ETV Bharat / state

ಶಾಸಕರ ಕಣ್ಣಾಮುಚ್ಚಾಲೆ ಆಟ... ನೀರಿಲ್ಲದೆ ತತ್ತರಿಸಿದ ಅಥಣಿ, ಕಾಗವಾಡ ರೈತರು...!

ಬೆಳಗಾವಿಯ ಅಥಣಿ, ಕಾಗವಾಡ ಶಾಸಕರು ದಿನಾಲೂ ಸುದ್ದಿಯಲ್ಲಿದ್ದಾರೆ. ಆದರೆ, ಹೀರೋಗಳಾಗಿರುವ ಶಾಸಕರು ಇಲ್ಲಿನ ಅಥಣಿ, ಕಾಗವಾಡ ರೈತರ ಸಮಸ್ಯೆಗಳನ್ನು ಮಾತ್ರ ಮೂಲೆಗುಂಪು ಮಾಡಿದ್ದಾರೆ. ಈ ಭಾಗದಲ್ಲಿ ನೀರಿಲ್ಲದೆ ಜನ ಕಂಗಾಲಾಗಿದ್ದಾರೆ.

author img

By

Published : Jul 20, 2019, 8:15 PM IST

ಉಪಕಾಲುವೆಗಳು

ಚಿಕ್ಕೋಡಿ: ಮಹಾರಾಷ್ಟ್ರ ಗಡಿಭಾಗದ ಅಥಣಿ, ಕಾಗವಾಡ ತಾಲೂಕುಗಳು ರಾಜ್ಯ ರಾಜಕಾರಣದಿಂದ ಹಿಡಿದು ಬರಗಾಲ, ಅತಿವೃಷ್ಟಿ, ಅನಾವೃಷ್ಟಿ ಹೀಗೆ ಒಂದಿಲ್ಲೊಂದು ಸಮಸ್ಯೆಗಳಿಂದ ನಿರಂತರ ಸುದ್ದಿಯಲ್ಲಿರುತ್ತವೆ. ಇತ್ತೀಚೆಗಂತೂ ಬೆಳಗಾವಿಯ ಅಥಣಿ, ಕಾಗವಾಡ ಶಾಸಕರು ದಿನಾಲೂ ಸುದ್ದಿಯಲ್ಲಿದ್ದಾರೆ. ಆದರೆ, ಹೀರೋಗಳಾಗಿರುವ ಶಾಸಕರು ಇಲ್ಲಿನ ರೈತರ ಸಮಸ್ಯೆಗಳನ್ನು ಮಾತ್ರ ಮೂಲೆಗೆ ತಳ್ಳಿದ್ದಾರೆ.

ನೀರು ಬಾರದೆ ಬರಡಾಗಿರುವ ಉಪಕಾಲುವೆಗಳು

ಹೌದು. ಕಾಗವಾಡ, ಅಥಣಿ ಶಾಸಕರಾದ ಶ್ರೀಮಂತ ಪಾಟೀಲ ಹಾಗೂ ಮಹೇಶ ಕುಮಟಳ್ಳಿ ಅವರಿಗೆ ತಮ್ಮ ಭಾಗದ ಜನರ ಗೋಳು ಕೇಳಲು ಸಮಯ ಇಲ್ಲದ‌ಂತಾಗಿದೆ. ಈ ತಾಲೂಕುಗಳಲ್ಲಿ ಭೀಕರ ಬರಗಾಲದಿಂದ ಕುಡಿಯುವ ನೀರಿಗೆ ಹಾಹಾಕಾರ ಎದುರಾಗಿದೆ. ಘಟ್ಟ ಪ್ರದೇಶದಲ್ಲಿ ಆಗಿರುವ ಮಳೆಯಿಂದ ಕೃಷ್ಣಾ ನದಿ ಮೈತುಂಬಿ ಹರಿಯುತ್ತಿದೆ. ರೈತರ ಅನುಕೂಲಕ್ಕಾಗಿ ಅಥಣಿಯ ಹಳ್ಯಾಳ ಏತ ನೀರಾವರಿ ಹಾಗೂ ಕಾಗವಾಡದ ಐನಾಪೂರ ಏತ ನೀರಾವರಿ ಮೂಲಕ ಕಾಲುವೆಗಳಿಗೆ ನೀರು ಬಿಡಲಾಗಿದೆ. ಆದರೆ, ಉಪ ಕಾಲುವೆಗಳಿಗೆ ನೀರು ಬಾರದ ಕಾರಣ ಬೆಳೆಗಳು ಕೈಗೆ ಸಿಗದಂತಾಗುತ್ತಿವೆ.

ನೀರು ಎಲ್ಲಿ ಹೋಯಿತು?: ಬಾವಿ, ಕೊಳವೆ ಬಾವಿ ಹಾಗೂ ಬೆಳೆದ ಬೆಳೆಗಳಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಕಾಲುವೆಗಳಿಗೆ ನೀರು ಬಿಡಲಾಗಿದೆ. ಆ ನೀರನ್ನು ಉಪ ಕಾಲುವೆಗಳಿಗೆ ಹರಿಸಿದ್ದರೆ, ರೈತರ ಮೊಗದಲ್ಲಿ ನಗು ಬೀರುತ್ತಿತ್ತು. ಆದರೆ, ಅದು ಸಾಧ್ಯವಾಗದ ಕಾರಣ ರೈತರು ಕಣ್ಣೀರಿನಲ್ಲಿ ಮುಖ ತೊಳೆಯುತ್ತಿದ್ದಾರೆ. ಕಾರಣ ಇಷ್ಟೆ. ಕಾಲುವೆಯ ನೀರಿಗೆ ಕೆಲ ರೈತರು ಪೈಪ್​​ಲೈನ್ ಅಳವಡಿಸಿ ತಮ್ಮ ಗದ್ದೆಗಳಿಗೆ ನೀರು ಹರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಉಪಕಾಲುವೆ ವ್ಯಾಪ್ತಿಯ ರೈತರಿಗೆ ನೀರಿಲ್ಲದಂತಾಗಿದೆ.

ಅಧಿಕಾರಿಗಳ ನಿರ್ಲಕ್ಷ್ಯ: 15 ದಿನಗಳ ಹಿಂದೆ ಕಾಲುವೆಗಳಿಗೆ ನೀರು ಬಿಡಲಾಗಿದೆ. ಕಾಲುವೆಗಳಿಗೆ ಅಳಡಿಸಿರುವ ಪೈಪ್​​ಲೈನ್ ತೆರವುಗೊಳಿಸಬೇಕಾದ ಅಧಿಕಾರಿ ವರ್ಗ ಕೈಕಟ್ಟಿ ಕುಳಿತಿದೆ. ಈ ಎಲ್ಲ ಮಾಹಿತಿ ಗೊತ್ತಿದ್ದರೂ ಉಪಕಾಲುವೆಗಳಿಗೆ ನೀರು ಬಿಡಿಸಲು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಮೋಳೆ, ಕೆಂಪವಾಡ, ಕೌಲಗುಡ್ಡ, ನವಲಿಹಾಳ, ಮುರಗುಂಡಿ ಗ್ರಾಮಗಳ ರೈತರು ಹಿಡಿಶಾಪ ಹಾಕುತ್ತಿದ್ದಾರೆ.

ಇಲ್ಲಿ ವಾಡಿಕೆಗಿಂತ ಕಡಿಮೆ ಮಳೆ ಬಿದ್ದಿದೆ. ನೀರಿಲ್ಲದೆ ಬೆಳೆಗಳು ಒಣಗಿವೆ. ಈ ಉಪ ಕಾಲುವೆಗಳಿಗೆ ನೀರು ಹರಿದರೆ ಬೆಳೆಗಳಿಗೆ ಜೀವ ಬರುತ್ತದೆ ಎಂದು ರೈತರು ತಿಳಿಸುತ್ತಾರೆ. ಎರಡು ವರ್ಷದಲ್ಲಿ ಸಕಾಲಕ್ಕೆ ಮಳೆಯಾಗದೆ ಬೆಳೆದ ಬೆಳೆಗಳು ಕೈಗೆ ಸಿಗದ ಕಾರಣ, ನಷ್ಟ ಅನುಭವಿಸುವಂತಾಗಿದೆ. ಈ ವರ್ಷವೂ ವರುಣ ಕೃಪೆ ತೋರಿಲ್ಲ. ಹಾಗೂ ಉಪಕಾಲುವೆಗಳಿಗೆ ನೀರು ಬಿಡದಿದ್ದರೆ ಈ ಭಾಗದ ರೈತರು ಗುಳೆ ಹೋಗಬೇಕಾಗುತ್ತದೆ ಎಂದು 'ಈಟಿವಿ ಭಾರತ್​' ಜೊತೆ ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.

ಚಿಕ್ಕೋಡಿ: ಮಹಾರಾಷ್ಟ್ರ ಗಡಿಭಾಗದ ಅಥಣಿ, ಕಾಗವಾಡ ತಾಲೂಕುಗಳು ರಾಜ್ಯ ರಾಜಕಾರಣದಿಂದ ಹಿಡಿದು ಬರಗಾಲ, ಅತಿವೃಷ್ಟಿ, ಅನಾವೃಷ್ಟಿ ಹೀಗೆ ಒಂದಿಲ್ಲೊಂದು ಸಮಸ್ಯೆಗಳಿಂದ ನಿರಂತರ ಸುದ್ದಿಯಲ್ಲಿರುತ್ತವೆ. ಇತ್ತೀಚೆಗಂತೂ ಬೆಳಗಾವಿಯ ಅಥಣಿ, ಕಾಗವಾಡ ಶಾಸಕರು ದಿನಾಲೂ ಸುದ್ದಿಯಲ್ಲಿದ್ದಾರೆ. ಆದರೆ, ಹೀರೋಗಳಾಗಿರುವ ಶಾಸಕರು ಇಲ್ಲಿನ ರೈತರ ಸಮಸ್ಯೆಗಳನ್ನು ಮಾತ್ರ ಮೂಲೆಗೆ ತಳ್ಳಿದ್ದಾರೆ.

ನೀರು ಬಾರದೆ ಬರಡಾಗಿರುವ ಉಪಕಾಲುವೆಗಳು

ಹೌದು. ಕಾಗವಾಡ, ಅಥಣಿ ಶಾಸಕರಾದ ಶ್ರೀಮಂತ ಪಾಟೀಲ ಹಾಗೂ ಮಹೇಶ ಕುಮಟಳ್ಳಿ ಅವರಿಗೆ ತಮ್ಮ ಭಾಗದ ಜನರ ಗೋಳು ಕೇಳಲು ಸಮಯ ಇಲ್ಲದ‌ಂತಾಗಿದೆ. ಈ ತಾಲೂಕುಗಳಲ್ಲಿ ಭೀಕರ ಬರಗಾಲದಿಂದ ಕುಡಿಯುವ ನೀರಿಗೆ ಹಾಹಾಕಾರ ಎದುರಾಗಿದೆ. ಘಟ್ಟ ಪ್ರದೇಶದಲ್ಲಿ ಆಗಿರುವ ಮಳೆಯಿಂದ ಕೃಷ್ಣಾ ನದಿ ಮೈತುಂಬಿ ಹರಿಯುತ್ತಿದೆ. ರೈತರ ಅನುಕೂಲಕ್ಕಾಗಿ ಅಥಣಿಯ ಹಳ್ಯಾಳ ಏತ ನೀರಾವರಿ ಹಾಗೂ ಕಾಗವಾಡದ ಐನಾಪೂರ ಏತ ನೀರಾವರಿ ಮೂಲಕ ಕಾಲುವೆಗಳಿಗೆ ನೀರು ಬಿಡಲಾಗಿದೆ. ಆದರೆ, ಉಪ ಕಾಲುವೆಗಳಿಗೆ ನೀರು ಬಾರದ ಕಾರಣ ಬೆಳೆಗಳು ಕೈಗೆ ಸಿಗದಂತಾಗುತ್ತಿವೆ.

ನೀರು ಎಲ್ಲಿ ಹೋಯಿತು?: ಬಾವಿ, ಕೊಳವೆ ಬಾವಿ ಹಾಗೂ ಬೆಳೆದ ಬೆಳೆಗಳಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಕಾಲುವೆಗಳಿಗೆ ನೀರು ಬಿಡಲಾಗಿದೆ. ಆ ನೀರನ್ನು ಉಪ ಕಾಲುವೆಗಳಿಗೆ ಹರಿಸಿದ್ದರೆ, ರೈತರ ಮೊಗದಲ್ಲಿ ನಗು ಬೀರುತ್ತಿತ್ತು. ಆದರೆ, ಅದು ಸಾಧ್ಯವಾಗದ ಕಾರಣ ರೈತರು ಕಣ್ಣೀರಿನಲ್ಲಿ ಮುಖ ತೊಳೆಯುತ್ತಿದ್ದಾರೆ. ಕಾರಣ ಇಷ್ಟೆ. ಕಾಲುವೆಯ ನೀರಿಗೆ ಕೆಲ ರೈತರು ಪೈಪ್​​ಲೈನ್ ಅಳವಡಿಸಿ ತಮ್ಮ ಗದ್ದೆಗಳಿಗೆ ನೀರು ಹರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಉಪಕಾಲುವೆ ವ್ಯಾಪ್ತಿಯ ರೈತರಿಗೆ ನೀರಿಲ್ಲದಂತಾಗಿದೆ.

ಅಧಿಕಾರಿಗಳ ನಿರ್ಲಕ್ಷ್ಯ: 15 ದಿನಗಳ ಹಿಂದೆ ಕಾಲುವೆಗಳಿಗೆ ನೀರು ಬಿಡಲಾಗಿದೆ. ಕಾಲುವೆಗಳಿಗೆ ಅಳಡಿಸಿರುವ ಪೈಪ್​​ಲೈನ್ ತೆರವುಗೊಳಿಸಬೇಕಾದ ಅಧಿಕಾರಿ ವರ್ಗ ಕೈಕಟ್ಟಿ ಕುಳಿತಿದೆ. ಈ ಎಲ್ಲ ಮಾಹಿತಿ ಗೊತ್ತಿದ್ದರೂ ಉಪಕಾಲುವೆಗಳಿಗೆ ನೀರು ಬಿಡಿಸಲು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಮೋಳೆ, ಕೆಂಪವಾಡ, ಕೌಲಗುಡ್ಡ, ನವಲಿಹಾಳ, ಮುರಗುಂಡಿ ಗ್ರಾಮಗಳ ರೈತರು ಹಿಡಿಶಾಪ ಹಾಕುತ್ತಿದ್ದಾರೆ.

ಇಲ್ಲಿ ವಾಡಿಕೆಗಿಂತ ಕಡಿಮೆ ಮಳೆ ಬಿದ್ದಿದೆ. ನೀರಿಲ್ಲದೆ ಬೆಳೆಗಳು ಒಣಗಿವೆ. ಈ ಉಪ ಕಾಲುವೆಗಳಿಗೆ ನೀರು ಹರಿದರೆ ಬೆಳೆಗಳಿಗೆ ಜೀವ ಬರುತ್ತದೆ ಎಂದು ರೈತರು ತಿಳಿಸುತ್ತಾರೆ. ಎರಡು ವರ್ಷದಲ್ಲಿ ಸಕಾಲಕ್ಕೆ ಮಳೆಯಾಗದೆ ಬೆಳೆದ ಬೆಳೆಗಳು ಕೈಗೆ ಸಿಗದ ಕಾರಣ, ನಷ್ಟ ಅನುಭವಿಸುವಂತಾಗಿದೆ. ಈ ವರ್ಷವೂ ವರುಣ ಕೃಪೆ ತೋರಿಲ್ಲ. ಹಾಗೂ ಉಪಕಾಲುವೆಗಳಿಗೆ ನೀರು ಬಿಡದಿದ್ದರೆ ಈ ಭಾಗದ ರೈತರು ಗುಳೆ ಹೋಗಬೇಕಾಗುತ್ತದೆ ಎಂದು 'ಈಟಿವಿ ಭಾರತ್​' ಜೊತೆ ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.

Intro:ಉಪ ಕಾಲುವೆಗಳಿಗೆ ನೀರು ಬರದೆ ಇರುವುದರಿಂದ ಕಂಗಾಲಾದ ರೈತರುBody:

ಚಿಕ್ಕೋಡಿ :
ಪ್ಯಾಕೇಜ್

ಮಹಾರಾಷ್ಟ್ರ ಗಡಿಭಾಗದ ಅಥಣಿ, ಕಾಗವಾಡ ತಾಲೂಕುಗಳು ಸದಾ ನಿರಂತರವಾಗಿ ಸುದ್ದಿಯಲ್ಲಿವೆ. ರಾಜ್ಯ ರಾಜಕಾರಣದಿಂದ ಹಿಡಿದು ಬರಗಾಲ ಅತಿವೃಷ್ಟಿ, ಅಣಾವೃಷ್ಟಿ ವರೆಗೂ ಒಂದಿಲ್ಲ ಒಂದು ಸಮಸ್ಯೆಗಳಿಗೆ ಬೆಳಗಾವಿ ಜಿಲ್ಲೆಯ ಅಥಣಿ, ಕಾಗವಾಡ ಭಾಗದ ರೈತರು ತುತ್ತಾಗಿದ್ದು ಸಮಸ್ಯೆಗಳ ತುದಿಯಲ್ಲಿ ಕುಳತ್ತಿದ್ದಾರೆ.

ಕಾಗವಾಡ, ಅಥಣಿ ಶಾಸಕರಾದ ಶ್ರೀಮಂತ ಪಾಟೀಲ ಹಾಗೂ ಮಹೇಶ ಕುಮಟಳ್ಳಿ ಅವರು ಪ್ರಥಮವಾಗಿ ವಿಧಾನಸಭೆಯನ್ನು ಪ್ರವೇಶಿಸಿದರು ಸಹ ತಮ್ಮ ವರ್ಚಸ್ಸ ಮಾತ್ರ ಕಳೆದು ಕೊಳ್ಳಲಿಲ್ಲ. ಒಂದಿಲ್ಲ ಒಂದು ಸುದ್ದಿಗೆ ಸಿಕ್ಕು ಹಿರೋಗಳಾಗುತ್ತಿದ್ದಾರೆ. ಆದರೆ, ಈ ಶಾಸಕರು ಮಾತ್ರ ತಮ್ಮ ಭಾಗದ ಜನರ ಗೊಳು ಕೇಳಲು ಸಮಯವಿಲ್ಲದ‌ಂತಾಗಿದೆ.

ಪ್ರಸಕ್ತ ವರ್ಷದಲ್ಲಿ ಫೆಬ್ರವರಿಯಿಂದ ಮೇ ತಿಂಗಳವರೆಗೆ ಭೀಕರ ಬರಗಾಲ ಮತ್ತು ಕೃಷ್ಣಾ ನದಿ ಬತ್ತಿದ್ದರಿಂದ ಕುಡಿಯುವ ನೀರಿನ ಹಾಹಾಕಾರ ತಾಂಡವವಾಡುತ್ತಿದೆ. ಆದರೆ, ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಆದ ಮಳೆಯಿಂದ ಮಹಾರಾಷ್ಟ್ರ ಡ್ಯಾಂ ಗಳಿಂದ ನೀರು ಹರಿದು ಬರುತ್ತಿರುವುದರಿಂದ ಕೃಷ್ಣಾ ನದಿ ಮೈ ತುಂಬಿ ಹರಿಯುತ್ತಿದೆ.

ರೈತರ ಅನಕೂಲಕ್ಕಾಗಿ ಅಥಣಿ ತಾಲೂಕಿನ ಹಳ್ಯಾಳ ಏತ ನೀರಾವರಿ ಹಾಗೂ ಕಾಗವಾಡ ತಾಲೂಕಿನ ಐನಾಪೂರ ಏತ ನೀರಾವರಿ ಮೂಲಕ ರೈತರಿಗೆ ಅನಕೂಲವಾಗಲಿ ಎನ್ನುವ ದೃಷ್ಟಿಯಿಂದ ಕಾಲುವೆಗಳಿಗೆ ನೀರು ಹರಿಸಿದರೆ ಆ ನೀರು ಮಾತ್ರ ರೈತರ ಗದ್ದೆಗಳಿಗೆ ಬಂದು ತಲಪುತ್ತಿಲ್ಲ.

ಕಾಲುವೆಗಳಿಗೆ ಬಿಟ್ಟ ನೀರು ಎಲ್ಲಿಗೆ ಹೋಯಿತು? :

ರೈತರಿಗೆ ಅನಕೂಲವಾಗಲಿ ಒಂದಿಷ್ಟು ಬಾವಿಗಳಿಗೆ, ಬೊರವೆಲ್ ಗಳಿಗೆ ನೀರು ಸಂಗ್ರಹ ವಾಗಲಿ ಬಿತ್ತನೆ ಮಾಡಿದ ಬೆಳಗೆಗಳಿಗೆ ಅನಕೂಲಕರವಾಗಲಿ ಎನ್ನುವ ದೃಷ್ಠಿಯಿಂದ ಕಾಲುವೆಗಳ ಮುಖಾಂತರ ನೀರು ಹರಿಸಿದರು ಸಹ ಈ ನೀರು ಮಾತ್ರ ಮುಂದೆ ಬರತ್ತಿಲ್ಲ. ಕಾರಣ ಇಷ್ಟೇ ನದಿಯಿಂದ ಕಾಲುವೆಗೆ ಬಿಟ್ಟ ನೀರಿಗೆ ಮೋಟಾರಗಳ ಮೂಲಕ ಕಾಲುವೆಗಳಿಗೆ ಕುಣಿಸಿರುವುದರಿಂದ ಈ ಭಾಗದ ರೈತರು ಪೈಪ್ ಲೈನ್ ಮಾಡಿಕೊಂಡು ತಮ್ಮ ಗದ್ದೆಗಳಿಗೆ ನೀರು ಬಿಟ್ಟುಕೊಳ್ಳುತ್ತಿದ್ದಾರೆ. ಇದರಿಂದ ಮುಂದಿನ ರೈತರಿಗೆ ನೀರು ಹರಿದು ಬರಲು ಸಾಧ್ಯವಾಗುತ್ತಿಲ್ಲ.

ಅಧಿಕಾರಿಗಳ ನಿರ್ಲಕ್ಷ :

ಕಳೆದ 15 ದಿನಗಳ ಹಿಂದೆ ಕಾಲುವೆಗಳಿಗೆ ನೀರು ಬಿಡಲಾಗಿದೆ. ಆದರೆ, ಅಥಣಿ, ಕಾಗವಾಡ ತಾಲೂಕಿನ ಕೆಲ ಹಳ್ಳಿಗಳಿಗೆ ನೀರು ಬಂದಿಲ್ಲ. ಹಿಂದೆ ಕಾಲುವೆಗಳಿಗೆ ಕೂಡಿಸಿರುವ ಪೈಪ್ ಲೈನ್ ತೆಗೆಯುತ್ತಿಲ್ಲ, ಇದರಿಂದ ಮುಂದಿನ ಭಾಗದ ಉಪ ಕಾಲುವೆಗಳಿಗೆ ನೀರು ಬರುತ್ತಿಲ್ಲ. ಅದರಂತೆ ಖೆಳೆಗಾಂವ ಬಸವೇಶ್ವರ ಯಾತ ನೀರಾವರಿ ಪೈಪ್ ಲೈನ್ ಕೂಡಾ ಈಗ ಹಾಕುತ್ತಿರುವುದರಿಂದ ಕಾಲುವೆ ಒಡೆಯಲಾಗಿದೆ. ಇದರಿಂದ ಈ ನೀರು ಮುಂದೆ ಹೋಗುತ್ತಿಲ್ಲ. ಈ ಎಲ್ಲ ಮಾಹಿತಿಗಳು ಅಧಿಕಾರಿಗಳಿಗೆ ತಿಳಿದರೂ ಸಹಿತ ಈ ಉಪಕಾಲುವೆಗಳಿಗೆ ನೀರು ಬಿಡಿಸಲು ನಿರ್ಲಕ್ಷ ತೊರುತ್ತಿದ್ದಾರೆ ಎಂದು ಮೋಳೆ, ಕೆಂಪವಾಡ, ಕೌಲಗುಡ್ಡ, ನವಲಿಹಾಳ, ಮುರಗುಂಡಿ, ಹೀಗೆ ಹಲವಾರು ಗ್ರಾಮದ ರೈತರು ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಬೇಕಾದ ಪ್ರಮಾಣದಲ್ಲಿ ಮಳೆಯಾಗಿಲ್ಲ, ಬಿತ್ತಿದ ಬೆಳೆಗಳೆಲ್ಲವು ಒಣಗಿ ಹಾಳಾಗುತ್ತಿವೆ. ಈ ಕಾಲುವೆಗಳ ಮುಖಾಂತರ ನೀರು ಬಂದರೆ ಬೆಳೆಗಳಿಗೆ ನೀರು ಬಿಡಲು ಅನಕೂಲವಾಗುತ್ತದೆ ಎಂದು ರೈತರು ದೂರುತ್ತಿದ್ದಾರೆ. ಕಳೆದ ಎರಡು ವರ್ಷದಲ್ಲಿ ಸಕಾಲಕ್ಕೆ ಮಳೆಯಾಗದೆ ಬೆಳೆದ ಬೆಳೆಗಳೆಲ್ಲವೂ ಹಾಳಗಿವೆ‌. ಈ ವರ್ಷವು ಸಕಾಲಕ್ಕೆ ಮಳೆ ಹಾಗೂ ಕಾಲುವೆಗಳಿಗೆ ನೀರು ಬಿಡದಿದ್ದರೆ ಈ ಭಾಗದ ರೈತರು ಗೂಳೆ ಹೋಗುವ ಪ್ರಸಂಗ ಬರುತ್ತದೆ ಎಂದು ತಮ್ಮ ಅಳಲನ್ನು ಈಟಿವಿ ಭಾರತ ಜೊತೆ ಹಂಚಿಕೊಂಡಿದ್ದಾರೆ.

ಬೈಟ್ 1 : ಮಹಾದೇವ ಮಾಳಿ - ಮಾಜಿ ಗ್ರಾ.ಪಂ ಸದಸ್ಯರು ಕೌಲಗುಡ್ಡ

ಬೈಟ್ 2 : ಶ್ರೀಮಂತ ಸಿದ್ದಪ್ಪ ಸಂಬೋಜಿ - ಗ್ರಾಮಸ್ಥರು

Conclusion:ಸಂಜಯ ಕೌಲಗಿ
ಚಿಕ್ಕೋಡಿ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.