ETV Bharat / state

ಅಥಣಿ ಉಪಸಮರ: ಜನವಾಡ ಗ್ರಾಮಸ್ಥರಿಂದ ಮತದಾನ ಬಹಿಷ್ಕಾರ - athani news

ಕೃಷ್ಣಾ ನದಿ ಪ್ರವಾಹದಿಂದ ಹಾನಿಗೀಡಾದ ಅಥಣಿ ತಾಲೂಕಿನ ಜನವಾಡ ಗ್ರಾಮಸ್ಥರು ಉಪಚುನಾವಣೆ ಮತದಾನ ಬಹಿಷ್ಕಾರ ಮಾಡುವುದಾಗಿ ಘೋಷಿಸಿದ್ದಾರೆ.

ಜನವಾಡ ಗ್ರಾಮಸ್ಥರಿಂದ ಉಪಚುನಾವಣೆ ಮತದಾನ ಬಹಿಷ್ಕಾರ
author img

By

Published : Nov 17, 2019, 9:44 PM IST

ಬೆಳಗಾವಿ: ಅಥಣಿ ತಾಲೂಕಿನ ಜನವಾಡ ಗ್ರಾಮಸ್ಥರು ಈ ಬಾರಿ ಉಪಚುನಾವಣೆ ಮತದಾನ ಬಹಿಷ್ಕಾರ ಮಾಡುವುದಾಗಿ ಘೋಷಿಸಿದ್ದಾರೆ

ಜನವಾಡ ಗ್ರಾಮಸ್ಥರಿಂದ ಉಪಚುನಾವಣೆ ಮತದಾನ ಬಹಿಷ್ಕಾರ

ಜನವಾಡ ಗ್ರಾಮಕ್ಕೆ ಕೃಷ್ಣಾ ನದಿ ಪ್ರವಾಹದಿಂದ ಭಾರಿ ಪ್ರಮಾಣದ ಹಾನಿ ಸಂಭವಿಸಿದೆ. ಆದರೆ, ಜಿಲ್ಲಾಡಳಿತ ನಮಗೆ ಇದುವರೆಗೂ ಯಾವುದೇ ಪರಿಹಾರ ನೀಡಿಲ್ಲ. ಬೆಳೆ ಪರಿಹಾರ ಅಂತ ಇದುವರೆಗೂ ಒಂದೇ ಒಂದು ರೂಪಾಯಿ ಬಂದಿಲ್ಲ. ತುರ್ತಾಗಿ ಕೊಡಬೇಕಾಗಿದ್ದ 10,000 ರೂಪಾಯಿ ಕೂಡ ಬಂದಿಲ್ಲ. ಮನೆ ಕಳೆದುಕೊಂಡ ನಿರಾಶ್ರಿತರಿಗೆ ಎ,ಬಿ,ಸಿ, ಗ್ರೂಪ್​ನಲ್ಲಿ ತಾರತಮ್ಯದ ಜೊತೆಗೆ ಸರ್ವೆ ಕಾರ್ಯದಲ್ಲಿ ತಾರತಮ್ಯ ಎಸಗಿದ್ದಾರೆ.

ಹೀಗಾಗಿ ನಾವೆಲ್ಲ ಒಂದು ತೀರ್ಮಾನಕ್ಕೆ ಬಂದಿದ್ದೇವೆ. ನಮ್ಮ ಗ್ರಾಮದಲ್ಲಿ ಒಟ್ಟು 3,300 ಮತದಾರರಿದ್ದಾರೆ. ನಾವೆಲ್ಲ ಮತದಾನ ತಿರಸ್ಕಾರ ಮಾಡಿ, ಗ್ರಾಮಕ್ಕೆ ಚುನಾವಣಾ ಅಧಿಕಾರಿಗಳು ಮತ್ತು ಯಾವುದೇ ರಾಜಕೀಯ ಅಭ್ಯರ್ಥಿ ಪ್ರಚಾರಕ್ಕೆ ಬರದ ಹಾಗೆ ಮಾಡ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಳಗಾವಿ: ಅಥಣಿ ತಾಲೂಕಿನ ಜನವಾಡ ಗ್ರಾಮಸ್ಥರು ಈ ಬಾರಿ ಉಪಚುನಾವಣೆ ಮತದಾನ ಬಹಿಷ್ಕಾರ ಮಾಡುವುದಾಗಿ ಘೋಷಿಸಿದ್ದಾರೆ

ಜನವಾಡ ಗ್ರಾಮಸ್ಥರಿಂದ ಉಪಚುನಾವಣೆ ಮತದಾನ ಬಹಿಷ್ಕಾರ

ಜನವಾಡ ಗ್ರಾಮಕ್ಕೆ ಕೃಷ್ಣಾ ನದಿ ಪ್ರವಾಹದಿಂದ ಭಾರಿ ಪ್ರಮಾಣದ ಹಾನಿ ಸಂಭವಿಸಿದೆ. ಆದರೆ, ಜಿಲ್ಲಾಡಳಿತ ನಮಗೆ ಇದುವರೆಗೂ ಯಾವುದೇ ಪರಿಹಾರ ನೀಡಿಲ್ಲ. ಬೆಳೆ ಪರಿಹಾರ ಅಂತ ಇದುವರೆಗೂ ಒಂದೇ ಒಂದು ರೂಪಾಯಿ ಬಂದಿಲ್ಲ. ತುರ್ತಾಗಿ ಕೊಡಬೇಕಾಗಿದ್ದ 10,000 ರೂಪಾಯಿ ಕೂಡ ಬಂದಿಲ್ಲ. ಮನೆ ಕಳೆದುಕೊಂಡ ನಿರಾಶ್ರಿತರಿಗೆ ಎ,ಬಿ,ಸಿ, ಗ್ರೂಪ್​ನಲ್ಲಿ ತಾರತಮ್ಯದ ಜೊತೆಗೆ ಸರ್ವೆ ಕಾರ್ಯದಲ್ಲಿ ತಾರತಮ್ಯ ಎಸಗಿದ್ದಾರೆ.

ಹೀಗಾಗಿ ನಾವೆಲ್ಲ ಒಂದು ತೀರ್ಮಾನಕ್ಕೆ ಬಂದಿದ್ದೇವೆ. ನಮ್ಮ ಗ್ರಾಮದಲ್ಲಿ ಒಟ್ಟು 3,300 ಮತದಾರರಿದ್ದಾರೆ. ನಾವೆಲ್ಲ ಮತದಾನ ತಿರಸ್ಕಾರ ಮಾಡಿ, ಗ್ರಾಮಕ್ಕೆ ಚುನಾವಣಾ ಅಧಿಕಾರಿಗಳು ಮತ್ತು ಯಾವುದೇ ರಾಜಕೀಯ ಅಭ್ಯರ್ಥಿ ಪ್ರಚಾರಕ್ಕೆ ಬರದ ಹಾಗೆ ಮಾಡ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Intro:ಅಥಣಿ ತಾಲೂಕಿನಲ್ಲಿ ಎಂದು ಕೇಳರಿಯದ ಮತ್ತು ನೋಡಿರದ ಕೃಷ್ಣ ನದಿ ಪ್ರವಾಹದಿಂದ ತಾಲೂಕಿನ 22 ಹಳ್ಳಿಗಳು ಜಲಾವೃತವಾಗಿ ಸಂಪೂರ್ಣ ಆಸ್ತಿ-ಪಾಸ್ತಿ ಹಾನಿಯಾದರು ಜಿಲ್ಲಾ ಆಡಳಿತ ಸರಿಯಾಗಿ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಅಥಣಿ ತಾಲೂಕಿನ ಜನವಾಡ ಗ್ರಾಮಸ್ಥರು ಇದೆ 5ರಂದು ನಡೆಯುವ ಉಪಚುನಾವಣೆ ಮತದಾನ ಬಹಿಷ್ಕಾರ ಮಾಡುವ ಎಚ್ಚರಿಕೆ ನೀಡಿದ್ದಾರೆBody:ಅಥಣಿ ವರದಿ:
*ಉಪಚುನಾವಣೆ ಮತದಾನ ಬಹಿಷ್ಕಾರ*

ಅಥಣಿ ತಾಲೂಕಿನ ಜನವಾಡ ಗ್ರಾಮಸ್ಥರು ಒಟ್ಟಾಗಿ ಸಭೆ ಸೇರಿ ಚುನಾವಣೆ ಬಹಿಷ್ಕಾರ ಮಾಡುತ್ತೇವೆ ಎಂದು ತಾಲೂಕು ಆಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ. ತಾಲೂಕಿನಲ್ಲಿ ಹಿಪ್ಪರಗಿ ಆಣೆಕಟ್ಟಿನ ಹಿನ್ನೀರಿನ ಜನವಾಡ ಗ್ರಾಮ ಕೃಷ್ಣಾ ನದಿ ಪ್ರವಾಹದಿಂದ ಭಾರಿ ಪ್ರಮಾಣ ಹಾನಿ ಸಂಭವಿಸಿದೆ.

ಜಿಲ್ಲಾ ಆಡಳಿತ ನಮಗೆ ಇದುವರೆಗೂ ಯಾವುದೇ ಪರಿಹಾರ ನೀಡಿಲ್ಲ, ಬೆಳೆ ಪರಿಹಾರ ಅಂತು ಇದುವರೆಗೆ ಒಂದೇ ಒಂದು ರೂಪಾಯಿ ಬಂದಿಲ್ಲ, ತುರ್ತಾಗಿ ಕೊಡಬೇಕಾಗಿದ್ದ 10000 ಕೂಡ ಬಂದಿಲ್ಲ, ಮನೆ ಕಳೆದುಕೊಂಡ ನಿರಾಶ್ರಿತರಿಗೆ ಎಬಿಸಿ ಗ್ರೂಪ್ನಲ್ಲಿ ತಾರತಮ್ಯದ ಜೊತೆಗೆ , ಸರ್ವೆ ಕಾರ್ಯದಲ್ಲಿ ತಾರತಮ್ಯ ಎಸಗಿದ್ದಾರೆ.ಮನೆ ಮತ್ತು ಬೆಳೆ ಇದುವರೆಗೆ ಒಂದೇ ಒಂದು ರೂಪಾಯಿ ನಮ್ಮ ಗ್ರಾಮಕ್ಕೆ ಬಂದಿಲ್ಲ, ಇದರಲ್ಲಿ ಅಧಿಕಾರಿಗಳ ಬೇಜವಾಬ್ದಾರಿ ಇಂದ ನಮಗೆ ವಂಚನೆ ಮಾಡಿದ್ದಾರೆ.

ಇದರಿಂದ ನಾವು ಗ್ರಾಮದ ಹಿರಿಯರು ಮತ್ತು ಎಲ್ಲಾ ಮತದಾರರು ಸೇರಿ ಒಂದು ನಿರ್ಣಯಕ್ಕೆ ಬಂದಿದ್ದೇವೆ ಜನವಾಡ ಗ್ರಾಮದಲ್ಲಿ 3300 ಮತದಾರು ಇದ್ದಾರೆ. ನಾವು ಒಟ್ಟಾಗಿ ಮತದಾನ ತಿರಸ್ಕಾರ ಮಾಡಿ ಗ್ರಾಮಕ್ಕೆ ಚುನಾವಣಾ ಅಧಿಕಾರಿಗಳು ಮತ್ತು ಯಾವುದೇ ರಾಜಕೀಯ ಅಭ್ಯರ್ಥಿ ಗ್ರಾಮಕ್ಕೆ ಪ್ರಚಾರಕ್ಕೆ ಬರೆದೆ ಹಂಗೆ ನೋಡಿಕೊಳ್ಳುವುದು ನಮ್ಮ ಉದ್ದೇಶ ಎಂದು ಸಾರ್ವಜನಿಕರು ಆಕ್ರೋಶದಿಂದ ಹೇಳಿದರು.

(ಮಾತನಾಡಿದ ಗ್ರಾಮಸ್ಥ ಹೆಸರು ತಿಳಿದು ಬಂದಿಲ್ಲ)

Conclusion:ಶಿವರಾಜ್ ನೇಸರ್ಗಿ ಅಥಣಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.