ETV Bharat / state

ಸುಮನಹಳ್ಳಿ ಮೇಲ್ಸೇತುವೆ ಪರಿಶೀಲಿಸಿದ ಮೇಯರ್ - ಸುಮನಹಳ್ಳಿ ಮೇಲ್ಸೇತುವೆ ಪರಿಶೀಲಿಸಿದ ಮೇಯರ್

ನಗರದ ಹೊರವರ್ತುಲ ರಸ್ತೆಯ ಸುಮನಹಳ್ಳಿ ಮೇಲ್ಸೇತುವೆ  ಮಧ್ಯದಲ್ಲೇ ಗುಂಡಿ ಬಿದ್ದು, ಕಾಂಕ್ರೀಟ್ ಪದರ ಸಂಪೂರ್ಣ ಕಿತ್ತು ಹೋಗಿದ್ದು, ಇಂದು ಮೇಯರ್ ಗೌತಮ್ ಕುಮಾರ್, ಆಯುಕ್ತರಾದ ಬಿ.ಹೆಚ್. ಅನಿಲ್ ಕುಮಾರ್ ಹಾಗೂ ಬಿಬಿಎಂಪಿ ಅಧಿಕಾರಿಗಳು ಮೇಲ್ಸೇತುವೆ ಪರಿಶೀಲನೆ ನಡೆಸಿದ್ದು, ಇದಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

Today Mayor inspected Sumanahalli bridge
author img

By

Published : Nov 2, 2019, 7:02 PM IST

ಬೆಂಗಳೂರು : ನಗರದ ಹೊರವರ್ತುಲ ರಸ್ತೆಯ ಸುಮನಹಳ್ಳಿ ಮೇಲ್ಸೇತುವೆ ಮಧ್ಯದಲ್ಲೇ ಗುಂಡಿ ಬಿದ್ದು, ಕಾಂಕ್ರೀಟ್ ಪದರ ಸಂಪೂರ್ಣ ಕಿತ್ತು ಹೋಗಿದ್ದು, ಇಂದು ಮೇಯರ್ ಗೌತಮ್ ಕುಮಾರ್, ಆಯುಕ್ತರಾದ ಬಿ.ಹೆಚ್. ಅನಿಲ್ ಕುಮಾರ್ ಹಾಗೂ ಬಿಬಿಎಂಪಿ ಅಧಿಕಾರಿಗಳು ಮೇಲ್ಸೇತುವೆ ಪರಿಶೀಲನೆ ನಡೆಸಿದರು.

ಸುಮನಹಳ್ಳಿ ಮೇಲ್ಸೇತುವೆ ಪರಿಶೀಲಿಸಿದ ಮೇಯರ್

ನಗರದ ಹೊರವರ್ತುಲ ರಸ್ತೆಯ ಸುಮನಹಳ್ಳಿ ಮೇಲ್ಸೇತುವೆಯನ್ನು 2010ರಲ್ಲಿ ಬಿಡಿಎ ನಿರ್ಮಾಣ ಮಾಡಿದ್ದು, ಬಳಿಕ ಇದನ್ನು ಬಿಬಿಎಂಪಿಗೆ ನಿರ್ವಹಣೆಗಾಗಿ ಹಸ್ತಾಂತರಿಸಿತ್ತು. ಆದರೆ ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮೇಲ್ಸೇತುವೆಯಲ್ಲಿ ನೀರು ನಿಂತು ಗುಂಡಿಗಳು ನಿರ್ಮಾಣವಾಗಿವೆ. ಅಷ್ಟೇ ಅಲ್ಲದೇ ರಸ್ತೆಯಲ್ಲಿನ ಗುಂಡಿ ಕಾಂಕ್ರೀಟ್ ಸಮೇತ ಕಿತ್ತು ಬಂದಿದ್ದು, ಕೇವಲ ಕಂಬಿಗಳು ಕಾಣುತ್ತಿವೆ. ಇದು ಪ್ರಯಾಣಿಕರ ಆತಂಕಕ್ಕೆ ಕಾರಣವಾಗಿದ್ದು ಸಂಚಾರವನ್ನು ನಿಷೇಧಿಸಲಾಗಿದೆ.

ಈ ಸಂಬಂಧ ಇಂದು ಮೇಯರ್ ಗೌತಮ್ ಕುಮಾರ್, ಆಯುಕ್ತರಾದ ಬಿ.ಹೆಚ್. ಅನಿಲ್ ಕುಮಾರ್ , ಹಾಗೂ ಬಿಬಿಎಂಪಿ ಅಧಿಕಾರಿಗಳು ಮೇಲ್ಸೇತುವೆ ಪರಿಶೀಲನೆ ನಡೆಸಿದ್ದು, ಬಳಿಕ ಬಿಬಿಎಂಪಿ ಆಯುಕ್ತರಾದ ಅನಿಲ್ ಕುಮಾರ್ ಮಾತನಾಡಿ , ಸುಮನಹಳ್ಳಿ ಮೇಲ್ಸೇತುವೆ ಕುಸಿತಕ್ಕೆ ಬಿಬಿಎಂಪಿ ನಿರ್ಲಕ್ಷ್ಯವೇ ಕಾರಣ ಎಂದು ಒಪ್ಪಿಕೊಂಡರು. ಬಿಡಿಎ 2016 ರಲ್ಲಿ ಈ ಮೇಲ್ಸೇತುವೆಯನ್ನು ಬಿಬಿಎಂಪಿಗೆ ಹಸ್ತಾಂತರ ಮಾಡಿದೆ. ಆದರೆ ಬಿಬಿಎಂಪಿ ಸಮರ್ಪಕವಾಗಿ ನಿರ್ವಹಣೆ ಮಾಡಿಲ್ಲ. ಬಿಬಿಎಂಪಿಯಲ್ಲಿ ಹೊಸ ಕಾಮಗಾರಿಗಳಿಗೆ ಹೆಚ್ಚು ಒತ್ತನ್ನು ನೀಡಲಾಗುತ್ತಿದೆ. ಆದರೆ ನಿರ್ವಹಣೆ ಬಗ್ಗೆ ಗಮನಹರಿಸುತ್ತಲೇ ಇಲ್ಲ. ಇನ್ನು ಹತ್ತು ದಿನಗಳ ಕಾಲ ರಿಪೇರಿ ಕಾರ್ಯ ನಡೆಯಲಿದೆ. ರಿಪೇರಿ ಕಾರ್ಯ ಮುಗಿಯುವವರೆಗೂ ವಾಹನಗಳ ಓಡಾಟಕ್ಕೆ ಅವಕಾಶ ಇಲ್ಲ. ವಾಹನಗಳ ಓಡಾಟಕ್ಕೆ ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ ಎಂದರು.

ಬಳಿಕ ಮೇಯರ್ ಗೌತಮ್ ಕುಮಾರ್ ಮಾತನಾಡಿ, ಈ ಮೇಲ್ಸೇತುವೆ ಬಿಡಿಎಯಿಂದ 10 ವರ್ಷದ ಹಿಂದೆ ನಿರ್ಮಾಣವಾಗಿದೆ. ಚೆನ್ನೈ ಮೂಲದ ಕಂಪನಿ ಈ ಸೇತುವೆ ನಿರ್ಮಾಣ ಮಾಡಿತ್ತು. ಕಾಂಕ್ರೀಟ್ ಮಿಶ್ರಣದ ಸಮಸ್ಯೆ ಎಂದು ಗೊತ್ತಾಗಿದೆ. ಕಡಿಮೆ ಗುಣಮಟ್ಟದಲ್ಲಿ ರಸ್ತೆ ನಿರ್ಮಾಣ ಮಾಡಿದ್ದರಿಂದ ಬ್ರಿಡ್ಜ್ ಹಾನಿಯಾಗಿದೆ. ಇನ್ನು 19 ದಿನದಲ್ಲಿ ಕಾಮಗಾರಿ ಪೂರ್ತಿ ಮಾಡಲು ಆದೇಶ ನೀಡಲಾಗಿದೆ. ಕಳಪೆ ಕಾಮಗಾರಿ ಮಾಡಿರುವ ಅಧಿಕಾರಿಗಳ ಹಾಗೂ ಕಂಪನಿ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದರು.

ಬೆಂಗಳೂರು : ನಗರದ ಹೊರವರ್ತುಲ ರಸ್ತೆಯ ಸುಮನಹಳ್ಳಿ ಮೇಲ್ಸೇತುವೆ ಮಧ್ಯದಲ್ಲೇ ಗುಂಡಿ ಬಿದ್ದು, ಕಾಂಕ್ರೀಟ್ ಪದರ ಸಂಪೂರ್ಣ ಕಿತ್ತು ಹೋಗಿದ್ದು, ಇಂದು ಮೇಯರ್ ಗೌತಮ್ ಕುಮಾರ್, ಆಯುಕ್ತರಾದ ಬಿ.ಹೆಚ್. ಅನಿಲ್ ಕುಮಾರ್ ಹಾಗೂ ಬಿಬಿಎಂಪಿ ಅಧಿಕಾರಿಗಳು ಮೇಲ್ಸೇತುವೆ ಪರಿಶೀಲನೆ ನಡೆಸಿದರು.

ಸುಮನಹಳ್ಳಿ ಮೇಲ್ಸೇತುವೆ ಪರಿಶೀಲಿಸಿದ ಮೇಯರ್

ನಗರದ ಹೊರವರ್ತುಲ ರಸ್ತೆಯ ಸುಮನಹಳ್ಳಿ ಮೇಲ್ಸೇತುವೆಯನ್ನು 2010ರಲ್ಲಿ ಬಿಡಿಎ ನಿರ್ಮಾಣ ಮಾಡಿದ್ದು, ಬಳಿಕ ಇದನ್ನು ಬಿಬಿಎಂಪಿಗೆ ನಿರ್ವಹಣೆಗಾಗಿ ಹಸ್ತಾಂತರಿಸಿತ್ತು. ಆದರೆ ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮೇಲ್ಸೇತುವೆಯಲ್ಲಿ ನೀರು ನಿಂತು ಗುಂಡಿಗಳು ನಿರ್ಮಾಣವಾಗಿವೆ. ಅಷ್ಟೇ ಅಲ್ಲದೇ ರಸ್ತೆಯಲ್ಲಿನ ಗುಂಡಿ ಕಾಂಕ್ರೀಟ್ ಸಮೇತ ಕಿತ್ತು ಬಂದಿದ್ದು, ಕೇವಲ ಕಂಬಿಗಳು ಕಾಣುತ್ತಿವೆ. ಇದು ಪ್ರಯಾಣಿಕರ ಆತಂಕಕ್ಕೆ ಕಾರಣವಾಗಿದ್ದು ಸಂಚಾರವನ್ನು ನಿಷೇಧಿಸಲಾಗಿದೆ.

ಈ ಸಂಬಂಧ ಇಂದು ಮೇಯರ್ ಗೌತಮ್ ಕುಮಾರ್, ಆಯುಕ್ತರಾದ ಬಿ.ಹೆಚ್. ಅನಿಲ್ ಕುಮಾರ್ , ಹಾಗೂ ಬಿಬಿಎಂಪಿ ಅಧಿಕಾರಿಗಳು ಮೇಲ್ಸೇತುವೆ ಪರಿಶೀಲನೆ ನಡೆಸಿದ್ದು, ಬಳಿಕ ಬಿಬಿಎಂಪಿ ಆಯುಕ್ತರಾದ ಅನಿಲ್ ಕುಮಾರ್ ಮಾತನಾಡಿ , ಸುಮನಹಳ್ಳಿ ಮೇಲ್ಸೇತುವೆ ಕುಸಿತಕ್ಕೆ ಬಿಬಿಎಂಪಿ ನಿರ್ಲಕ್ಷ್ಯವೇ ಕಾರಣ ಎಂದು ಒಪ್ಪಿಕೊಂಡರು. ಬಿಡಿಎ 2016 ರಲ್ಲಿ ಈ ಮೇಲ್ಸೇತುವೆಯನ್ನು ಬಿಬಿಎಂಪಿಗೆ ಹಸ್ತಾಂತರ ಮಾಡಿದೆ. ಆದರೆ ಬಿಬಿಎಂಪಿ ಸಮರ್ಪಕವಾಗಿ ನಿರ್ವಹಣೆ ಮಾಡಿಲ್ಲ. ಬಿಬಿಎಂಪಿಯಲ್ಲಿ ಹೊಸ ಕಾಮಗಾರಿಗಳಿಗೆ ಹೆಚ್ಚು ಒತ್ತನ್ನು ನೀಡಲಾಗುತ್ತಿದೆ. ಆದರೆ ನಿರ್ವಹಣೆ ಬಗ್ಗೆ ಗಮನಹರಿಸುತ್ತಲೇ ಇಲ್ಲ. ಇನ್ನು ಹತ್ತು ದಿನಗಳ ಕಾಲ ರಿಪೇರಿ ಕಾರ್ಯ ನಡೆಯಲಿದೆ. ರಿಪೇರಿ ಕಾರ್ಯ ಮುಗಿಯುವವರೆಗೂ ವಾಹನಗಳ ಓಡಾಟಕ್ಕೆ ಅವಕಾಶ ಇಲ್ಲ. ವಾಹನಗಳ ಓಡಾಟಕ್ಕೆ ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ ಎಂದರು.

ಬಳಿಕ ಮೇಯರ್ ಗೌತಮ್ ಕುಮಾರ್ ಮಾತನಾಡಿ, ಈ ಮೇಲ್ಸೇತುವೆ ಬಿಡಿಎಯಿಂದ 10 ವರ್ಷದ ಹಿಂದೆ ನಿರ್ಮಾಣವಾಗಿದೆ. ಚೆನ್ನೈ ಮೂಲದ ಕಂಪನಿ ಈ ಸೇತುವೆ ನಿರ್ಮಾಣ ಮಾಡಿತ್ತು. ಕಾಂಕ್ರೀಟ್ ಮಿಶ್ರಣದ ಸಮಸ್ಯೆ ಎಂದು ಗೊತ್ತಾಗಿದೆ. ಕಡಿಮೆ ಗುಣಮಟ್ಟದಲ್ಲಿ ರಸ್ತೆ ನಿರ್ಮಾಣ ಮಾಡಿದ್ದರಿಂದ ಬ್ರಿಡ್ಜ್ ಹಾನಿಯಾಗಿದೆ. ಇನ್ನು 19 ದಿನದಲ್ಲಿ ಕಾಮಗಾರಿ ಪೂರ್ತಿ ಮಾಡಲು ಆದೇಶ ನೀಡಲಾಗಿದೆ. ಕಳಪೆ ಕಾಮಗಾರಿ ಮಾಡಿರುವ ಅಧಿಕಾರಿಗಳ ಹಾಗೂ ಕಂಪನಿ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದರು.

Intro:ಕುಸಿತದ ಹಂತದಲ್ಲಿರುವ ಸುಮನಹಳ್ಳಿ ಮೇಲ್ಸೇತುವೆ ಪರಿಶೀಲಿಸಿದ ಮೇಯರ್- ಮೇಲ್ಸೇತುವೆ ನಿರ್ಮಾಣ ಮಾಡಿದ ಸಂಸ್ಥೆ ಕಪ್ಪುಪಟ್ಟಿಗೆ


ಬೆಂಗಳೂರು - ಮೇಲ್ಸೇತುವೆ ಮಧ್ಯದಲ್ಲೇ ಗುಂಡಿ ಬಿದ್ದು, ಕಾಂಕ್ರೀಟ್ ಪದರ ಸಂಪೂರ್ಣ ಕಿತ್ತು ಹೋಗಿರುವ ಸುಮನಹಳ್ಳಿ ಮೇಲ್ಸೇತುವೆ ಕುಸಿತದ ಭೀತಿ ಹಬ್ಬಿದ ಬೆನ್ನಲ್ಲೇ ರಸ್ತೆ ಸಂಚಾರ ಸ್ಥಗಿತಗೊಳಿಸಲಾಗಿದೆ.


ನಗರದ ಹೊರವರ್ತುಲ ರಸ್ತೆಯ ಸುಮನಹಳ್ಳಿ ಮೇಲ್ಸೇತುವೆ, 2010 ರಲ್ಲಿ ಬಿಡಿಎ ನಿರ್ಮಾಣ ಮಾಡಿತ್ತು. ಬಳಿಕ ಬಿಬಿಎಂಪಿಗೆ ನಿರ್ವಹಣೆಗಾಗಿ ಹಸ್ತಾಂತರಿಸಿತ್ತು. ಆದರೆ ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮೇಲ್ಸೇತುವೆಯಲ್ಲಿ ನೀರು ನಿಂತು ಗುಂಡಿ ನಿರ್ಮಾಣವಾಗಿದೆ. ಬಳಿಕವೂ ಎಚ್ಚೆತ್ತುಕೊಳ್ಳದ ಕಾರಣ ರಸ್ತೆಗುಂಡಿಯ ಕಾಂಕ್ರೀಟ್ ಸಮೇತ ಕಿತ್ತುಬಂದಿದ್ದು, ಕೇವಲ ಕಂಬಿಗಳು ಕಾಣುತ್ತಿವೆ. ಇದು ಪ್ರಯಾಣಿಕರ ಆತಂಕಕ್ಕೆ ಕಾರಣವಾಗಿದ್ದು, ಸಧ್ಯ ಮೇಲ್ಸೇತುವೆ ಕುಸಿಯುವ ಭಯದಲ್ಲಿ ರಸ್ತೆ ಮೇಲೆ ಸಂಚಾರವನ್ನೇ ನಿಷೇಧಿಸಲಾಗಿದೆ.
ಇಂದು ಬೆಳಗ್ಗೆಯೇ ಮೇಯರ್ ಗೌತಮ್ ಕುಮಾರ್, ಆಯುಕ್ತರಾದ ಬಿ.ಹೆಚ್. ಅನಿಲ್ ಕುಮಾರ್ , ಹಾಗೂ
ಬಿಬಿಎಂಪಿ ಅಧಿಕಾರಿಗಳು ಮೇಲ್ಸೇತುವೆ ಪರಿಶೀಲನೆ ನಡೆಸಿದರು. ಟ್ರಾಫಿಕ್ ಡಿಸಿಪಿ ಸೌಮ್ಯಲತಾ ಕೂಡಾ ಸ್ಥಳದಲ್ಲಿದ್ದರು.
ಬಳಿಕ ಮಾತನಾಡಿದ, ಬಿಬಿಎಂಪಿ ಆಯುಕ್ತರಾದ ಅನಿಲ್ ಕುಮಾರ್, ಸುಮನಹಳ್ಳಿ ಮೇಲು ಸೇತುವೆ ಕುಸಿತಕ್ಕೆ ಬಿಬಿಎಂಪಿ ನಿರ್ಲಕ್ಷ್ಯ ವೇ ಕಾರಣ ಎಂದು ಒಪ್ಪಿಕೊಂಡರು. ಬಿಡಿಎ 2016 ರಲ್ಲಿ ಈ ಮೇಲು ಸೇತುವೆಯನ್ನು ಬಿಬಿಎಂಪಿ ಗೆ ಹಸ್ತಾಂತರ ಮಾಡಿದೆ.
ಆದರೆ ಬಿಬಿಎಂಪಿ ಸಮರ್ಪಕವಾಗಿ ನಿರ್ವಹಣೆ ಮಾಡಿಲ್ಲ.
ಬಿಬಿಎಂಪಿ ಯಲ್ಲಿ ಹೊಸ ಕಾಮಗಾರಿಗಳಿಗೆ ಹೆಚ್ಚು ಒತ್ತನ್ನು ನೀಡಲಾಗುತ್ತಿದೆ.ಆದರೆ ನಿರ್ವಹಣೆ ಬಗ್ಗೆ ಗಮನಹರಿಸುತ್ತಲೇ ಇಲ್ಲ. ಇನ್ನು ಹತ್ತು ದಿನಗಳ ಕಾಲ ರಿಪೇರಿ ಕಾರ್ಯ ನಡೆಯಲಿದೆ. ರಿಪೇರಿ ಕಾರ್ಯ ಮುಗಿಯುವವರೆಗೂ ವಾಹನಗಳ ಓಡಾಟಕ್ಕೆ ಅವಕಾಶ ಇಲ್ಲ. ವಾಹನಗಳ ಓಡಾಟಕ್ಕೆ ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ ಎಂದರು.


ಮೇಯರ್ ಗೌತಮ್ ಕುಮಾರ್ ಮಾತನಾಡಿ, ಈ ಮೇಲ್ಸೇತುವೆ ಬಿಡಿಎಯಿಂದ ೧೦ ವರ್ಷದ ಹಿಂದೆ ನಿರ್ಮಾಣವಾಗಿದೆ. ಚೆನ್ನೈ ಮೂಲದ ಕಂಪನಿ ಈ ಸೇತುವೆ ನಿರ್ಮಾಣ ಮಾಡಿತ್ತು. ಕಾಂಕ್ರೀಟ್ ಮಿಶ್ರಣದ ಸಮಸ್ಯೆ ಅಂತ ಗೊತ್ತಾಗಿದೆ. ಕಡಿಮೆ ಗುಣಮಟ್ಟದಲ್ಲಿ ರಸ್ತೆ ನಿರ್ಮಾಣ ಮಾಡಿದ್ದರಿಂದ ಬ್ರಿಡ್ಜ್ ಹಾನಿಯಾಗಿದೆ. ಇನ್ನು ೧೯ ದಿನದಲ್ಲಿ ಕಾಮಗಾರಿ ಪೂರ್ತಿ ಮಾಡಲು ಆದೇಶ ನೀಡಲಾಗಿದೆ. ಕಳಪೆ ಕಾಮಗಾರಿ ಮಾಡಿರುವ ಅಧಿಕಾರಿಗಳ ಹಾಗೂ ಕಂಪನಿ ವಿರುದ್ದ ಕ್ರಮ ಕೈಗೊಳ್ಳುತ್ತೇವೆ ಎಂದು ಮೇಯರ್ ಗೌತಮ್ ಕುಮಾರ್ ತಿಳಿಸಿದರು.




ಸೌಮ್ಯಶ್ರೀ
Kn_bng_02_Sumanahalli_bridge_7202707Body:..Conclusion:.......
ETV Bharat Logo

Copyright © 2025 Ushodaya Enterprises Pvt. Ltd., All Rights Reserved.