ETV Bharat / state

ಕಟ್ಟುಪಾಡುಗಳನ್ನು ಮೀರಿ ಬೆಳೆಯುವುದನ್ನು ಇಸ್ಕಾನ್ ಸಂಸ್ಥಾಪಕರು ತೋರಿಸಿಕೊಟ್ಟಿದ್ದಾರೆ: ಸುಧಾಮೂರ್ತಿ

author img

By

Published : Jul 10, 2022, 5:51 PM IST

Sing, Dane and Pray ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಶ್ರೀಲ ಪ್ರಭುಪಾದರ ಕುರಿತು ಇನ್ಫೋಸಿಸ್ ಮುಖ್ಯಸ್ಥೆ ಸುಧಾ ಮೂರ್ತಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

Sing dance and pray book release program
ಸಿಂಗ್ ಡ್ಯಾನ್ಸ್ ಆ್ಯಂಡ್ ಪ್ರೇ ಪುಸ್ತಕ ಬಿಡುಗಡೆ ಕಾರ್ಯಕ್ರಮ

ಬೆಂಗಳೂರು: ನಮ್ಮ ಜೀವನದಲ್ಲಿ ಬರುವ ಅನೇಕ ಕಾಲಘಟ್ಟಗಳನ್ನು ನಾವು ಹೀಗೇ ಇರಬೇಕೆಂದು ನಿರ್ಧರಿಸುತ್ತೇವೆ. ಆದರೆ ಎಲ್ಲ ಬೇಲಿಗಳನ್ನು ಮುರಿದು ಹೇಗೆ ನಮ್ಮ ನಂಬಿಕೆಯಿಂದ ಬದುಕಬಹುದೆಂದು ಶ್ರೀಲ ಪ್ರಭುಪಾದರ ಬಗೆಗಿನ ಪುಸ್ತಕದಲ್ಲಿ ತೋರಿಸಲಾಗಿದೆ ಎಂದು ಇನ್ಫೋಸಿಸ್ ಮುಖ್ಯಸ್ಥೆ ಸುಧಾ ಮೂರ್ತಿ ಹೇಳಿದರು. ಅವರು ಇಸ್ಕಾನ್ ವತಿಯಿಂದ ಆಯೋಜಿಸಿದ್ದ Sing, Dane and Pray -The inspirational story of Srila Prabhupada(ಇಸ್ಕಾನ್ ಸಂಸ್ಥಾಪಕ) ಪುಸ್ತಕ ಬಿಡುಗಡೆ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

Sing dance and pray book release program
ಸಿಂಗ್ ಡ್ಯಾನ್ಸ್ ಆ್ಯಂಡ್ ಪ್ರೇ ಪುಸ್ತಕ ಬಿಡುಗಡೆ ಕಾರ್ಯಕ್ರಮ

ಸುಗಮವಾಗಿ ಸಾಗುವ ಜೀವನದಲ್ಲಿ ಬರುವ ತಿರುವನ್ನು ಒಪ್ಪಿಕೊಂಡು ಕೇವಲ ನಂಬಿಕೆಯಿಂದ ಅದನ್ನು ಜಯಿಸುವುದು ಕಷ್ಟದ ಸಂಗತಿ. ಆದರೆ ಅಧ್ಯಾತ್ಮ ನಂಬಿಕೆ ನಮ್ಮಲ್ಲಿ ಸದೃಢವಾಗಿರಬೇಕು. ಆಗ ನಮ್ಮ ಸಮಾಜದ ಕಟ್ಟುಪಾಡುಗಳನ್ನು ಮೀರಿ ಬೆಳೆಯಬಹುದೆಂದು ಶ್ರೀಲ ಪ್ರಭುಪಾದರು ತೋರಿಸಿಕೊಟ್ಟಿದ್ದಾರೆ. ಅವರು ನಡೆದ ಹಾದಿ ಅನೇಕರಿಗೆ ಮಾದರಿ. ಈ ಪುಸ್ತಕದಲ್ಲಿ ಎಲ್ಲೂ ನೈಜತೆ ಮೀರಿ ಹೇಳಿಲ್ಲ ಎಂದು ತಿಳಿಸಿದರು.

ಕರ್ಮ ಕರ್ಮವಾಗಿ ಪರಿವರ್ತಿಸುತ್ತದೆ: ನಾವು ಈ ಪ್ರಪಂಚದಲ್ಲಿ ಕೇವಲ ಕರ್ಮ ಮಾಡಲು ಬಂದಿದ್ದೇವೆ. ಮಾಡಿದ ಕರ್ಮದ ಫಲದ ಆಧಾರದ ಮೇಲೆ ನಮ್ಮ ಜೀವನ ನಿರ್ಧಾರ ಆಗುತ್ತದೆ. ಯಾವ ರೀತಿ ಬದುಕಿದ್ದೇವೆ ಮತ್ತು ಎಷ್ಟು ಒಳ್ಳೆಯ ಕೆಲಸ ಮಾಡಿದ್ದೇವೆ ಎಂದು ಮಾತ್ರ ಲೆಕ್ಕ ಹಾಕಲಾಗುತ್ತದೆ. ಹಾಗಾಗಿ ಜೀವನದಲ್ಲಿ ಏನೇ ಸಾಧನೆ ಮಾಡಿದರು ಅದು ಕೇವಲ ದೇವರ ಇಚ್ಛೆ ಅಷ್ಟೇ ಎಂದು ಹೇಳಿದರು.

ವಿಜ್ಞಾನ ಮತ್ತು ಅಧ್ಯಾತ್ಮ ಒಂದೇ: ಕಾರ್ಯಕ್ರಮದಲ್ಲಿ ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್ ಮಾತನಾಡಿ, ವಿಜ್ಞಾನ ಮತ್ತು ಅಧ್ಯಾತ್ಮ ಒಂದೇ ವಿಷಯವನ್ನು ಎರಡು ವಿಧವಾಗಿ ಹೇಳುತ್ತದೆ. ಆಧ್ಯಾತ್ಮದಲ್ಲಿ ಶತಮಾನಗಳ ಹಿಂದೆಯೇ ನಾವು ಇಂದು ಕಂಡು ಹಿಡಿಯುತ್ತಿರುವ ವಿಜ್ಞಾನದ ಮಾದರಿಯನ್ನು ತಿಳಿಸಿದ್ದಾರೆ. ಹಾಗಾಗಿ ಅಧ್ಯಾತ್ಮ ಬೇರೆ ಎಂದು ಹೇಳುವುದು ತಪ್ಪು. ವಿಜ್ಞಾನ ಹೊರ ಜಗತ್ತಿನೊಂದಿಗೆ ಪ್ರಯೋಗ ಮಾಡಿದರೆ, ಆಧ್ಯಾತ್ಮ ನಮ್ಮೊಳಗೆ ಪ್ರಯೋಗ ಮಾಡುವುದನ್ನು ಕಲಿಸುತ್ತದೆ. ಆದರೆ ಅಂತಿಮ ಉತ್ತರ ಒಂದೇ ಆಗಿರುತ್ತದೆ ಎಂದು ಅಭಿಪ್ರಾಯಪಟ್ಟರು.

Sing dance and pray book release program
ಸಿಂಗ್ ಡ್ಯಾನ್ಸ್ ಆ್ಯಂಡ್ ಪ್ರೇ ಪುಸ್ತಕ ಬಿಡುಗಡೆ ಕಾರ್ಯಕ್ರಮ

ಅಧ್ಯಾತ್ಮಕ್ಕೆ ಗಡಿಯಿಲ್ಲ: ಇಸ್ಕಾನ್ ಅಧ್ಯಕ್ಷ ಮಧು ಪಂಡಿತ್ ಮಾತನಾಡಿ, ವಿಜ್ಞಾನಕ್ಕೆ ಒಂದು ಗಡಿ ಇದೆ, ಅಧ್ಯಾತ್ಮಕ್ಕೆ ಇಲ್ಲ. ಜೀವನ ಹುಡುಕಾಟದ ಪಯಣ. ನಮಗೆ ವಿಜ್ಞಾನದಲ್ಲಿ ಸಿಗದ ಮಾಹಿತಿ ಮತ್ತು ಉತ್ತರ ಆಧ್ಯಾತ್ಮದಲ್ಲಿ ಸಿಗುತ್ತದೆ. ಆದರೆ ಅದನ್ನು ಹುಡುಕುವ ಮನಸ್ಸು ಮತ್ತು ನಂಬಿಕೆ ಇರಬೇಕು. ನಮ್ಮ ಪೂರ್ವಜರ ಮಾತು ಯಾವ ರೀತಿ ಮತ್ತು ಎಷ್ಟು ಅಗಾಧತೆ ಹೊಂದಿದೆ ಎಂದು ಅರಿಯಬೇಕು. ಆಗ ವಿಜ್ಞಾನಕ್ಕಿಂತ ಆಧ್ಯಾತ್ಮ ಹೆಚ್ಚು ವೈಜ್ಞಾನಿಕತೆ ಹೊಂದಿದೆ ಎಂದು ತಿಳಿಯುತ್ತದೆ ಎಂದು ಹೇಳಿದರು.

ಸಾಧನೆಗೆ ನಮ್ಮ ಮೂಲದ ಅರಿವು ಅಗತ್ಯ: ಗ್ರ್ಯಾಮಿ ಪ್ರಶಸ್ತಿ ವಿಜೇತೆ ರಿಕ್ಕಿ ಕೇಜ್ ಮಾತನಾಡಿ, ಸಾಧನೆಗೆ ನಮ್ಮ ಮೂಲದ ಅರಿವು ಇರಬೇಕು ಮತ್ತು ಅದರ ಆಳದ ಆಧಾರದ ಮೇಲೆ ಸಾಧಿಸಲು ಹೊರತಾದ ಪ್ರಪಂಚ ನಮ್ಮನ್ನು ಗುರುತಿಸುತ್ತದೆ. ಅದು ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯದ ಆಧಾರದ ಮೇಲೆ ಆಗಿರುತ್ತದೆ. ಇದು ನಮಗೆ ಹೊಸ ಹೆಸರನ್ನೇ ತಂದು ಕೊಡುತ್ತದೆ. ಆದರೆ ಅದಕ್ಕೆ ಮೊದಲು ನಮ್ಮ ಪರಂಪರೆ ಮೇಲೆ ನಂಬಿಕೆ ಇರಬೇಕು. ಅದರ ಮಹತ್ವ ತಿಳಿದಿರಬೇಕು ಎಂದು ಹೇಳಿದರು.

ಇದನ್ನೂ ಓದಿ: ಶಾಸಕರ ಸರಣಿ ಭೇಟಿ ಬೆನ್ನಲ್ಲೇ ಬಿಎಸ್‍ವೈ ನಿವಾಸಕ್ಕೆ ನಳಿನ್ ಕುಮಾರ್ ಕಟೀಲ್ ಆಗಮನ

ಪುಸ್ತಕದ ಬರಹಗಾರ ಡಾ. ಹಿಂಡೋಲ್ ಸೇನ್ ಗುಪ್ತಾ ಮಾತನಾಡಿ, ನೀವು ನಿಮ್ಮನ್ನು ಪಂಜರದಿಂದ ಬಿಡುಗಡೆ ಮಾಡಿಕೊಂಡು ಸ್ವತಂತ್ರವಾಗಿ ಬದುಕಬೇಕು. ಆದರೆ ಅದು ಯಾವ ರೀತಿ ಎನ್ನುವುದು ನಮಗೆ ತಿಳಿದಿರಬೇಕು. ಸ್ವಾತಂತ್ರ್ಯ ಎಂದರೆ ನಮ್ಮ ಭಯದಿಂದ ಹೊರ ಬರೋದು. ಅದನ್ನು ಮಾಡಲು ಹಾಡು, ನೃತ್ಯ ಮತ್ತು ಪ್ರಾರ್ಥನೆ ಸಹಾಯ ಮಾಡುತ್ತದೆ ಎಂದರು.

275 ಪುಟಗಳ ಪುಸ್ತಕ: ಡಾ. ಹಿಂಡೋಲ್ ಸೇನ್ ಗುಪ್ತಾ ಬರೆದಿರುವ ಸಿಂಗ್, ಡ್ಯಾನ್ಸ್ ಆಂಡ್ ಪ್ರೇ ಪುಸ್ತಕ 275 ಪುಟಗಳನ್ನು ಹೊಂದಿದ್ದು, ಶ್ರೀಲ ಪ್ರಭುಪಾದ ಅವರ 14 ಚಿತ್ರಗಳನ್ನು ಹೊಂದಿದೆ.

ಬೆಂಗಳೂರು: ನಮ್ಮ ಜೀವನದಲ್ಲಿ ಬರುವ ಅನೇಕ ಕಾಲಘಟ್ಟಗಳನ್ನು ನಾವು ಹೀಗೇ ಇರಬೇಕೆಂದು ನಿರ್ಧರಿಸುತ್ತೇವೆ. ಆದರೆ ಎಲ್ಲ ಬೇಲಿಗಳನ್ನು ಮುರಿದು ಹೇಗೆ ನಮ್ಮ ನಂಬಿಕೆಯಿಂದ ಬದುಕಬಹುದೆಂದು ಶ್ರೀಲ ಪ್ರಭುಪಾದರ ಬಗೆಗಿನ ಪುಸ್ತಕದಲ್ಲಿ ತೋರಿಸಲಾಗಿದೆ ಎಂದು ಇನ್ಫೋಸಿಸ್ ಮುಖ್ಯಸ್ಥೆ ಸುಧಾ ಮೂರ್ತಿ ಹೇಳಿದರು. ಅವರು ಇಸ್ಕಾನ್ ವತಿಯಿಂದ ಆಯೋಜಿಸಿದ್ದ Sing, Dane and Pray -The inspirational story of Srila Prabhupada(ಇಸ್ಕಾನ್ ಸಂಸ್ಥಾಪಕ) ಪುಸ್ತಕ ಬಿಡುಗಡೆ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

Sing dance and pray book release program
ಸಿಂಗ್ ಡ್ಯಾನ್ಸ್ ಆ್ಯಂಡ್ ಪ್ರೇ ಪುಸ್ತಕ ಬಿಡುಗಡೆ ಕಾರ್ಯಕ್ರಮ

ಸುಗಮವಾಗಿ ಸಾಗುವ ಜೀವನದಲ್ಲಿ ಬರುವ ತಿರುವನ್ನು ಒಪ್ಪಿಕೊಂಡು ಕೇವಲ ನಂಬಿಕೆಯಿಂದ ಅದನ್ನು ಜಯಿಸುವುದು ಕಷ್ಟದ ಸಂಗತಿ. ಆದರೆ ಅಧ್ಯಾತ್ಮ ನಂಬಿಕೆ ನಮ್ಮಲ್ಲಿ ಸದೃಢವಾಗಿರಬೇಕು. ಆಗ ನಮ್ಮ ಸಮಾಜದ ಕಟ್ಟುಪಾಡುಗಳನ್ನು ಮೀರಿ ಬೆಳೆಯಬಹುದೆಂದು ಶ್ರೀಲ ಪ್ರಭುಪಾದರು ತೋರಿಸಿಕೊಟ್ಟಿದ್ದಾರೆ. ಅವರು ನಡೆದ ಹಾದಿ ಅನೇಕರಿಗೆ ಮಾದರಿ. ಈ ಪುಸ್ತಕದಲ್ಲಿ ಎಲ್ಲೂ ನೈಜತೆ ಮೀರಿ ಹೇಳಿಲ್ಲ ಎಂದು ತಿಳಿಸಿದರು.

ಕರ್ಮ ಕರ್ಮವಾಗಿ ಪರಿವರ್ತಿಸುತ್ತದೆ: ನಾವು ಈ ಪ್ರಪಂಚದಲ್ಲಿ ಕೇವಲ ಕರ್ಮ ಮಾಡಲು ಬಂದಿದ್ದೇವೆ. ಮಾಡಿದ ಕರ್ಮದ ಫಲದ ಆಧಾರದ ಮೇಲೆ ನಮ್ಮ ಜೀವನ ನಿರ್ಧಾರ ಆಗುತ್ತದೆ. ಯಾವ ರೀತಿ ಬದುಕಿದ್ದೇವೆ ಮತ್ತು ಎಷ್ಟು ಒಳ್ಳೆಯ ಕೆಲಸ ಮಾಡಿದ್ದೇವೆ ಎಂದು ಮಾತ್ರ ಲೆಕ್ಕ ಹಾಕಲಾಗುತ್ತದೆ. ಹಾಗಾಗಿ ಜೀವನದಲ್ಲಿ ಏನೇ ಸಾಧನೆ ಮಾಡಿದರು ಅದು ಕೇವಲ ದೇವರ ಇಚ್ಛೆ ಅಷ್ಟೇ ಎಂದು ಹೇಳಿದರು.

ವಿಜ್ಞಾನ ಮತ್ತು ಅಧ್ಯಾತ್ಮ ಒಂದೇ: ಕಾರ್ಯಕ್ರಮದಲ್ಲಿ ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್ ಮಾತನಾಡಿ, ವಿಜ್ಞಾನ ಮತ್ತು ಅಧ್ಯಾತ್ಮ ಒಂದೇ ವಿಷಯವನ್ನು ಎರಡು ವಿಧವಾಗಿ ಹೇಳುತ್ತದೆ. ಆಧ್ಯಾತ್ಮದಲ್ಲಿ ಶತಮಾನಗಳ ಹಿಂದೆಯೇ ನಾವು ಇಂದು ಕಂಡು ಹಿಡಿಯುತ್ತಿರುವ ವಿಜ್ಞಾನದ ಮಾದರಿಯನ್ನು ತಿಳಿಸಿದ್ದಾರೆ. ಹಾಗಾಗಿ ಅಧ್ಯಾತ್ಮ ಬೇರೆ ಎಂದು ಹೇಳುವುದು ತಪ್ಪು. ವಿಜ್ಞಾನ ಹೊರ ಜಗತ್ತಿನೊಂದಿಗೆ ಪ್ರಯೋಗ ಮಾಡಿದರೆ, ಆಧ್ಯಾತ್ಮ ನಮ್ಮೊಳಗೆ ಪ್ರಯೋಗ ಮಾಡುವುದನ್ನು ಕಲಿಸುತ್ತದೆ. ಆದರೆ ಅಂತಿಮ ಉತ್ತರ ಒಂದೇ ಆಗಿರುತ್ತದೆ ಎಂದು ಅಭಿಪ್ರಾಯಪಟ್ಟರು.

Sing dance and pray book release program
ಸಿಂಗ್ ಡ್ಯಾನ್ಸ್ ಆ್ಯಂಡ್ ಪ್ರೇ ಪುಸ್ತಕ ಬಿಡುಗಡೆ ಕಾರ್ಯಕ್ರಮ

ಅಧ್ಯಾತ್ಮಕ್ಕೆ ಗಡಿಯಿಲ್ಲ: ಇಸ್ಕಾನ್ ಅಧ್ಯಕ್ಷ ಮಧು ಪಂಡಿತ್ ಮಾತನಾಡಿ, ವಿಜ್ಞಾನಕ್ಕೆ ಒಂದು ಗಡಿ ಇದೆ, ಅಧ್ಯಾತ್ಮಕ್ಕೆ ಇಲ್ಲ. ಜೀವನ ಹುಡುಕಾಟದ ಪಯಣ. ನಮಗೆ ವಿಜ್ಞಾನದಲ್ಲಿ ಸಿಗದ ಮಾಹಿತಿ ಮತ್ತು ಉತ್ತರ ಆಧ್ಯಾತ್ಮದಲ್ಲಿ ಸಿಗುತ್ತದೆ. ಆದರೆ ಅದನ್ನು ಹುಡುಕುವ ಮನಸ್ಸು ಮತ್ತು ನಂಬಿಕೆ ಇರಬೇಕು. ನಮ್ಮ ಪೂರ್ವಜರ ಮಾತು ಯಾವ ರೀತಿ ಮತ್ತು ಎಷ್ಟು ಅಗಾಧತೆ ಹೊಂದಿದೆ ಎಂದು ಅರಿಯಬೇಕು. ಆಗ ವಿಜ್ಞಾನಕ್ಕಿಂತ ಆಧ್ಯಾತ್ಮ ಹೆಚ್ಚು ವೈಜ್ಞಾನಿಕತೆ ಹೊಂದಿದೆ ಎಂದು ತಿಳಿಯುತ್ತದೆ ಎಂದು ಹೇಳಿದರು.

ಸಾಧನೆಗೆ ನಮ್ಮ ಮೂಲದ ಅರಿವು ಅಗತ್ಯ: ಗ್ರ್ಯಾಮಿ ಪ್ರಶಸ್ತಿ ವಿಜೇತೆ ರಿಕ್ಕಿ ಕೇಜ್ ಮಾತನಾಡಿ, ಸಾಧನೆಗೆ ನಮ್ಮ ಮೂಲದ ಅರಿವು ಇರಬೇಕು ಮತ್ತು ಅದರ ಆಳದ ಆಧಾರದ ಮೇಲೆ ಸಾಧಿಸಲು ಹೊರತಾದ ಪ್ರಪಂಚ ನಮ್ಮನ್ನು ಗುರುತಿಸುತ್ತದೆ. ಅದು ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯದ ಆಧಾರದ ಮೇಲೆ ಆಗಿರುತ್ತದೆ. ಇದು ನಮಗೆ ಹೊಸ ಹೆಸರನ್ನೇ ತಂದು ಕೊಡುತ್ತದೆ. ಆದರೆ ಅದಕ್ಕೆ ಮೊದಲು ನಮ್ಮ ಪರಂಪರೆ ಮೇಲೆ ನಂಬಿಕೆ ಇರಬೇಕು. ಅದರ ಮಹತ್ವ ತಿಳಿದಿರಬೇಕು ಎಂದು ಹೇಳಿದರು.

ಇದನ್ನೂ ಓದಿ: ಶಾಸಕರ ಸರಣಿ ಭೇಟಿ ಬೆನ್ನಲ್ಲೇ ಬಿಎಸ್‍ವೈ ನಿವಾಸಕ್ಕೆ ನಳಿನ್ ಕುಮಾರ್ ಕಟೀಲ್ ಆಗಮನ

ಪುಸ್ತಕದ ಬರಹಗಾರ ಡಾ. ಹಿಂಡೋಲ್ ಸೇನ್ ಗುಪ್ತಾ ಮಾತನಾಡಿ, ನೀವು ನಿಮ್ಮನ್ನು ಪಂಜರದಿಂದ ಬಿಡುಗಡೆ ಮಾಡಿಕೊಂಡು ಸ್ವತಂತ್ರವಾಗಿ ಬದುಕಬೇಕು. ಆದರೆ ಅದು ಯಾವ ರೀತಿ ಎನ್ನುವುದು ನಮಗೆ ತಿಳಿದಿರಬೇಕು. ಸ್ವಾತಂತ್ರ್ಯ ಎಂದರೆ ನಮ್ಮ ಭಯದಿಂದ ಹೊರ ಬರೋದು. ಅದನ್ನು ಮಾಡಲು ಹಾಡು, ನೃತ್ಯ ಮತ್ತು ಪ್ರಾರ್ಥನೆ ಸಹಾಯ ಮಾಡುತ್ತದೆ ಎಂದರು.

275 ಪುಟಗಳ ಪುಸ್ತಕ: ಡಾ. ಹಿಂಡೋಲ್ ಸೇನ್ ಗುಪ್ತಾ ಬರೆದಿರುವ ಸಿಂಗ್, ಡ್ಯಾನ್ಸ್ ಆಂಡ್ ಪ್ರೇ ಪುಸ್ತಕ 275 ಪುಟಗಳನ್ನು ಹೊಂದಿದ್ದು, ಶ್ರೀಲ ಪ್ರಭುಪಾದ ಅವರ 14 ಚಿತ್ರಗಳನ್ನು ಹೊಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.