ETV Bharat / state

ಬಾಯಿ ಬಿಡ್ರೀ, ಬಾಲ ಮುದುರಿಕೊಂಡು ಕೂತವ್ರೇ, ಬನ್ರೀ ಈಗ ರಸ್ತೆಗೆ.. ಮಾತಾಡಿ, ಸರ್ಕಾರದ ವಿರುದ್ಧ ನೋಡೋಣ.. ವಾಟಾಳ್‌ ಕಿಡಿ..

author img

By

Published : Jan 16, 2022, 5:11 PM IST

ಬಿಬಿಎಂಪಿ ವ್ಯಾಪ್ತಿಯ ಪ್ರತಿ ವಾರ್ಡಿನಲ್ಲಿ 3 ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿ, ಸರಿಯಾದ ಕ್ರಮದಲ್ಲಿ ಔಷಧಿ ಪೂರೈಸಬೇಕು. ಸಮಯಕ್ಕೆ ಸರಿಯಾಗಿ ಕೋವಿಡ್​ ಲಸಿಕೆ ಹಾಕುವ ಮೂಲಕ ಜನರ ಆರೋಗ್ಯದ ಮೇಲೆ ನಿಗಾ ಇಡಬೇಕು. ಅದನ್ನು ಬಿಟ್ಟು ಈ ಕರ್ಫ್ಯೂ ಯಾಕೆ, ಸರ್ಕಾರ ಮತ್ತೊಮ್ಮೆ ಈ ಕುರಿತಂತೆ ಪುನರ್​ ಪರಿಶೀಲಿಸಬೇಕೆಂದು ಆಗ್ರಹಿಸಿದರು..

Vatal Nagaraj protests against weekend curfew
ವಾರಾಂತ್ಯ ಕರ್ಫ್ಯೂ ಖಂಡಿಸಿ ವಾಟಾಳ್ ನಾಗರಾಜ್ ಪ್ರತಿಭಟನೆ

ಬೆಂಗಳೂರು : ವಾರಾಂತ್ಯ ಕರ್ಫ್ಯೂ ವಿರೋಧಿಸಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿದರು. ನಗರದಲ್ಲಿರುವ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟಿಸಿದ ಅವರು, ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದರು.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಾರಿಗಾಗಿ ಮತ್ತು ಯಾವ ಕಾರಣಕ್ಕೆ ಈ ನೈಟ್​ ಕರ್ಫ್ಯೂ ಜಾರಿ ಮಾಡಲಾಗಿದೆ. ಎರಡು ದಿನ ಎಲ್ಲಾ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿದರೆ ಬಡವರ ಗತಿಯೇನು, ದಿನನಿತ್ಯ ಸಂಪಾದನೆ ಮಾಡಿ ಜೀವನ ನಡೆಸುವವರ ಗತಿಯೇನು, ಬೀದಿ ಬದಿಯ ವ್ಯಾಪಾರಿಗಳ ಪರಿಸ್ಥಿತಿ ಏನಾಗುತ್ತದೆ ಎಂಬುದನ್ನು ಅರಿತು ಸರ್ಕಾರ ಗಂಭೀರವಾದ ನಿರ್ಧಾರ ಕೈಗೊಳ್ಳಬೇಕು ಎಂದರು.

ವಾರಾಂತ್ಯ ಕರ್ಫ್ಯೂ ವಿರೋಧಿಸಿ ವಾಟಾಳ್ ನಾಗರಾಜ್ ಪ್ರತಿಭಟನೆ

ನೈಟ್​​ ಕರ್ಫ್ಯೂ ಬಗ್ಗೆ ಪುನರ್​ ಪರಿಶೀಲನೆ ಅಗತ್ಯ : ಕೋವಿಡ್ ತಡೆಗಟ್ಟುವ ಮೊದಲು ಆಸ್ಪತ್ರೆಗಳಲ್ಲಿ ನಡೆಯುತ್ತಿರುವ ದರೋಡೆ ನಿಲ್ಲಿಸಿ. ಆಸ್ಪತ್ರೆಯಲ್ಲಿ ಸೋಂಕಿತರಿಗೆ ಸರಿಯಾದ ವ್ಯವಸ್ಥೆ ಮಾಡಬೇಕು. ಬಿಬಿಎಂಪಿ ವ್ಯಾಪ್ತಿಯ ಪ್ರತಿ ವಾರ್ಡಿನಲ್ಲಿ 3 ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿ, ಸರಿಯಾದ ಕ್ರಮದಲ್ಲಿ ಔಷಧಿ ಪೂರೈಸಬೇಕು. ಸಮಯಕ್ಕೆ ಸರಿಯಾಗಿ ಕೋವಿಡ್​ ಲಸಿಕೆ ಹಾಕುವ ಮೂಲಕ ಜನರ ಆರೋಗ್ಯದ ಮೇಲೆ ನಿಗಾ ಇಡಬೇಕು. ಅದನ್ನು ಬಿಟ್ಟು ಈ ಕರ್ಫ್ಯೂ ಯಾಕೆ, ಸರ್ಕಾರ ಮತ್ತೊಮ್ಮೆ ಈ ಕುರಿತಂತೆ ಪುನರ್​ ಪರಿಶೀಲಿಸಬೇಕೆಂದು ಆಗ್ರಹಿಸಿದರು.

ಶ್ರೀಮಂತರ ಸರ್ಕಾರ : ಆಡಳಿತ ಪಕ್ಷ ಜಾರಿಗೆ ತರುವ ನಿಯಮಗಳನ್ನು ವಿರೋಧ ಪಕ್ಷ ಪ್ರಶ್ನೆ ಮಾಡಬೇಕು. ಆದರೆ, ವಿಪಕ್ಷಗಳು ಸತ್ತು ಹೋಗಿವೆ. ಕಾಂಗ್ರೆಸ್​, ಜೆಡಿಎಸ್​​ ಪಕ್ಷದವರು ಮೌನವಹಿಸಿದ್ದು, ಬಿಜೆಪಿ ನಾಟಕವಾಡುತ್ತಿದೆ. ರಾಜ್ಯದ ಜನತೆ ಕರ್ಫ್ಯೂಯಿಂದ ಸಾಕಷ್ಟು ಸಂಕಷ್ಟ ಎದುರಿಸುತ್ತಿದ್ದಾರೆ. ತರಕಾರಿ ವ್ಯಾಪಾರಿಗಳ ನೋವು ತಾರಕಕ್ಕೇರಿದೆ. ಇದು ಶ್ರೀಮಂತರ ಸರ್ಕಾರ ಆಗಿದೆ ಎಂದು ಕಿಡಿಕಾರಿದರು.

ವಾರಾಂತ್ಯ ಕರ್ಫ್ಯೂ ವಿರೋಧಿಸಿ ವಾಟಾಳ್ ನಾಗರಾಜ್ ಪ್ರತಿಭಟನೆ

ಸಚಿವ ಸುಧಾಕರ್​ ವಿರುದ್ಧ ಕಿಡಿ : ಆರೋಗ್ಯ ಸಚಿವರ ಬಗ್ಗೆ ಗೌರವವಿದೆ. ಆದರೆ, ಅವರ ನಡೆ-ನುಡಿ ನೋಡಿದರೆ ಹಿಟ್ಲರ್ ತರ ಕಾಣುತ್ತಿದೆ. ಆರೋಗ್ಯ ಸಚಿವರು ಹೇಳಿದ್ರೆ ಮನೆಗೆ ಹೋಗಬೇಕು, ಅವರ ಹೇಳಿದ್ರೆ ಲಾಕ್​ಡೌನ್​, ​​ಸಚಿವರು ಹೇಳಿದ್ರೆ ಕರ್ಫ್ಯೂ ಜಾರಿಯಾಗುತ್ತದೆ. ರಾಜ್ಯದಲ್ಲಿ ಬೇರೆ ಯಾರು ಅಧಿಕಾರದಲ್ಲಿ ಇಲ್ವಾ?, ಸರ್ಕಾರದಲ್ಲಿ ಸಂಪುಟ ಇಲ್ಲವಾ?ಅಧಿಕಾರಿಗಳು ಏನು ಮಾಡುತ್ತಿದ್ದಾರೆ. ಬಡವರ ಜೀವನಕ್ಕೆ ಸಂಚಕಾರ ಮಾಡಬೇಡಿ. ಹಾಗಾಗಿ, ಯೋಚನೆ ಮಾಡಿ ಸರಿಯಾದ ನಿರ್ಧಾರ ಕೈಗೊಳ್ಳಿ ಎಂದರು.

ಕನ್ನಡಪರ ಸಂಘಟನೆಗಳು ಹೋರಾಟ ಮಾಡಿದಾಗ ಹೋಟೆಲ್​​, ಬಾರ್​​ಗಳು, ಸಿನಿಮಾದವರು ನಮಗೆ ಬೆಂಬಲ ಕೊಡುತ್ತಿರಲಿಲ್ಲ. ಇದೀಗ ಸರ್ಕಾರ ಹೇಳಿದ ಕೂಡಲೇ ಸಿನಿಮಾದವರೂ, ಹೋಟೆಲ್​​ನವರು, ಬಾರ್​​ ಮಾಲೀಕರು ಬಾಲ ಮುದುರಿಕೊಂಡು ಕುಳಿತುಕೊಂಡಿದ್ದಾರೆ. ಧೈರ್ಯ ಇದ್ದರೆ ಬೀದಿಗೆ ಬರಲಿ ನೋಡೋಣ ಎಂದು ಸವಾಲು ಹಾಕಿದರು.

ಸಾರಿಗೆ ಬಸ್​​ಗಳ ವಿರುದ್ಧ ಅಸಮಾಧಾನ : ಬಸ್ ಓಡಾಡುತ್ತಿವೆ, ವಿಮಾನ ಹಾರಾಡುತ್ತಿವೆ. ಅಲ್ಲೆಲ್ಲ ಸೋಂಕು ಹರಡುವುದಿಲ್ಲ ಅನಿಸುತ್ತದೆ. ಅದೇ ಬಡವರು, ಸಾಮಾನ್ಯರು ರಸ್ತೆಯಲ್ಲಿ ಓಡಾಡಿದರೆ ಕರ್ಫ್ಯೂ ನೆಪದಲ್ಲಿ ಜೈಲಿಗೆ ಹಾಕುತ್ತೀರಾ ಎಂದು ಸರ್ಕಾರದ ವಿರುದ್ಧ ಗುಡುಗಿದರು.

ಇದನ್ನೂ ಓದಿ: ಸಂಕ್ರಾಂತಿಗೆ ಕಾಯ್ದಿದ್ದೇ ಬಂತು, ಸಂಪುಟ ಪುನಾರಚನೆ ಆಗಲಿಲ್ಲ.. ಆಕಾಂಕ್ಷಿಗಳು 5 ರಾಜ್ಯ ಚುನಾವಣೆ ಮುಗಿಯುವವರೆಗೂ ಕಾಯಲೇಬೇಕು..

ಬೆಂಗಳೂರು : ವಾರಾಂತ್ಯ ಕರ್ಫ್ಯೂ ವಿರೋಧಿಸಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿದರು. ನಗರದಲ್ಲಿರುವ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟಿಸಿದ ಅವರು, ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದರು.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಾರಿಗಾಗಿ ಮತ್ತು ಯಾವ ಕಾರಣಕ್ಕೆ ಈ ನೈಟ್​ ಕರ್ಫ್ಯೂ ಜಾರಿ ಮಾಡಲಾಗಿದೆ. ಎರಡು ದಿನ ಎಲ್ಲಾ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿದರೆ ಬಡವರ ಗತಿಯೇನು, ದಿನನಿತ್ಯ ಸಂಪಾದನೆ ಮಾಡಿ ಜೀವನ ನಡೆಸುವವರ ಗತಿಯೇನು, ಬೀದಿ ಬದಿಯ ವ್ಯಾಪಾರಿಗಳ ಪರಿಸ್ಥಿತಿ ಏನಾಗುತ್ತದೆ ಎಂಬುದನ್ನು ಅರಿತು ಸರ್ಕಾರ ಗಂಭೀರವಾದ ನಿರ್ಧಾರ ಕೈಗೊಳ್ಳಬೇಕು ಎಂದರು.

ವಾರಾಂತ್ಯ ಕರ್ಫ್ಯೂ ವಿರೋಧಿಸಿ ವಾಟಾಳ್ ನಾಗರಾಜ್ ಪ್ರತಿಭಟನೆ

ನೈಟ್​​ ಕರ್ಫ್ಯೂ ಬಗ್ಗೆ ಪುನರ್​ ಪರಿಶೀಲನೆ ಅಗತ್ಯ : ಕೋವಿಡ್ ತಡೆಗಟ್ಟುವ ಮೊದಲು ಆಸ್ಪತ್ರೆಗಳಲ್ಲಿ ನಡೆಯುತ್ತಿರುವ ದರೋಡೆ ನಿಲ್ಲಿಸಿ. ಆಸ್ಪತ್ರೆಯಲ್ಲಿ ಸೋಂಕಿತರಿಗೆ ಸರಿಯಾದ ವ್ಯವಸ್ಥೆ ಮಾಡಬೇಕು. ಬಿಬಿಎಂಪಿ ವ್ಯಾಪ್ತಿಯ ಪ್ರತಿ ವಾರ್ಡಿನಲ್ಲಿ 3 ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿ, ಸರಿಯಾದ ಕ್ರಮದಲ್ಲಿ ಔಷಧಿ ಪೂರೈಸಬೇಕು. ಸಮಯಕ್ಕೆ ಸರಿಯಾಗಿ ಕೋವಿಡ್​ ಲಸಿಕೆ ಹಾಕುವ ಮೂಲಕ ಜನರ ಆರೋಗ್ಯದ ಮೇಲೆ ನಿಗಾ ಇಡಬೇಕು. ಅದನ್ನು ಬಿಟ್ಟು ಈ ಕರ್ಫ್ಯೂ ಯಾಕೆ, ಸರ್ಕಾರ ಮತ್ತೊಮ್ಮೆ ಈ ಕುರಿತಂತೆ ಪುನರ್​ ಪರಿಶೀಲಿಸಬೇಕೆಂದು ಆಗ್ರಹಿಸಿದರು.

ಶ್ರೀಮಂತರ ಸರ್ಕಾರ : ಆಡಳಿತ ಪಕ್ಷ ಜಾರಿಗೆ ತರುವ ನಿಯಮಗಳನ್ನು ವಿರೋಧ ಪಕ್ಷ ಪ್ರಶ್ನೆ ಮಾಡಬೇಕು. ಆದರೆ, ವಿಪಕ್ಷಗಳು ಸತ್ತು ಹೋಗಿವೆ. ಕಾಂಗ್ರೆಸ್​, ಜೆಡಿಎಸ್​​ ಪಕ್ಷದವರು ಮೌನವಹಿಸಿದ್ದು, ಬಿಜೆಪಿ ನಾಟಕವಾಡುತ್ತಿದೆ. ರಾಜ್ಯದ ಜನತೆ ಕರ್ಫ್ಯೂಯಿಂದ ಸಾಕಷ್ಟು ಸಂಕಷ್ಟ ಎದುರಿಸುತ್ತಿದ್ದಾರೆ. ತರಕಾರಿ ವ್ಯಾಪಾರಿಗಳ ನೋವು ತಾರಕಕ್ಕೇರಿದೆ. ಇದು ಶ್ರೀಮಂತರ ಸರ್ಕಾರ ಆಗಿದೆ ಎಂದು ಕಿಡಿಕಾರಿದರು.

ವಾರಾಂತ್ಯ ಕರ್ಫ್ಯೂ ವಿರೋಧಿಸಿ ವಾಟಾಳ್ ನಾಗರಾಜ್ ಪ್ರತಿಭಟನೆ

ಸಚಿವ ಸುಧಾಕರ್​ ವಿರುದ್ಧ ಕಿಡಿ : ಆರೋಗ್ಯ ಸಚಿವರ ಬಗ್ಗೆ ಗೌರವವಿದೆ. ಆದರೆ, ಅವರ ನಡೆ-ನುಡಿ ನೋಡಿದರೆ ಹಿಟ್ಲರ್ ತರ ಕಾಣುತ್ತಿದೆ. ಆರೋಗ್ಯ ಸಚಿವರು ಹೇಳಿದ್ರೆ ಮನೆಗೆ ಹೋಗಬೇಕು, ಅವರ ಹೇಳಿದ್ರೆ ಲಾಕ್​ಡೌನ್​, ​​ಸಚಿವರು ಹೇಳಿದ್ರೆ ಕರ್ಫ್ಯೂ ಜಾರಿಯಾಗುತ್ತದೆ. ರಾಜ್ಯದಲ್ಲಿ ಬೇರೆ ಯಾರು ಅಧಿಕಾರದಲ್ಲಿ ಇಲ್ವಾ?, ಸರ್ಕಾರದಲ್ಲಿ ಸಂಪುಟ ಇಲ್ಲವಾ?ಅಧಿಕಾರಿಗಳು ಏನು ಮಾಡುತ್ತಿದ್ದಾರೆ. ಬಡವರ ಜೀವನಕ್ಕೆ ಸಂಚಕಾರ ಮಾಡಬೇಡಿ. ಹಾಗಾಗಿ, ಯೋಚನೆ ಮಾಡಿ ಸರಿಯಾದ ನಿರ್ಧಾರ ಕೈಗೊಳ್ಳಿ ಎಂದರು.

ಕನ್ನಡಪರ ಸಂಘಟನೆಗಳು ಹೋರಾಟ ಮಾಡಿದಾಗ ಹೋಟೆಲ್​​, ಬಾರ್​​ಗಳು, ಸಿನಿಮಾದವರು ನಮಗೆ ಬೆಂಬಲ ಕೊಡುತ್ತಿರಲಿಲ್ಲ. ಇದೀಗ ಸರ್ಕಾರ ಹೇಳಿದ ಕೂಡಲೇ ಸಿನಿಮಾದವರೂ, ಹೋಟೆಲ್​​ನವರು, ಬಾರ್​​ ಮಾಲೀಕರು ಬಾಲ ಮುದುರಿಕೊಂಡು ಕುಳಿತುಕೊಂಡಿದ್ದಾರೆ. ಧೈರ್ಯ ಇದ್ದರೆ ಬೀದಿಗೆ ಬರಲಿ ನೋಡೋಣ ಎಂದು ಸವಾಲು ಹಾಕಿದರು.

ಸಾರಿಗೆ ಬಸ್​​ಗಳ ವಿರುದ್ಧ ಅಸಮಾಧಾನ : ಬಸ್ ಓಡಾಡುತ್ತಿವೆ, ವಿಮಾನ ಹಾರಾಡುತ್ತಿವೆ. ಅಲ್ಲೆಲ್ಲ ಸೋಂಕು ಹರಡುವುದಿಲ್ಲ ಅನಿಸುತ್ತದೆ. ಅದೇ ಬಡವರು, ಸಾಮಾನ್ಯರು ರಸ್ತೆಯಲ್ಲಿ ಓಡಾಡಿದರೆ ಕರ್ಫ್ಯೂ ನೆಪದಲ್ಲಿ ಜೈಲಿಗೆ ಹಾಕುತ್ತೀರಾ ಎಂದು ಸರ್ಕಾರದ ವಿರುದ್ಧ ಗುಡುಗಿದರು.

ಇದನ್ನೂ ಓದಿ: ಸಂಕ್ರಾಂತಿಗೆ ಕಾಯ್ದಿದ್ದೇ ಬಂತು, ಸಂಪುಟ ಪುನಾರಚನೆ ಆಗಲಿಲ್ಲ.. ಆಕಾಂಕ್ಷಿಗಳು 5 ರಾಜ್ಯ ಚುನಾವಣೆ ಮುಗಿಯುವವರೆಗೂ ಕಾಯಲೇಬೇಕು..

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.