ಅಥಣಿ: ಬೆಳಗಾವಿ ಜಿಲ್ಲೆಯ ಶೂರ್ಪಾಲಿ ಗ್ರಾಮದ ಸಿಪಾಯಿ ಪಾಂಡು ರಜಪೂಚ ಎಂಬ ವ್ಯಕ್ತಿ ಕೋವಿಡ್-19 ಜಾಗತಿಕ ಮಹಾಮಾರಿ ಹೋಗಲಾಡಿಸಲು ದೇವರ ಮೋರೆ ಹೋಗಿದ್ದಾರೆ.
ಶುಕ್ರವಾರ ಕೃಷ್ಣಾ ನದಿಯಲ್ಲಿ ಸ್ನಾನ ಮಾಡಿ, ಗ್ರಾಮದ ಪ್ರತಿಯೊಂದು ದೇವಸ್ಥಾನಕ್ಕೆ ಹೋಗಿ ದೀರ್ಘದಂಡ ನಮಸ್ಕಾರ ಹಾಕಿ ದೇವರಲ್ಲಿ ಪ್ರಾರ್ಥಿಸಿದ್ದಾರೆ.
ಗ್ರಾಮದಲ್ಲಿ ತುರ್ತು ಸಂದರ್ಭದಲ್ಲಿ ಮಾತ್ರ ವಾಹನಗಳನ್ನು ಬಳಸಬೇಕು. ಎಣ್ಣೆ ಪದಾರ್ಥಗಳನ್ನು ಮನೆಯಲ್ಲಿ ಮಾಡುವಂತಿಲ್ಲ ಎಂದು ಗುರುವಾರ ಸಂಜೆ ಊರಿನ ಜನಕ್ಕೆ ಡಂಗುರ ಸಾರಿಸಿ, ತಿಳುವಳಿಕೆ ನೀಡಲಾಗಿದೆ. ಕೊರೊನಾ ರೋಗವನ್ನು ನಿಯಂತ್ರಿಸಲು ಶುಕ್ರವಾರ ಹಳ್ಳಿಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.