ಬಳ್ಳಾರಿ: ನಗರದ ರಾವ್ ಬಹದ್ದೂರ್ ವೈ.ಮಹಾಬಲೇಶ್ವರಪ್ಪ ಎಂಜಿನಿಯರಿಂಗ್ ಕಾಲೇಜಿನಲ್ಲಿಂದು ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿದ್ದ ವೈ.ದೇವೇಂದ್ರಪ್ಪ, ವಿಕ್ಟರಿ ಸಂಕೇತ ತೋರಿಸಿ ಮಾಧ್ಯಮಗಳತ್ತ ಕೈ ಮುಗಿದರು.
ನಗರದ ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ದೇವೇಂದ್ರಪ್ಪ ಮಾತನಾಡಿ, ಜಿಲ್ಲೆಯ ಕೆರೆಗಳ ಭರ್ತಿಗೆ ಆದ್ಯತೆ ನೀಡುವೆ. ದೇಶದಲ್ಲಿ ಮೋದಿ ನೇತೃತ್ವದ ಸರ್ಕಾರ ರಚನೆಯಾಗಲಿದೆ. ಹೀಗಾಗಿ, ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವೆ ಎಂದರು.
ಜಿಲ್ಲೆಯ ಮತದಾರರಿಗೆ ಅಭಿನಂದನೆ
ಜಿಲ್ಲೆಯ ಮತದಾರರು ನನಗೆ ಬೆಂಬಲ ನೀಡಿದ್ದಾರೆ. ಹೀಗಾಗಿ, ಮತದಾರರ ಋಣ ತೀರಿಸಲು ನಾನು ಶ್ರಮಿಸುವೆ. ಕಳೆದ ನಾಲ್ಕೂವರೆ ತಿಂಗಳು ಮಾತ್ರ ಅವರು ಸಂಸದರಾಗಿದ್ದರು. ಇಲ್ಲಿಂದ ಗೆದ್ದು ಬೆಂಗಳೂರಿನತ್ತ ಮುಖ ಮಾಡಿದ್ದರು. ಅದ್ರೆ ನಾನು ಹಾಗೆ ಮಾಡಲ್ಲ. ಇಲ್ಲೇ ಇದ್ದು ಜಿಲ್ಲೆಯ ಮತದಾರರ ಸೇವೆಗೆ ಸದಾ ಸಿದ್ಧನಾಗಿರುವೆ ಎಂದರು.