ETV Bharat / state

ಕೃಷ್ಣಾ ನದಿಯಲ್ಲಿ ಕಾಲು ಜಾರಿ ಬಿದ್ದು ದುರ್ಘಟನೆ: ಇಬ್ಬರ ಸಾವು

author img

By

Published : Aug 17, 2019, 4:29 PM IST

ಕೃಷ್ಣಾ ನದಿಗೆ ಕಾಲು ಜಾರಿ ಬಿದ್ದು ಇಬ್ಬರು ಅಸುನೀಗಿದ ದುರ್ಘಟನೆ ರಾಯಬಾಗ ತಾಲೂಕಿನ ನಸಲಾಪುರ ಗ್ರಾಮದಲ್ಲಿ ಸಂಭವಿಸಿದೆ.

ಇಬ್ಬರನ್ನು ಬಲಿ ಪಡೆದ ಕೃಷ್ಣೆ

ಚಿಕ್ಕೋಡಿ : ನದಿ ಪ್ರವಾಹದಲ್ಲಿ ಕಾಲು ಜಾರಿ ಬಿದ್ದು ಇಬ್ಬರು ನೀರು ಪಾಲಾದ ದಾರುಣ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಕುಸನಾಳ-ಇಂಗಳಿ ಸಮೀಪ ನಡೆದಿದೆ.

ರಾಯಬಾಗ ತಾಲೂಕಿನ ನಸಲಾಪುರ ಗ್ರಾಮದ ನಿವಾಸಿಗಳಾದ ಲಕ್ಷ್ಮಣ ಅಪ್ಪಾಸಾಬ ಸಮಾಜ (28) ಹಾಗೂ ಶಾಂತಿನಾಥ ವಸಂತ ಸಮಾಜ (25) ಮೃತರು.

ಕೃಷ್ಣಾ ನದಿಗೆ ಪ್ರವಾಹ ಬಂದಿದ್ದು ಇದೀಗ ನೀರಿನ ಮಟ್ಟದಲ್ಲಿ ಇಳಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಕುಸನಾಳ ಗ್ರಾಮದ ತಮ್ಮ ಸಂಬಂಧಿಕರ ಮನೆಗೆ ಬಂದಿರುವ ಅವರು ನದಿ ಬಳಿಗೆ ತೆರಳಿದ್ದಾರೆ. ಈ ವೇಳೆ ನದಿ ನೀರಿನಲ್ಲಿ ಕಾಲು ಜಾರಿ ಬಿದ್ದು ಮೃತ ಪಟ್ಟಿದ್ದಾರೆ ಎನ್ನಲಾಗಿದೆ.

ಇಬ್ಬರಲ್ಲಿ ಒಬ್ಬರಿಗೆ ಮಾತ್ರ ಈಜು ಬರುತ್ತಿದ್ದು ರಕ್ಷಣೆ ಧಾವಿಸಿದಾಗ ಪರಸ್ಪರ ತಬ್ಬಿಕೊಂಡು ಇಬ್ಬರೂ ಮೃತಪಟ್ಟಿದ್ದಾರೆ.

ಕಾಗವಾಡ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿಕ್ಕೋಡಿ : ನದಿ ಪ್ರವಾಹದಲ್ಲಿ ಕಾಲು ಜಾರಿ ಬಿದ್ದು ಇಬ್ಬರು ನೀರು ಪಾಲಾದ ದಾರುಣ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಕುಸನಾಳ-ಇಂಗಳಿ ಸಮೀಪ ನಡೆದಿದೆ.

ರಾಯಬಾಗ ತಾಲೂಕಿನ ನಸಲಾಪುರ ಗ್ರಾಮದ ನಿವಾಸಿಗಳಾದ ಲಕ್ಷ್ಮಣ ಅಪ್ಪಾಸಾಬ ಸಮಾಜ (28) ಹಾಗೂ ಶಾಂತಿನಾಥ ವಸಂತ ಸಮಾಜ (25) ಮೃತರು.

ಕೃಷ್ಣಾ ನದಿಗೆ ಪ್ರವಾಹ ಬಂದಿದ್ದು ಇದೀಗ ನೀರಿನ ಮಟ್ಟದಲ್ಲಿ ಇಳಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಕುಸನಾಳ ಗ್ರಾಮದ ತಮ್ಮ ಸಂಬಂಧಿಕರ ಮನೆಗೆ ಬಂದಿರುವ ಅವರು ನದಿ ಬಳಿಗೆ ತೆರಳಿದ್ದಾರೆ. ಈ ವೇಳೆ ನದಿ ನೀರಿನಲ್ಲಿ ಕಾಲು ಜಾರಿ ಬಿದ್ದು ಮೃತ ಪಟ್ಟಿದ್ದಾರೆ ಎನ್ನಲಾಗಿದೆ.

ಇಬ್ಬರಲ್ಲಿ ಒಬ್ಬರಿಗೆ ಮಾತ್ರ ಈಜು ಬರುತ್ತಿದ್ದು ರಕ್ಷಣೆ ಧಾವಿಸಿದಾಗ ಪರಸ್ಪರ ತಬ್ಬಿಕೊಂಡು ಇಬ್ಬರೂ ಮೃತಪಟ್ಟಿದ್ದಾರೆ.

ಕಾಗವಾಡ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ಕಾಲು ಜಾರಿ ಕೃಷ್ಣೆಯ ಸೆಳತಕ್ಕೆ ಇಬ್ಬರು ನೀರು ಪಾಲುBody:

ಚಿಕ್ಕೋಡಿ :

ನದಿ ಪ್ರವಾಹದಲ್ಲಿ ಕಾಲು ಜಾರಿ ಇಬ್ಬರು ನೀರು ಪಾಲಾದದ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಕುಸನಾಳ - ಇಂಗಳಿ ಗ್ರಾಮದ ನಡುವೆ ನಡೆದಿದೆ.

ರಾಯಬಾಗ ತಾಲೂಕಿನ ನಸಲಾಪುರ ಗ್ರಾಮದ ನಿವಾಸಿಗಳಾದ ಲಕ್ಷ್ಮಣ ಅಪ್ಪಾಸಾಬ ಸಮಾಜ (28) ಹಾಗೂ ಶಾಂತಿನಾಥ ವಸಂತ ಸಮಾಜ (25) ಎಂಬವರೆ ನೀರುಪಾಲಾದ ಯುವಕರು.

ಕೃಷ್ಣಾ ನದಿಗೆ ಪ್ರವಾಹ ಬಂದು ಸ್ವಲ್ಪ ಮಟ್ಟಿಗೆ ಇಳಿಮುಖವಾಗಿರುವದರಿಂದ ಕುಸನಾಳ ಗ್ರಾಮದ ಅವರ ಮಾವನ ಮನೆಗೆ ಬಂದು ಪ್ರವಾಹ ಪರಿಸ್ಥಿತಿ ನೋಡಲು ಬಂದಿದ್ದರು. ಕುಸನಾಳ ಗ್ರಾಮದಲ್ಲಿ ಇವರ ಮಾವ ಧನಪಾಲ ದಾದು ಡುಬಲೆ ಎಂಬವರ ಕಿರಾಣಿ ಅಂಗಡಿ ಊರಲ್ಲಿದ್ದು, ಪ್ರವಾಹದ ನೀರು ಕಡಿಮೆಯಾಗಿರುವದರಿಂದ ಅಂಗಡಿಯನ್ನು ಸ್ವಚ್ಚಗೊಳಿಸಲು ಹೋಗಿದ್ದು ಬರುವಾಗ ರಸ್ತೆ ಪಕ್ಕದಲ್ಲಿ ಕಾಲು ಜಾರಿ ನೀರಿಗೆ ಬಿದ್ದಿರುವದರಿಂದ ಒಬ್ಬರಿಗೊಬ್ಬರು ಅಪ್ಪಿಕೊಂಡಿದ್ದು, ಇಬ್ಬರು ನೀರಿನಲ್ಲಿ ಬಿದ್ದಿದ್ದಾರೆ.

ಇದರಲ್ಲಿ ಓರ್ವನಿಗೆ ಈಜು ಬುರುತ್ತದೆ. ಇನ್ನೊಬ್ಬನಿಗೆ ಈಜು ಬಾರದೆ ಇರುವದರಿಂದ ಒಬ್ಬರಿಗೊಬ್ಬರು ಅಪ್ಪಿಕೊಂಡಿರುವದರಿಂದ ಎರಡು ಬಾರಿ ಮುಳುಗಿ ಎದ್ದರಾದರೂ ಮೂರನೆ ಬಾರಿಗೆ ಎಳಲೇ ಇಲ್ಲ. ರಸ್ತೆ ಪಕ್ಕದಲ್ಲಿ ಹಲವಾರು ಜನರು ನೋಡುತ್ತಿದ್ದರಾದರೂ ನೋಡು, ನೋಡುವಷ್ಟರಲ್ಲೇ ಈ ದುರ್ಘಟನೆ ನಡೆದಿದೆ.

ಕಾಗವಾಡ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.

ಪೋಟೋ 1 : ಲಕ್ಷ್ಮಣ ಅಪ್ಪಾಸಾಬ ಸಮಾಜ

ಪೋಟೋ 2 : ಶಾಂತಿನಾಥ ವಸಂತ ಸಮಾಜ


Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.