ETV Bharat / state

ಸೇನೆಯಲ್ಲಿದ್ದ ಮಗನನ್ನೇ ಗುಂಡಿಕ್ಕಿ ಕೊಂದಿದ್ದ ಪಾಪಿ ತಂದೆಗೆ ಜೀವಾವಧಿ ಶಿಕ್ಷೆ

author img

By

Published : Nov 11, 2020, 6:07 PM IST

Updated : Nov 11, 2020, 7:10 PM IST

ಸೇನೆಯಿಂದ ರಜೆಗೆಂದು ಮನೆಗೆ ಬಂದಿದ್ದ ಮಗನನ್ನು ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿ ನಡೆದ ಗಲಾಟೆಯಲ್ಲಿ ತಂದೆಯೇ ಗುಂಡಿಕ್ಕಿ ಕೊಂದಿದ್ದಾನೆ. ಇದೀಗ ಪಾಪಿ ತಂದೆಗೆ ಬೆಳಗಾವಿ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ..

Belgaum
ಸೇನೆಯಲ್ಲಿದ್ದ ಮಗನನ್ನೇ ಗುಂಡಿಕ್ಕಿ ಕೊಂದಿದ್ದ ಪಾಪಿ ತಂದೆಗೆ ಜೀವಾವಧಿ ಶಿಕ್ಷೆ

ಬೆಳಗಾವಿ : ರಜೆಗೆಂದು ಮನೆಗೆ ಬಂದಿದ್ದ ಮಗನನ್ನೇ ಗುಂಡಿಕ್ಕಿ ಕೊಂದ ಪಾಪಿ ತಂದೆಗೆ ಬೆಳಗಾವಿ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಇಂದು ಜೀವಾವಧಿ ಶಿಕ್ಷೆ ಹಾಗೂ 30 ಸಾವಿರ ರೂ, ದಂಡ ವಿಧಿಸಿ ಆದೇಶಿಸಿದೆ.

ಆರೋಪಿ ವಿಠ್ಠಲ ಇಂಡಿ ಎಂಬಾತನಿಗೆ ಜೀವಾವಧಿ ಶಿಕ್ಷೆ ವಿಧಿಸಿ ನ್ಯಾಯಾಧೀಶ ಬಸವರಾಜ್ ತೀರ್ಪು ಪ್ರಕಟಿಸಿದರು. ಅಭಿಯೋಜಕ ವಿ.ಡಿ. ದರಬಾರೆ ಸರ್ಕಾರದ ಪರ ವಕಾಲತು ವಹಿಸಿದ್ದರು.

ಸರ್ಕಾರದ ಪರ ವಕಾಲತು ವಹಿಸಿದ್ದ ಅಭಿಯೋಜಕ

ಏನಿದು ಘಟನೆ?

ಬೈಲಹೊಂಗಲ ತಾಲೂಕಿನ ನಯಾನಗರ ಗ್ರಾಮದ ಈರಣ್ಣ ಇಂಡಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ರಜೆಗೆಂದು ಮನೆಗೆ ಬಂದಾಗ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ವಿಠ್ಠಲ ಹಾಗೂ ಈರಣ್ಣ ಮಧ್ಯೆ ನಡೆದ ಗಲಾಟೆ ವಿಕೋಪಕ್ಕೆ ತಿರುಗಿದೆ. ತಾಳ್ಮೆ ಕಳೆದುಕೊಂಡ ವಿಠ್ಠಲ ತನ್ನ ರಿವಾಲ್ವರ್​ನಿಂದ ಪುತ್ರ ಈರಣ್ಣನನ್ನು ಹತ್ಯೆಗೈದಿದ್ದರು. ಗಲಾಟೆ ಬಿಡಿಸಲು ಬಂದ ಪುತ್ರಿ ಪೂಜಾ ಮೇಲೂ ಈತ ಗುಂಡಿನ ದಾಳಿ ನಡೆಸಿದ್ದನು.

ಗಂಭೀರವಾಗಿ ಗಾಯಗೊಂಡಿದ್ದ ಪೂಜಾ ಆಸ್ಪತ್ರೆಗೆ ದಾಖಲಾಗಿ ಗುಣಮುಖರಾಗಿದ್ದರು. 2016 ಡಿಸೆಂಬರ್ 12ರಂದು ನಡೆದ ಘಟನೆ ಕುರಿತು ಬೈಲಹೊಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಿಠ್ಠಲ್​ಗೆ ಇಬ್ಬರು ಪುತ್ರಿಯರಿದ್ದು, ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಿಂಗಾಣಿ ಗ್ರಾಮದ ವಿಠ್ಠಲ ಇಬ್ಬರು ಪತ್ನಿಯರನ್ನು ಹೊಂದಿದ್ದನು. ಮೊದಲನೇ ಹೆಂಡತಿ ಮಲಕವ್ವ ಹಿಂಗಾಣಿ ಗ್ರಾಮದಲ್ಲಿ ಹಾಗೂ ಎರಡನೇ ಹೆಂಡತಿ ಅನುಸೂಯಾ ಬೈಲಹೊಂಗಲ ತಾಲೂಕಿನ ನಯಾನಗರ ಗ್ರಾಮದಲ್ಲಿ ನೆಲೆಸಿದ್ದರು.

ಸೇನೆಯಲ್ಲಿದ್ದ ವಿಠ್ಠಲ ನಿವೃತ್ತಿ ಬಳಿಕ ಅಂಚೆ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಬೈಲಹೊಂಗಲದಲ್ಲಿ ಕೆಲಸ ಮಾಡುವಾಗ ಈತನಿಗೆ ಅನುಸೂಯ ಪರಿಚಯವಾಗಿತ್ತು. ಪರಿಚಯ ಪ್ರೀತಿಗೆ ತಿರುಗಿ ಇಬ್ಬರೂ ಮದುವೆಯಾಗಿದ್ದರು. ಈ ದಂಪತಿಯ ಮೂವರ ಮಕ್ಕಳ ಪೈಕಿ ಹಿರಿಮಗ ಸೇನೆಗೆ ಸೇರಿಕೊಂಡಿದ್ದರು. ಮೊದಲನೇ ಹೆಂಡತಿಗೂ ಓರ್ವ ಮಗನಿದ್ದಾನೆ.

ಬೆಳಗಾವಿ : ರಜೆಗೆಂದು ಮನೆಗೆ ಬಂದಿದ್ದ ಮಗನನ್ನೇ ಗುಂಡಿಕ್ಕಿ ಕೊಂದ ಪಾಪಿ ತಂದೆಗೆ ಬೆಳಗಾವಿ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಇಂದು ಜೀವಾವಧಿ ಶಿಕ್ಷೆ ಹಾಗೂ 30 ಸಾವಿರ ರೂ, ದಂಡ ವಿಧಿಸಿ ಆದೇಶಿಸಿದೆ.

ಆರೋಪಿ ವಿಠ್ಠಲ ಇಂಡಿ ಎಂಬಾತನಿಗೆ ಜೀವಾವಧಿ ಶಿಕ್ಷೆ ವಿಧಿಸಿ ನ್ಯಾಯಾಧೀಶ ಬಸವರಾಜ್ ತೀರ್ಪು ಪ್ರಕಟಿಸಿದರು. ಅಭಿಯೋಜಕ ವಿ.ಡಿ. ದರಬಾರೆ ಸರ್ಕಾರದ ಪರ ವಕಾಲತು ವಹಿಸಿದ್ದರು.

ಸರ್ಕಾರದ ಪರ ವಕಾಲತು ವಹಿಸಿದ್ದ ಅಭಿಯೋಜಕ

ಏನಿದು ಘಟನೆ?

ಬೈಲಹೊಂಗಲ ತಾಲೂಕಿನ ನಯಾನಗರ ಗ್ರಾಮದ ಈರಣ್ಣ ಇಂಡಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ರಜೆಗೆಂದು ಮನೆಗೆ ಬಂದಾಗ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ವಿಠ್ಠಲ ಹಾಗೂ ಈರಣ್ಣ ಮಧ್ಯೆ ನಡೆದ ಗಲಾಟೆ ವಿಕೋಪಕ್ಕೆ ತಿರುಗಿದೆ. ತಾಳ್ಮೆ ಕಳೆದುಕೊಂಡ ವಿಠ್ಠಲ ತನ್ನ ರಿವಾಲ್ವರ್​ನಿಂದ ಪುತ್ರ ಈರಣ್ಣನನ್ನು ಹತ್ಯೆಗೈದಿದ್ದರು. ಗಲಾಟೆ ಬಿಡಿಸಲು ಬಂದ ಪುತ್ರಿ ಪೂಜಾ ಮೇಲೂ ಈತ ಗುಂಡಿನ ದಾಳಿ ನಡೆಸಿದ್ದನು.

ಗಂಭೀರವಾಗಿ ಗಾಯಗೊಂಡಿದ್ದ ಪೂಜಾ ಆಸ್ಪತ್ರೆಗೆ ದಾಖಲಾಗಿ ಗುಣಮುಖರಾಗಿದ್ದರು. 2016 ಡಿಸೆಂಬರ್ 12ರಂದು ನಡೆದ ಘಟನೆ ಕುರಿತು ಬೈಲಹೊಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಿಠ್ಠಲ್​ಗೆ ಇಬ್ಬರು ಪುತ್ರಿಯರಿದ್ದು, ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಿಂಗಾಣಿ ಗ್ರಾಮದ ವಿಠ್ಠಲ ಇಬ್ಬರು ಪತ್ನಿಯರನ್ನು ಹೊಂದಿದ್ದನು. ಮೊದಲನೇ ಹೆಂಡತಿ ಮಲಕವ್ವ ಹಿಂಗಾಣಿ ಗ್ರಾಮದಲ್ಲಿ ಹಾಗೂ ಎರಡನೇ ಹೆಂಡತಿ ಅನುಸೂಯಾ ಬೈಲಹೊಂಗಲ ತಾಲೂಕಿನ ನಯಾನಗರ ಗ್ರಾಮದಲ್ಲಿ ನೆಲೆಸಿದ್ದರು.

ಸೇನೆಯಲ್ಲಿದ್ದ ವಿಠ್ಠಲ ನಿವೃತ್ತಿ ಬಳಿಕ ಅಂಚೆ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಬೈಲಹೊಂಗಲದಲ್ಲಿ ಕೆಲಸ ಮಾಡುವಾಗ ಈತನಿಗೆ ಅನುಸೂಯ ಪರಿಚಯವಾಗಿತ್ತು. ಪರಿಚಯ ಪ್ರೀತಿಗೆ ತಿರುಗಿ ಇಬ್ಬರೂ ಮದುವೆಯಾಗಿದ್ದರು. ಈ ದಂಪತಿಯ ಮೂವರ ಮಕ್ಕಳ ಪೈಕಿ ಹಿರಿಮಗ ಸೇನೆಗೆ ಸೇರಿಕೊಂಡಿದ್ದರು. ಮೊದಲನೇ ಹೆಂಡತಿಗೂ ಓರ್ವ ಮಗನಿದ್ದಾನೆ.

Last Updated : Nov 11, 2020, 7:10 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.