ETV Bharat / state

ರಾಯಬಾಗ: ಹಣ್ಣು ಮಾರುತ್ತಿದ್ದ ಮಹಿಳೆ ಮೇಲೆ ಅಪರಿಚಿತನಿಂದ ಆ್ಯಸಿಡ್​ ದಾಳಿ

author img

By

Published : Dec 11, 2020, 8:52 PM IST

Updated : Dec 11, 2020, 9:16 PM IST

ಝಂಡಾ ಕಟ್ಟೆ ಬಳಿ ಬಾಳೆಹಣ್ಣು ಮಾರಾಟ ಮಾಡುವ ವೇಳೆ ಅಪರಿಚಿತನೋರ್ವ ಯಾಸ್ಮೀನ್​ ಮೇಲೆ ಆ್ಯಸಿಡ್​ ಚೆಲ್ಲಿ ಪರಾರಿಯಾಗಿದ್ದಾನೆ. ​ಪರಿಣಾಮ ಮಹಿಳೆಯ ಹೊಟ್ಟೆ ಹಾಗೂ ಕುತ್ತಿಗೆ ಭಾಗದಲ್ಲಿ ತೀವ್ರ ಗಾಯಗಾಳಾಗಿವೆ.

ಆ್ಯಸಿಡ್​ ದಾಳಿ
ಆ್ಯಸಿಡ್​ ದಾಳಿ

ಚಿಕ್ಕೋಡಿ: ಹಣ್ಣು ಮಾರಾಟ ಮಾಡುತ್ತಿದ್ದ ಮಹಿಳೆ ಮೇಲೆ ಆ್ಯಸಿಡ್​​ ದಾಳಿ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ‌ ರಾಯಬಾಗ ಪಟ್ಟಣದ ಝಂಡಾ ಕಟ್ಟೆ ಬಳಿ ನಡೆದಿದೆ.

ಪಟ್ಟಣದ ಯಾಸ್ಮೀನ್​ ತಹಶಿಲ್ದಾರ (35) ಆ್ಯಸಿಡ್ ದಾಳಿಗೆ ತುತ್ತಾದ ​ಮಹಿಳೆ. ಇಲ್ಲಿನ ಝಂಡಾ ಕಟ್ಟೆ ಬಳಿ ಹಣ್ಣು ಮಾರಾಟ ಮಾಡುವ ವೇಳೆ ಅಪರಿಚಿತನೋರ್ವ ಯಾಸ್ಮೀನ್​ ಮೇಲೆ ಆ್ಯಸಿಡ್​ ಚೆಲ್ಲಿ ಪರಾರಿಯಾಗಿದ್ದಾನೆ. ​ಪರಿಣಾಮ ಮಹಿಳೆಯ ಹೊಟ್ಟೆ ಹಾಗೂ ಕುತ್ತಿಗೆ ಭಾಗದಲ್ಲಿ ತೀವ್ರ ಗಾಯಗಾಳಾಗಿವೆ.

ಆ್ಯಸಿಡ್​ ದಾಳಿಗೆ ತುತ್ತಾಗಿ ನರಳುತ್ತಿರವ ಮಹಿಳೆ

ಈಕೆಯ ನರಳಾಟ ಕೇಳಿದ ಸ್ಥಳೀಯರು ನೀರು ಸಿಂಪಡಿಸಿ, ಚಿಕಿತ್ಸೆಗಾಗಿ ಆ್ಯಂಬುಲೆನ್ಸ್​ನಲ್ಲಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಸಂಬಂಧ ರಾಯಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಶೋಧ ಕಾರ್ಯ ಮುಂದುವರೆದಿದೆ.

ಚಿಕ್ಕೋಡಿ: ಹಣ್ಣು ಮಾರಾಟ ಮಾಡುತ್ತಿದ್ದ ಮಹಿಳೆ ಮೇಲೆ ಆ್ಯಸಿಡ್​​ ದಾಳಿ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ‌ ರಾಯಬಾಗ ಪಟ್ಟಣದ ಝಂಡಾ ಕಟ್ಟೆ ಬಳಿ ನಡೆದಿದೆ.

ಪಟ್ಟಣದ ಯಾಸ್ಮೀನ್​ ತಹಶಿಲ್ದಾರ (35) ಆ್ಯಸಿಡ್ ದಾಳಿಗೆ ತುತ್ತಾದ ​ಮಹಿಳೆ. ಇಲ್ಲಿನ ಝಂಡಾ ಕಟ್ಟೆ ಬಳಿ ಹಣ್ಣು ಮಾರಾಟ ಮಾಡುವ ವೇಳೆ ಅಪರಿಚಿತನೋರ್ವ ಯಾಸ್ಮೀನ್​ ಮೇಲೆ ಆ್ಯಸಿಡ್​ ಚೆಲ್ಲಿ ಪರಾರಿಯಾಗಿದ್ದಾನೆ. ​ಪರಿಣಾಮ ಮಹಿಳೆಯ ಹೊಟ್ಟೆ ಹಾಗೂ ಕುತ್ತಿಗೆ ಭಾಗದಲ್ಲಿ ತೀವ್ರ ಗಾಯಗಾಳಾಗಿವೆ.

ಆ್ಯಸಿಡ್​ ದಾಳಿಗೆ ತುತ್ತಾಗಿ ನರಳುತ್ತಿರವ ಮಹಿಳೆ

ಈಕೆಯ ನರಳಾಟ ಕೇಳಿದ ಸ್ಥಳೀಯರು ನೀರು ಸಿಂಪಡಿಸಿ, ಚಿಕಿತ್ಸೆಗಾಗಿ ಆ್ಯಂಬುಲೆನ್ಸ್​ನಲ್ಲಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಸಂಬಂಧ ರಾಯಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಶೋಧ ಕಾರ್ಯ ಮುಂದುವರೆದಿದೆ.

Last Updated : Dec 11, 2020, 9:16 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.