ETV Bharat / state

ನಕಲಿ ಆಲ್ಕೋ ಮೀಟರ್​ ಬಳಸಿ ವಾಹನ ಸವಾರರಿಂದ ಪೊಲೀಸರಿಂದ ಸುಲಿಗೆ: ವಾರ್ನ್​ ಮಾಡಿದ ಕಮಿಷನರ್ - Bengaluru Commissioner reaction on police officials suspend

ಡ್ರಿಂಕ್​ ಅಂಡ್​ ಡ್ರೈವ್​ ಪರಿಶೀಲನೆ ನೆಪದಲ್ಲಿ ಅಕ್ರಮ ಅಲ್ಕೋಮೀಟರ್ ಬಳಸಿ ವಾಹನ ಸವಾರರನ್ನು ಸುಲಿಗೆ ಮಾಡುತ್ತಿದ್ದ ಅಶೋಕ ನಗರ ಸಂಚಾರ ಠಾಣೆಯ ಇಬ್ಬರು ಪೇದೆಗಳ ಅಮಾನತಾದ ಬಗ್ಗೆ ನಗರ ಪೊಲೀಸ್​ ಆಯುಕ್ತ ಭಾಸ್ಕರ್​ ರಾವ್​ ಪ್ರತಿಕ್ರಿಯಿಸಿದ್ದು, ಇಲಾಖೆಯಲ್ಲೆ ಈ ರೀತಿ ನಡೆದಿರುವುದು ಬೇಸರದ ಸಂಗತಿ ಎಂದಿದ್ದಾರೆ.

Commissioner reaction on police officials suspend
ನಗರ ಪೊಲೀಸ್​ ಆಯುಕ್ತ ಭಾಸ್ಕರ್​ ರಾವ್
author img

By

Published : Dec 16, 2019, 2:24 PM IST

Updated : Dec 16, 2019, 3:16 PM IST

ಬೆಂಗಳೂರು: ಡ್ರಿಂಕ್​ ಅಂಡ್​ ಡ್ರೈವ್​ ಪರಿಶೀಲನೆ ನೆಪದಲ್ಲಿ ಅಕ್ರಮ ಅಲ್ಕೋಮೀಟರ್ ಬಳಸಿ ವಾಹನ ಸವಾರರನ್ನು ಸುಲಿಗೆ ಮಾಡುತ್ತಿದ್ದ ಅಶೋಕ ನಗರ ಸಂಚಾರ ಠಾಣೆಯ ಇಬ್ಬರು ಪೇದೆಗಳ ಅಮಾನತಾದ ಬಗ್ಗೆ ನಗರ ಪೊಲೀಸ್​ ಆಯುಕ್ತ ಭಾಸ್ಕರ್​ ರಾವ್​ ಪ್ರತಿಕ್ರಿಯಿಸಿದ್ದು, ಇಲಾಖೆಯಲ್ಲೆ ಈ ರೀತಿ ನಡೆದಿರುವುದು ಬೇಸರದ ಸಂಗತಿ ಎಂದಿದ್ದಾರೆ.

ನಗರ ಪೊಲೀಸ್​ ಆಯುಕ್ತ ಭಾಸ್ಕರ್​ ರಾವ್

ಇದನ್ನೂ ಓದಿ : ಕುಡುಕ ಸವಾರರನ್ನು ಹಿಡಿಯೋ ನೆಪದಲ್ಲಿ ಹಣ ವಸೂಲಿ: ಎಎಸ್​ಐ ಸೇರಿ ನಾಲ್ವರು ಸಸ್ಪೆಂಡ್

ಅಶೋಕ ನಗರದ ಠಾಣೆಯ ಸಿಬ್ಬಂದಿ ಮುನಿಯಪ್ಪ, ಗಂಗರಾಜು, ನಾಗರಾಜು ಕೆಲ ಖಾಸಗಿ ವ್ಯಕ್ತಿಗಳೊಂದಿಗೆ ಸೇರಿ ಡ್ರಿಂಕ್​ ಅಂಡ್​ ಡ್ರೈವ್​ ಪರಿಶೀಲನೆ ನೆಪದಲ್ಲಿ ಅಕ್ರಮ ಆಲ್ಕೋಹಾಲ್ ಮೀಟರ್ ಬಳಸಿ ವಾಹನ ಸವಾರರಿಂದ ಸುಲಿಗೆ ಮಾಡುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ, ಪೊಲೀಸ್​ ಸಿಬ್ಬಂದಿಯನ್ನು ರೆಡ್ ಹ್ಯಾಂಡಾಗಿ ಹಿಡಿದಿದ್ದರು. ಅಕ್ರಮದಲ್ಲಿ ಪಾಲ್ಗೊಂಡ ಪೊಲೀಸ್​ ಸಿಬ್ಬಂದಿ ವಿರುದ್ಧ ಈಗಾಗಲೇ ಇಲಾಖೆ ಕ್ರಮ ಜರುಗಿಸಿ, ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.

ಘಟನೆ ಬಗ್ಗೆ ಪ್ರತಿಕ್ರಿಯಿಸಿದ ನಗರ ಪೊಲೀಸ್​ ಆಯುಕ್ತ, ಇಲಾಖೆಯಲ್ಲಿ ಇದ್ದುಕೊಂಡು ಈ ರೀತಿ ಮಾಡಿದ್ದು ನಿಜಕ್ಕೂ ಬೇಸರದ ಸಂಗತಿ. ತಪ್ಪು ಮಾಡಿದವರ ಮೇಲೆ ಯಾವುದೇ ರೀತಿ ಕ್ಷಮೆ ಇಲ್ಲ. ಯಾರೇ ಇನ್ನು ಮುಂದೆ ಈ ರೀತಿಯ ಕೃತ್ಯಗಳಲ್ಲಿ ಪಾಲ್ಗೊಂಡರೆ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರು: ಡ್ರಿಂಕ್​ ಅಂಡ್​ ಡ್ರೈವ್​ ಪರಿಶೀಲನೆ ನೆಪದಲ್ಲಿ ಅಕ್ರಮ ಅಲ್ಕೋಮೀಟರ್ ಬಳಸಿ ವಾಹನ ಸವಾರರನ್ನು ಸುಲಿಗೆ ಮಾಡುತ್ತಿದ್ದ ಅಶೋಕ ನಗರ ಸಂಚಾರ ಠಾಣೆಯ ಇಬ್ಬರು ಪೇದೆಗಳ ಅಮಾನತಾದ ಬಗ್ಗೆ ನಗರ ಪೊಲೀಸ್​ ಆಯುಕ್ತ ಭಾಸ್ಕರ್​ ರಾವ್​ ಪ್ರತಿಕ್ರಿಯಿಸಿದ್ದು, ಇಲಾಖೆಯಲ್ಲೆ ಈ ರೀತಿ ನಡೆದಿರುವುದು ಬೇಸರದ ಸಂಗತಿ ಎಂದಿದ್ದಾರೆ.

ನಗರ ಪೊಲೀಸ್​ ಆಯುಕ್ತ ಭಾಸ್ಕರ್​ ರಾವ್

ಇದನ್ನೂ ಓದಿ : ಕುಡುಕ ಸವಾರರನ್ನು ಹಿಡಿಯೋ ನೆಪದಲ್ಲಿ ಹಣ ವಸೂಲಿ: ಎಎಸ್​ಐ ಸೇರಿ ನಾಲ್ವರು ಸಸ್ಪೆಂಡ್

ಅಶೋಕ ನಗರದ ಠಾಣೆಯ ಸಿಬ್ಬಂದಿ ಮುನಿಯಪ್ಪ, ಗಂಗರಾಜು, ನಾಗರಾಜು ಕೆಲ ಖಾಸಗಿ ವ್ಯಕ್ತಿಗಳೊಂದಿಗೆ ಸೇರಿ ಡ್ರಿಂಕ್​ ಅಂಡ್​ ಡ್ರೈವ್​ ಪರಿಶೀಲನೆ ನೆಪದಲ್ಲಿ ಅಕ್ರಮ ಆಲ್ಕೋಹಾಲ್ ಮೀಟರ್ ಬಳಸಿ ವಾಹನ ಸವಾರರಿಂದ ಸುಲಿಗೆ ಮಾಡುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ, ಪೊಲೀಸ್​ ಸಿಬ್ಬಂದಿಯನ್ನು ರೆಡ್ ಹ್ಯಾಂಡಾಗಿ ಹಿಡಿದಿದ್ದರು. ಅಕ್ರಮದಲ್ಲಿ ಪಾಲ್ಗೊಂಡ ಪೊಲೀಸ್​ ಸಿಬ್ಬಂದಿ ವಿರುದ್ಧ ಈಗಾಗಲೇ ಇಲಾಖೆ ಕ್ರಮ ಜರುಗಿಸಿ, ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.

ಘಟನೆ ಬಗ್ಗೆ ಪ್ರತಿಕ್ರಿಯಿಸಿದ ನಗರ ಪೊಲೀಸ್​ ಆಯುಕ್ತ, ಇಲಾಖೆಯಲ್ಲಿ ಇದ್ದುಕೊಂಡು ಈ ರೀತಿ ಮಾಡಿದ್ದು ನಿಜಕ್ಕೂ ಬೇಸರದ ಸಂಗತಿ. ತಪ್ಪು ಮಾಡಿದವರ ಮೇಲೆ ಯಾವುದೇ ರೀತಿ ಕ್ಷಮೆ ಇಲ್ಲ. ಯಾರೇ ಇನ್ನು ಮುಂದೆ ಈ ರೀತಿಯ ಕೃತ್ಯಗಳಲ್ಲಿ ಪಾಲ್ಗೊಂಡರೆ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

Intro:ಅಶೋಕ್ ನಗರ ಟ್ರಾಫಿಕ್ ಪೊಲೀಸರಿಂದ ಡಿಡಿ ಹೆಸರಲ್ಲಿ ದಂಧೆ
ಎಲ್ಲಾ ಪೊಲೀಸರಿಗೆ ಎಚ್ಚರಿಕೆ ನೀಡಿ ದ ಕಮಿಷನರ್

Mojo byite
ಅಕ್ರಮ ಅಲ್ಕೋಮೀಟರ್ ಬಳಸಿ ಸುಲಿಗೆ ಮಾಡುತ್ತಿದ್ದ.ಅಶೋಕ ನಗರ ಸಂಚಾರಿ ಠಾಣೆಯ ಎ ಎಸ್ ಐ ಸೇರಿ ಇಬ್ಬರು ಪೆದೆಗಳನ್ನ ರೆಡ್ ಆ್ಯಂಡ್ ಹಿಡಿದು ಅಮಾನತ್ತು ಮಾಡಲಾಗಿತ್ತು. ಇದರ ಬಗ್ಗೆ ನಗರ ಆಯುಕ್ತ ಮಾತಾಡಿ ಇಲಾಖೆಯಲ್ಲೆ ಈ ರೀತಿ ನಡೆದಿರುವುದು ನಿಜಾಕ್ಕು ಬೇಸರ ಸಂಗತಿ

ಖಾಸಗಿ ಆಲ್ಕೋಹಾಲ್ ಮೀಟರ್ ಇಟ್ಕೊಂಡು ಅಶೋಕನಗರದ ಎಎಸ್ ಐ ಮುನಿಯಪ್ಪ, ಗಂಗರಾಜು, ನಾಗರಾಜು ಹಾಗೂ ಖಾಸಗಿ ವ್ಯಕ್ತಿಗಳು ಟ್ರಾಫಿಕ್ ನಿಯಮವನ್ನ ಉಲ್ಲಂಘಿಸಿ ಹಣ ವಸೂಲಿ ಮಾಡ್ತಿದ್ರು. ಈ ಮಾಹಿತಿ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಅವರಿಗೆ ತಿಳಿದು ರೆಡ್ ಹ್ಯಾಂಡಾಗಿ ಹಿಡಿದಿದ್ದಾರೆ. ಈಗಾಗ್ಲೇ ಅವ್ರ ವಿರುದ್ಧ ಇಲಾಖಾ ಕ್ರಮ ಜರುಗಿಸಿ ಆರೆಸ್ಟ್ ಕೂಡ ಮಾಡಿ ವಿಚಾರಣೆ ನಡೆಸಲಾಗ್ತಿದೆ.

ಇಲಾಖೆಯಲ್ಲಿ ಇದ್ದುಕೊಂಡು ಈ ರೀತಿ ಮಾಡಿದ್ದು ನಿಜಾಕ್ಕು ಬೇಸರದ ಸಂಗತಿ, ತಪ್ಪು ಮಾಡಿದವರ ಮೇಲೆ ಯಾವುದೇ ರೀತಿ ಕ್ಷಮೆ ಇಲ್ಲ.. ಯಾರೆ ಇನ್ಮುಂದೆ ಈ ರೀತಿ ಮಾಡಿದ್ರೆ ಅವ್ರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ನಗರ ಆಯುಕ್ತ ಭಾಸ್ಕರ್ ರಾವ್ ಅವರು ಕಠಿಣ ಎಚ್ಚರಿಕೆ ನೀಡಿದ್ದಾರೆ.


Body:KN_BNG_03_TRAFfIC_7204498Conclusion:KN_BNG_03_TRAFfIC_7204498
Last Updated : Dec 16, 2019, 3:16 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.