ETV Bharat / state

ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಕಬ್ಬು ಬೆಳೆಗಾರರಿಂದ ಸರ್ಕಾರದ ವಿರುದ್ಧ ಪ್ರತಿಭಟನೆ

author img

By

Published : Nov 26, 2022, 10:49 PM IST

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕೊರಿ ಕಬ್ಬು ಬೆಳೆಗಾರರ ಪ್ರತಿಭಟನೆಯ 5ನೇ ದಿನವಾದ ಇಂದು ಸರ್ಕಾರದ ನಿರ್ಲಕ್ಷ ನೀತಿಯ ವಿರುದ್ಧ ಅಣಕು ಶವಯಾತ್ರೆ ನಡೆಸಲು ಯತ್ನಿಸಿದಾಗ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ನೆಡೆಯಿತು.

Protest of sugarcane growers
ಕಬ್ಬು ಬೆಳೆಗಾರರಿಂದ ಸರ್ಕಾರದ ವಿರುದ್ಧ ಪ್ರತಿಭಟನೆ

ಬೆಂಗಳೂರು: ಕಬ್ಬು ಬೆಳೆಗಾರರ ಪ್ರತಿಭಟನೆಯ 5ನೇ ದಿನವಾದ ಇಂದು ಸರ್ಕಾರದ ನಿರ್ಲಕ್ಷ್ಯ ನೀತಿಯ ವಿರುದ್ಧ ಅಣಕು ಶವಯಾತ್ರೆ ನಡೆಸಲು ಯತ್ನಿಸಿದಾಗ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ನಡೆಯಿತು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರನ್ನು ಕೃಷಿ ಕ್ಷೇತ್ರದಿಂದ ಒಕ್ಕಲೆಬ್ಬಿಸಲು, ಕಾರ್ಪೊರೇಟ್ ಉದ್ಯಮಿಗಳ ಮರ್ಜಿಯಲ್ಲಿ ವಾಮ ಮಾರ್ಗದಲ್ಲಿ ವ್ಯವಸ್ಥಿತ ಕಾರ್ಯಯೋಜನೆ ಜಾರಿಗೆ ತರುತ್ತಿದೆ, ದೆಹಲಿಯಲ್ಲಿ ರೈತರು ಒಂದು ವರ್ಷ ಚಳವಳಿ ನಡೆಸಿದ ಕಾರಣ ನವಂಬರ್ 26 ಪ್ರಧಾನಿ ಮೋದಿ ಮೂರು ಕೃಷಿ ಕಾಯ್ದೆಗಳನ್ನು ರದ್ದು ಮಾಡಿ, ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಕಾನೂನು ರೂಪಿಸುತ್ತೇವೆ ಎಂದು ಭರವಸೆ ನೀಡಿ ಒಂದು ವರ್ಷವಾದರೂ ಜಾರಿಗೆ ತಂದಿಲ್ಲ, ಪದೇ ಪದೆ ರೈತರಿಗೆ ಸುಳ್ಳು ಹೇಳುತ್ತಲೇ ರಾಜ್ಯಭಾರ ಮಾಡುತ್ತಿದ್ದಾರೆ.

ಸ್ವಾಮಿನಾಥನ್ ವರದಿಯನ್ನ ಜಾರಿಗೆ ತರಲಿಲ್ಲ, ರೈತರ ಆದಾಯ ದ್ವಿಗುಣ ಭರವಸೆ ಈಡೇರಿಸಿಲ್ಲ, ಕೃಷಿ ಉತ್ಪನ್ನಗಳಿಗೆ ಜಿಎಸ್‌ಟಿ ತೆರಿಗೆ ಹಾಕಿ ಮತ್ತಷ್ಟು ಸಂಕಷ್ಟ ಉಂಟು ಮಾಡಿದ್ದಾರೆ ಎಂದು ಅಣಕು ಶವ ಯಾತ್ರೆ ಆರಂಭಿಸಲು ಮುಂದಾದ ರೈತರಿಂದ ನಾವು ಅನುಮತಿ ನೀಡಿಲ್ಲ ಎಂದು ಪೊಲೀಸರು ತಡೆದರು.

ಆಗ ಪೊಲೀಸರು ರೈತರ ನಡುವೆ ವಾಗ್ವಾದ ನಡೆಯಿತು ನೈಜ ರೈತನನ್ನ ಶವದ ರೀತಿ ಮಲಗಿಸಿ ಮೆರವಣಿಗೆ ಮುಂದಾದಾಗ ದಬ್ಬಾಳಿಕೆ ನಡೆಸಿ ಎಲ್ಲ ರೈತರನ್ನು ಬಂಧಿಸಿ ಕರೆದೊಯ್ದಿದ್ದಾರೆ, ಸರ್ಕಾರ ಪೊಲೀಸ್ ಬಲದ ಮೂಲಕ ಹೋರಾಟಗಾರರ ಹಕ್ಕನ್ನು ದಮನಗೊಳಿಸುವ ಕಾರ್ಯ ಮಾಡುತ್ತಿದೆ ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದರು.

ನಂತರ ಮಾತನಾಡಿದ ಅವರು ಸಕ್ಕರೆ ಕಾರ್ಖಾನೆಗಳ ಮಾಲೀಕರ ಮರ್ಜಿಯಲ್ಲಿ ಸಾಗುತ್ತಿದ್ದು, ಚುನಾವಣೆಯ ವೇಳೆ ಸಕ್ಕರೆ ಕಾರ್ಖಾನೆಗಳ ಉಡುಗೊರೆ ನೆಪದಿಂದ, ಕಬ್ಬು ಬೆಳೆಗಾರ ರೈತರಿಗೆ ವಂಚನೆ ಎಸಗುತಿದ್ದು, ಇನ್ನೂ ರೈತರು ಸುಮ್ಮನೆ ಕುಳಿತರೆ, ಬೀದಿಗೆ ತಳ್ಳುತ್ತಾರೆ ಐದು ದಿನದಿಂದ ಧರಣಿ ಕುಳಿತ ರೈತರ ಸಮಸ್ಯೆ ಬಗೆಹರಿಸದೇ, ವಾಮ ಮಾರ್ಗ ಬಳಸುತ್ತಿದ್ದಾರೆ ಇನ್ನೂ ರೈತರು ಸುಮ್ಮನೆ ಕೂರಬಾರದು ಎಂದು ರೈತರಿಗೆ ಕರೆ ನೀಡಿದರು.

ಎಫ್.ಆರ್.ಪಿ ದರ ನಿಗದಿಯಲ್ಲಿ ತಾರತಮ್ಯ: ಕಬ್ಬಿನ ಎಫ್.ಆರ್.ಪಿ ದರ ನಿಗದಿ ಮಾಡುವಾಗ ರೈತರಿಗೆ ಚಳ್ಳೆಹಣ್ಣು ತಿನಿಸಿದ್ದಾರೆ, ಕಬ್ಬಿನಿಂದ ಬರುವ ಸಕ್ಕರೆ ಇಳುವರಿ ಮಾನದಂಡವನ್ನು 8.5 ರಿಂದ 10.25ಕ್ಕೆ ಏರಿಕೆ ಮಾಡಿ ಕಬ್ಬು ದರ ಏರಿಕೆ ಮಾಡಿದ್ದೇವೆ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ. ರಾಜ್ಯ ಸರ್ಕಾರ ಭತ್ತ ಬೆಳೆ ರೈತರು ಅತಿವೃಷ್ಟಿ ಮಳೆ ಹಾನಿಯಿಂದ ಸಂಕಷ್ಟದಿದ್ದಾರೆ ಇಳುವರಿ ಕಡಿಮೆಯಾಗಿದೆ.

ರಾಜ್ಯದ ಎಲ್ಲ ರೈತರಿಗೂ ಕನಿಷ್ಠ ಬೆಂಬಲ ಬೆಲೆಗೆ ಹೆಚ್ಚುವರಿಯಾಗಿ 500 ರೂ ಪ್ರೋತ್ಸಾಹಧನ ನೀಡುವಂತೆ ನಾವು ಒತ್ತಾಯಿಸಿದರೆ ರಾಜ್ಯ ಸರ್ಕಾರ ಕೇವಲ ಮೂರು ಜಿಲ್ಲೆಗಳಿಗೆ ಆದೇಶ ಹೊರಡಿಸಿದ್ದಾರೆ ಇದು ರೈತರನ್ನ ಒಡೆದಾಳುವ ನೀತಿಯಾಗಿದೆ, ಕೂಡಲೇ ಆದೇಶವನ್ನು ರಾಜ್ಯದ ಎಲ್ಲ ರೈತರಿಗೂ ಎಂದು ಜಾರಿಗೆ ತರಬೇಕು, ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಬೇಕು ಎಂದು ಒತ್ತಾಯಿಸಿದರು.

ಲಗಾಣಿ ವಸೂಲಿ ಮಾಡುವ ಮೂಲಕ ರೈತರ ಶೋಷಣೆ: ರಾಜ್ಯಾದ್ಯಂತ ಕಬ್ಬು ಕಟಾವು ಸಾಗಣೆ ವೆಚ್ಚವನ್ನು ಸಕ್ಕರೆ ಕಾರ್ಖಾನೆಯವರು ತಮ್ಮ ಮನಬಂದಂತೆ ನಿಗದಿಪಡಿಸಿ, ಯಾರ ಅನುಮತಿ ಇಲ್ಲದೇ ಲಗಾಣಿ ವಸೂಲಿ ಮಾಡುವ ಮೂಲಕ ರೈತರನ್ನು ಶೋಷಣೆ ಮಾಡುತ್ತಿದ್ದಾರೆ ಕೂಡಲೇ ಸರ್ಕಾರ ಕಡಿವಾಣ ಹಾಕಬೇಕು.

ಕರ್ನಾಟಕ ಕಾವೇರಿ ಗ್ರಾಮೀಣ ಬ್ಯಾಂಕಿನ ಕಿರುಕುಳದಿಂದ ಮೈಸೂರು ಜಿಲ್ಲೆಯ ಎಚ್ ಡಿ ಕೋಟೆ ತಾಲೂಕಿನಲ್ಲಿ ನಿನ್ನೆ ರೈತನೊಬ್ಬ ವಿಷಸೇವಿಸಿ ಪ್ರಾಣ ಕಳೆದುಕೊಂಡಿದ್ದಾನೆ, ಭಾರತೀಯ ರಿಸರ್ವ್ ಬ್ಯಾಂಕ್ ಕಾನೂನು ನೀತಿಗಳನ್ನ ಪಾಲಿಸುವಲ್ಲಿ, ಬ್ಯಾಂಕುಗಳು ನಿರ್ಲಕ್ಷೆ ವಹಿಸುತ್ತಿದ್ದಾರೆ, ರೈತರನ್ನು ಶೋಷಣೆ ಮಾಡುತ್ತಿದ್ದಾರೆ. ಇದರ ವಿರುದ್ಧ 5 ತಿಂಗಳ ಹಿಂದೆ ಚಳವಳಿ ನಡೆಸಿದ ಕಾರಣ ಆರ್ ಬಿ ಐ ಮುಖ್ಯಸ್ಥರು ಸಮಸ್ಯೆಗಳ ಪರಿಹಾರಕ್ಕೆ 29ರಂದು ಸಭೆ ಕರೆದಿದ್ದಾರೆ, ಸಭೆಯಲ್ಲಿ ರಾಜ್ಯದ ರೈತರ ಸಮಸ್ಯೆಗಳನ್ನು ಗಮನ ಸೆಳೆಯಲಾಗುವುದು ಎಂದು ತಿಳಿಸಿದರು.

ಸಾಗಾಣಿಕೆ ದರ ಪ್ರತಿ ಟನ್ ಗೆ 250 ರಿಂದ 300 ಏರಿಕೆ:ಕಬ್ಬು ಕಟಾವು ಸಾಗಾಣಿಕೆ ದರ ಪ್ರತಿ ಟನ್ ಗೆ 250 ರಿಂದ 300 ಏರಿಕೆಯಾಗಿದೆ ರಸಗೊಬ್ಬರ ಡೀಸೆಲ್ ಬೆಲೆ ಏರಿಕೆಯಾಗಿದೆ, ಆದಕಾರಣ ಕೇಂದ್ರ ಸರ್ಕಾರ ನಿಗದಿ ಮಾಡಿರುವ ಎಫ್ ಆರ್ ಪಿ ದರ ನ್ಯಾಯಸಮತವಾಗಿಲ್ಲ, ಕಬ್ಬಿನಿಂದ ಬರುವ ಇತರ ಉತ್ವನಗಳ ಲಾಭ ಪರಿಗಣಿಸಿ ಹೆಚ್ಚುವರಿ ಬೆಲೆ ನಿಗದಿ ಮಾಡಬೇಕು, ಎಂಬುದು ನಮ್ಮ ಹೋರಾಟ ಮುಂದಿನ ಎಲ್ಲ ಸಮಸ್ಯೆಗಳಿಗೂ ಸರ್ಕಾರವೇ ಹೊಣೆಯಾಗುತ್ತದೆ ಎಂದು ಎಚ್ಚರಿಸುತಿದ್ದೇವೆ ಎಂದು ಕುರುಬೂರು ಶಾಂತಕುಮಾರ್ ಹೇಳಿದರು.

ಕಬ್ಬು ಬೆಳೆಗಾರರ ಸಂಘದ ರಾಜ್ಯ ಕಾರ್ಯಧ್ಯಕ್ಷ ವೀರನಗೌಡ ಪಾಟೀಲ್, ರಾಜ್ಯ ಉಪಾಧ್ಯಕ್ಷ ಸುರೇಶ್ ಮಾ ಪಾಟೀಲ್, ಸಂಘಟನಾ ಕಾರ್ಯದರ್ಶಿ ಹತ್ತಳ್ಳಿ ದೇವರಾಜ್, ಪಿ ಸೋಮಶೇಖರ್, ಹಳ್ಳಿಕೆರೆಹುಂಡಿ ಭಾಗ್ಯರಾಜ್, ಬರಡನಪುರ ನಾಗರಾಜ್, ಮಹದೇವಸ್ವಾಮಿ, ಗೋವಿಂದ ರಾಜು ರನ್ನು ಪೊಲೀಸರು ವಶಕ್ಕೆ ಪಡೆದು ಬಿಡುಗಡೆ ಮಾಡಿದರು.

ಇದನ್ನೂ ಓದಿ:ಗೃಹ ರಕ್ಷಕದಳ ಸಿಬ್ಬಂದಿಯನ್ನು ನೋಟಿಸ್ ನೀಡದೆಯೂ ಅಮಾನತು ಮಾಡಬಹುದು : ಹೈಕೋರ್ಟ್

ಬೆಂಗಳೂರು: ಕಬ್ಬು ಬೆಳೆಗಾರರ ಪ್ರತಿಭಟನೆಯ 5ನೇ ದಿನವಾದ ಇಂದು ಸರ್ಕಾರದ ನಿರ್ಲಕ್ಷ್ಯ ನೀತಿಯ ವಿರುದ್ಧ ಅಣಕು ಶವಯಾತ್ರೆ ನಡೆಸಲು ಯತ್ನಿಸಿದಾಗ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ನಡೆಯಿತು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರನ್ನು ಕೃಷಿ ಕ್ಷೇತ್ರದಿಂದ ಒಕ್ಕಲೆಬ್ಬಿಸಲು, ಕಾರ್ಪೊರೇಟ್ ಉದ್ಯಮಿಗಳ ಮರ್ಜಿಯಲ್ಲಿ ವಾಮ ಮಾರ್ಗದಲ್ಲಿ ವ್ಯವಸ್ಥಿತ ಕಾರ್ಯಯೋಜನೆ ಜಾರಿಗೆ ತರುತ್ತಿದೆ, ದೆಹಲಿಯಲ್ಲಿ ರೈತರು ಒಂದು ವರ್ಷ ಚಳವಳಿ ನಡೆಸಿದ ಕಾರಣ ನವಂಬರ್ 26 ಪ್ರಧಾನಿ ಮೋದಿ ಮೂರು ಕೃಷಿ ಕಾಯ್ದೆಗಳನ್ನು ರದ್ದು ಮಾಡಿ, ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಕಾನೂನು ರೂಪಿಸುತ್ತೇವೆ ಎಂದು ಭರವಸೆ ನೀಡಿ ಒಂದು ವರ್ಷವಾದರೂ ಜಾರಿಗೆ ತಂದಿಲ್ಲ, ಪದೇ ಪದೆ ರೈತರಿಗೆ ಸುಳ್ಳು ಹೇಳುತ್ತಲೇ ರಾಜ್ಯಭಾರ ಮಾಡುತ್ತಿದ್ದಾರೆ.

ಸ್ವಾಮಿನಾಥನ್ ವರದಿಯನ್ನ ಜಾರಿಗೆ ತರಲಿಲ್ಲ, ರೈತರ ಆದಾಯ ದ್ವಿಗುಣ ಭರವಸೆ ಈಡೇರಿಸಿಲ್ಲ, ಕೃಷಿ ಉತ್ಪನ್ನಗಳಿಗೆ ಜಿಎಸ್‌ಟಿ ತೆರಿಗೆ ಹಾಕಿ ಮತ್ತಷ್ಟು ಸಂಕಷ್ಟ ಉಂಟು ಮಾಡಿದ್ದಾರೆ ಎಂದು ಅಣಕು ಶವ ಯಾತ್ರೆ ಆರಂಭಿಸಲು ಮುಂದಾದ ರೈತರಿಂದ ನಾವು ಅನುಮತಿ ನೀಡಿಲ್ಲ ಎಂದು ಪೊಲೀಸರು ತಡೆದರು.

ಆಗ ಪೊಲೀಸರು ರೈತರ ನಡುವೆ ವಾಗ್ವಾದ ನಡೆಯಿತು ನೈಜ ರೈತನನ್ನ ಶವದ ರೀತಿ ಮಲಗಿಸಿ ಮೆರವಣಿಗೆ ಮುಂದಾದಾಗ ದಬ್ಬಾಳಿಕೆ ನಡೆಸಿ ಎಲ್ಲ ರೈತರನ್ನು ಬಂಧಿಸಿ ಕರೆದೊಯ್ದಿದ್ದಾರೆ, ಸರ್ಕಾರ ಪೊಲೀಸ್ ಬಲದ ಮೂಲಕ ಹೋರಾಟಗಾರರ ಹಕ್ಕನ್ನು ದಮನಗೊಳಿಸುವ ಕಾರ್ಯ ಮಾಡುತ್ತಿದೆ ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದರು.

ನಂತರ ಮಾತನಾಡಿದ ಅವರು ಸಕ್ಕರೆ ಕಾರ್ಖಾನೆಗಳ ಮಾಲೀಕರ ಮರ್ಜಿಯಲ್ಲಿ ಸಾಗುತ್ತಿದ್ದು, ಚುನಾವಣೆಯ ವೇಳೆ ಸಕ್ಕರೆ ಕಾರ್ಖಾನೆಗಳ ಉಡುಗೊರೆ ನೆಪದಿಂದ, ಕಬ್ಬು ಬೆಳೆಗಾರ ರೈತರಿಗೆ ವಂಚನೆ ಎಸಗುತಿದ್ದು, ಇನ್ನೂ ರೈತರು ಸುಮ್ಮನೆ ಕುಳಿತರೆ, ಬೀದಿಗೆ ತಳ್ಳುತ್ತಾರೆ ಐದು ದಿನದಿಂದ ಧರಣಿ ಕುಳಿತ ರೈತರ ಸಮಸ್ಯೆ ಬಗೆಹರಿಸದೇ, ವಾಮ ಮಾರ್ಗ ಬಳಸುತ್ತಿದ್ದಾರೆ ಇನ್ನೂ ರೈತರು ಸುಮ್ಮನೆ ಕೂರಬಾರದು ಎಂದು ರೈತರಿಗೆ ಕರೆ ನೀಡಿದರು.

ಎಫ್.ಆರ್.ಪಿ ದರ ನಿಗದಿಯಲ್ಲಿ ತಾರತಮ್ಯ: ಕಬ್ಬಿನ ಎಫ್.ಆರ್.ಪಿ ದರ ನಿಗದಿ ಮಾಡುವಾಗ ರೈತರಿಗೆ ಚಳ್ಳೆಹಣ್ಣು ತಿನಿಸಿದ್ದಾರೆ, ಕಬ್ಬಿನಿಂದ ಬರುವ ಸಕ್ಕರೆ ಇಳುವರಿ ಮಾನದಂಡವನ್ನು 8.5 ರಿಂದ 10.25ಕ್ಕೆ ಏರಿಕೆ ಮಾಡಿ ಕಬ್ಬು ದರ ಏರಿಕೆ ಮಾಡಿದ್ದೇವೆ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ. ರಾಜ್ಯ ಸರ್ಕಾರ ಭತ್ತ ಬೆಳೆ ರೈತರು ಅತಿವೃಷ್ಟಿ ಮಳೆ ಹಾನಿಯಿಂದ ಸಂಕಷ್ಟದಿದ್ದಾರೆ ಇಳುವರಿ ಕಡಿಮೆಯಾಗಿದೆ.

ರಾಜ್ಯದ ಎಲ್ಲ ರೈತರಿಗೂ ಕನಿಷ್ಠ ಬೆಂಬಲ ಬೆಲೆಗೆ ಹೆಚ್ಚುವರಿಯಾಗಿ 500 ರೂ ಪ್ರೋತ್ಸಾಹಧನ ನೀಡುವಂತೆ ನಾವು ಒತ್ತಾಯಿಸಿದರೆ ರಾಜ್ಯ ಸರ್ಕಾರ ಕೇವಲ ಮೂರು ಜಿಲ್ಲೆಗಳಿಗೆ ಆದೇಶ ಹೊರಡಿಸಿದ್ದಾರೆ ಇದು ರೈತರನ್ನ ಒಡೆದಾಳುವ ನೀತಿಯಾಗಿದೆ, ಕೂಡಲೇ ಆದೇಶವನ್ನು ರಾಜ್ಯದ ಎಲ್ಲ ರೈತರಿಗೂ ಎಂದು ಜಾರಿಗೆ ತರಬೇಕು, ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಬೇಕು ಎಂದು ಒತ್ತಾಯಿಸಿದರು.

ಲಗಾಣಿ ವಸೂಲಿ ಮಾಡುವ ಮೂಲಕ ರೈತರ ಶೋಷಣೆ: ರಾಜ್ಯಾದ್ಯಂತ ಕಬ್ಬು ಕಟಾವು ಸಾಗಣೆ ವೆಚ್ಚವನ್ನು ಸಕ್ಕರೆ ಕಾರ್ಖಾನೆಯವರು ತಮ್ಮ ಮನಬಂದಂತೆ ನಿಗದಿಪಡಿಸಿ, ಯಾರ ಅನುಮತಿ ಇಲ್ಲದೇ ಲಗಾಣಿ ವಸೂಲಿ ಮಾಡುವ ಮೂಲಕ ರೈತರನ್ನು ಶೋಷಣೆ ಮಾಡುತ್ತಿದ್ದಾರೆ ಕೂಡಲೇ ಸರ್ಕಾರ ಕಡಿವಾಣ ಹಾಕಬೇಕು.

ಕರ್ನಾಟಕ ಕಾವೇರಿ ಗ್ರಾಮೀಣ ಬ್ಯಾಂಕಿನ ಕಿರುಕುಳದಿಂದ ಮೈಸೂರು ಜಿಲ್ಲೆಯ ಎಚ್ ಡಿ ಕೋಟೆ ತಾಲೂಕಿನಲ್ಲಿ ನಿನ್ನೆ ರೈತನೊಬ್ಬ ವಿಷಸೇವಿಸಿ ಪ್ರಾಣ ಕಳೆದುಕೊಂಡಿದ್ದಾನೆ, ಭಾರತೀಯ ರಿಸರ್ವ್ ಬ್ಯಾಂಕ್ ಕಾನೂನು ನೀತಿಗಳನ್ನ ಪಾಲಿಸುವಲ್ಲಿ, ಬ್ಯಾಂಕುಗಳು ನಿರ್ಲಕ್ಷೆ ವಹಿಸುತ್ತಿದ್ದಾರೆ, ರೈತರನ್ನು ಶೋಷಣೆ ಮಾಡುತ್ತಿದ್ದಾರೆ. ಇದರ ವಿರುದ್ಧ 5 ತಿಂಗಳ ಹಿಂದೆ ಚಳವಳಿ ನಡೆಸಿದ ಕಾರಣ ಆರ್ ಬಿ ಐ ಮುಖ್ಯಸ್ಥರು ಸಮಸ್ಯೆಗಳ ಪರಿಹಾರಕ್ಕೆ 29ರಂದು ಸಭೆ ಕರೆದಿದ್ದಾರೆ, ಸಭೆಯಲ್ಲಿ ರಾಜ್ಯದ ರೈತರ ಸಮಸ್ಯೆಗಳನ್ನು ಗಮನ ಸೆಳೆಯಲಾಗುವುದು ಎಂದು ತಿಳಿಸಿದರು.

ಸಾಗಾಣಿಕೆ ದರ ಪ್ರತಿ ಟನ್ ಗೆ 250 ರಿಂದ 300 ಏರಿಕೆ:ಕಬ್ಬು ಕಟಾವು ಸಾಗಾಣಿಕೆ ದರ ಪ್ರತಿ ಟನ್ ಗೆ 250 ರಿಂದ 300 ಏರಿಕೆಯಾಗಿದೆ ರಸಗೊಬ್ಬರ ಡೀಸೆಲ್ ಬೆಲೆ ಏರಿಕೆಯಾಗಿದೆ, ಆದಕಾರಣ ಕೇಂದ್ರ ಸರ್ಕಾರ ನಿಗದಿ ಮಾಡಿರುವ ಎಫ್ ಆರ್ ಪಿ ದರ ನ್ಯಾಯಸಮತವಾಗಿಲ್ಲ, ಕಬ್ಬಿನಿಂದ ಬರುವ ಇತರ ಉತ್ವನಗಳ ಲಾಭ ಪರಿಗಣಿಸಿ ಹೆಚ್ಚುವರಿ ಬೆಲೆ ನಿಗದಿ ಮಾಡಬೇಕು, ಎಂಬುದು ನಮ್ಮ ಹೋರಾಟ ಮುಂದಿನ ಎಲ್ಲ ಸಮಸ್ಯೆಗಳಿಗೂ ಸರ್ಕಾರವೇ ಹೊಣೆಯಾಗುತ್ತದೆ ಎಂದು ಎಚ್ಚರಿಸುತಿದ್ದೇವೆ ಎಂದು ಕುರುಬೂರು ಶಾಂತಕುಮಾರ್ ಹೇಳಿದರು.

ಕಬ್ಬು ಬೆಳೆಗಾರರ ಸಂಘದ ರಾಜ್ಯ ಕಾರ್ಯಧ್ಯಕ್ಷ ವೀರನಗೌಡ ಪಾಟೀಲ್, ರಾಜ್ಯ ಉಪಾಧ್ಯಕ್ಷ ಸುರೇಶ್ ಮಾ ಪಾಟೀಲ್, ಸಂಘಟನಾ ಕಾರ್ಯದರ್ಶಿ ಹತ್ತಳ್ಳಿ ದೇವರಾಜ್, ಪಿ ಸೋಮಶೇಖರ್, ಹಳ್ಳಿಕೆರೆಹುಂಡಿ ಭಾಗ್ಯರಾಜ್, ಬರಡನಪುರ ನಾಗರಾಜ್, ಮಹದೇವಸ್ವಾಮಿ, ಗೋವಿಂದ ರಾಜು ರನ್ನು ಪೊಲೀಸರು ವಶಕ್ಕೆ ಪಡೆದು ಬಿಡುಗಡೆ ಮಾಡಿದರು.

ಇದನ್ನೂ ಓದಿ:ಗೃಹ ರಕ್ಷಕದಳ ಸಿಬ್ಬಂದಿಯನ್ನು ನೋಟಿಸ್ ನೀಡದೆಯೂ ಅಮಾನತು ಮಾಡಬಹುದು : ಹೈಕೋರ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.