ETV Bharat / state

ರಾಜಧಾನಿಯಲ್ಲಿ ಜಿಟಿ ಜಿಟಿ ಮಳೆ... ಟ್ರಾಫಿಕ್​ ಕ್ಲಿಯರ್ ಮಾಡಲು ಪೊಲೀಸರ ಹರಸಾಹಸ

ಚೆನ್ನೈನಲ್ಲಿ ನಿವಾರ್ ಚಂಡಮಾರುತ ಸಂಭವಿಸಿದ್ದು, ಪರಿಣಾಮ ರಾಜಧಾನಿಯಲ್ಲಿ ಮಳೆಯಾಗುತ್ತಿದೆ. ಇದರಿಂದ ವಾಹನಗಳು ಸಂಚರಿಸಲು ಸಮಸ್ಯೆ ಉಂಟಾಗಿದ್ದು, ಟ್ರಾಫಿಕ್​ ಜಾಮ್​​ ದಟ್ಟವಾಗಿದೆ.

author img

By

Published : Nov 26, 2020, 1:22 PM IST

ರಾಜಧಾನಿಯಲ್ಲಿ ಜಿಟಿ ಜಿಟಿ ಮಳೆ
Traffic jam in Bangalore

ಬೆಂಗಳೂರು: ನಿವಾರ್​ ಚಂಡಮಾರುತ ಪರಿಣಾಮ ಸಿಲಿಕಾನ್ ಸಿಟಿಯಲ್ಲಿ ಮುಂಜಾನೆಯಿಂದಲೇ ಜಿಟಿ ಜಿಟಿ ಮಳೆಯಾಗುತ್ತಿದ್ದು, ಟ್ರಾಫಿಕ್​ ಜಾಮ್​​ ಉಂಟಾಗಿದೆ.

ರಾಜಧಾನಿಯಲ್ಲಿ ಜಿಟಿ ಜಿಟಿ ಮಳೆ

ನಗರದ ಹೆಬ್ಬಾಳ, ಕೋರಮಂಗಲ,ಮಲ್ಲೇಶ್ವರಂ, ಮೆಜೆಸ್ಟಿಕ್ ಹೀಗೆ ಪ್ರಮುಖ ಸ್ಥಳದಲ್ಲಿ ಮಳೆ ಹಾಗೂ ಗಾಳಿ ಬೀಸುತ್ತಿದ್ದು, ಇದರಿಂದ ವಾಹನ ಸವಾರರರು ನಿಧಾನಗತಿಯಲ್ಲಿ ತೆರಳುವುದು ಅನಿವಾರ್ಯವಾಗಿದೆ. ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್​ ಉಂಟಾಗಿದ್ದು, ಸಂಚಾರಿ ಪೊಲೀಸರು ಟ್ರಾಫಿಕ್ ಕ್ಲಿಯರ್ ಮಾಡುವಲ್ಲಿ ನಿರತರಾಗಿದ್ದಾರೆ.

ಇನ್ನು ಕಾರ್ಮಿಕ ನೀತಿ‌ ಕಾಯ್ದೆ ವಿರುದ್ಧ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಟೋಗಳು, ಇಂಡಸ್ಟ್ರಿಯಲ್ ನೌಕರರು ಪ್ರತಿಭಟನೆಗಿಳಿದಿದ್ದು, ಪರಿಣಾಮ ಮೆಜೆಸ್ಟಿಕ್ ಸುತ್ತಮುತ್ತ ಜನರು ಸಂಚರಿಸಲು ಪರದಾಡುತ್ತಿದ್ದಾರೆ.

ಬೆಂಗಳೂರು: ನಿವಾರ್​ ಚಂಡಮಾರುತ ಪರಿಣಾಮ ಸಿಲಿಕಾನ್ ಸಿಟಿಯಲ್ಲಿ ಮುಂಜಾನೆಯಿಂದಲೇ ಜಿಟಿ ಜಿಟಿ ಮಳೆಯಾಗುತ್ತಿದ್ದು, ಟ್ರಾಫಿಕ್​ ಜಾಮ್​​ ಉಂಟಾಗಿದೆ.

ರಾಜಧಾನಿಯಲ್ಲಿ ಜಿಟಿ ಜಿಟಿ ಮಳೆ

ನಗರದ ಹೆಬ್ಬಾಳ, ಕೋರಮಂಗಲ,ಮಲ್ಲೇಶ್ವರಂ, ಮೆಜೆಸ್ಟಿಕ್ ಹೀಗೆ ಪ್ರಮುಖ ಸ್ಥಳದಲ್ಲಿ ಮಳೆ ಹಾಗೂ ಗಾಳಿ ಬೀಸುತ್ತಿದ್ದು, ಇದರಿಂದ ವಾಹನ ಸವಾರರರು ನಿಧಾನಗತಿಯಲ್ಲಿ ತೆರಳುವುದು ಅನಿವಾರ್ಯವಾಗಿದೆ. ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್​ ಉಂಟಾಗಿದ್ದು, ಸಂಚಾರಿ ಪೊಲೀಸರು ಟ್ರಾಫಿಕ್ ಕ್ಲಿಯರ್ ಮಾಡುವಲ್ಲಿ ನಿರತರಾಗಿದ್ದಾರೆ.

ಇನ್ನು ಕಾರ್ಮಿಕ ನೀತಿ‌ ಕಾಯ್ದೆ ವಿರುದ್ಧ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಟೋಗಳು, ಇಂಡಸ್ಟ್ರಿಯಲ್ ನೌಕರರು ಪ್ರತಿಭಟನೆಗಿಳಿದಿದ್ದು, ಪರಿಣಾಮ ಮೆಜೆಸ್ಟಿಕ್ ಸುತ್ತಮುತ್ತ ಜನರು ಸಂಚರಿಸಲು ಪರದಾಡುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.