ETV Bharat / state

ಪೊಲೀಸರ ಭರ್ಜರಿ ಕಾರ್ಯಾಚರಣೆ: 12 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ; ಖದೀಮನ ಬಂಧನ

ಆರು ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿಯ ಬಂಧನ ಮಾಡುವಲ್ಲಿ ವಿಜಯನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

author img

By

Published : Jan 19, 2021, 1:22 AM IST

ಪೊಲೀಸರ ಭರ್ಜರಿ ಕಾರ್ಯಾಚರಣೆ
ಪೊಲೀಸರ ಭರ್ಜರಿ ಕಾರ್ಯಾಚರಣೆ

ಬೆಂಗಳೂರು: ಮನೆಯ ಮುಂದೆ ಕುಳಿತುಕೊಂಡು ಮಗು ಆಟವಾಡಿಸ್ತಿದ್ದ ವೇಳೆ ಮಹಿಳೆಯೋರ್ವರ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕಿತ್ತುಕೊಂಡು ಓಡಿ ಹೋಗಿದ್ದ ಪ್ರಕರಣವನ್ನು ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

12  ಲಕ್ಷ ಮೌಲ್ಯದ ಚಿನ್ನಾಭರಣ ವಶ
12 ಲಕ್ಷ ಮೌಲ್ಯದ ಚಿನ್ನಾಭರಣ ವಶ

ವಿಜಯನಗರ ಪೊಲೀಸರು ಈ ಪ್ರಕರಣ ಬೇಧಿಸಿದ್ದು, ನಗರದ ವಿವಿಧ ಠಾಣೆಯ ಆರು ಪ್ರಕರಣಗಳಲ್ಲಿ ಬೇಕಾಗಿದ್ದ ಖದೀಮನ ಬಂಧಿಸಿದ್ದಾರೆ. ಸರಗಳ್ಳತನದ ಬಗ್ಗೆ ವಿಜಯನಗರ ಪೊಲೀಸರು ಠಾಣೆಯಲ್ಲಿ ಕಳೆದ ಅಕ್ಟೋಬರ್​ ತಿಂಗಳಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳಾದ ಭಾನು ಇರಾನಿ ಮತ್ತು ಅವುನು ಇರಾನಿ ಎಂಬುವರನ್ನು ಮೊದಲು ಪೋಲಿಸರು ಬಂಧನಕ್ಕೊಳಪಡಿಸಿದ್ದರು. ಆಗ ಮುಖ್ಯ ಆರೋಪಿಯ ಹೆಸರು ಬಾಯ್ಬಿಟ್ಟಿದ್ದಾರೆ. ಪೊಲೀಸರು ಜನವರಿ 3ರಂದು ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ರಿಯಾಜ್ ‌ಅಹಮದ್​ನನ್ನ ಧಾರವಾಡದಲ್ಲಿ ಪತ್ತೆ ಮಾಡಿದ್ದರು.

ಆರೋಪಿ ತಿಳಿಸಿರುವ ಪ್ರಕಾರ, ವಿಜಯನಗರ ಪೊಲೀಸ್ ಠಾಣೆಯ ಎರಡು ಸರ ಕಳ್ಳತನ ಹಾಗೂ ಮನೆ ಕಳ್ಳತನ ಮಾಗಡಿ ರಸ್ತೆ, ಬಸವೇಶ್ವರನಗರ ಪೊಲೀಸ್ ‌ಠಾಣಾ ವ್ಯಾಪ್ತಿಯಲ್ಲಿನ ಮನೆ ಕಳ್ಳತನ ಪ್ರಕರಣ ಸೇರಿ ಒಟ್ಟು ಆರು ಕೇಸ್​ನ ರೂ 12 ಲಕ್ಷ ರೂ. ಮೌಲ್ಯದ 275 ಗ್ರಾಂ ತೂಕದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ ಎಂದು ವಿಜಯನಗರ ಪೊಲೀಸ್ ಠಾಣೆಯ ಎಸ್​ಐ ಆರ್‌.ಸತೀಶ್‌ ಕುಮಾರ್ ತಿಳಿಸಿದ್ದಾರೆ.

ಬೆಂಗಳೂರು: ಮನೆಯ ಮುಂದೆ ಕುಳಿತುಕೊಂಡು ಮಗು ಆಟವಾಡಿಸ್ತಿದ್ದ ವೇಳೆ ಮಹಿಳೆಯೋರ್ವರ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕಿತ್ತುಕೊಂಡು ಓಡಿ ಹೋಗಿದ್ದ ಪ್ರಕರಣವನ್ನು ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

12  ಲಕ್ಷ ಮೌಲ್ಯದ ಚಿನ್ನಾಭರಣ ವಶ
12 ಲಕ್ಷ ಮೌಲ್ಯದ ಚಿನ್ನಾಭರಣ ವಶ

ವಿಜಯನಗರ ಪೊಲೀಸರು ಈ ಪ್ರಕರಣ ಬೇಧಿಸಿದ್ದು, ನಗರದ ವಿವಿಧ ಠಾಣೆಯ ಆರು ಪ್ರಕರಣಗಳಲ್ಲಿ ಬೇಕಾಗಿದ್ದ ಖದೀಮನ ಬಂಧಿಸಿದ್ದಾರೆ. ಸರಗಳ್ಳತನದ ಬಗ್ಗೆ ವಿಜಯನಗರ ಪೊಲೀಸರು ಠಾಣೆಯಲ್ಲಿ ಕಳೆದ ಅಕ್ಟೋಬರ್​ ತಿಂಗಳಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳಾದ ಭಾನು ಇರಾನಿ ಮತ್ತು ಅವುನು ಇರಾನಿ ಎಂಬುವರನ್ನು ಮೊದಲು ಪೋಲಿಸರು ಬಂಧನಕ್ಕೊಳಪಡಿಸಿದ್ದರು. ಆಗ ಮುಖ್ಯ ಆರೋಪಿಯ ಹೆಸರು ಬಾಯ್ಬಿಟ್ಟಿದ್ದಾರೆ. ಪೊಲೀಸರು ಜನವರಿ 3ರಂದು ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ರಿಯಾಜ್ ‌ಅಹಮದ್​ನನ್ನ ಧಾರವಾಡದಲ್ಲಿ ಪತ್ತೆ ಮಾಡಿದ್ದರು.

ಆರೋಪಿ ತಿಳಿಸಿರುವ ಪ್ರಕಾರ, ವಿಜಯನಗರ ಪೊಲೀಸ್ ಠಾಣೆಯ ಎರಡು ಸರ ಕಳ್ಳತನ ಹಾಗೂ ಮನೆ ಕಳ್ಳತನ ಮಾಗಡಿ ರಸ್ತೆ, ಬಸವೇಶ್ವರನಗರ ಪೊಲೀಸ್ ‌ಠಾಣಾ ವ್ಯಾಪ್ತಿಯಲ್ಲಿನ ಮನೆ ಕಳ್ಳತನ ಪ್ರಕರಣ ಸೇರಿ ಒಟ್ಟು ಆರು ಕೇಸ್​ನ ರೂ 12 ಲಕ್ಷ ರೂ. ಮೌಲ್ಯದ 275 ಗ್ರಾಂ ತೂಕದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ ಎಂದು ವಿಜಯನಗರ ಪೊಲೀಸ್ ಠಾಣೆಯ ಎಸ್​ಐ ಆರ್‌.ಸತೀಶ್‌ ಕುಮಾರ್ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.