ETV Bharat / state

ಸಮಸ್ಯೆ ಬಗೆಹರಿಸಿದ್ರೆ ಅಷ್ಟೇ ವೋಟು ಹಾಕ್ತೇವಿ... ಸತೀಶ್​ಗೆ ಮಹಿಳೆಯರ ಎಚ್ಚರಿಕೆ

author img

By

Published : Nov 24, 2019, 9:09 PM IST

ಇಂದು ಶಾಸಕ ಸತೀಶ್ ಜಾರಕಿ ಹೊಳಿಯವರು ತಮ್ಮ ನಗರದ ಹೊಸಪೇಠ ಗಲ್ಲಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ ಪರ ಮತಯಾಚಿಸಿದರು. ಈ ವೇಳೆ ಅಲ್ಲಿನ ಮಹಿಳೆಯರು ಸಮಸ್ಯೆಗಳ ಸುರಿಮಳೆಯನ್ನೇ ಹರಿಸಿದ್ರು. ವೋಟ್​ ಹಾಕಬೇಕು ಅಂದ್ರೆ ಮೊದಲು ನಮ್ಮ ಸಮಸ್ಯೆ ಬಗೆಹರಿಸ್ರಿ ಅಂತಾ ಮಹಿಳಾ ಮತದಾರರು ಹೇಳಿದ್ರು.

Satish Jarkiholi, ಸತೀಶ್​ ಜಾರಕಿಹೊಳಿ

ಗೋಕಾಕ್​: ಉಪಚುನಾವಣೆ ಹಿನ್ನಲೆಯಲ್ಲಿ ಮತಯಾಚನೆ ವೇಳೆ ಮಾಜಿ ಸಚಿವ ಸತೀಶ್​ ಜಾರಕಿಹೊಳಿ ಬಳಿ ಮಹಿಳೆಯರು ತಮ್ಮ ಸಮಸ್ಯೆ ಪರಿಹಾರಕ್ಕಾಗಿ ಮನವಿ ಮಾಡಿದ್ರು. ಸಮಸ್ಯೆ ಪರಿಹರಿಸಿದ್ರೆ ಮಾತ್ರ ಮತ ಹಾಕುವುದಾಗಿ ಎಚ್ಚರಿಕೆಯನ್ನೂ ನೀಡಿದ್ರು.

ಸಚಿವರ ಬಳಿ ಸಮಸ್ಯೆ ಹೇಳಿಕೊಂಡ ಮಹಿಳೆಯರು

ಇಂದು ನಗರದ ಹೊಸಪೇಠಗಲ್ಲಿಯಲ್ಲಿ ಜನರ ಬಳಿ ತೆರಳಿ ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ ಪರ ಮತಯಾಚಿಸಿದರು. ಈ ವೇಳೆ ಇಲ್ಲಿನ ಮಹಿಳೆಯರು ಸಚಿವರ ಬಳಿ ತಮ್ಮ ಸಮಸ್ಯೆಗಳನ್ನು ಬಿಚ್ಚಿಟ್ಟರು. ಕರೆಂಟ್ ಇಲ್ಲ, ರಸ್ತೆ ಸುಧಾರಣೆ ಇಲ್ಲದೆ ಸಂಕಷ್ಟ ಎದುರಿಸುತ್ತಿದ್ದೇವೆ. ಈ ಕುರಿತು ಕಳೆದ 5 ವಷ೯ಗಳಿಂದ ಕೇಳಿಕೊಳ್ಳುತ್ತಿದ್ದೇವೆ, ನಮ್ಮ ಸಮಸ್ಯೆ ಆಲಿಸೋರು ಯಾರು ಇಲ್ಲ ಎಂದು ಗೋಗರೆದರು.

ಇದಕ್ಕೆ ಪ್ರತಿಕ್ರಿಯಿಸಿದ ಸತೀಶ್​ ಜಾರಕಿಹೊಳಿ, ಈ ಉದ್ದೇಶಕ್ಕಾಗಿಯೇ ಈ ಬಾರಿ ಕಾಂಗ್ರೆಸ್​ನಿಂದ ಬೇರೆ ಅಭ್ಯರ್ಥಿ ಕಣಕ್ಕಿಳಿದಿರೋದು ಎಂದರು. ಇದಕ್ಕೆ ಮಹಿಳೆಯರು ಸಮಸ್ಯೆ ಬಗೆಹರಿಸಿದರೆ ಅಷ್ಟೇ ವೋಟು ಹಾಕುತ್ತೇವೆ ಎಂದರು.

ಗೋಕಾಕ್​: ಉಪಚುನಾವಣೆ ಹಿನ್ನಲೆಯಲ್ಲಿ ಮತಯಾಚನೆ ವೇಳೆ ಮಾಜಿ ಸಚಿವ ಸತೀಶ್​ ಜಾರಕಿಹೊಳಿ ಬಳಿ ಮಹಿಳೆಯರು ತಮ್ಮ ಸಮಸ್ಯೆ ಪರಿಹಾರಕ್ಕಾಗಿ ಮನವಿ ಮಾಡಿದ್ರು. ಸಮಸ್ಯೆ ಪರಿಹರಿಸಿದ್ರೆ ಮಾತ್ರ ಮತ ಹಾಕುವುದಾಗಿ ಎಚ್ಚರಿಕೆಯನ್ನೂ ನೀಡಿದ್ರು.

ಸಚಿವರ ಬಳಿ ಸಮಸ್ಯೆ ಹೇಳಿಕೊಂಡ ಮಹಿಳೆಯರು

ಇಂದು ನಗರದ ಹೊಸಪೇಠಗಲ್ಲಿಯಲ್ಲಿ ಜನರ ಬಳಿ ತೆರಳಿ ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ ಪರ ಮತಯಾಚಿಸಿದರು. ಈ ವೇಳೆ ಇಲ್ಲಿನ ಮಹಿಳೆಯರು ಸಚಿವರ ಬಳಿ ತಮ್ಮ ಸಮಸ್ಯೆಗಳನ್ನು ಬಿಚ್ಚಿಟ್ಟರು. ಕರೆಂಟ್ ಇಲ್ಲ, ರಸ್ತೆ ಸುಧಾರಣೆ ಇಲ್ಲದೆ ಸಂಕಷ್ಟ ಎದುರಿಸುತ್ತಿದ್ದೇವೆ. ಈ ಕುರಿತು ಕಳೆದ 5 ವಷ೯ಗಳಿಂದ ಕೇಳಿಕೊಳ್ಳುತ್ತಿದ್ದೇವೆ, ನಮ್ಮ ಸಮಸ್ಯೆ ಆಲಿಸೋರು ಯಾರು ಇಲ್ಲ ಎಂದು ಗೋಗರೆದರು.

ಇದಕ್ಕೆ ಪ್ರತಿಕ್ರಿಯಿಸಿದ ಸತೀಶ್​ ಜಾರಕಿಹೊಳಿ, ಈ ಉದ್ದೇಶಕ್ಕಾಗಿಯೇ ಈ ಬಾರಿ ಕಾಂಗ್ರೆಸ್​ನಿಂದ ಬೇರೆ ಅಭ್ಯರ್ಥಿ ಕಣಕ್ಕಿಳಿದಿರೋದು ಎಂದರು. ಇದಕ್ಕೆ ಮಹಿಳೆಯರು ಸಮಸ್ಯೆ ಬಗೆಹರಿಸಿದರೆ ಅಷ್ಟೇ ವೋಟು ಹಾಕುತ್ತೇವೆ ಎಂದರು.

Intro:ಸಮಸ್ಯೆ ಬಗೆಹರಿಸಿದರೆ ಅಷ್ಟೆ ಓಟು ಹಾಕುತ್ತೆವೆ ಮಹಿಳೆಯರಿಂದ ಸತೀಶ ಜಾರಕಿಹೊಳಿ ಎಚ್ಚರಿಕೆBody:ಗೋಕಾಕ: ಉಪಚುನಾವಣೆ ಹಿನ್ನೆಲೆ ಮತಯಾಚನೆ ಪಾದಯಾತ್ರೆ ವೇಳೆ ಮಾಜಿ ಸಚಿವ ಸತೀಶ ಜಾರಕಿಹೊಳಿಗೆ ರಸ್ತೆ ಸಮಸ್ಯೆ ಬಗ್ಗೆ ಮಹಿಳೆಯರು ಗಮನ ಸೆಳೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದ ಹೊಸಪೇಠ ಗಲ್ಲಿಯಲ್ಲಿ ಪ್ರಚಾರ ನಿಮಿತ್ಯ ಸಂಜೆ ಪಾದಯಾತ್ರೆ ನಡೆಸಿದ್ದ ಕಾಂಗ್ರೆಸ್ ಅಭ್ಯಥಿ೯ ಲಖನ್ ಜಾರಕಿಹೊಳಿ ಪರ ಮತಯಾಚನೆಗೆ ಆಗಮಿಸಿದ್ದ ಸತೀಶ ಜಾರಕಿಹೊಳಿಗೆ ಕಳೆದ ೫ ವಷ೯ಗಳಿಂದ ಕೇಳಿಕೊಳ್ಳುತ್ತಿದ್ದೇವೆ, ನಮ್ಮ ಸಮಸ್ಯೆ ಕೇಳೋರಿಲ್ಲ ಎಂದ ಮಹಿಳೆಯರು ಕರೆಂಟ್ ಇಲ್ಲ, ರಸ್ತೆ ಸುಧಾರಣೆ ಇಲ್ಲ ಹೀಗಾಗಿ ಜನರಿಗೆ ಸಂಕಷ್ಟವಾಗಿದೆ ಎಂದು ಗೋಗರೆದರು.

ಮಾಜಿ ಸಚಿವ ಸತೀಶ ಜಾರಕಿಹೊಳಿ ಅವರು ಇಂತಹ ಉದ್ದೇಶಕ್ಕಾಗಿ ಈ ಬಾರಿ ಬದಲಾವಣೆ ಮಾಡಿ ಎಂದಾಗ ಸಮಸ್ಯೆ ಬಗೆಹರಿಸಿದರೆ ಅಷ್ಟೆ ಓಟು ಹಾಕುತ್ತೆವೆ ಇಲ್ಲ ಅಂದರೆ ಓಟು ಹಾಕುವುದಿಲ್ಲ ಎಂದರು. ಎಲ್ಲಾ ಓಣಿಯಲ್ಲಿ ಒಂದು ನ್ಯಾಯ ಈ ಓಣಿಗೆ ಒಂದು ನ್ಯಾಯ ಏಕೆ ಎಂದು ಮಹಿಳೆಯರು ಪ್ರಶ್ನಿಸಿದರು.

KN_GKK_05_24_MAHILEYAR_SAMASE_VSL_KAC10009Conclusion:ಗೋಕಾಕ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.