ETV Bharat / state

ವಿಧಾನ ಪರಿಷತ್ ಕಲಾಪ ಆರಂಭ: ಧರ್ಮೇಗೌಡ ಸೇರಿದಂತೆ ಅಗಲಿದ ಗಣ್ಯರಿಗೆ ಸಂತಾಪ

author img

By

Published : Jan 28, 2021, 2:52 PM IST

ವಿಧಾನ ಪರಿಷತ್ ಕಲಾಪ ಆರಂಭಗೊಂಡಿದ್ದು, ಕಲಾಪದಲ್ಲಿ ಉಪ ಸಭಾಪತಿ ಧರ್ಮೇಗೌಡ ಸೇರಿದಂತೆ ಅಗಲಿದ ಗಣ್ಯರಿಗೆ ಸದಸ್ಯರು ಸಂತಾಪ ಸೂಚಿಸಿದರು.

Vidhan Parishad session, Vidhan Parishad session started, Vidhan Parishad session started in Bangalore, Condolences, ವಿಧಾನ ಪರಿಷತ್ ಕಲಾಪ ಆರಂಭ, ಬೆಂಗಳೂರಿನಲ್ಲಿ ವಿಧಾನ ಪರಿಷತ್ ಕಲಾಪ ಆರಂಭ, ವಿಧಾನ ಪರಿಷತ್ ಕಲಾಪ ಆರಂಭ ಸುದ್ದಿ, ಅಗಲಿದ ಗಣ್ಯರಿಗೆ ಸಂತಾಪ ಸೂಚಿಸುವ ಮೂಲಕ ವಿಧಾನ ಪರಿಷತ್ ಕಲಾಪ ಆರಂಭ,
ವಿಧಾನ ಪರಿಷತ್ ಕಲಾಪ ಆರಂಭ

ಬೆಂಗಳೂರು: ವಿಧಾನ ಮಂಡಲದ ಜಂಟಿ ಅಧಿವೇಶನವನ್ನುದ್ದೇಶಿ ರಾಜ್ಯಪಾಲ ವಜುಭಾಯ್ ವಾಲಾ ಅವರ ಭಾಷಣದ ಪ್ರತಿಯನ್ನು ವಿಧಾನ ಪರಿಷತ್​ನಲ್ಲಿ ಮಂಡಿಸಲಾಯಿತು. ನಂತರ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಿ ಕಲಾಪವನ್ನು ಆರಂಭಿಸಿದರು.

ಜಂಟಿ ಅಧಿವೇಶನದ ಮೊದಲ ದಿನದ ವಿಧಾನ ಪರಿಷತ್ ಕಲಾಪ ಮಧ್ಯಾಹ್ನ 12.45 ಕ್ಕೆ ವಂದೇ ಮಾತರಂ ಗೀತೆಯೊಂದಿಗೆ ಆರಂಭಗೊಂಡಿತು. ವಿಧಾನ ಪರಿಷತ್ ಕಾರ್ಯದರ್ಶಿ ಮಹಾಲಕ್ಷ್ಮಿ ಅವರು ರಾಜ್ಯಪಾಲರ ಭಾಷಣದ ಪ್ರತಿಯನ್ನು ಸದನದ ಮುಂದೆ ಮಂಡಿಸಿದರು.

ನಂತರ ಸಂತಾಪ ಸೂಚನೆ ಕಲಾಪವನ್ನು ಕೈಗೆತ್ತಿಕೊಳ್ಳಲಾಯಿತು. ಉಪಸಭಾಪತಿ ಧರ್ಮೇಗೌಡ, ಮಾಜಿ ಸಚಿವರಾದ ಜೈವಂತ ಪ್ರೇಮಾನಂದ ಸುಬ್ರಾಯ, ರೇಣುಕಾ ರಾಜೇಂದ್ರನ್, ಮಲ್ಲಪ್ಪ ಚನ್ನಬಸಪ್ಪ ಮನಗೂಳಿ, ವಿದ್ವಾಂಸ ಡಾ.ಬನ್ನಂಜೆ ಗೋವಿಂದಾಚಾರ್ಯ, ಪ್ರೊ. ರೊದ್ದಂ ನರಸಿಂಹ, ಉದ್ಯಮಿ ಆರ್.ಎನ್ ಶೆಟ್ಟಿ, ಕೃಷಿ ಸಾಧಕಿ ಮಹಾದೇಚಿ ಅಣ್ಣಾರಾವ್ ವಣದೆ, ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಹರ್ಷಾನಂದ ಮಹಾರಾಜ್, ಹಿಂದೂಸ್ಥಾನಿ ಸಂಗೀತಗಾರ ಗುಲಾಮ್ ಮುಸ್ತಫಾ ಖಾನ್ ನಿಧನಕ್ಕೆ ಸಭಾಪತಿ ಸಂತಾಪ ಸೂಚನೆ ನಿರ್ಣಯವನ್ನು ಮಂಡಿಸಿದರು.

ಸಭಾಪತಿಗಳು ಮಂಡಿಸಿದ ಸಂತಾಪ ಸೂಚಕ ನಿರ್ಣಯಕ್ಕೆ ಸಹಮತ ವ್ಯಕ್ತಪಡಿಸಿ ಆಡಳಿತ ಪಕ್ಷ ಬಿಜೆಪಿ ಪರವಾಗಿ ಮಾತನಾಡಿದ ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ, ಧರ್ಮೇಗೌಡರು ಸರ್ವ ಶ್ರೇಷ್ಠ ಸಹಕಾರಿ ಧುರೀಣರಾಗಿದ್ದರು. ಮಂಡಲ ಪಂಚಾಯಿತಿಯಿಂದ ಉಪಸಭಾಪತಿ ಸ್ಥಾನದವರೆಗೆ ಬಂದಿದ್ದರು. ಸಹಕಾರಿ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದರು. ಧರ್ಮೇಗೌಡರು ಧರ್ಮರಾಯನಂತೆ ಸಮಾಜದಲ್ಲಿ ಬದುಕಿದ್ದರು ಎಂದು ಸ್ಮರಿಸಿದರು. ಅಗಲಿದ ಎಲ್ಲ ಗಣ್ಯರ ಸಂತಾಪ ಸೂಚಕ ನಿರ್ಣಯಕ್ಕೆ ಸಹಮತ ವ್ಯಕ್ತಪಡಿಸಿದರು‌.

ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಮಾತನಾಡಿ, ಸಂತಾಪ ಸೂಚಕ ನಿರ್ಣಯಕ್ಕೆ ಸಹಮತ ವ್ಯಕ್ತಪಡಿಸಿದರು. ಧರ್ಮೇಗೌಡರ ಅಗಲಿಕೆಯಿಂದ ಅನಾಥ ಪ್ರಜ್ಞೆ ಕಾಡುತ್ತಿದೆ. ಪ್ರತಿ ಅಧಿವೇಶನದಲ್ಲೂ ನನ್ನ ಪಕ್ಕದಲ್ಲೇ ಇದ್ದು ನನ್ನ ಉಭಯ ಕುಶಲೋಪರಿ ವಿಚಾರಿಸುತ್ತಿದ್ದರು. ಈಗ ಅವರಿಲ್ಲ ಎನ್ನುವ ನೋವು ಕಾಡುತ್ತಿದೆ. ಇಷ್ಟು ಬೇಗ ಅಗಲುತ್ತಾರೆ ಎಂದು ಕನಸು ಮನಸಿನಲ್ಲೂ ಎಣಿಸಿರಲಿಲ್ಲ ಎಂದರು.

ಧರ್ಮೇಗೌಡರ ಅಗಲಿಕೆಯಿಂದ ಸದನಕ್ಕೆ ತುಂಬಲಾರದ ನಷ್ಟವಾಗಿದೆ. ರಾಜ್ಯ, ರಾಷ್ಟ್ರ ಮಟ್ಟದ ಸಹಕಾರಿ ಕ್ಷೇತ್ರದಲ್ಲಿ ಕೆಲಸ ಮಾಡಿದ್ದ ಸಹಕಾರಿ ಧುರೀಣರಾಗಿದ್ದರು. ನಾವು ಸಹಕಾರ ರತ್ನವನ್ನು ಕಳೆದುಕೊಂಡಿದ್ದೇವೆ ಎಂದು ಧರ್ಮೇಗೌಡರ ಸಾಧನೆಯನ್ನು ಅವರೊಂದಿಗಿನ ಒಡನಾಟವನ್ನು ಸ್ಮರಿಸಿದರು.

ಜೆಡಿಎಸ್ ಶಾಸಕ ಮನಗೂಳಿ ನಿಧನಕ್ಕೆ ಎಸ್.ಆರ್. ಪಾಟೀಲ್ ಸಂತಾಪ ಸೂಚಿಸಿದರು. ಕೃಷಿ, ನೀರಾವರಿ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಿದರು. ನಂತರ ಅಗಲಿದ ಎಲ್ಲ ಗಣ್ಯರ ಸಂತಾಪ ಸೂಚನೆಗೆ ಸಹಮತ ವ್ಯಕ್ತಪಡಿಸಿದರು.

ಜೆಡಿಎಸ್ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ಸಂತಾಪ ಸೂಚನೆ ನಿರ್ಣಯಕ್ಕೆ ಸಹಮತ ವ್ಯಕ್ತಪಡಿಸಿದರು. ಹುಟ್ಟು-ಸಾವಿನ ನಡವೆ ಏನು ಮಾಡಿದರು ಎನ್ನುವುದು ಇತಿಹಾಸದಲ್ಲಿ ಉಳಿದುಕೊಳ್ಳಲಿದೆ. ಅದಕ್ಕೆ ಧರ್ಮೇಗೌಡರು ಸಾಕ್ಷಿ. ಮೌಲ್ಯಾಧಾರಿತ ರಾಜಕಾರಣ ಮಾಡಿದ್ದರು. ಸಹಕಾರಿ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿದ್ದರು. ಶ್ರೇಷ್ಠ ಕೃಷಿಕರು. ಸಾವು ಎಲ್ಲರಿಗೂ ನಿಶ್ಚಿತ. ಆದರೆ ಇಷ್ಟು ಬೇಗ ಅಗುಲುವಂತ ವಯಸ್ಸಾಗಿರಲಿಲ್ಲ. ಸಹೋದರರಿಬ್ಬರು ಒಟ್ಟಿಗೆ ಸದನದಲ್ಲಿ ಕಂಡಿದ್ದು ಧರ್ಮೇಗೌಡ, ಬೋಜೇಗೌಡ ಮಾತ್ರ ಎನಿಸಲಿದೆ. ಮಾದರಿ ಕುಟುಂಬ ಅವರದ್ದಾಗಿತ್ತು. ಅಪಾರ ಪರಿಸರ ಪ್ರೇಮಿಯೂ ಆಗಿದ್ದರು. ಅವರನ್ನು ಕಳೆದುಕೊಂಡು ಸದನ ಬಡವಾಗಿದೆ ಎಂದು ಅಗಲಿದ ಎಲ್ಲ ಗಣ್ಯರಿಗೂ ಸಂತಾಪ ಸೂಚಕ ನಿರ್ಣಯಕ್ಕೆ ಸಹಮತ ವ್ಯಕ್ತಪಡಿಸಿದರು.

ನಂತರ ಮೃತರ ಆತ್ಮಕ್ಕೆ ಸದ್ಗತಿ ಕೋರಿ ಅವರ ಅಗಲಿಕೆ ನೋವನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗಕ್ಕೆ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸಿ ಒಂದು ನಿಮಿಷ ಮೌನ ಆಚರಿಸಲಾಯಿತು.

ಸದನದಲ್ಲಿ ಪ್ರಸ್ತಾಪಿಸಿದ ಸಂತಾಪ ಸೂಚನೆ ನಿರ್ಣಯವನ್ನು ಮೃತ ಗಣ್ಯರ ಕುಟುಂಬ ವರ್ಗದವರಿಗೆ ಕಳುಹಿಸಿಕೊಡಲಾಗುವುದು ಎಂದು ತಿಳಿಸಿದ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಕಲಾಪವನ್ನು ನಾಳೆ ಬೆಳಗ್ಗೆ 11 ಗಂಟೆವರೆಗೆ ಮುಂದೂಡಿಕೆ ಮಾಡಿದರು.

ಸದನದಲ್ಲಿ ಕಣ್ಣೀರು...

ಧರ್ಮೇಗೌಡರ ಸಹೋದರ ಬೋಜೇಗೌಡರು ಸದನದಲ್ಲಿ ಕಣ್ಣೀರು ಹಾಕಿದರು.‌ ಸಹೋದರನ ‌ನಿಧನಕ್ಕೆ ಸದನದಲ್ಲಿ ಸಂತಾಪ ಸೂಚನೆ ಮಾಡಿ ನಾಯಕರು ಮಾತನಾಡುತ್ತಿದ್ದ ವೇಳೆ ಬೋಜೇಗೌಡರ ಕಣ್ಣಾಲೆಗಳು ಒದ್ದೆಯಾಗಿದ್ದವು. ಕಣ್ಣಂಚಿನಲ್ಲಿ ಸುರಿಯುತ್ತಿದ್ದ ನೀರನ್ನು ಕರವಸ್ತ್ರದಿಂದ ಒರೆಸಿಕೊಳ್ಳುತ್ತಿದ್ದ ದೃಶ್ಯ ಮನ ಕಲಕುವಂತಿತ್ತು.

ಮುದ್ರಣ ದೋಷ...

ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಹರ್ಷಾನಂದ ಮಹಾರಾಜ್ ಅವರು 1958 ರಲ್ಲಿ ಜನಿಸಿದ್ದರು. ಆದರೆ 1954 ರಲ್ಲಿ ಬಸವನಗುಡಿಯ ರಾಮಕೃಷ್ಣ ಮಠದಲ್ಲಿ ಆಧ್ಯಾತ್ಮ ಜೀವನ ಆರಂಭಿಸಿದ್ದರು ಎಂದು ಸಂತಾಪ ಸೂಚನೆಯಲ್ಲಿ ತಪ್ಪಾಗಿ ಮುದ್ರಿತವಾಗಿದೆ. ಅದನ್ನು ಸರಿಪಡಿಸಿ ಎಂದು ಎಸ್.ಆರ್.ಪಟೀಲ್ ಮನವಿ ಮಾಡಿದರು.

ಬೆಂಗಳೂರು: ವಿಧಾನ ಮಂಡಲದ ಜಂಟಿ ಅಧಿವೇಶನವನ್ನುದ್ದೇಶಿ ರಾಜ್ಯಪಾಲ ವಜುಭಾಯ್ ವಾಲಾ ಅವರ ಭಾಷಣದ ಪ್ರತಿಯನ್ನು ವಿಧಾನ ಪರಿಷತ್​ನಲ್ಲಿ ಮಂಡಿಸಲಾಯಿತು. ನಂತರ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಿ ಕಲಾಪವನ್ನು ಆರಂಭಿಸಿದರು.

ಜಂಟಿ ಅಧಿವೇಶನದ ಮೊದಲ ದಿನದ ವಿಧಾನ ಪರಿಷತ್ ಕಲಾಪ ಮಧ್ಯಾಹ್ನ 12.45 ಕ್ಕೆ ವಂದೇ ಮಾತರಂ ಗೀತೆಯೊಂದಿಗೆ ಆರಂಭಗೊಂಡಿತು. ವಿಧಾನ ಪರಿಷತ್ ಕಾರ್ಯದರ್ಶಿ ಮಹಾಲಕ್ಷ್ಮಿ ಅವರು ರಾಜ್ಯಪಾಲರ ಭಾಷಣದ ಪ್ರತಿಯನ್ನು ಸದನದ ಮುಂದೆ ಮಂಡಿಸಿದರು.

ನಂತರ ಸಂತಾಪ ಸೂಚನೆ ಕಲಾಪವನ್ನು ಕೈಗೆತ್ತಿಕೊಳ್ಳಲಾಯಿತು. ಉಪಸಭಾಪತಿ ಧರ್ಮೇಗೌಡ, ಮಾಜಿ ಸಚಿವರಾದ ಜೈವಂತ ಪ್ರೇಮಾನಂದ ಸುಬ್ರಾಯ, ರೇಣುಕಾ ರಾಜೇಂದ್ರನ್, ಮಲ್ಲಪ್ಪ ಚನ್ನಬಸಪ್ಪ ಮನಗೂಳಿ, ವಿದ್ವಾಂಸ ಡಾ.ಬನ್ನಂಜೆ ಗೋವಿಂದಾಚಾರ್ಯ, ಪ್ರೊ. ರೊದ್ದಂ ನರಸಿಂಹ, ಉದ್ಯಮಿ ಆರ್.ಎನ್ ಶೆಟ್ಟಿ, ಕೃಷಿ ಸಾಧಕಿ ಮಹಾದೇಚಿ ಅಣ್ಣಾರಾವ್ ವಣದೆ, ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಹರ್ಷಾನಂದ ಮಹಾರಾಜ್, ಹಿಂದೂಸ್ಥಾನಿ ಸಂಗೀತಗಾರ ಗುಲಾಮ್ ಮುಸ್ತಫಾ ಖಾನ್ ನಿಧನಕ್ಕೆ ಸಭಾಪತಿ ಸಂತಾಪ ಸೂಚನೆ ನಿರ್ಣಯವನ್ನು ಮಂಡಿಸಿದರು.

ಸಭಾಪತಿಗಳು ಮಂಡಿಸಿದ ಸಂತಾಪ ಸೂಚಕ ನಿರ್ಣಯಕ್ಕೆ ಸಹಮತ ವ್ಯಕ್ತಪಡಿಸಿ ಆಡಳಿತ ಪಕ್ಷ ಬಿಜೆಪಿ ಪರವಾಗಿ ಮಾತನಾಡಿದ ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ, ಧರ್ಮೇಗೌಡರು ಸರ್ವ ಶ್ರೇಷ್ಠ ಸಹಕಾರಿ ಧುರೀಣರಾಗಿದ್ದರು. ಮಂಡಲ ಪಂಚಾಯಿತಿಯಿಂದ ಉಪಸಭಾಪತಿ ಸ್ಥಾನದವರೆಗೆ ಬಂದಿದ್ದರು. ಸಹಕಾರಿ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದರು. ಧರ್ಮೇಗೌಡರು ಧರ್ಮರಾಯನಂತೆ ಸಮಾಜದಲ್ಲಿ ಬದುಕಿದ್ದರು ಎಂದು ಸ್ಮರಿಸಿದರು. ಅಗಲಿದ ಎಲ್ಲ ಗಣ್ಯರ ಸಂತಾಪ ಸೂಚಕ ನಿರ್ಣಯಕ್ಕೆ ಸಹಮತ ವ್ಯಕ್ತಪಡಿಸಿದರು‌.

ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಮಾತನಾಡಿ, ಸಂತಾಪ ಸೂಚಕ ನಿರ್ಣಯಕ್ಕೆ ಸಹಮತ ವ್ಯಕ್ತಪಡಿಸಿದರು. ಧರ್ಮೇಗೌಡರ ಅಗಲಿಕೆಯಿಂದ ಅನಾಥ ಪ್ರಜ್ಞೆ ಕಾಡುತ್ತಿದೆ. ಪ್ರತಿ ಅಧಿವೇಶನದಲ್ಲೂ ನನ್ನ ಪಕ್ಕದಲ್ಲೇ ಇದ್ದು ನನ್ನ ಉಭಯ ಕುಶಲೋಪರಿ ವಿಚಾರಿಸುತ್ತಿದ್ದರು. ಈಗ ಅವರಿಲ್ಲ ಎನ್ನುವ ನೋವು ಕಾಡುತ್ತಿದೆ. ಇಷ್ಟು ಬೇಗ ಅಗಲುತ್ತಾರೆ ಎಂದು ಕನಸು ಮನಸಿನಲ್ಲೂ ಎಣಿಸಿರಲಿಲ್ಲ ಎಂದರು.

ಧರ್ಮೇಗೌಡರ ಅಗಲಿಕೆಯಿಂದ ಸದನಕ್ಕೆ ತುಂಬಲಾರದ ನಷ್ಟವಾಗಿದೆ. ರಾಜ್ಯ, ರಾಷ್ಟ್ರ ಮಟ್ಟದ ಸಹಕಾರಿ ಕ್ಷೇತ್ರದಲ್ಲಿ ಕೆಲಸ ಮಾಡಿದ್ದ ಸಹಕಾರಿ ಧುರೀಣರಾಗಿದ್ದರು. ನಾವು ಸಹಕಾರ ರತ್ನವನ್ನು ಕಳೆದುಕೊಂಡಿದ್ದೇವೆ ಎಂದು ಧರ್ಮೇಗೌಡರ ಸಾಧನೆಯನ್ನು ಅವರೊಂದಿಗಿನ ಒಡನಾಟವನ್ನು ಸ್ಮರಿಸಿದರು.

ಜೆಡಿಎಸ್ ಶಾಸಕ ಮನಗೂಳಿ ನಿಧನಕ್ಕೆ ಎಸ್.ಆರ್. ಪಾಟೀಲ್ ಸಂತಾಪ ಸೂಚಿಸಿದರು. ಕೃಷಿ, ನೀರಾವರಿ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಿದರು. ನಂತರ ಅಗಲಿದ ಎಲ್ಲ ಗಣ್ಯರ ಸಂತಾಪ ಸೂಚನೆಗೆ ಸಹಮತ ವ್ಯಕ್ತಪಡಿಸಿದರು.

ಜೆಡಿಎಸ್ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ಸಂತಾಪ ಸೂಚನೆ ನಿರ್ಣಯಕ್ಕೆ ಸಹಮತ ವ್ಯಕ್ತಪಡಿಸಿದರು. ಹುಟ್ಟು-ಸಾವಿನ ನಡವೆ ಏನು ಮಾಡಿದರು ಎನ್ನುವುದು ಇತಿಹಾಸದಲ್ಲಿ ಉಳಿದುಕೊಳ್ಳಲಿದೆ. ಅದಕ್ಕೆ ಧರ್ಮೇಗೌಡರು ಸಾಕ್ಷಿ. ಮೌಲ್ಯಾಧಾರಿತ ರಾಜಕಾರಣ ಮಾಡಿದ್ದರು. ಸಹಕಾರಿ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿದ್ದರು. ಶ್ರೇಷ್ಠ ಕೃಷಿಕರು. ಸಾವು ಎಲ್ಲರಿಗೂ ನಿಶ್ಚಿತ. ಆದರೆ ಇಷ್ಟು ಬೇಗ ಅಗುಲುವಂತ ವಯಸ್ಸಾಗಿರಲಿಲ್ಲ. ಸಹೋದರರಿಬ್ಬರು ಒಟ್ಟಿಗೆ ಸದನದಲ್ಲಿ ಕಂಡಿದ್ದು ಧರ್ಮೇಗೌಡ, ಬೋಜೇಗೌಡ ಮಾತ್ರ ಎನಿಸಲಿದೆ. ಮಾದರಿ ಕುಟುಂಬ ಅವರದ್ದಾಗಿತ್ತು. ಅಪಾರ ಪರಿಸರ ಪ್ರೇಮಿಯೂ ಆಗಿದ್ದರು. ಅವರನ್ನು ಕಳೆದುಕೊಂಡು ಸದನ ಬಡವಾಗಿದೆ ಎಂದು ಅಗಲಿದ ಎಲ್ಲ ಗಣ್ಯರಿಗೂ ಸಂತಾಪ ಸೂಚಕ ನಿರ್ಣಯಕ್ಕೆ ಸಹಮತ ವ್ಯಕ್ತಪಡಿಸಿದರು.

ನಂತರ ಮೃತರ ಆತ್ಮಕ್ಕೆ ಸದ್ಗತಿ ಕೋರಿ ಅವರ ಅಗಲಿಕೆ ನೋವನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗಕ್ಕೆ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸಿ ಒಂದು ನಿಮಿಷ ಮೌನ ಆಚರಿಸಲಾಯಿತು.

ಸದನದಲ್ಲಿ ಪ್ರಸ್ತಾಪಿಸಿದ ಸಂತಾಪ ಸೂಚನೆ ನಿರ್ಣಯವನ್ನು ಮೃತ ಗಣ್ಯರ ಕುಟುಂಬ ವರ್ಗದವರಿಗೆ ಕಳುಹಿಸಿಕೊಡಲಾಗುವುದು ಎಂದು ತಿಳಿಸಿದ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಕಲಾಪವನ್ನು ನಾಳೆ ಬೆಳಗ್ಗೆ 11 ಗಂಟೆವರೆಗೆ ಮುಂದೂಡಿಕೆ ಮಾಡಿದರು.

ಸದನದಲ್ಲಿ ಕಣ್ಣೀರು...

ಧರ್ಮೇಗೌಡರ ಸಹೋದರ ಬೋಜೇಗೌಡರು ಸದನದಲ್ಲಿ ಕಣ್ಣೀರು ಹಾಕಿದರು.‌ ಸಹೋದರನ ‌ನಿಧನಕ್ಕೆ ಸದನದಲ್ಲಿ ಸಂತಾಪ ಸೂಚನೆ ಮಾಡಿ ನಾಯಕರು ಮಾತನಾಡುತ್ತಿದ್ದ ವೇಳೆ ಬೋಜೇಗೌಡರ ಕಣ್ಣಾಲೆಗಳು ಒದ್ದೆಯಾಗಿದ್ದವು. ಕಣ್ಣಂಚಿನಲ್ಲಿ ಸುರಿಯುತ್ತಿದ್ದ ನೀರನ್ನು ಕರವಸ್ತ್ರದಿಂದ ಒರೆಸಿಕೊಳ್ಳುತ್ತಿದ್ದ ದೃಶ್ಯ ಮನ ಕಲಕುವಂತಿತ್ತು.

ಮುದ್ರಣ ದೋಷ...

ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಹರ್ಷಾನಂದ ಮಹಾರಾಜ್ ಅವರು 1958 ರಲ್ಲಿ ಜನಿಸಿದ್ದರು. ಆದರೆ 1954 ರಲ್ಲಿ ಬಸವನಗುಡಿಯ ರಾಮಕೃಷ್ಣ ಮಠದಲ್ಲಿ ಆಧ್ಯಾತ್ಮ ಜೀವನ ಆರಂಭಿಸಿದ್ದರು ಎಂದು ಸಂತಾಪ ಸೂಚನೆಯಲ್ಲಿ ತಪ್ಪಾಗಿ ಮುದ್ರಿತವಾಗಿದೆ. ಅದನ್ನು ಸರಿಪಡಿಸಿ ಎಂದು ಎಸ್.ಆರ್.ಪಟೀಲ್ ಮನವಿ ಮಾಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.