ETV Bharat / state

ಅಪರಾಧ ತಡೆಗೆ ಪ್ರತಿ ನಾಗರಿಕನ ಜಾಗೃತಿಯೂ ಅಗತ್ಯ.. ಯು ಎಸ್‌ ಅವಟಿ

author img

By

Published : Dec 15, 2019, 6:19 PM IST

ಅಪರಾಧ ತಡೆಗೆ ಪ್ರತಿ ನಾಗರಿಕನೂ ಜಾಗೃತಿಗೊಳ್ಳುವುದು ಅಗತ್ಯವಿದೆ. ಅಪರಾಧ ಜರುಗುವುದರ ಮುಂಚೆ ನಾಗರಿಕರು ಜಾಗೃತಿ ವಹಿಸಿದರೆ ಅಪರಾಧಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತವೆ. ಈ ಮೂಲಕ ಅಪರಾಧ ತಡೆಯಲು ಸಾಧ್ಯ ಎಂದು ಅಥಣಿ ಪಿಎಸ್ಐ ಯು ಎಸ್ ಅವಟಿ ಹೇಳಿದ್ದಾರೆ.

u s avati
ಯು.ಎಸ್.ಅವಟಿ

ಅಥಣಿ: ಅಪರಾಧ ತಡೆಗೆ ಪ್ರತಿಯೊಬ್ಬ ನಾಗರಿಕನೂ ಜಾಗೃತಿಗೊಳ್ಳುವುದು ಅಗತ್ಯ. ಅಪರಾಧ ಜರುಗುವುದರ ಮುಂಚೆ ನಾಗರಿಕರು ಜಾಗೃತಿ ವಹಿಸಿದರೆ ಅಪರಾಧಗಳು ಜರುಗುವ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತವೆ. ಈ ಮೂಲಕ ಅಪರಾಧ ತಡೆಯಲು ಸಾಧ್ಯ ಎಂದು ಅಥಣಿ ಪಿಎಸ್ಐ ಯು ಎಸ್ ಅವಟಿ ಹೇಳಿದ್ದಾರೆ.

ಅಥಣಿ ಪಿಎಸ್ಐ ಯು ಎಸ್ ಅವಟಿ..

ನಗರದ ಸ್ಥಳೀಯ ಜೆ ಎ ಪದವಿಪೂರ್ವ ಕಾಲೇಜಿನಲ್ಲಿ ಪೊಲೀಸ್ ಇಲಾಖೆ ಹಮ್ಮಿಕೊಂಡ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಅಪರಾಧ ತಡೆ ಕುರಿತು ಉಪನ್ಯಾಸ ನೀಡಿದ ಅವರು, ಪೊಲೀಸ್ ಇಲಾಖೆ ಸಾಕಷ್ಟು ಜಾಗೃತಿ ವಹಿಸುತ್ತಿದ್ದರೂ ನಾಗರಿಕರ ಅಸಡ್ಡೆಯಿಂದಾಗಿ ಹಲವಾರು ಪ್ರಕರಣಗಳು ಜರುಗುತ್ತಿವೆ ಎಂದರು.

ನಂತರ ಮಾತನಾಡಿದ ಅವರು, ವಿಶೇಷವಾಗಿ ಮುಂಜಾನೆ ಹಾಗೂ ಸಂಜೆ ಒಬ್ಬಂಟಿಯಾಗಿ ಮಹಿಳೆಯರು ವಾಕಿಂಗ್ ಹೋಗಬಾರದು ಹಾಗೂ ಯಾರೇ ಅಪರಿಚಿತರು ಮಾತನಾಡಿಸಿದರೂ ಅವರಿಂದ ದೂರ ಇರಬೇಕು. ಅಲ್ಲದೆ ಜನದಟ್ಟಣೆ ಇರುವ ಪ್ರದೇಶದಲ್ಲಿ ನಮ್ಮ ವಸ್ತುಗಳ ಬಗ್ಗೆ ನಮಗೆ ಜಾಗೃತಿ ಇರಬೇಕು. ಬಸ್ ಹತ್ತುವಾಗ, ರೈಲಿನಲ್ಲಿ ಸಂಚರಿಸುವಾಗ ನಮ್ಮ ನಮ್ಮ ವಸ್ತುಗಳ ಬಗ್ಗೆ ನಮಗೆ ಗಮನವಿದ್ದರೆ ಕಳ್ಳತನ ಮಾಡಲು ಸಾಧ್ಯವಾಗುವುದಿಲ್ಲ ಎಂದಿದ್ದಾರೆ.

ಯಾವುದೇ ಕಾರಣಕ್ಕೂ ವಿದ್ಯಾರ್ಥಿನಿಯರು ಯಾವುದೇ ಲೈಂಗಿಕ ದೌರ್ಜನ್ಯಗಳನ್ನು ಸಹಿಸಿಕೊಳ್ಳದೆ, ಭಯಪಡದೆ ನೇರವಾಗಿ ಠಾಣೆಗೆ ದೂರು ನೀಡಬೇಕು ಅಥವಾ ಸಂಬಂಧಿಸಿದ ಮಹಾವಿದ್ಯಾಲಯದ ಉಪನ್ಯಾಸಕರ ಸಹಕಾರದೊಂದಿಗೆ ಠಾಣೆಗೆ ತಿಳಿಸಬೇಕು ಎಂದು ಸಲಹೆ ನೀಡಿದರು.

ಅಥಣಿ: ಅಪರಾಧ ತಡೆಗೆ ಪ್ರತಿಯೊಬ್ಬ ನಾಗರಿಕನೂ ಜಾಗೃತಿಗೊಳ್ಳುವುದು ಅಗತ್ಯ. ಅಪರಾಧ ಜರುಗುವುದರ ಮುಂಚೆ ನಾಗರಿಕರು ಜಾಗೃತಿ ವಹಿಸಿದರೆ ಅಪರಾಧಗಳು ಜರುಗುವ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತವೆ. ಈ ಮೂಲಕ ಅಪರಾಧ ತಡೆಯಲು ಸಾಧ್ಯ ಎಂದು ಅಥಣಿ ಪಿಎಸ್ಐ ಯು ಎಸ್ ಅವಟಿ ಹೇಳಿದ್ದಾರೆ.

ಅಥಣಿ ಪಿಎಸ್ಐ ಯು ಎಸ್ ಅವಟಿ..

ನಗರದ ಸ್ಥಳೀಯ ಜೆ ಎ ಪದವಿಪೂರ್ವ ಕಾಲೇಜಿನಲ್ಲಿ ಪೊಲೀಸ್ ಇಲಾಖೆ ಹಮ್ಮಿಕೊಂಡ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಅಪರಾಧ ತಡೆ ಕುರಿತು ಉಪನ್ಯಾಸ ನೀಡಿದ ಅವರು, ಪೊಲೀಸ್ ಇಲಾಖೆ ಸಾಕಷ್ಟು ಜಾಗೃತಿ ವಹಿಸುತ್ತಿದ್ದರೂ ನಾಗರಿಕರ ಅಸಡ್ಡೆಯಿಂದಾಗಿ ಹಲವಾರು ಪ್ರಕರಣಗಳು ಜರುಗುತ್ತಿವೆ ಎಂದರು.

ನಂತರ ಮಾತನಾಡಿದ ಅವರು, ವಿಶೇಷವಾಗಿ ಮುಂಜಾನೆ ಹಾಗೂ ಸಂಜೆ ಒಬ್ಬಂಟಿಯಾಗಿ ಮಹಿಳೆಯರು ವಾಕಿಂಗ್ ಹೋಗಬಾರದು ಹಾಗೂ ಯಾರೇ ಅಪರಿಚಿತರು ಮಾತನಾಡಿಸಿದರೂ ಅವರಿಂದ ದೂರ ಇರಬೇಕು. ಅಲ್ಲದೆ ಜನದಟ್ಟಣೆ ಇರುವ ಪ್ರದೇಶದಲ್ಲಿ ನಮ್ಮ ವಸ್ತುಗಳ ಬಗ್ಗೆ ನಮಗೆ ಜಾಗೃತಿ ಇರಬೇಕು. ಬಸ್ ಹತ್ತುವಾಗ, ರೈಲಿನಲ್ಲಿ ಸಂಚರಿಸುವಾಗ ನಮ್ಮ ನಮ್ಮ ವಸ್ತುಗಳ ಬಗ್ಗೆ ನಮಗೆ ಗಮನವಿದ್ದರೆ ಕಳ್ಳತನ ಮಾಡಲು ಸಾಧ್ಯವಾಗುವುದಿಲ್ಲ ಎಂದಿದ್ದಾರೆ.

ಯಾವುದೇ ಕಾರಣಕ್ಕೂ ವಿದ್ಯಾರ್ಥಿನಿಯರು ಯಾವುದೇ ಲೈಂಗಿಕ ದೌರ್ಜನ್ಯಗಳನ್ನು ಸಹಿಸಿಕೊಳ್ಳದೆ, ಭಯಪಡದೆ ನೇರವಾಗಿ ಠಾಣೆಗೆ ದೂರು ನೀಡಬೇಕು ಅಥವಾ ಸಂಬಂಧಿಸಿದ ಮಹಾವಿದ್ಯಾಲಯದ ಉಪನ್ಯಾಸಕರ ಸಹಕಾರದೊಂದಿಗೆ ಠಾಣೆಗೆ ತಿಳಿಸಬೇಕು ಎಂದು ಸಲಹೆ ನೀಡಿದರು.

Intro:ಅಪರಾಧ ತಡೆಯುವಲ್ಲಿ ಪ್ರತಿಯೊಬ್ಬ ನಾಗರಿಕರ ಜಾಗೃತಿ  ಅಗತ್ಯವಿದೆ. ಅಪರಾಧ ಜರುಗುವುದ ಮುಂಚೆ ನಾಗರೀಕರು ಜಾಗೃತೆ ವಹಿಸಿದರೆ ಅಪರಾಧಗಳು ಜರುಗುವ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತದೆ ಈ ಮೂಲಕ ಅಪರಾಧ ತಡೆಯಲು ಸಾಧ್ಯ ಎಂದು ಅಥಣಿ ಪಿಎಸ್ಐ ಯು ಎಸ್ ಅವಟಿ ಹೇಳಿದರು.Body:ಅಥಣಿ ವರದಿ:
ಫಾರ್ಮೇಟ್_Av
ಸ್ಲಗ್_ ಅಪರಾಧ ತಡೆಯುವಲ್ಲಿ ಪ್ರತಿಯೊಬ್ಬ ನಾಗರಿಕರ ಜಾಗೃತಿ ಅಗತ್ಯ
ಸ್ಥಳ್_ಅಥಣಿ

Anchor
ಅಪರಾಧ ತಡೆಯುವಲ್ಲಿ ಪ್ರತಿಯೊಬ್ಬ ನಾಗರಿಕರ ಜಾಗೃತಿ  ಅಗತ್ಯವಿದೆ. ಅಪರಾಧ ಜರುಗುವುದಕ್ಕಿಂತ ಮುಂಚೆ ನಾಗರೀಕರು ಜಾಗೃತೆ ವಹಿಸಿದರೆ ಅಪರಾಧಗಳು ಜರುಗುವ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತದೆ ಈ ಮೂಲಕ ಅಪರಾಧ ತಡೆಯಲು ಸಾಧ್ಯ ಎಂದು ಅಥಣಿ ಪಿಎಸ್ಐ ಯು ಎಸ್ ಅವಟಿ ಹೇಳಿದರು.

ಅವರು ಸ್ಥಳೀಯ ಜೆ ಎ ಪದವಿಪೂರ್ವ ಕಾಲೇಜಿನಲ್ಲಿ ಪೋಲಿಸ್ ಇಲಾಖೆ  ಹಮ್ಮಿಕೊಂಡ  ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮದಲ್ಲಿ  ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ  ಅಪರಾಧ ತಡೆ ಕುರಿತು ಉಪನ್ಯಾಸ ನೀಡುತ್ತಿದ್ದರು .ಪೊಲೀಸ್ ಇಲಾಖೆ ಸಾಕಷ್ಟು ಜಾಗೃತಿ ವಹಿಸುತ್ತಿದ್ದರೂ ನಾಗರಿಕರ ಅಸಡ್ಡೆಯಿಂದಾಗಿ ಹಲವಾರು ಪ್ರಕರಣಗಳು ಜರುಗುತ್ತಿವೆ ಸಂದರ್ಭದಲ್ಲಿ ಮುಂಜಾನೆ ಸಂಜೆ ಒಬ್ಬಂಟಿಯಾಗಿ ವಿಶೇಷವಾಗಿ ಮಹಿಳೆಯರು ವಾಕಿಂಗ್ ಹೊಗಬಾರದು ಹಾಗೂ ಯಾರು ಮಾತನಾಡಿಸಿದರು ಅವರಿಂದ ದೂರ ಇರಬೇಕು ಅಲ್ಲದೆ ಜನದಟ್ಟಣೆ ಇರುವ ಪ್ರದೇಶದಲ್ಲಿ ನಮ್ಮ ವಸ್ತುಗಳ ಬಗ್ಗೆ ನಮಗೆ ಜಾಗೃತಿ ಇರಬೇಕು ಬಸ್ ಹತ್ತುವಾಗ ರೈಲಿನಲ್ಲಿ ಸಂಚರಿಸುವಾಗ ನಮ್ಮ ನಮ್ಮ ವಸ್ತುಗಳ ಬಗ್ಗೆ ನಮ್ಮ ಗಮನವಿದ್ದರೆ ಕಳ್ಳತನ ಮಾಡಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು . ಯಾವುದೇ ಕಾರಣಕ್ಕೂ ವಿದ್ಯಾರ್ಥಿನಿಯರು ಯಾವುದೇ ಲೈಂಗಿಕ ದೌರ್ಜನ್ಯಗಳನ್ನು  ಸಹಿಸಿಕೊಳ್ಳದೆ ಭಯಪಡದೆ ನೇರವಾಗಿ ಠಾಣೆಗೆ ದೂರು ನೀಡಬೇಕು ಅಥವಾ ಸಂಬಂಧಿಸಿದ ಮಹಾವಿದ್ಯಾಲಯದ ಶಿಕ್ಷಕರ ಸಹಕಾರದೊಂದಿಗೆ ಠಾಣೆಗೆ ತಿಳಿಸಬೇಕು ನೀಡದಿದ್ದರೆ ಅಪರಾಧಿಗಳಿಗೆ ಪ್ರೋತ್ಸಾಹ ನೀಡಿದಂತೆ ಆಗುತ್ತದೆ. ಪೋಸ್ಕೋ ಕಾಯ್ದೆಯಂತಹ ಕಠಿಣ ಕಾನೂನುಗಳು ಜಾರಿ ಇದ್ದು ವಿದ್ಯಾರ್ಥಿನಿಯರು ಭಯಪಡುವ ಅಗತ್ಯವಿಲ್ಲ ಎಂದು ಹೇಳಿದರು

ವಿದ್ಯಾರ್ಥಿಗಳು ತಮ್ಮ ಬದುಕಿನ ಉನ್ನತ ಗುರಿಯತ್ತ ಲಕ್ಷ ವಹಿಸಬೇಕು ಈ ಸಂದರ್ಭದಲ್ಲಿ ಅಪರಾಧ ಚಟುವಟಿಕೆಗಳಲ್ಲಿ ಪಾಲ್ಗೊಳ್ಳದೆ ತಮ್ಮ ಗುರಿಯತ್ತ ಲಕ್ಷ ವಹಿಸಿದರೆ ವಿದ್ಯಾರ್ಥಿ ಬದುಕು ಸಾರ್ಥಕವಾಗುತ್ತದೆ. ಉತ್ತಮ ಸಂಸ್ಕಾರಗಳೊಂದಿಗೆ ಉತ್ತಮ ಆದರ್ಶ ವ್ಯಕ್ತಿತ್ವವನ್ನು ವಿದ್ಯಾರ್ಥಿಗಳು ರೂಪಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಹಾವಿದ್ಯಾಲಯದ ಪ್ರಾಚಾರ್ಯ ಎಸ್ ಎಸ್ ಗೌಡರ ವಿದ್ಯಾರ್ಥಿ ಬದುಕು ಅತ್ಯಂತ ಶ್ರೇಷ್ಠವಾದದ್ದು ಈ ಸಂದರ್ಭದಲ್ಲಿ ಸಮಾಜ ಬಾಹಿರ ಕೃತ್ಯಗಳಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತಾವು ತೊಡಗಿಸಿಕೊಳ್ಳದೇ ಶ್ರೇಷ್ಠ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಇಂದು  ಅತ್ಯಾಚಾರದಂತಹ ಪ್ರಕರಣಗಳಲ್ಲಿ ಕೇವಲ 21 ದಿನದಲ್ಲಿ ಗಲ್ಲಿಗೇರಿಸುವ ಕಠಿಣ ಕಾನೂನುಗಳು ಜಾರಿಗೆ ಬರುತ್ತಿದ್ದು ಭವಿಷ್ಯತ್ತಿನ ಭವ್ಯ ನಾಗರಿಕರಾದ ವಿದ್ಯಾರ್ಥಿಗಳು ಈ ಕುರಿತು ಅಪರಾಧ ಜರುಗದಂತೆ ಜಾಗೃತಿ ವಹಿಸಬೇಕು ಎಂದು ಸಂದೇಶ ನೀಡಿದರು .

ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಉಪನ್ಯಾಸಕರಾದ ಶ್ರೀಮತಿ ಪಿಎಂ ಹುಲಗಬಾಳಿ ಬಿಎಸ್ ಲೋಕೂರ್ ಆರ್ ಎಸ್ ದೊಡ್ಡನಿಂಗಪ್ಪಗೋಳ ಮಹಾವಿದ್ಯಾಲಯದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರುConclusion:ಅಥಣಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.