ಬೆಂಗಳೂರು: ಕೇತುಗ್ರಸ್ತ ಸೂರ್ಯಗ್ರಹಣದ ಭೀತಿ ಇಂದು ವಿಧಾನಸೌಧಕ್ಕೂ ತಟ್ಟಿತ್ತು. ಇತ್ತ ಕಂದಾಯ ಸಚಿವ ಆರ್.ಅಶೋಕ್ ಕಚೇರಿಯಲ್ಲಿ ಧೂಪ ಹಾಕಿ ಪೂಜೆ ನೆರವೇರಿಸಲಾಯಿತು.
ಗ್ರಹಣ ನಿಮ್ಮಿತ್ತ ಸಚಿವ ಆರ್.ಅಶೋಕ್ ಕಚೇರಿಗೆ ಧೂಪ!? ಶಕ್ತಿ ಸೌಧ ಇಂದು ಸಿಬ್ಬಂದಿಗಳಿಲ್ಲದೇ ಬಿಕೋ ಎನ್ನುತ್ತಿತ್ತು. ಗ್ರಹಣ ಮುಗಿಯುವ ತನಕ ಬಹುತೇಕ ಸಿಬ್ಬಂದಿ, ಅಧಿಕಾರಿಗಳು ಸಚಿವಾಲಯದ ಕಚೇರಿಗಳತ್ತ ಸುಳಿಯಲಿಲ್ಲ. ಗ್ರಹಣ ಮುಗಿಯುತ್ತಿದ್ದ ಹಾಗೆ ಕಚೇರಿ ಸಿಬ್ಬಂದಿ ಪೂಜೆ ಮಾಡಿದರು. ಬಳಿಕ ಸಚಿವರ ಕಚೇರಿ ಹಾಗೂ ಸಹಾಯಕ ಕಾರ್ಯದರ್ಶಿಗಳ ಕಚೇರಿಯಲ್ಲಿ ಧೂಪ ಹಾಕಲಾಯಿತು. ವಿಧಾನಸೌಧ ಮೂರನೇ ಮಹಡಿಯಲ್ಲಿರುವ ಕಂದಾಯ ಸಚಿವರ ಚೇಂಬರ್ನಿಂದ ಭರ್ಜರಿ ಸಾಂಬ್ರಾಣಿ ಧೂಪ ಹೊರ ಬರುತ್ತಿತ್ತು. ಹೀಗಾಗಿ ವಿಕಾಸಸೌಧ ಮೂರನೇ ಮಹಡಿಯಲ್ಲಿ ಕಾರಿಡಾರ್ ನಲ್ಲಿ ಧೂಪದ ಹೊಗೆ ಆವರಿಸಿತ್ತು.