ಬೆಂಗಳೂರು : ದೀಪಾವಳಿ ಕಲೆಕ್ಷನ್ ವಿಚಾರವಾಗಿ ಮಂಗಳಮುಖಿಯರ ಗುಂಪುಗಳ ನಡುವೆ ಪರಸ್ಪರ ಮಾರಾಮಾರಿ ನಡೆದಉ ಹೊಡೆದಾಡಿಕೊಂಡ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ಇದೆ 25 ರಂದು ದೀಪಾವಳಿ ಹಬ್ಬದ ನಿಮಿತ್ತ ಶ್ರೀರಾಮ್ ಪುರ ಮಂಗಳಮುಖಿಯರು ಮಾರಪ್ಪನ ಪಾಳ್ಯಕ್ಕೆ ಕಲೆಕ್ಷನ್ ಗಾಗಿ ಬಂದು ಬಲವಂತವಾಗಿ ಹಣ ವಸೂಲಿ ಮಾಡುತ್ತಿದ್ದರಂತೆ, ಈ ವಿಚಾರ ತಿಳಿದ ಆರ್ಎಮ್ಸಿ ಯಾರ್ಡ್ ಮಂಗಳಮುಖಿಯರು ವಿರೋಧ ವ್ಯಕ್ತಪಡಿಸಿ ಗಲಾಟೆ ಮಾಡಿ ಕಳುಹಿಸಿದ್ದಾರೆ.
ಇದರಿಂದ ಸಿಟ್ಟಿಗೆದ್ದ ಶ್ರೀರಾಮ್ ಪುರ ಮಂಗಳಮುಖಿಯರು ಗ್ಯಾಂಗ್ ಸಮೇತ ಬಂದು ವಾಣಿಶ್ರೀ ಮತ್ತು ಪ್ರೀಯ ಎಂಬ ಮಂಗಳಮುಖಿಯರ ಕೇಶರಾಶಿಯನ್ನು ಕತ್ತರಿಸಿದ್ದಾರೆ. ಅಲ್ಲದೆ ಸದಸ್ಯರ ಮೇಲೆ ಮಚ್ಚು ಲಾಂಗು ಗಳಿಂದ ಹಲ್ಲೆ ಮಾಡಲು ಯತ್ನಿಸಿ ಅವರ ಬಳಿ ಇದ್ದ ಹಣ ಮತ್ತು ಚಿನ್ನಾಭರಣಗಳನ್ನು ಕದ್ದು ಎಸ್ಕೇಪ್ ಆಗಿದ್ದರು. ಇನ್ನು ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
ಗಲಾಟೆಯ ಕುರಿತು ಆರ್ ಎಮ್ ಸಿ ಯಾರ್ಡ್ ಮಂಗಳಮುಖಿಯರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸಿಸಿಟಿವಿ ದೃಶ್ಯ ವೀಕ್ಷಿಸಿದ ಪೊಲೀಸರು ಪ್ರಕರಣ ದಾಖಲಿಸಿ ಸುಮಿತ್ರಾ, ರೇಣುಕಾ, ಬಬ್ಲಿ ಸೇರಿದಂತೆ 12 ಜನ ಮಂಗಳಮುಖಿಯರನ್ನು ಬಂಧಿಸಿದ್ದಾರೆ.