ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಮಹಾರುದ್ರಯಾಗ ಮಾಡಿಸಿದ್ದು,ಪೂಜಾ ವೇಳೆ ದೇವರ ಭಾಗದ ಪುಷ್ಪಮಾಲೆ ಕೆಳಗೆ ಜಾರಿದ್ದು ಬಿಎಸ್ವೈ ಇಷ್ಟಾರ್ಥಕ್ಕೆ ದೈವಬಲ ಸಿಕ್ಕಿದೆ ಎನ್ನಲಾಗುತ್ತಿದೆ.
ಗವಿಗಂಗಾಧರ ದೇಗುಲದಲ್ಲಿ ಗ್ರಹಣ ದೋಷ ಮುಕ್ತಿ ಹಾಗೂ ಅಧಿಕಾರ ಸಿದ್ಧಿಗಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮಹಾರುದ್ರಯಾಗ ಮಾಡಿಸಿದರು. ಸಂಕಲ್ಪ ತೊಟ್ಟು ದೇವರಿಗೆ ಪೂರ್ಣಾಹುತಿ ಅರ್ಪಿಸಿದರು. ಬಿಎಸ್ವೈ ಗೆ ಪುತ್ರಿ ಪದ್ಮಾವತಿ, ಸೊಸೆ ಪ್ರೇಮಾ, ಮೊಮ್ಮಗ, ಬಿಜೆಪಿ ಮಹಿಳಾ ಮೋರ್ಛಾ ರಾಜ್ಯಾಧ್ಯಕ್ಷೆ ಭಾರತಿ ಶೆಟ್ಟಿ, ಶಾಸಕ ರವಿಸುಬ್ರಮಣ್ಯ ಸಾಥ್ ನೀಡಿದ್ದಾರೆ.