ETV Bharat / state

ಹಳಿ ತಪ್ಪಿದ ರೈಲು... ಪ್ರಯಾಣಿಕರಿಗೆ ಸಿಕ್ತು 'ದೂಧ್​ ಸಾಗರ್' ಕಣ್ತುಂಬಿಕೊಳ್ಳುವ ಭಾಗ್ಯ!

author img

By

Published : Jul 23, 2021, 2:10 PM IST

Updated : Jul 23, 2021, 3:50 PM IST

ಬೆಳಗಾವಿ - ಗೋವಾ ಗಡಿಯಲ್ಲಿ ಮಂಗಳೂರು - ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್​ ಎಕ್ಸ್‌ಪ್ರೆಸ್ ರೈಲು ಹಳಿ ತಪ್ಪಿದೆ. ಆದರೆ ಯಾರಿಗೂ ಯಾವುದೇ ಅಪಾಯವಾಗಿಲ್ಲ. ದೂಧ್​ಸಾಗರ್​ ಜಲಪಾತದ ಸಮೀಪವೇ ಘಟನೆ ಸಂಭವಿಸಿದ್ದರಿಂದ ಪ್ರಯಾಣಿಕರು ಜಲಪಾತದ ದೃಶ್ಯವೈಭವವನ್ನು ಕಣ್ತುಂಬಿಕೊಂಡರು.

ದೂದ್​ ಸಾಗರ್
ದೂದ್​ ಸಾಗರ್

ಬೆಳಗಾವಿ: ಪಶ್ಚಿಮ ಘಟ್ಟ ಪ್ರದೇಶದಲ್ಲಿ ಕಳೆದೊಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ದೂಧ್​ ಸಾಗರ ಜಲಪಾತ ಭೋರ್ಗರೆಯುತ್ತಿದೆ. ಈ ಹಿನ್ನೆಲೆ ರೈಲ್ವೆ ಹಳಿ ಮೇಲೆ ಮಣ್ಣು ಕುಸಿದಿದ್ದು, ಇದನ್ನು ಗಮನಿಸದ ಚಾಲಕ ರೈಲು ಚಲಾಯಿಸಿದ್ದಾನೆ.

ಪ್ರಯಾಣಿಕರಿಗೆ ಸಿಕ್ತು 'ದೂಧ್​ ಸಾಗರ್' ಕಣ್ತುಂಬಿಕೊಳ್ಳುವ ಭಾಗ್ಯ

ಇದರಿಂದಾಗಿ, ಮಂಗಳೂರು - ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್​ ಎಕ್ಸ್‌ಪ್ರೆಸ್ ರೈಲು ಹಳಿ ತಪ್ಪಿದ್ದು ನಿಂತಲ್ಲೇ ನಿಂತಿದೆ. ಈ ಅವಘಡದಲ್ಲಿ ಯಾವುದೇ ಹಾನಿಯಾಗಿಲ್ಲ. ಗೋವಾ ಗಡಿಯಲ್ಲಿ ‌ವಿಪರೀತ ಮಳೆಯಿಂದ ರೈಲಿಗೆ ಅಪಾರ ಪ್ರಮಾಣದಲ್ಲಿ ಮಳೆ ನೀರು ಅಪ್ಪಳಿಸುತ್ತಿದೆ. ರುದ್ರ ರಮಣೀಯ ದೃಶ್ಯವನ್ನು ಸ್ಥಳೀಯರು ಮೊಬೈಲಿನಲ್ಲಿ ಸೆರೆ ಹಿಡಿದಿದ್ದಾರೆ.

ದೂಧ್​ ಸಾಗರ ಭೋರ್ಗರೆತಕ್ಕೆ ಕರ್ನಾಟಕ - ಗೋವಾ ರೈಲು ಸಂಚಾರವೂ ಸ್ಥಗಿತಗೊಂಡಿದೆ. ಮಳೆ ಕಡಿಮೆಯಾಗುವವರೆಗೆ ರೈಲು ಸೇವೆ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ. ದೂಧ್​ ಸಾಗರದ ನಯನ ಮನೋಹರ ದೃಶ್ಯವನ್ನು ಪ್ರಯಾಣಿಕರು ರೈಲಲ್ಲೇ ಕುಳಿತು ಕಣ್ತುಂಬಿಕೊಂಡರು.

ಮೈದುಂಬಿ ಹರಿಯುತ್ತಿರುವ ಗೋಕಾಕ್​ ಫಾಲ್ಸ್

ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶದಲ್ಲಿ ವರ್ಷಧಾರೆ ಮುಂದವರೆದಿದ್ದು, ಗೋಕಾಕ್​ಫಾಲ್ಸ್​ ಮೈದುಂಬಿ ಹರಿಯುತ್ತಿದೆ. ಕೃಷ್ಣ ನದಿಯ ಉಪ ನದಿಯಾಗಿರುವ ಘಟಪ್ರಭಾ ನದಿಗೆ ಒಳಹರಿವು ಹೆಚ್ಚಾಗಿರುವ ಹಿನ್ನೆಲೆ ಗೋಕಾಕ್ ಫಾಲ್ಸ್​ ಹಾಲಿನ ನೊರೆಯಂತೆ ಮೈದುಂಬಿ ಹರಿಯುತ್ತಿದೆ. ಭಾರತದ ನಯಾಗರ ಜಲಪಾತ ಎಂದೇ ಪ್ರಸಿದ್ಧಿಯಾಗಿರುವ ಈ ಫಾಲ್ಸ್​ ನೋಡಲು ಕಂಗಳೆರೆಡು ಸಾಲುತ್ತಿಲ್ಲ.

ಘಟಪ್ರಭಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿ ಗೋಕಾಕ್, ಮೂಡಲಗಿ, ಅರಭಾವಿ ಸೇರಿದಂತೆ ಇತರ ನೂರಾರು ಗ್ರಾಮಗಳಿಗೆ ಪ್ರವಾಹ ಭೀತಿ ಸೃಷ್ಟಿಸಿದೆ. ಆದರೂ, ಜಲಪಾತದ ರುದ್ರ ರಮಣೀಯ ದೃಶ್ಯಗಳನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.

ಬೆಳಗಾವಿ: ಪಶ್ಚಿಮ ಘಟ್ಟ ಪ್ರದೇಶದಲ್ಲಿ ಕಳೆದೊಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ದೂಧ್​ ಸಾಗರ ಜಲಪಾತ ಭೋರ್ಗರೆಯುತ್ತಿದೆ. ಈ ಹಿನ್ನೆಲೆ ರೈಲ್ವೆ ಹಳಿ ಮೇಲೆ ಮಣ್ಣು ಕುಸಿದಿದ್ದು, ಇದನ್ನು ಗಮನಿಸದ ಚಾಲಕ ರೈಲು ಚಲಾಯಿಸಿದ್ದಾನೆ.

ಪ್ರಯಾಣಿಕರಿಗೆ ಸಿಕ್ತು 'ದೂಧ್​ ಸಾಗರ್' ಕಣ್ತುಂಬಿಕೊಳ್ಳುವ ಭಾಗ್ಯ

ಇದರಿಂದಾಗಿ, ಮಂಗಳೂರು - ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್​ ಎಕ್ಸ್‌ಪ್ರೆಸ್ ರೈಲು ಹಳಿ ತಪ್ಪಿದ್ದು ನಿಂತಲ್ಲೇ ನಿಂತಿದೆ. ಈ ಅವಘಡದಲ್ಲಿ ಯಾವುದೇ ಹಾನಿಯಾಗಿಲ್ಲ. ಗೋವಾ ಗಡಿಯಲ್ಲಿ ‌ವಿಪರೀತ ಮಳೆಯಿಂದ ರೈಲಿಗೆ ಅಪಾರ ಪ್ರಮಾಣದಲ್ಲಿ ಮಳೆ ನೀರು ಅಪ್ಪಳಿಸುತ್ತಿದೆ. ರುದ್ರ ರಮಣೀಯ ದೃಶ್ಯವನ್ನು ಸ್ಥಳೀಯರು ಮೊಬೈಲಿನಲ್ಲಿ ಸೆರೆ ಹಿಡಿದಿದ್ದಾರೆ.

ದೂಧ್​ ಸಾಗರ ಭೋರ್ಗರೆತಕ್ಕೆ ಕರ್ನಾಟಕ - ಗೋವಾ ರೈಲು ಸಂಚಾರವೂ ಸ್ಥಗಿತಗೊಂಡಿದೆ. ಮಳೆ ಕಡಿಮೆಯಾಗುವವರೆಗೆ ರೈಲು ಸೇವೆ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ. ದೂಧ್​ ಸಾಗರದ ನಯನ ಮನೋಹರ ದೃಶ್ಯವನ್ನು ಪ್ರಯಾಣಿಕರು ರೈಲಲ್ಲೇ ಕುಳಿತು ಕಣ್ತುಂಬಿಕೊಂಡರು.

ಮೈದುಂಬಿ ಹರಿಯುತ್ತಿರುವ ಗೋಕಾಕ್​ ಫಾಲ್ಸ್

ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶದಲ್ಲಿ ವರ್ಷಧಾರೆ ಮುಂದವರೆದಿದ್ದು, ಗೋಕಾಕ್​ಫಾಲ್ಸ್​ ಮೈದುಂಬಿ ಹರಿಯುತ್ತಿದೆ. ಕೃಷ್ಣ ನದಿಯ ಉಪ ನದಿಯಾಗಿರುವ ಘಟಪ್ರಭಾ ನದಿಗೆ ಒಳಹರಿವು ಹೆಚ್ಚಾಗಿರುವ ಹಿನ್ನೆಲೆ ಗೋಕಾಕ್ ಫಾಲ್ಸ್​ ಹಾಲಿನ ನೊರೆಯಂತೆ ಮೈದುಂಬಿ ಹರಿಯುತ್ತಿದೆ. ಭಾರತದ ನಯಾಗರ ಜಲಪಾತ ಎಂದೇ ಪ್ರಸಿದ್ಧಿಯಾಗಿರುವ ಈ ಫಾಲ್ಸ್​ ನೋಡಲು ಕಂಗಳೆರೆಡು ಸಾಲುತ್ತಿಲ್ಲ.

ಘಟಪ್ರಭಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿ ಗೋಕಾಕ್, ಮೂಡಲಗಿ, ಅರಭಾವಿ ಸೇರಿದಂತೆ ಇತರ ನೂರಾರು ಗ್ರಾಮಗಳಿಗೆ ಪ್ರವಾಹ ಭೀತಿ ಸೃಷ್ಟಿಸಿದೆ. ಆದರೂ, ಜಲಪಾತದ ರುದ್ರ ರಮಣೀಯ ದೃಶ್ಯಗಳನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.

Last Updated : Jul 23, 2021, 3:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.