ETV Bharat / state

ಮೋದಿ ಮತ್ತೆ ಪ್ರಧಾನಿ ಆದರೆ ದೇಶದ ಆರ್ಥಿಕತೆ ಉತ್ತುಂಗಕ್ಕೆ: ಟಿ.ವಿ.ಮೋಹನ್ ದಾಸ್ ಪೈ - undefined

ಕಳೆದ ಐದು ವರ್ಷಗಳಲ್ಲಿ ದೇಶ ಆರ್ಥಿಕವಾಗಿ ಸಾಕಷ್ಟು ಅಭಿವೃದ್ಧಿ ಕಂಡಿದೆ. ಆರ್ಥಿಕತೆಯಲ್ಲೂ ಏರಿಕೆ ಕಂಡಿದೆ. ಜಗತ್ತಿನಲ್ಲಿ ಭಾರತದ ವರ್ಚಸ್ಸು ವೃದ್ಧಿಸಿದೆ. ಹಾಗೇಯೆ ಮೋದಿ ಮತ್ತೊಮ್ಮೆ ಪ್ರಧಾನಿ ಆದರೆ ದೇಶದ ಆರ್ಥಿಕತೆ ಮತ್ತೋಷ್ಟು ಉತ್ತುಂಗಕ್ಕೆ ಏರಲಿದೆ ಎಂದು ಉದ್ಯಮಿ ಟಿ.ವಿ.ಮೋಹನ್ ದಾಸ್ ಪೈ ಹೆಳಿದರು.

ಮೋದಿ ಮತ್ತೊಮ್ಮೆ ಪ್ರಧಾನಿ ಆದರೆ ದೇಶದ ಆರ್ಥಿಕತೆ ಉತ್ತುಂಗಕ್ಕೆ ಏರಲಿದೆ ಟಿ.ವಿ.ಮೋಹನ್ ದಾಸ್ ಪೈ.
author img

By

Published : Mar 31, 2019, 10:09 AM IST

Updated : Mar 31, 2019, 12:13 PM IST

ಬೆಂಗಳೂರು: ಮೋದಿ‌‌‌ ಮತ್ತೆ ಪ್ರಧಾನಿಯಾಗಿ ಆಯ್ಕೆಯಾದರೆ ದೇಶದ ಆರ್ಥಿಕತೆ ಉತ್ತುಂಗಕ್ಕೇರಲಿದೆ ಎಂದು ಉದ್ಯಮಿ ಮೋಹನ್ ದಾಸ್ ಪೈ ತಿಳಿಸಿದರು.

ಮೋದಿ ಮತ್ತೊಮ್ಮೆ ಪ್ರಧಾನಿ ಆದರೆ ದೇಶದ ಆರ್ಥಿಕತೆ ಉತ್ತುಂಗಕ್ಕೆ ಏರಲಿದೆ ಟಿ.ವಿ.ಮೋಹನ್ ದಾಸ್ ಪೈ.


ನಗರದ ಖಾಸಗಿ ಹೊಟೆಲ್ ನಲ್ಲಿ ರಾಜ್ಯ ಬಿಜೆಪಿ ಆರ್ಥಿಕ ಪ್ರಕೋಷ್ಠ‌ ಆಯೋಜಿಸಿದ್ದ ಬದಲಾವಣೆಯತ್ತ ಭಾರತ ಎಂಬ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಳೆದ ಐದು ವರ್ಷಗಳಲ್ಲಿ ದೇಶ ಆರ್ಥಿಕವಾಗಿ ಸಾಕಷ್ಟು ಅಭಿವೃದ್ಧಿ ಕಂಡಿದೆ. ಜಗತ್ತಿನಲ್ಲಿ ಭಾರತದ ವರ್ಚಸ್ಸು ವೃದ್ಧಿಸಿದೆ ಎಂದು ಮೋದಿ ಆಡಳಿತದ ‌‌ಬಗ್ಗೆ‌ ಮೆಚ್ಚುಗೆ ವ್ಯಕ್ತಪಡಿಸಿದರು.

ಇದೇ ವೇಳೆ ಖ್ಯಾತ ಹೃದ್ರೋಗ ತಜ್ಞ ಡಾ.ದೇವಿ ಪ್ರಸಾದ್ ಶೆಟ್ಟಿ ಮಾತನಾಡಿ, ಮೋದಿ ಆಡಳಿತದ ಕಾರ್ಯ ವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ದೇಶದ ಆರೋಗ್ಯ ನೀತಿಯಲ್ಲಿ ಇನ್ನಷ್ಟು ಸುಧಾರಣೆಯಾಗಬೇಕಾಗಿದ್ದು, ಆಯುಷ್ಮಾನ್ ಭಾರತ ಯೋಜನೆ ಮೂಲಕ ಬಡವರಿಗೆ ಆರೋಗ್ಯ ಭಾಗ್ಯ ಸಿಗುತ್ತಿರುವುದು ಮೋದಿ ಸರ್ಕಾರದ‌ ಉತ್ತಮ‌ ಸಾಧನೆಯಾಗಿದೆ ಎಂದು ವಿವರಿಸಿದರು.

ಮೋದಿ ಸರ್ಕಾರ ಐದು ವರ್ಷದಲ್ಲಿ ಮಾಡಿರುವ ಸಾಧನೆಗಳು, ಯೋಜನೆಗಳು, ನೋಟ್​ ಬ್ಯಾನ್​ , ಜಿಎಸ್ ಟಿ , ಸ್ಟಾರ್ಟ್ ಆ್ಯಪ್​ ಗಳ ಬಗ್ಗೆ ವಿಸ್ತೃತವಾಗಿ ಸಂವಾದ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಉದ್ಯಮಿಗಳು, ಆರ್ಥಿಕ ತಜ್ಞರು‌ ಭಾಗಿಯಾಗಿ ತಮ್ಮ ಅಭಿಪ್ರಾಯ ಹಂಚಿದರು.

ಬೆಂಗಳೂರು: ಮೋದಿ‌‌‌ ಮತ್ತೆ ಪ್ರಧಾನಿಯಾಗಿ ಆಯ್ಕೆಯಾದರೆ ದೇಶದ ಆರ್ಥಿಕತೆ ಉತ್ತುಂಗಕ್ಕೇರಲಿದೆ ಎಂದು ಉದ್ಯಮಿ ಮೋಹನ್ ದಾಸ್ ಪೈ ತಿಳಿಸಿದರು.

ಮೋದಿ ಮತ್ತೊಮ್ಮೆ ಪ್ರಧಾನಿ ಆದರೆ ದೇಶದ ಆರ್ಥಿಕತೆ ಉತ್ತುಂಗಕ್ಕೆ ಏರಲಿದೆ ಟಿ.ವಿ.ಮೋಹನ್ ದಾಸ್ ಪೈ.


ನಗರದ ಖಾಸಗಿ ಹೊಟೆಲ್ ನಲ್ಲಿ ರಾಜ್ಯ ಬಿಜೆಪಿ ಆರ್ಥಿಕ ಪ್ರಕೋಷ್ಠ‌ ಆಯೋಜಿಸಿದ್ದ ಬದಲಾವಣೆಯತ್ತ ಭಾರತ ಎಂಬ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಳೆದ ಐದು ವರ್ಷಗಳಲ್ಲಿ ದೇಶ ಆರ್ಥಿಕವಾಗಿ ಸಾಕಷ್ಟು ಅಭಿವೃದ್ಧಿ ಕಂಡಿದೆ. ಜಗತ್ತಿನಲ್ಲಿ ಭಾರತದ ವರ್ಚಸ್ಸು ವೃದ್ಧಿಸಿದೆ ಎಂದು ಮೋದಿ ಆಡಳಿತದ ‌‌ಬಗ್ಗೆ‌ ಮೆಚ್ಚುಗೆ ವ್ಯಕ್ತಪಡಿಸಿದರು.

ಇದೇ ವೇಳೆ ಖ್ಯಾತ ಹೃದ್ರೋಗ ತಜ್ಞ ಡಾ.ದೇವಿ ಪ್ರಸಾದ್ ಶೆಟ್ಟಿ ಮಾತನಾಡಿ, ಮೋದಿ ಆಡಳಿತದ ಕಾರ್ಯ ವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ದೇಶದ ಆರೋಗ್ಯ ನೀತಿಯಲ್ಲಿ ಇನ್ನಷ್ಟು ಸುಧಾರಣೆಯಾಗಬೇಕಾಗಿದ್ದು, ಆಯುಷ್ಮಾನ್ ಭಾರತ ಯೋಜನೆ ಮೂಲಕ ಬಡವರಿಗೆ ಆರೋಗ್ಯ ಭಾಗ್ಯ ಸಿಗುತ್ತಿರುವುದು ಮೋದಿ ಸರ್ಕಾರದ‌ ಉತ್ತಮ‌ ಸಾಧನೆಯಾಗಿದೆ ಎಂದು ವಿವರಿಸಿದರು.

ಮೋದಿ ಸರ್ಕಾರ ಐದು ವರ್ಷದಲ್ಲಿ ಮಾಡಿರುವ ಸಾಧನೆಗಳು, ಯೋಜನೆಗಳು, ನೋಟ್​ ಬ್ಯಾನ್​ , ಜಿಎಸ್ ಟಿ , ಸ್ಟಾರ್ಟ್ ಆ್ಯಪ್​ ಗಳ ಬಗ್ಗೆ ವಿಸ್ತೃತವಾಗಿ ಸಂವಾದ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಉದ್ಯಮಿಗಳು, ಆರ್ಥಿಕ ತಜ್ಞರು‌ ಭಾಗಿಯಾಗಿ ತಮ್ಮ ಅಭಿಪ್ರಾಯ ಹಂಚಿದರು.

sample description
Last Updated : Mar 31, 2019, 12:13 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.