ETV Bharat / state

ಕರ್ನಾಟಕ ಅನ್​ಲಾಕ್.. ಜೂನ್​ 14ರ ಬಳಿಕ ಅಗತ್ಯ ವಸ್ತುಗಳ ಖರೀದಿ ಸಮಯ ವಿಸ್ತರಣೆ ಎಂದ ಅಶೋಕ್​

ಸಿಲಿಕಾನ್‌ಸಿಟಿಯಲ್ಲಿ ಐನೂರು ಒಳಪಟ್ಟು ಪಾಸಿಟಿವ್ ಕೇಸ್‌ಗಳು ಬಂದರೆ ಅಷ್ಟೇ ಅನ್‌ಲಾಕ್ ಸಾಧ್ಯವಾಗುತ್ತದೆ. ಜೂನ್ 11 ಅಥವಾ 12ರಂದು ತಜ್ಞರ ಜೊತೆ ಸಭೆ ನಡೆಸಿ ಸಿಎಂ ತೀರ್ಮಾನ ಮಾಡಬಹುದು..

author img

By

Published : Jun 9, 2021, 2:28 PM IST

Unlock Process start from after June 14, Unlock Process start from after June 14 in Karnataka, Karnataka unlock, Karnataka unlock news, ಜೂನ್​ 14ರಿಂದ ಅನ್​ಲಾಕ್​ ಪ್ರಕ್ರಿಯೆ ಪ್ರಾರಂಭ, ಕರ್ನಾಟಕದಲ್ಲಿ ಜೂನ್​ 14ರಿಂದ ಅನ್​ಲಾಕ್​ ಪ್ರಕ್ರಿಯೆ ಪ್ರಾರಂಭ, ಕರ್ನಾಟಕ ಅನ್​ಲೌಕ್​, ಕರ್ನಾಟಕ ಅನ್​ಲಾಕ್​ ಸುದ್ದಿ,
ಜೂನ್​ 14ರ ಬಳಿಕ ಅಗತ್ಯ ವಸ್ತುಗಳ ಖರೀದಿ ಸಮಯ ವಿಸ್ತರಣೆ ಎಂದ ಅಶೋಕ್​

ಬೆಂಗಳೂರು : ಜೂನ್ 14ರಂದು ಲಾಕ್‌ಡೌನ್ ಕೊನೆಯ ದಿನವಾಗಿದೆ. ನಂತರ ಏಕಾಏಕಿ ಅನ್​ಲಾಕ್ ಮಾಡುವುದಿಲ್ಲ. ಹಂತ ಹಂತವಾಗಿ ತೆರೆಯಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಆರ್.ಅಶೋಕ್, ನಗರದಲ್ಲಿ ಸಾವಿನ ಸಂಖ್ಯೆ ಇಳಿಕೆಯಾಗುತ್ತಿದೆ. ಪಾಸಿಟಿವ್ ಸಂಖ್ಯೆ ಕೂಡ 500ಕ್ಕಿಂತ ಇಳಿಕೆಯಾಗಬೇಕು. ಹೀಗಾಗಿ, ಲಾಕ್‌ಡೌನ್​ನ ಒಂದೇ ದಿನಕ್ಕೆ ತೆರೆಯುವುದಿಲ್ಲ.

ಜೂನ್​ 14ರ ಬಳಿಕ ಅಗತ್ಯ ವಸ್ತುಗಳ ಖರೀದಿ ಸಮಯ ವಿಸ್ತರಣೆ ಎಂದ ಅಶೋಕ್​

ನಾಲ್ಕೈದು ಹಂತಗಳಲ್ಲಿ ತೆರೆಯಲಾಗುವುದು. ಸದ್ಯ ಅಗತ್ಯ ವಸ್ತುಗಳ ಖರೀದಿಗೆ 6 ರಿಂದ 10ರ ಬದಲು, 6 ರಿಂದ 12 ಗಂಟೆವರೆಗೆ ಅವಕಾಶ ಕೊಡಲಾಗುವುದು. ಪಾರ್ಕ್​ಗಳಲ್ಲಿ ವಾಕಿಂಗ್​ಗೆ ಅವಕಾಶ ಕೊಡುವ ಬಗ್ಗೆ ಚರ್ಚೆ ನಡೆದಿದೆ ಎಂದರು.

ನಗರದಲ್ಲಿ ಐನೂರು ಒಳಪಟ್ಟು ಪಾಸಿಟಿವ್ ಬಂದರೆ ಅಷ್ಟೇ ಅನ್‌ಲಾಕ್ ಸಾಧ್ಯವಾಗುತ್ತದೆ. ಜೂನ್ 11 ಅಥವಾ 12ರಂದು ತಜ್ಞರ ಜೊತೆ ಸಭೆ ನಡೆಸಿ ಸಿಎಂ ತೀರ್ಮಾನ ಮಾಡಬಹುದು.

ಸದ್ಯ ನಗರದಲ್ಲಿ ಓಡಾಟ ಹೆಚ್ಚಾಗಿರುವ ಬಗ್ಗೆ ಸಿಎಂ ಗಮನಿಸಿದ್ದು, ಪೊಲೀಸ್ ಇಲಾಖೆ, ಜಿಲ್ಲಾಧಿಕಾರಿಗಳ ಜೊತೆ ಇದನ್ನು ತಡೆಯುವ ಬಗ್ಗೆ ಮಾತುಕತೆ ನಡೆಸಿದ್ದಾರೆ ಎಂದರು.

ಬೆಂಗಳೂರು : ಜೂನ್ 14ರಂದು ಲಾಕ್‌ಡೌನ್ ಕೊನೆಯ ದಿನವಾಗಿದೆ. ನಂತರ ಏಕಾಏಕಿ ಅನ್​ಲಾಕ್ ಮಾಡುವುದಿಲ್ಲ. ಹಂತ ಹಂತವಾಗಿ ತೆರೆಯಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಆರ್.ಅಶೋಕ್, ನಗರದಲ್ಲಿ ಸಾವಿನ ಸಂಖ್ಯೆ ಇಳಿಕೆಯಾಗುತ್ತಿದೆ. ಪಾಸಿಟಿವ್ ಸಂಖ್ಯೆ ಕೂಡ 500ಕ್ಕಿಂತ ಇಳಿಕೆಯಾಗಬೇಕು. ಹೀಗಾಗಿ, ಲಾಕ್‌ಡೌನ್​ನ ಒಂದೇ ದಿನಕ್ಕೆ ತೆರೆಯುವುದಿಲ್ಲ.

ಜೂನ್​ 14ರ ಬಳಿಕ ಅಗತ್ಯ ವಸ್ತುಗಳ ಖರೀದಿ ಸಮಯ ವಿಸ್ತರಣೆ ಎಂದ ಅಶೋಕ್​

ನಾಲ್ಕೈದು ಹಂತಗಳಲ್ಲಿ ತೆರೆಯಲಾಗುವುದು. ಸದ್ಯ ಅಗತ್ಯ ವಸ್ತುಗಳ ಖರೀದಿಗೆ 6 ರಿಂದ 10ರ ಬದಲು, 6 ರಿಂದ 12 ಗಂಟೆವರೆಗೆ ಅವಕಾಶ ಕೊಡಲಾಗುವುದು. ಪಾರ್ಕ್​ಗಳಲ್ಲಿ ವಾಕಿಂಗ್​ಗೆ ಅವಕಾಶ ಕೊಡುವ ಬಗ್ಗೆ ಚರ್ಚೆ ನಡೆದಿದೆ ಎಂದರು.

ನಗರದಲ್ಲಿ ಐನೂರು ಒಳಪಟ್ಟು ಪಾಸಿಟಿವ್ ಬಂದರೆ ಅಷ್ಟೇ ಅನ್‌ಲಾಕ್ ಸಾಧ್ಯವಾಗುತ್ತದೆ. ಜೂನ್ 11 ಅಥವಾ 12ರಂದು ತಜ್ಞರ ಜೊತೆ ಸಭೆ ನಡೆಸಿ ಸಿಎಂ ತೀರ್ಮಾನ ಮಾಡಬಹುದು.

ಸದ್ಯ ನಗರದಲ್ಲಿ ಓಡಾಟ ಹೆಚ್ಚಾಗಿರುವ ಬಗ್ಗೆ ಸಿಎಂ ಗಮನಿಸಿದ್ದು, ಪೊಲೀಸ್ ಇಲಾಖೆ, ಜಿಲ್ಲಾಧಿಕಾರಿಗಳ ಜೊತೆ ಇದನ್ನು ತಡೆಯುವ ಬಗ್ಗೆ ಮಾತುಕತೆ ನಡೆಸಿದ್ದಾರೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.