ETV Bharat / state

ಅಥಣಿ ಕೆಎಸ್​ಆರ್​ಟಿಸಿ ಸಿಬ್ಬಂದಿಯಿಂದ ಪೊಲೀಸ್​​​ ಕಾನ್ಸ್​ಟೇಬಲ್​ ಮೇಲೆ ಹಲ್ಲೆ ಆರೋಪ - ಕಾನ್ಸ್​ಟೆಬಲ್​ ಮೇಲೆ ಹಲ್ಲೆ

ಹಲ್ಲೆಗೊಳಗಾದ ಕಾನ್ಸ್​ಟೇಬಲ್​​ ಅಥಣಿ ತಾಲೂಕಿನ ಶಿವನೂರ ಗ್ರಾಮದವರಾಗಿದ್ದು, ಬೆಳಗಾವಿಯಲ್ಲಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ..

Attack on Police constable
ಅಥಣಿ ಕೆಎಸ್​ಆರ್​ಟಿಸಿ ಸಿಬ್ಬಂದಿಯಿಂದ ಪೊಲೀಸ್​​​ ಕಾನ್ಸ್​ಟೆಬಲ್​ ಮೇಲೆ ಹಲ್ಲೆ..?
author img

By

Published : Jul 31, 2020, 9:06 PM IST

ಅಥಣಿ (ಬೆಳಗಾವಿ) : ಬಸ್ ವಿಳಂಬವಾದುದನ್ನು ಪ್ರಶ್ನೆ ಮಾಡಿದ್ದಕ್ಕೆ ಪೊಲೀಸ್​ ಸಿಬ್ಬಂದಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ. ಅಥಣಿ ಘಟಕದ ಬಸ್ ಚಾಲಕ ಮತ್ತು ನಿರ್ವಾಹಕ ಸೇರಿ 15ಕ್ಕೂ ಅಧಿಕ ಸಿಬ್ಬಂದಿ, ನನ್ನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಕಾನ್ಸ್​ಟೇಬಲ್​​​​ ಗಿರಿಮಲ್ಲ ಅಜೂರ ಆರೋಪ ಮಾಡಿದ್ದಾರೆ.

ಈ ಕುರಿತು ಅಥಣಿ ಘಟಕದ ಕೆಎಸ್​ಆರ್​ಟಿಸಿ ಪ್ರಭಾರಿ ಅಧಿಕಾರಿ ಬಸವರಾಜ ಜಗದಾಳ 'ಈಟಿವಿ ಭಾರತ'ದೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಜಮಖಂಡಿಯಿಂದ ಅಥಣಿಗೆ ಬರುವ ಸಮಯದಲ್ಲಿ ನಮ್ಮ ಚಾಲಕನಿಗೆ ವೇಗವಾಗಿ ಚಲಿಸುವಂತೆ ಕಾನ್ಸ್​ಟೇಬಲ್ ಪದೇಪದೆ ಒತ್ತಡ ಹೇರುತ್ತಿದ್ದರು. ಅದರ ಜೊತೆಗೆ ನಾನೇ ಬಸ್ ಚಲಾಯಿಸುತ್ತೇನೆ ಎಂದು ಚಾಲಕನ ಜೊತೆ ಅಸಭ್ಯವಾಗಿ ವರ್ತನೆ ಮಾಡಿದ್ದಾರೆ. ಆದರೆ, ನಮ್ಮ ಸಿಬ್ಬಂದಿ ಅವರ ಮೇಲೆ ಹಲ್ಲೆ ಮಾಡಿಲ್ಲ ಎಂದರು.

ಅಥಣಿ ಕೆಎಸ್​ಆರ್​ಟಿಸಿ ಸಿಬ್ಬಂದಿಯಿಂದ ಪೊಲೀಸ್​​​ ಕಾನ್ಸ್​ಟೇಬಲ್​ ಮೇಲೆ ಹಲ್ಲೆ?

ನಮ್ಮ ಸಿಬ್ಬಂದಿಗೆ ಅವರು ಹಲ್ಲೆ ಮಾಡಿದ್ದು, ಕೈ ಬೆರಳಿಗೆ ಗಾಯಗಳಾಗಿವೆ. ಅಥಣಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದೇವೆ. ಜಮಖಂಡಿಯಿಂದ ಅಥಣಿಗೆ ಬರುವ ಬಸ್​ನಲ್ಲಿರುವ ಪ್ರಯಾಣಿಕರು, ಆತನ ಅಸಭ್ಯ ವರ್ತನೆಗೆ ಧರ್ಮದೇಟು ನೀಡಿದ್ದಾರೆ ಎಂದು ತಿಳಿಸಿದರು.

ಹಲ್ಲೆಗೊಳಗಾದ ಕಾನ್ಸ್​ಟೇಬಲ್​​ ಅಥಣಿ ತಾಲೂಕಿನ ಶಿವನೂರ ಗ್ರಾಮದವರಾಗಿದ್ದು, ಬೆಳಗಾವಿಯಲ್ಲಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಅಥಣಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಅಥಣಿ (ಬೆಳಗಾವಿ) : ಬಸ್ ವಿಳಂಬವಾದುದನ್ನು ಪ್ರಶ್ನೆ ಮಾಡಿದ್ದಕ್ಕೆ ಪೊಲೀಸ್​ ಸಿಬ್ಬಂದಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ. ಅಥಣಿ ಘಟಕದ ಬಸ್ ಚಾಲಕ ಮತ್ತು ನಿರ್ವಾಹಕ ಸೇರಿ 15ಕ್ಕೂ ಅಧಿಕ ಸಿಬ್ಬಂದಿ, ನನ್ನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಕಾನ್ಸ್​ಟೇಬಲ್​​​​ ಗಿರಿಮಲ್ಲ ಅಜೂರ ಆರೋಪ ಮಾಡಿದ್ದಾರೆ.

ಈ ಕುರಿತು ಅಥಣಿ ಘಟಕದ ಕೆಎಸ್​ಆರ್​ಟಿಸಿ ಪ್ರಭಾರಿ ಅಧಿಕಾರಿ ಬಸವರಾಜ ಜಗದಾಳ 'ಈಟಿವಿ ಭಾರತ'ದೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಜಮಖಂಡಿಯಿಂದ ಅಥಣಿಗೆ ಬರುವ ಸಮಯದಲ್ಲಿ ನಮ್ಮ ಚಾಲಕನಿಗೆ ವೇಗವಾಗಿ ಚಲಿಸುವಂತೆ ಕಾನ್ಸ್​ಟೇಬಲ್ ಪದೇಪದೆ ಒತ್ತಡ ಹೇರುತ್ತಿದ್ದರು. ಅದರ ಜೊತೆಗೆ ನಾನೇ ಬಸ್ ಚಲಾಯಿಸುತ್ತೇನೆ ಎಂದು ಚಾಲಕನ ಜೊತೆ ಅಸಭ್ಯವಾಗಿ ವರ್ತನೆ ಮಾಡಿದ್ದಾರೆ. ಆದರೆ, ನಮ್ಮ ಸಿಬ್ಬಂದಿ ಅವರ ಮೇಲೆ ಹಲ್ಲೆ ಮಾಡಿಲ್ಲ ಎಂದರು.

ಅಥಣಿ ಕೆಎಸ್​ಆರ್​ಟಿಸಿ ಸಿಬ್ಬಂದಿಯಿಂದ ಪೊಲೀಸ್​​​ ಕಾನ್ಸ್​ಟೇಬಲ್​ ಮೇಲೆ ಹಲ್ಲೆ?

ನಮ್ಮ ಸಿಬ್ಬಂದಿಗೆ ಅವರು ಹಲ್ಲೆ ಮಾಡಿದ್ದು, ಕೈ ಬೆರಳಿಗೆ ಗಾಯಗಳಾಗಿವೆ. ಅಥಣಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದೇವೆ. ಜಮಖಂಡಿಯಿಂದ ಅಥಣಿಗೆ ಬರುವ ಬಸ್​ನಲ್ಲಿರುವ ಪ್ರಯಾಣಿಕರು, ಆತನ ಅಸಭ್ಯ ವರ್ತನೆಗೆ ಧರ್ಮದೇಟು ನೀಡಿದ್ದಾರೆ ಎಂದು ತಿಳಿಸಿದರು.

ಹಲ್ಲೆಗೊಳಗಾದ ಕಾನ್ಸ್​ಟೇಬಲ್​​ ಅಥಣಿ ತಾಲೂಕಿನ ಶಿವನೂರ ಗ್ರಾಮದವರಾಗಿದ್ದು, ಬೆಳಗಾವಿಯಲ್ಲಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಅಥಣಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.