ETV Bharat / state

ರಾಜ್ಯದಲ್ಲಿ ಇಂದು ಸಾವಿರ ಗಡಿ ದಾಟಿದ ಕೊರೊನಾ: ಚಿಕಿತ್ಸೆಗಾಗಿ ಅಲೆದಾಡಿಸಿದ ಆಸ್ಪತ್ರೆಗಳಿಗೆ ನೋಟಿಸ್​​​

author img

By

Published : Jul 1, 2020, 9:49 PM IST

18 ಆಸ್ಪತ್ರೆಗಳಿಗೆ ಅಲೆದಾಡಿ ಪ್ರಾಣ ಬಿಟ್ಟ ರೋಗಿಯ ಪರದಾಟ ಹಿನ್ನೆಲೆ ತಪ್ಪಿತಸ್ಥ ಆಸ್ಪತ್ರೆಗಳ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. ರೋಗಿಗೆ ಐಎಲ್​ಐ ರೀತಿಯ ರೋಗ ಲಕ್ಷಣ ಇದ್ದಾಗ್ಯೂ ಚಿಕಿತ್ಸೆ ನೀಡದ 9 ಆಸ್ಪತ್ರೆಗಳಿಗೆ 24 ಗಂಟೆಯೊಳಗೆ ಉತ್ತರಿಸುವಂತೆ ಶೋಕಾಸ್ ನೋಟಿಸ್ ನೀಡಲಾಗಿದೆ.‌

ಕೊರೊನಾ
ಕೊರೊನಾ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸುನಾಮಿ ಜೋರಾಗಿಯೇ ಇದೆ.‌ ಇಂದು ಕೂಡ ಬರೋಬ್ಬರಿ 1,272 ಹೊಸ ಪಾಸಿಟಿವ್ ಕೇಸ್ ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 16,514ಕ್ಕೆ ಏರಿಕೆ ಆಗಿದೆ.

ದಿನೇ ದಿನೆ ಸೋಂಕಿಗೆ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚಿದ್ದು, ಇಂದು 7 ಮಂದಿ ಬಲಿಯಾಗಿದ್ದಾರೆ. ‌ಈ ಮೂಲಕ ರಾಜ್ಯದಲ್ಲಿ ಈವರೆಗೆ 253 ಮಂದಿ ಕೊರೊನಾಗೆ ಹಾಗೂ 4 ಅನ್ಯ ಕಾರಣಕ್ಕೆ ಸೇರಿ ಒಟ್ಟು 257ಕ್ಕೆ ಸಾವಿನ ಸಂಖ್ಯೆ ಏರಿಕೆ ಆಗಿದೆ. ಐಸಿಯುನಲ್ಲಿ ಬರೋಬ್ಬರಿ 292 ಜನರು ಚಿಕಿತ್ಸೆ ಪಡೆಯುತ್ತಿದ್ದು ಆತಂಕ ಹುಟ್ಟಿಸಿದೆ. ಈವರೆಗೆ 8,063 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಇತ್ತ ಸಕ್ರಿಯ ಪ್ರಕರಣಗಳ ಸಂಖ್ಯೆ 8,194 ಇದೆ. ರಾಜ್ಯದಲ್ಲಿ ಬರೋಬ್ಬರಿ 6,37,417 ಮಂದಿ ಕೊರೊನಾ ಸೋಂಕು ತಪಾಸಣೆ ಮಾಡಿಸಿಕೊಂಡಿದ್ದು, ಅದರಲ್ಲಿ 6,04,822 ಮಂದಿಯ ವರದಿ ನೆಗೆಟಿವ್, 16,514 ಪಾಸಿಟಿವ್ ಬಂದಿದೆ.‌ ಮತ್ತೊಂದು ಅಘಾತಕಾರಿ ವಿಷಯ ಅಂದರೆ ಇಂದು ಪತ್ತೆಯಾಗಿರುವ ಕೇಸ್​ಗಳಲ್ಲಿ ಭಾಗಶಃ ಸಂಪರ್ಕವೇ ಸಿಕ್ಕಿಲ್ಲ. ಸೋಂಕು ಹೇಗೆ ತಗುಲಿದೆ? ಯಾರಿಂದ ಸೋಂಕು ಬಂದಿದೆ ಎನ್ನುವುದನ್ನು ಆರೋಗ್ಯ ಇಲಾಖೆ ಪತ್ತೆ ಮಾಡುತ್ತಿದೆ.

ಶೋಕಾಸ್ ನೋಟಿಸ್

18 ಆಸ್ಪತ್ರೆಗಳಿಗೆ ಅಲೆದಾಡಿ ಪ್ರಾಣ ಬಿಟ್ಟ ರೋಗಿಯ ಪರದಾಟ ಹಿನ್ನೆಲೆ ತಪ್ಪಿತಸ್ಥ ಆಸ್ಪತ್ರೆಗಳ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. ರೋಗಿಗೆ ಐಎಲ್​ಐ ರೀತಿಯ ರೋಗ ಲಕ್ಷಣ ಇದ್ದಾಗ್ಯೂ ಚಿಕಿತ್ಸೆ ನೀಡದ 9 ಆಸ್ಪತ್ರೆಗಳಿಗೆ 24 ಗಂಟೆಯೊಳಗೆ ಉತ್ತರಿಸುವಂತೆ ಶೋಕಾಸ್ ನೋಟಿಸ್ ನೀಡಲಾಗಿದೆ.‌

coronavirus
9 ಆಸ್ಪತ್ರೆಗಳಿಗೆ ಶೋಕಾಸ್ ನೋಟಿಸ್

ಯಾವ್ಯಾವ ಆಸ್ಪತ್ರೆಗಳಿಗೆ ನೋಟಿಸ್​

ಫೋರ್ಟಿಸ್ ಆಸ್ಪತ್ರೆ ಕನ್ನಿಂಗ್​ಹ್ಯಾಮ್​, ಮಹಾವೀರ್ ಜೈನ್ ಆಸ್ಪತ್ರೆ ವಸಂತನಗರ, ಬೌರಿಂಗ್ ಆಸ್ಪತ್ರೆ, ವಿಕ್ರಮ್ ಆಸ್ಪತ್ರೆ, ಬೃಂದಾವನ ಆಸ್ಪತ್ರೆ, ರಂಗದೊರೆ ಆಸ್ಪತ್ರೆ, ಮಣಿಪಾಲ ಆಸ್ಪತ್ರೆ, ಸಾಕ್ರಾ ಆಸ್ಪತ್ರೆ.

ಸೋಂಕಿತರು, ವೈದ್ಯಕೀಯ ಸಿಬ್ಬಂದಿಗೆ ವೆರೈಟಿ ಫುಡ್ ಮೆನು

ಪ್ರತಿ ದಿನವೂ ಆಹಾರ ವ್ಯವಸ್ಥೆಯನ್ನು ರೋಗಿಗಳು, ವೈದ್ಯರು, ಅಧಿಕಾರಿಗಳು ಮತ್ತು ಇತರರಿಗೆ ಒದಗಿಸಲಾಗುತ್ತದೆ. ಬೆಳಗಿನ ಉಪಹಾರವನ್ನು 7 ಗಂಟೆಗೆ, ಮಧ್ಯಾಹ್ನದ ಊಟವನ್ನು 1 ಗಂಟೆಗೆ, ರಾತ್ರಿ ಊಟವನ್ನು 7 ಗಂಟೆಗೆ ನಿಯಮಿತವಾಗಿ ಒದಗಿಸಲು ಕ್ರಮ ವಹಿಸಲಾಗಿದೆ. ಪ್ರತಿ ವ್ಯಕ್ತಿಗೆ ಮೇಲಿನ ಆಹಾರದ ವೆಚ್ಚಗಳಿಗಾಗಿ 250 ರೂ. ಮೀರದಂತೆ ಕ್ರಮ ವಹಿಸುವಂತೆ ಸೂಚಿಸಲಾಗಿದೆ.

coronavirus
ಸೋಂಕಿತರಿಗೆ ತಜ್ಞರ ಸಲಹೆಯಂತೆ ಆಹಾರ ಒದಗಿಸುವ ಕುರಿತಾದ ಆದೇಶ

ಆಸ್ಪತ್ರೆಯ ಆರ್​ಎಸ್ ನಿಧಿಯಿಂದ ಅಥವಾ ಜಿಲ್ಲಾಧಿಕಾರಿಗಳ ಅಧೀನದಲ್ಲಿ ವಿಪತ್ತು ಪರಿಹಾರ ನಿಧಿಯನ್ನು ಪಡೆದುಕೊಳ್ಳಲು ತಿಳಿಸಲಾಗಿದೆ. ಬೆಳಗ್ಗೆ ತಿಂಡಿಗೆ ರವೆ ಇಡ್ಲಿ, ಪೊಂಗಲ್, ಅಕ್ಕಿ-ಇಡ್ಲಿ, ಬಿಸಿ ಬೇಳೆಬಾತ್, ಚೌಚೌ ಬಾತ್, ಸೆಟ್ ದೋಸೆ ತಿಂಡಿ ನಂತರ ಕಲಂಗಡಿ ಹಣ್ಣು, ಪಪ್ಪಾಯ ಹಣ್ಣು, ಕರಬೂಜ ಹಣ್ಣು, ರಾಗಿ ಗಂಜಿ, ಪಾಲಕ್ ಸೂಪ್, ಟೊಮ್ಯಾಟೋ ಸೂಪ್, ರವಾ ಗಂಜಿ, ಕ್ಯಾರೇಟ್ ಸೂಪ್, ಮಧ್ಯಾಹ್ನ, ರಾತ್ರಿ ಊಟಕ್ಕೆ ಎರಡು ಚಪಾತಿ, ಪಲ್ಯ, ಅನ್ನ, ದಾಲ್, ಮೊಸರು. ಊಟದ ನಂತರ ಫ್ಲೇವರ್ಡ್ ಮಿಲ್ಕ್ ನೀಡಲಾಗುತ್ತದೆ.

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸುನಾಮಿ ಜೋರಾಗಿಯೇ ಇದೆ.‌ ಇಂದು ಕೂಡ ಬರೋಬ್ಬರಿ 1,272 ಹೊಸ ಪಾಸಿಟಿವ್ ಕೇಸ್ ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 16,514ಕ್ಕೆ ಏರಿಕೆ ಆಗಿದೆ.

ದಿನೇ ದಿನೆ ಸೋಂಕಿಗೆ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚಿದ್ದು, ಇಂದು 7 ಮಂದಿ ಬಲಿಯಾಗಿದ್ದಾರೆ. ‌ಈ ಮೂಲಕ ರಾಜ್ಯದಲ್ಲಿ ಈವರೆಗೆ 253 ಮಂದಿ ಕೊರೊನಾಗೆ ಹಾಗೂ 4 ಅನ್ಯ ಕಾರಣಕ್ಕೆ ಸೇರಿ ಒಟ್ಟು 257ಕ್ಕೆ ಸಾವಿನ ಸಂಖ್ಯೆ ಏರಿಕೆ ಆಗಿದೆ. ಐಸಿಯುನಲ್ಲಿ ಬರೋಬ್ಬರಿ 292 ಜನರು ಚಿಕಿತ್ಸೆ ಪಡೆಯುತ್ತಿದ್ದು ಆತಂಕ ಹುಟ್ಟಿಸಿದೆ. ಈವರೆಗೆ 8,063 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಇತ್ತ ಸಕ್ರಿಯ ಪ್ರಕರಣಗಳ ಸಂಖ್ಯೆ 8,194 ಇದೆ. ರಾಜ್ಯದಲ್ಲಿ ಬರೋಬ್ಬರಿ 6,37,417 ಮಂದಿ ಕೊರೊನಾ ಸೋಂಕು ತಪಾಸಣೆ ಮಾಡಿಸಿಕೊಂಡಿದ್ದು, ಅದರಲ್ಲಿ 6,04,822 ಮಂದಿಯ ವರದಿ ನೆಗೆಟಿವ್, 16,514 ಪಾಸಿಟಿವ್ ಬಂದಿದೆ.‌ ಮತ್ತೊಂದು ಅಘಾತಕಾರಿ ವಿಷಯ ಅಂದರೆ ಇಂದು ಪತ್ತೆಯಾಗಿರುವ ಕೇಸ್​ಗಳಲ್ಲಿ ಭಾಗಶಃ ಸಂಪರ್ಕವೇ ಸಿಕ್ಕಿಲ್ಲ. ಸೋಂಕು ಹೇಗೆ ತಗುಲಿದೆ? ಯಾರಿಂದ ಸೋಂಕು ಬಂದಿದೆ ಎನ್ನುವುದನ್ನು ಆರೋಗ್ಯ ಇಲಾಖೆ ಪತ್ತೆ ಮಾಡುತ್ತಿದೆ.

ಶೋಕಾಸ್ ನೋಟಿಸ್

18 ಆಸ್ಪತ್ರೆಗಳಿಗೆ ಅಲೆದಾಡಿ ಪ್ರಾಣ ಬಿಟ್ಟ ರೋಗಿಯ ಪರದಾಟ ಹಿನ್ನೆಲೆ ತಪ್ಪಿತಸ್ಥ ಆಸ್ಪತ್ರೆಗಳ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. ರೋಗಿಗೆ ಐಎಲ್​ಐ ರೀತಿಯ ರೋಗ ಲಕ್ಷಣ ಇದ್ದಾಗ್ಯೂ ಚಿಕಿತ್ಸೆ ನೀಡದ 9 ಆಸ್ಪತ್ರೆಗಳಿಗೆ 24 ಗಂಟೆಯೊಳಗೆ ಉತ್ತರಿಸುವಂತೆ ಶೋಕಾಸ್ ನೋಟಿಸ್ ನೀಡಲಾಗಿದೆ.‌

coronavirus
9 ಆಸ್ಪತ್ರೆಗಳಿಗೆ ಶೋಕಾಸ್ ನೋಟಿಸ್

ಯಾವ್ಯಾವ ಆಸ್ಪತ್ರೆಗಳಿಗೆ ನೋಟಿಸ್​

ಫೋರ್ಟಿಸ್ ಆಸ್ಪತ್ರೆ ಕನ್ನಿಂಗ್​ಹ್ಯಾಮ್​, ಮಹಾವೀರ್ ಜೈನ್ ಆಸ್ಪತ್ರೆ ವಸಂತನಗರ, ಬೌರಿಂಗ್ ಆಸ್ಪತ್ರೆ, ವಿಕ್ರಮ್ ಆಸ್ಪತ್ರೆ, ಬೃಂದಾವನ ಆಸ್ಪತ್ರೆ, ರಂಗದೊರೆ ಆಸ್ಪತ್ರೆ, ಮಣಿಪಾಲ ಆಸ್ಪತ್ರೆ, ಸಾಕ್ರಾ ಆಸ್ಪತ್ರೆ.

ಸೋಂಕಿತರು, ವೈದ್ಯಕೀಯ ಸಿಬ್ಬಂದಿಗೆ ವೆರೈಟಿ ಫುಡ್ ಮೆನು

ಪ್ರತಿ ದಿನವೂ ಆಹಾರ ವ್ಯವಸ್ಥೆಯನ್ನು ರೋಗಿಗಳು, ವೈದ್ಯರು, ಅಧಿಕಾರಿಗಳು ಮತ್ತು ಇತರರಿಗೆ ಒದಗಿಸಲಾಗುತ್ತದೆ. ಬೆಳಗಿನ ಉಪಹಾರವನ್ನು 7 ಗಂಟೆಗೆ, ಮಧ್ಯಾಹ್ನದ ಊಟವನ್ನು 1 ಗಂಟೆಗೆ, ರಾತ್ರಿ ಊಟವನ್ನು 7 ಗಂಟೆಗೆ ನಿಯಮಿತವಾಗಿ ಒದಗಿಸಲು ಕ್ರಮ ವಹಿಸಲಾಗಿದೆ. ಪ್ರತಿ ವ್ಯಕ್ತಿಗೆ ಮೇಲಿನ ಆಹಾರದ ವೆಚ್ಚಗಳಿಗಾಗಿ 250 ರೂ. ಮೀರದಂತೆ ಕ್ರಮ ವಹಿಸುವಂತೆ ಸೂಚಿಸಲಾಗಿದೆ.

coronavirus
ಸೋಂಕಿತರಿಗೆ ತಜ್ಞರ ಸಲಹೆಯಂತೆ ಆಹಾರ ಒದಗಿಸುವ ಕುರಿತಾದ ಆದೇಶ

ಆಸ್ಪತ್ರೆಯ ಆರ್​ಎಸ್ ನಿಧಿಯಿಂದ ಅಥವಾ ಜಿಲ್ಲಾಧಿಕಾರಿಗಳ ಅಧೀನದಲ್ಲಿ ವಿಪತ್ತು ಪರಿಹಾರ ನಿಧಿಯನ್ನು ಪಡೆದುಕೊಳ್ಳಲು ತಿಳಿಸಲಾಗಿದೆ. ಬೆಳಗ್ಗೆ ತಿಂಡಿಗೆ ರವೆ ಇಡ್ಲಿ, ಪೊಂಗಲ್, ಅಕ್ಕಿ-ಇಡ್ಲಿ, ಬಿಸಿ ಬೇಳೆಬಾತ್, ಚೌಚೌ ಬಾತ್, ಸೆಟ್ ದೋಸೆ ತಿಂಡಿ ನಂತರ ಕಲಂಗಡಿ ಹಣ್ಣು, ಪಪ್ಪಾಯ ಹಣ್ಣು, ಕರಬೂಜ ಹಣ್ಣು, ರಾಗಿ ಗಂಜಿ, ಪಾಲಕ್ ಸೂಪ್, ಟೊಮ್ಯಾಟೋ ಸೂಪ್, ರವಾ ಗಂಜಿ, ಕ್ಯಾರೇಟ್ ಸೂಪ್, ಮಧ್ಯಾಹ್ನ, ರಾತ್ರಿ ಊಟಕ್ಕೆ ಎರಡು ಚಪಾತಿ, ಪಲ್ಯ, ಅನ್ನ, ದಾಲ್, ಮೊಸರು. ಊಟದ ನಂತರ ಫ್ಲೇವರ್ಡ್ ಮಿಲ್ಕ್ ನೀಡಲಾಗುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.