ಬೆಂಗಳೂರು: ಐಎಫ್ಎಸ್ ಅಧಿಕಾರಿ ಆರ್. ರವಿಶಂಕರ್ ವಿರುದ್ಧ ದೆಹಲಿಯಲ್ಲಿ ನೀಡಿರುವ ದೂರನ್ನು ವಾಪಸ್ ಪಡೆಯುವ ಸಲುವಾಗಿ ತನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿ ಕಿರುಕುಳ ನೀಡುತ್ತಿರುವ ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಲೋಹಿತ್, ಸಬ್ ಇನ್ಸ್ಪೆಕ್ಟರ್ ಚಂದ್ರಶೇಖರ್, ಠಾಣೆ ಬರಹಗಾರ ವೆಂಕಟೇಶ್, ಸಿಬ್ಬಂದಿ ಉಮೇಶ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮಹಿಳೆಯೊಬ್ಬರು ಪೊಲೀಸ್ ಮಹಾನಿರ್ದೇಶಕ ಸಪ್ರವೀಣ್ಸೂದ್ರಿಗೆ ದೂರು ನೀಡಿದ್ದಾರೆ.
ರಾಜರಾಜೇಶ್ವರಿನಗರದ ಮಹಿಳೆಯೊಬ್ಬರು ಈ ಹಿಂದೆ ಐಎಫ್ಎಸ್ ಅಧಿಕಾರಿ ಆರ್.ರವಿಶಂಕರ್ ವಿರುದ್ಧ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಮಾಡಿದ್ದಾರೆ ಎಂದು ದೆಹಲಿಯ ಚಾಣಕ್ಯಪುರಿ ಠಾಣೆಯಲ್ಲಿ ದೂರು ನೀಡಿದ್ದರು. ಈ ಮಾಹಿತಿ ಪಡೆದ ರವಿಶಂಕರ್ ಪತ್ನಿ ತುಳಸಿ ಮದ್ದಿನೇನಿ ಅನ್ನಪೂಣೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಸಚಿವರ ಆಪ್ತ ಲೋಹಿತ್ ಮೂಲಕ ದೂರು ಕೊಡಿಸಿ ತನ್ನ ಚಾರಿತ್ರ್ಯ ಹರಣ ಮಾಡಲು ಯತ್ನಿಸುತ್ತಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
![ಪೊಲೀಸರಿಂದಲೇ ಕಿರುಕುಳ ಆರೋಪ: ಪೊಲೀಸ್ ಮಹಾನಿರ್ದೇಶರಿಗೆ ಮಹಿಳೆಯಿಂದ ದೂರು](https://etvbharatimages.akamaized.net/etvbharat/prod-images/14258097_thumbn.jpg)