ETV Bharat / state

ಡಿ.ಕೆ.ಶಿವಕುಮಾರ್ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ ಎಸ್.ಎಂ.ಕೃಷ್ಣ

author img

By

Published : Nov 6, 2019, 11:49 PM IST

ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು, ಮಾಜಿ ಸಚಿವ ಡಿ.ಕೆ. ಶಿವಕುಮಾರ್ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದರು.

ಡಿಕೆಶಿಯನ್ನು ಭೇಟಿ ಮಾಡಿದ ಮಾಜಿ ಸಿಎಂ ಎಸ್.ಎಂ. ಕೃಷ್ಣ.

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು, ಮಾಜಿ ಸಚಿವ ಡಿ.ಕೆ ಶಿವಕುಮಾರ್ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದರು.

ಸದಾಶಿನಗರದ ಮನೆಯಲ್ಲಿ ಎಸ್.ಎಂ. ಕೃಷ್ಣ ಭೇಟಿ ಮಾಡಿದ್ದು ಸುದೀರ್ಘ ಸಮಾಲೋಚನೆ ನಡೆಸಿದ್ರು. ಈ ಸಂದರ್ಭದಲ್ಲಿ ಸಂಸದ ಡಿ.ಕೆ. ಸುರೇಶ್ ಉಪಸ್ಥಿತರಿದ್ದರು.

ತಿಹಾರ್ ಜೈಲಿನಿಂದ ಡಿಕೆಶಿ ಹೊರಬಂದ ನಂತರದ ದಿನಗಳಲ್ಲಿ ಅನೇಕ ನಾಯಕರು ಅವರ ನಿವಾಸಕ್ಕೆ ಆಗಮಿಸಿ ಯೋಗಕ್ಷೇಮ ವಿಚಾರಿಸುತ್ತಿದ್ದಾರೆ. ಆದರೆ ಇದುವರೆಗೂ ಎಸ್.ಎಂ. ಕೃಷ್ಣ ಮಾತ್ರ ಆಗಮಿಸಿರಲಿಲ್ಲ. ಸದಾಶಿವನಗರದಲ್ಲಿ ಇಬ್ಬರೂ ನಾಯಕರ ನಿವಾಸಗಳಿದ್ದರೂ ಭೇಟಿಗೆ ಅವಕಾಶ ಕೂಡಿ ಬಂದಿರಲಿಲ್ಲ. ಇಂದು ದಿಲ್ಲಿಯಿಂದ ಬೆಂಗಳೂರಿಗೆ ವಾಪಸಾಗಿರುವ ಡಿಕೆಶಿ ತಮ್ಮ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿದ್ದು ಈ ಸಂದರ್ಭ ಎಸ್​.ಎಂ. ಕೃಷ್ಣ ಭೇಟಿ ನೀಡಿ ಚರ್ಚೆ ನಡೆಸಿದರು.

ಎಸ್.ಎಂ. ಕೃಷ್ಣ ಅವರ ಅಳಿಯ ಸಿದ್ದಾರ್ಥ್ ಕಣ್ಮರೆಯಾದ ಸಂದರ್ಭದಿಂದ ಡಿ.ಕೆ. ಶಿವಕುಮಾರ್ ಮನೆ ಮಗನಂತೆ ಓಡಾಡಿದ್ದರು. ಸಿದ್ದಾರ್ಥ್ ಮೃತದೇಹ ಬೆಂಗಳೂರು ತಲುಪುವವರೆಗೂ ಕುಟುಂಬಕ್ಕೆ ಧೈರ್ಯ ತುಂಬಿ ಅವರ ಜೊತೆಗಿದ್ದರು. ಈ ಕಾರ್ಯವನ್ನು ಇಂದು ಎಸ್.ಎಂ. ಕೃಷ್ಣ ನೆನಪಿಸಿಕೊಂಡಿದ್ದಾರೆ ಎಂಬ ಮಾಹಿತಿ ಇದೆ.

ಡಿಕೆಶಿಯನ್ನು ಭೇಟಿ ಮಾಡಿದ ಮಾಜಿ ಸಿಎಂ ಎಸ್.ಎಂ. ಕೃಷ್ಣ.

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು, ಮಾಜಿ ಸಚಿವ ಡಿ.ಕೆ ಶಿವಕುಮಾರ್ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದರು.

ಸದಾಶಿನಗರದ ಮನೆಯಲ್ಲಿ ಎಸ್.ಎಂ. ಕೃಷ್ಣ ಭೇಟಿ ಮಾಡಿದ್ದು ಸುದೀರ್ಘ ಸಮಾಲೋಚನೆ ನಡೆಸಿದ್ರು. ಈ ಸಂದರ್ಭದಲ್ಲಿ ಸಂಸದ ಡಿ.ಕೆ. ಸುರೇಶ್ ಉಪಸ್ಥಿತರಿದ್ದರು.

ತಿಹಾರ್ ಜೈಲಿನಿಂದ ಡಿಕೆಶಿ ಹೊರಬಂದ ನಂತರದ ದಿನಗಳಲ್ಲಿ ಅನೇಕ ನಾಯಕರು ಅವರ ನಿವಾಸಕ್ಕೆ ಆಗಮಿಸಿ ಯೋಗಕ್ಷೇಮ ವಿಚಾರಿಸುತ್ತಿದ್ದಾರೆ. ಆದರೆ ಇದುವರೆಗೂ ಎಸ್.ಎಂ. ಕೃಷ್ಣ ಮಾತ್ರ ಆಗಮಿಸಿರಲಿಲ್ಲ. ಸದಾಶಿವನಗರದಲ್ಲಿ ಇಬ್ಬರೂ ನಾಯಕರ ನಿವಾಸಗಳಿದ್ದರೂ ಭೇಟಿಗೆ ಅವಕಾಶ ಕೂಡಿ ಬಂದಿರಲಿಲ್ಲ. ಇಂದು ದಿಲ್ಲಿಯಿಂದ ಬೆಂಗಳೂರಿಗೆ ವಾಪಸಾಗಿರುವ ಡಿಕೆಶಿ ತಮ್ಮ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿದ್ದು ಈ ಸಂದರ್ಭ ಎಸ್​.ಎಂ. ಕೃಷ್ಣ ಭೇಟಿ ನೀಡಿ ಚರ್ಚೆ ನಡೆಸಿದರು.

ಎಸ್.ಎಂ. ಕೃಷ್ಣ ಅವರ ಅಳಿಯ ಸಿದ್ದಾರ್ಥ್ ಕಣ್ಮರೆಯಾದ ಸಂದರ್ಭದಿಂದ ಡಿ.ಕೆ. ಶಿವಕುಮಾರ್ ಮನೆ ಮಗನಂತೆ ಓಡಾಡಿದ್ದರು. ಸಿದ್ದಾರ್ಥ್ ಮೃತದೇಹ ಬೆಂಗಳೂರು ತಲುಪುವವರೆಗೂ ಕುಟುಂಬಕ್ಕೆ ಧೈರ್ಯ ತುಂಬಿ ಅವರ ಜೊತೆಗಿದ್ದರು. ಈ ಕಾರ್ಯವನ್ನು ಇಂದು ಎಸ್.ಎಂ. ಕೃಷ್ಣ ನೆನಪಿಸಿಕೊಂಡಿದ್ದಾರೆ ಎಂಬ ಮಾಹಿತಿ ಇದೆ.

ಡಿಕೆಶಿಯನ್ನು ಭೇಟಿ ಮಾಡಿದ ಮಾಜಿ ಸಿಎಂ ಎಸ್.ಎಂ. ಕೃಷ್ಣ.
Intro:newsBody:ಡಿಕೆಶಿ ಭೇಟಿ ಮಾಡಿ ಮಾತುಕತೆ ನಡೆಸಿದ ಎಸ್ಸೆಂಕೆ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರು ಮಾಜಿ ಸಚಿವ ಡಿಕೆ ಶಿವಕುಮಾರ್ ಅವರ ಸದಾಶಿವನಗರದ ನಿವಾಸಕ್ಕೆ ಬುಧವಾರ ಭೇಟಿ ನೀಡಿ ಮಾತುಕತೆ ನಡೆಸಿದರು.
ಇಂದು ಮಧ್ಯಾಹ್ನ ದಿಲ್ಲಿಯಿಂದ ಬೆಂಗಳೂರಿಗೆ ವಾಪಸಾಗಿರುವ ಶಿವಕುಮಾರ್ ಅವರನ್ನ ಎಸ್ಸೆಂಕೆ ಭೇಟಿ ಮಾಡಿದರು. ಸುದೀರ್ಘ ಸಮಾಲೋಚನೆ ನಡೆಸಿದ ಸಂದರ್ಭದಲ್ಲಿ ಸಂಸದ ಡಿಕೆ ಸುರೇಶ್ ಕೂಡ ಉಪಸ್ಥಿತರಿದ್ದರು.
ಡಿಕೆ ಶಿವಕುಮಾರ್ ತಿಹಾರ್ ಜೈಲಿನಿಂದ ಆಚೆ ಬಂದ ನಂತರದ ದಿನಗಳಲ್ಲಿ ನಾಯಕರು ಅವರ ನಿವಾಸಕ್ಕೆ ಆಗಮಿಸಿ ಭೇಟಿನೀಡಿ ತೆರಳುತ್ತಿದ್ದು ಇದುವರೆಗೂ ಮಾಜಿ ಸಿಎಂ ಎಸ್ಎಂ ಕೃಷ್ಣ ಮಾತ್ರ ಆಗಮಿಸಿರಲಿಲ್ಲ. ಸದಾಶಿವನಗರದಲ್ಲಿ ಇಬ್ಬರು ನಾಯಕರ ನಿವಾಸ ವಿದ್ದರೂ ಭೇಟಿಗೆ ಅವಕಾಶ ಕೂಡಿ ಬಂದಿರಲಿಲ್ಲ. ಇಂದು ದಿಲ್ಲಿಯಿಂದ ವಾಪಸಾಗಿರುವ ಶಿವಕುಮಾರ್ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿದ್ದು, ಇದೇ ಸಂದರ್ಭ ಎಸ್ಸೆಂಕೆ ಭೇಟಿ ನೀಡಿ ಒಂದು ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದರು.
ಎಸ್ ಎಂ ಕೃಷ್ಣ ಅಳಿಯ ಸಿದ್ದಾರ್ಥ್ ಕಣ್ಮರೆಯಾದ ಸಂದರ್ಭದಿಂದ ಅವರ ಮೃತದೇಹ ಬೆಂಗಳೂರು ತಲುಪುವವರೆಗೂ ಕುಟುಂಬಕ್ಕೆ ಧೈರ್ಯ ತುಂಬುವ ಜೊತೆಗೆ ಅವರೊಂದಿಗೆ ಇದ್ದು, ಮನೆ ಮಗನಂತೆ ಓಡಾಡಿದ್ದ ಶಿವಕುಮಾರ್ ಅವರ ಕಾರ್ಯವನ್ನು ಈ ಸಂದರ್ಭ ಎಸ್ಸೆಂಕೆ ನೆನಪಿಸಿಕೊಂಡರು. Conclusion:news

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.