ದರು. ವೃದ್ಧೆ ಮೃತಪಟ್ಟ ಕಾರಣ ಬೆಡ್ ಖಾಲಿಯಾಗಿ ಹೊಸ ರೋಗಿಗೆ ಬೆಡ್​ನ ಅವಶ್ಯಕತೆಯಿತ್ತು. ಹಾಗಾಗಿ ಆಸ್ಪತ್ರೆಯ ಆರೋಗ್ಯಾಧಿಕಾರಿ ಡಾ. ದೇವರಾಜ್ ತಾವೇ ಸ್ವತಃ ಪಿಪಿಇ ಕಿಟ್ ಧರಿಸಿ ಆಸ್ಪತ್ರೆಯ ಆ್ಯಂಬುಲೆನ್ಸ್ ಚಾಲಕರ ಸಹಾಯದೊಂದಿಗೆ ವೃದ್ಧೆಯ ಶವವನ್ನು ಕೊರೊನಾ ವಾರ್ಡ್​ನಿಂದ ಕೆಳಗಿನ ವಾಹನ ನಿಲ್ದಾಣದ ಆವರಣಕ್ಕೆ ತಂದು ಅಲ್ಲಿದ್ದ ಅವರ ಕುಟುಂಬಸ್ಥರ ಇನ್ನೊಂದು ವಾಹನಕ್ಕೆ ವರ್ಗಾಯಿಸಿ ಮಾನವೀಯತೆ ಮೆರೆದಿದ್ದಾರೆ.

ಬಳಿಕ ಮೃತ ವೃದ್ಧೆಯ ಬಂಧುಗಳು ಮತ್ತು ಕುಟುಂಬಸ್ಥರೊಂದಿಗೆ ಮಾತನಾಡಿದ ಆರೋಗ್ಯಾಧಿಕಾರಿ ಡಾ. ದೇವರಾಜ್​ ಕೋವಿಡ್ ಸೋಂಕಿಗೆ ಹೆದರುವ ಅವಶ್ಯಕತೆಯಿಲ್ಲ. ಆದರೆ ಮುನ್ನೆಚ್ಚರಿಕೆಯಿಂದ ಇರಬೇಕು ಎಂದು ತಿಳಿಹೇಳಿದರು. ಹಾಗೇ ನಿಮಗೆ ಶವ ಸಂಸ್ಕಾರ ಮಾಡಲು ಆಗುವುದಿಲ್ಲ ಎಂದರೆ ನಾನೇ ಬಂದು ಮಾಡುತ್ತೇನೆ ಎಂದು ಹೇಳಿ ಅವರುಗಳಿಗೆ ಆತ್ಮಸ್ಥೈರ್ಯ ತುಂಬಿ ತಾವೇ ಸ್ವತಃ ವೃದ್ಧೆಯ ಮೃತದೇಹವನ್ನು ಹಸ್ತಾಂತರಿಸಿದ್ದಾರೆ.

ಆರೋಗ್ಯಾಧಿಕಾರಿಯ ಈ ಕಾರ್ಯಕ್ಕೆ ಆಸ್ಪತ್ರೆಯ ಅನೇಕ ಒಳರೋಗಿಗಳು, ಅವರ ಬಂಧುಗಳು ಹಾಗೂ ಆಪ್ತರು ಮತ್ತು ಆಸ್ಪತ್ರೆಗೆ ಬಂದಿದ್ದ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಓದಿ: ಕೊರೊನಾಗೆ ಬಲಿಯಾದ ಎಲ್ಲಾ ಧರ್ಮಗಳ ಜನರ ಅಂತ್ಯಕ್ರಿಯೆ ನಡೆಸುತ್ತಿವೆ ಈ ಮುಸ್ಲಿಂ‌ ಸಂಘಟನೆಗಳು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.