ETV Bharat / state

ನೋಟಿಸ್​ ಕೊಟ್ರೂ ಬರದಿದ್ರೆ ನಾನ್ಯಾಕೆ ಶಾಸಕರನ್ನು ಕರೆಯಬೇಕು: ಸ್ಪೀಕರ್ - undefined

ಶಾಸಕರು ರಾಜೀನಾಮೆ ನೀಡಿದಾಗ್ಲೆ ನಾನು ವಿಚಾರಣೆ ಮಾಡಬೇಕು ಅಂತ ಕರೆದಿದ್ದೆ. ಆದ್ರೆ ಅವರು ಬಂದಿಲ್ಲ, ಹಾಗಾಗಿ ಮತ್ತೆ ಅವರಿಗೆ ನೋಟಿಸ್​ ಕೊಡಲು ನನಗೆ ಮಾಡೋಕ್ಕೆ ಕೆಲಸ ಇಲ್ವಾ ಎಂದು ಹೇಳಿದ್ದಾರೆ.

ಕೆ.ಆರ್.ರಮೇಶ್ ಕುಮಾರ್
author img

By

Published : Jul 25, 2019, 6:58 PM IST

ಬೆಂಗಳೂರು: ಶಾಸಕರು ರಾಜೀನಾಮೆ ನೀಡಿದಾಗ ಆರ್ಟಿಕಲ್,190 ಪ್ರಕಾರ ವಿಚಾರಣೆಗೆ ಬರಬೇಕೆಂದು ನೋಟಿಸ್ ನೀಡಿದ್ದೆ, ಆದ್ರೆ ಅವರು ಬರಲಿಲ್ಲ. ಮತ್ತೆ ನಾನ್ಯಾಕೆ ಅವರನ್ನು ಕರೆಯಬೇಕು ಎಂದು ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಹೇಳಿದ್ದಾರೆ.

ದೊಮ್ಮಲೂರಿನ ಅವರ ನಿವಾಸದ ಬಳಿ ಇಂದು ಮಾತನಾಡಿದ ಅವರು, ಶಾಸಕರನ್ನು ಕರೆಸಿ ವಿಚಾರಣೆ ಮಾಡಬೇಕಿತ್ತು ಅಂತ ಕರೆದಿದ್ದೆ, ಆದ್ರೆ ಅವರು ಬಂದಿಲ್ಲ. ಮತ್ತೆ, ಮತ್ತೆ ಅವರಿಗೆ ನೋಟಿಸ್ ಕೊಡುವುದಕ್ಕೆ ನನಗೆ ಮಾಡೋಕೆ ಕೆಲಸ ಇಲ್ವಾ. ಒಮ್ಮೆ ನೋಟಿಸ್ ಕೊಡಲಾಗಿದೆ, ಅಲ್ಲಿಗೆ ಆ ವಿಚಾರ ಮುಗಿದಿದೆ ಎಂದು ಹೇಳಿದರು.

ಸಹಜವಾಗಿ 31ರೊಳಗಾಗಿ ಧನ ವಿನಿಯೋಗ ಮಸೂದೆ ಪಾಸ್ ಮಾಡಿಕೊಳ್ಳೊದೇ ಹೋದರೆ ಸರ್ಕಾರ ಸ್ಥಗಿತವಾಗುತ್ತದೆ. ಸಂಬಳ ಕೂಡ ಕೊಡಬೇಕು. ಈ ರೀತಿಯ ಅನಿವಾರ್ಯ ಪರಿಸ್ಥಿತಿ ಬಂದೊದಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಮುಂದೆ ಯಾರು ಸರ್ಕಾರ ಮಾಡುತ್ತೀರೋ ಅವರು ಅಧಿವೇಶನ ಕರೆಬೇಕು ಅಂತ ಹೇಳಿದ್ದೇನೆ ಎಂದರು.

ಅತೃಪ್ತ ಶಾಸಕರ ಕೇಸ್​​ನ ತೀರ್ಪಿನ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ತೀರ್ಪಿನ ಬಗ್ಗೆ ಯಾವುದೇ ಸುಳಿವು ಬಿಟ್ಟುಕೊಡಲಿಲ್ಲ. ನನಗೆ ವಿವೇಚನೆ ಇದೆ. ಸುಪ್ರೀಂಕೋರ್ಟ್ ವಿಶ್ವಾಸವನ್ನು ಉಳಿಸಿಕೊಳ್ಳುತ್ತೇನೆ ಎಂದು ರಾಜೀನಾಮೆ ನೀಡಿದ ಶಾಸಕರಿಗೆ ಪರೋಕ್ಷ ಸಂದೇಶ ಕೊಟ್ಟರು.

ಬೆಂಗಳೂರು: ಶಾಸಕರು ರಾಜೀನಾಮೆ ನೀಡಿದಾಗ ಆರ್ಟಿಕಲ್,190 ಪ್ರಕಾರ ವಿಚಾರಣೆಗೆ ಬರಬೇಕೆಂದು ನೋಟಿಸ್ ನೀಡಿದ್ದೆ, ಆದ್ರೆ ಅವರು ಬರಲಿಲ್ಲ. ಮತ್ತೆ ನಾನ್ಯಾಕೆ ಅವರನ್ನು ಕರೆಯಬೇಕು ಎಂದು ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಹೇಳಿದ್ದಾರೆ.

ದೊಮ್ಮಲೂರಿನ ಅವರ ನಿವಾಸದ ಬಳಿ ಇಂದು ಮಾತನಾಡಿದ ಅವರು, ಶಾಸಕರನ್ನು ಕರೆಸಿ ವಿಚಾರಣೆ ಮಾಡಬೇಕಿತ್ತು ಅಂತ ಕರೆದಿದ್ದೆ, ಆದ್ರೆ ಅವರು ಬಂದಿಲ್ಲ. ಮತ್ತೆ, ಮತ್ತೆ ಅವರಿಗೆ ನೋಟಿಸ್ ಕೊಡುವುದಕ್ಕೆ ನನಗೆ ಮಾಡೋಕೆ ಕೆಲಸ ಇಲ್ವಾ. ಒಮ್ಮೆ ನೋಟಿಸ್ ಕೊಡಲಾಗಿದೆ, ಅಲ್ಲಿಗೆ ಆ ವಿಚಾರ ಮುಗಿದಿದೆ ಎಂದು ಹೇಳಿದರು.

ಸಹಜವಾಗಿ 31ರೊಳಗಾಗಿ ಧನ ವಿನಿಯೋಗ ಮಸೂದೆ ಪಾಸ್ ಮಾಡಿಕೊಳ್ಳೊದೇ ಹೋದರೆ ಸರ್ಕಾರ ಸ್ಥಗಿತವಾಗುತ್ತದೆ. ಸಂಬಳ ಕೂಡ ಕೊಡಬೇಕು. ಈ ರೀತಿಯ ಅನಿವಾರ್ಯ ಪರಿಸ್ಥಿತಿ ಬಂದೊದಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಮುಂದೆ ಯಾರು ಸರ್ಕಾರ ಮಾಡುತ್ತೀರೋ ಅವರು ಅಧಿವೇಶನ ಕರೆಬೇಕು ಅಂತ ಹೇಳಿದ್ದೇನೆ ಎಂದರು.

ಅತೃಪ್ತ ಶಾಸಕರ ಕೇಸ್​​ನ ತೀರ್ಪಿನ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ತೀರ್ಪಿನ ಬಗ್ಗೆ ಯಾವುದೇ ಸುಳಿವು ಬಿಟ್ಟುಕೊಡಲಿಲ್ಲ. ನನಗೆ ವಿವೇಚನೆ ಇದೆ. ಸುಪ್ರೀಂಕೋರ್ಟ್ ವಿಶ್ವಾಸವನ್ನು ಉಳಿಸಿಕೊಳ್ಳುತ್ತೇನೆ ಎಂದು ರಾಜೀನಾಮೆ ನೀಡಿದ ಶಾಸಕರಿಗೆ ಪರೋಕ್ಷ ಸಂದೇಶ ಕೊಟ್ಟರು.

Intro:Body:

Ramesh kumar


Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.