ಚಿಕ್ಕೋಡಿ: ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಸಿಎಂ ಯಡಿಯೂರಪ್ಪ ಬಿಜೆಪಿ ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರ ನಡೆಸಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ಹಾಗೂ ಕಾಗವಾಡ ಮತ ಕ್ಷೇತ್ರದಲ್ಲಿ ಎಡೆಬಿಡದೆ ಪ್ರಚಾರ ಸಮಾವೇಶಗಳನ್ನೆ ನಡೆಸಿ ಶತಾಯಗತಾಯ ಬಿಜೆಪಿ ಅಭ್ಯರ್ಥಿಗಳನ್ನ ಗೆಲ್ಲಿಸಲೇಬೇಕು ಅಂತ ಪಣತೊಟ್ಟಿದ್ದಾರೆ.
ಈ ಉಪಚುನಾವಣೆಯಲ್ಲಿ ಶ್ರೀಮಂತ ಪಾಟೀಲ್ ಅವರನ್ನು 25 ಸಾವಿರತ ಮತಗಳಿಂದ ಆರಿಸಿ ತನ್ನಿ. ಈ ಕ್ಷೇತ್ರದಲ್ಲಿ ಏನೇನು ಯೋಜನೆ ಆಗಬೇಕು ಅಂತಾ ಅಪೇಕ್ಷ ಪಡ್ತಿರೋ ಅವೆಲ್ಲವೂ ಈಡೇರಿಸುವ ಭರವಸೆ ನೀಡುತ್ತೇನೆ ಎಂದು ಹೇಳಿದರು. ಅದರಲ್ಲು ನೀರಾವರಿ, ರೈತರ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಕರ್ನಾಟಕ ರಾಜ್ಯವನ್ನು ಮಾದರಿ ರಾಜ್ಯವನ್ನಾಗಿ ಮಾಡುವ ಕನಸು ಕಂಡಿದ್ದೇನೆ. ಶ್ರೀಮಂತ ಪಾಟೀಲ್ ಸೇರಿದಂತೆ 17 ಜನರ ರಾಜೀನಾಮೆ ನೀಡಿದ್ದರಿಂದ ಇಂದ ನಾನು ಸಿಎಂ ಆಗಿ ಅಧಿಕಾರ ಸಿಕ್ಕಿದೆ. ಶ್ರೀಮಂತ ಪಾಟೀಲ್ ಅವರನ್ನು ಜೀವನ ಪೂರ್ತಿ ಮರೆಯಲ್ಲಾ ಎಂದು ಕೊಂಡಾಡಿದರು. ಮುಂದಿನ ದಿನದಲ್ಲಿ ಶ್ರೀಮಂತ ಪಾಟೀಲ್ ಗೆ ಒಳ್ಳೆಯ ಸ್ಥಾನ ಸಿಗುತ್ತದೆ ಎಂದು ಭರವಸೆ ನೀಡುತ್ತೇನೆ ಎಂದು ಹೇಳಿದರು. ಕ್ಷೇತ್ರದ ಸಮಸ್ಯೆ ಬಗೆಹರಿಸಲು ಪ್ರಮಾಣಿಕ ಪ್ರಯತ್ನ ಮಾಡಿ ನಿಮ್ಮ ಕಣ್ಣೀರು ಒರೆಸುತ್ತೇನೆ. ಬರುವ ಡಿಸೆಂಬರ್ 5 ರಂದು ಕಮಲದ ಚಿನ್ಹೆಗೆ ಮತ ನೀಡಿ ಹೆಚ್ಚು ಮತಗಳಿಂದ ಆರಿಸಿ ತನ್ನಿ ಎಂದು ಶ್ರೀಮಂತ ಪಾಟೀಲ್ ಪರ ಸಿಎಂ ಯಡಿಯೂರಪ್ಪ ಭರ್ಜರಿ ಮತಯಾಚನೆ ಮಾಡಿದರು.