ETV Bharat / state

ಸಿಡಿ ಗ್ಯಾಂಗ್​ ಶಂಕಿತರು ಭೋಪಾಲ್​ನಲ್ಲಿರುವ ಸುಳಿವು: ಮಧ್ಯಪ್ರದೇಶದಲ್ಲೇ ಬೀಡು ಬಿಟ್ಟಿರುವ ಎಸ್​ಐಟಿ ತಂಡ

ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಸಿಡಿ ಪ್ರಕರಣದ ಶಂಕಿತ ಆರೋಪಿಗಳು ಮಧ್ಯಪ್ರದೇಶದ ಭೋಪಾಲ್​ನಲ್ಲಿರುವ ಬಗ್ಗೆ ಸುಳಿವು ದೊರೆತಿದೆ. ಸದ್ಯ ಎಸ್​ಐಟಿ ತಂಡ ಮಧ್ಯಪ್ರದೇಶದಲ್ಲೇ ಬೀಡು ಬಿಟ್ಟು, ಅವರಿಗಾಗಿ ಶೋಧ ನಡೆಸುತ್ತಿದೆ.

author img

By

Published : Mar 23, 2021, 11:40 AM IST

SIT  rushed to Bhupal
4 ತಂಡಗಳಿಂದ ಸಿಡಿ ಗ್ಯಾಂಗ್​ಗಾಗಿ ತೀವ್ರ ಶೋಧ

ಬೆಂಗಳೂರು: ರಾಷ್ಟಮಟ್ಟದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿರುವ ಸಿಡಿ ಪ್ರಕರಣದಲ್ಲಿ ಶಾಮೀಲಾಗಿ ನಾಪತ್ತೆಯಾಗಿರುವ ಆರೋಪಿಗಳಿಗಾಗಿ ಎಸ್​ಐಟಿ ಅಧಿಕಾರಿಗಳು ತೀವ್ರ ಶೋಧ ಮುಂದುವರಿಸಿದ್ದಾರೆ. ಪ್ರಕರಣದ ಶಂಕಿತರು ಭೋಪಾಲ್ ನಲ್ಲಿರುವ ಮಾಹಿತಿ ಎಸ್​ಐಟಿಗೆ ದೊರೆತಿದೆ.

ಪ್ರಕರಣದ ಆರೋಪಿಗಳ ಹುಡುಕಾಟಕ್ಕೆ ಈಗಾಗಲೇ 4 ಪ್ರತ್ಯೇಕ ತಂಡಗಳನ್ನು ರಚಿಸಲಾಗಿದೆ. ಶಂಕಿತರು ದಿನಕ್ಕೊಂದು ಪ್ರದೇಶದಲ್ಲಿ ಓಡಾಡಿ ಸಿನಿಮೀಯ ಶೈಲಿಯಲ್ಲಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದಾರೆ. ಸುಳಿವಿನ ಬೆನ್ನಲ್ಲೇ ಮಧ್ಯಪ್ರದೇಶದಲ್ಲಿ ಬೀಡು ಬಿಟ್ಟಿರುವ ಎಸ್​ಐಟಿ ತಂಡ ಶೋಧ ಕಾರ್ಯ ಮುಂದುವರೆಸಿದೆ. 4 ತಂಡಗಳಿಗೂ ಒಂದೊಂದು ಹೊಣೆ ನೀಡಲಾಗಿದ್ದು, ಒಂದು ತಂಡ ತಾಂತ್ರಿಕ ಕಾರ್ಯಾಚರಣೆ ನಡೆಸುತ್ತಿದ್ದರೆ, ಇನ್ನೊಂದು ತಂಡದ ಆರೋಪಿಗಳು ಓಡಾಡುತ್ತಿರುವ ಸ್ಥಳ ಪತ್ತೆ ಹಚ್ಚಲು ಹಲವು ರಾಜ್ಯಗಳನ್ನು ಸುತ್ತುತ್ತಿದೆ. ಇನ್ನೆರಡು ತಂಡಗಳು ಜಪ್ತಿ ಮಾಡಿದ ದಾಖಲೆ ಕಲೆ ಹಾಕೋ ಕೆಲಸ ಹಾಗೂ ಸಾಕ್ಷಿ ಸಂಗ್ರಹಿಸುವುದರಲ್ಲಿ ನಿರತವಾಗಿವೆ.

ಸಿಡಿ ಯುವತಿ ಮತ್ತು ಹ್ಯಾಕರ್ ಶ್ರವಣ್ ಪರಿಚಿತರು:

ಯುವತಿ ಮತ್ತು ಹ್ಯಾಕರ್ ಶ್ರವಣ್ ಚಿರಪರಿಚಿತರೆಂದು ಹಾಗೂ ಪ್ರಕರಣದ ಕಿಂಗ್ ಪಿನ್ ಎನ್ನಲಾಗುತ್ತಿರುವ ನರೇಶ್ ಗೌಡನಿಗೆ ಶ್ರವಣ್ ಯುವತಿಯನ್ನು ಪರಿಚಯಿಸಿದ್ದ. ಬಳಿಕ ಸಿಡಿ ಗ್ಯಾಂಗ್ ಒಡನಾಟ ಶುರುವಾಯಿತು ಎಂಬ ಮಾಹಿತಿ ದೊರೆತಿದೆ.

ಬೆಂಗಳೂರು: ರಾಷ್ಟಮಟ್ಟದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿರುವ ಸಿಡಿ ಪ್ರಕರಣದಲ್ಲಿ ಶಾಮೀಲಾಗಿ ನಾಪತ್ತೆಯಾಗಿರುವ ಆರೋಪಿಗಳಿಗಾಗಿ ಎಸ್​ಐಟಿ ಅಧಿಕಾರಿಗಳು ತೀವ್ರ ಶೋಧ ಮುಂದುವರಿಸಿದ್ದಾರೆ. ಪ್ರಕರಣದ ಶಂಕಿತರು ಭೋಪಾಲ್ ನಲ್ಲಿರುವ ಮಾಹಿತಿ ಎಸ್​ಐಟಿಗೆ ದೊರೆತಿದೆ.

ಪ್ರಕರಣದ ಆರೋಪಿಗಳ ಹುಡುಕಾಟಕ್ಕೆ ಈಗಾಗಲೇ 4 ಪ್ರತ್ಯೇಕ ತಂಡಗಳನ್ನು ರಚಿಸಲಾಗಿದೆ. ಶಂಕಿತರು ದಿನಕ್ಕೊಂದು ಪ್ರದೇಶದಲ್ಲಿ ಓಡಾಡಿ ಸಿನಿಮೀಯ ಶೈಲಿಯಲ್ಲಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದಾರೆ. ಸುಳಿವಿನ ಬೆನ್ನಲ್ಲೇ ಮಧ್ಯಪ್ರದೇಶದಲ್ಲಿ ಬೀಡು ಬಿಟ್ಟಿರುವ ಎಸ್​ಐಟಿ ತಂಡ ಶೋಧ ಕಾರ್ಯ ಮುಂದುವರೆಸಿದೆ. 4 ತಂಡಗಳಿಗೂ ಒಂದೊಂದು ಹೊಣೆ ನೀಡಲಾಗಿದ್ದು, ಒಂದು ತಂಡ ತಾಂತ್ರಿಕ ಕಾರ್ಯಾಚರಣೆ ನಡೆಸುತ್ತಿದ್ದರೆ, ಇನ್ನೊಂದು ತಂಡದ ಆರೋಪಿಗಳು ಓಡಾಡುತ್ತಿರುವ ಸ್ಥಳ ಪತ್ತೆ ಹಚ್ಚಲು ಹಲವು ರಾಜ್ಯಗಳನ್ನು ಸುತ್ತುತ್ತಿದೆ. ಇನ್ನೆರಡು ತಂಡಗಳು ಜಪ್ತಿ ಮಾಡಿದ ದಾಖಲೆ ಕಲೆ ಹಾಕೋ ಕೆಲಸ ಹಾಗೂ ಸಾಕ್ಷಿ ಸಂಗ್ರಹಿಸುವುದರಲ್ಲಿ ನಿರತವಾಗಿವೆ.

ಸಿಡಿ ಯುವತಿ ಮತ್ತು ಹ್ಯಾಕರ್ ಶ್ರವಣ್ ಪರಿಚಿತರು:

ಯುವತಿ ಮತ್ತು ಹ್ಯಾಕರ್ ಶ್ರವಣ್ ಚಿರಪರಿಚಿತರೆಂದು ಹಾಗೂ ಪ್ರಕರಣದ ಕಿಂಗ್ ಪಿನ್ ಎನ್ನಲಾಗುತ್ತಿರುವ ನರೇಶ್ ಗೌಡನಿಗೆ ಶ್ರವಣ್ ಯುವತಿಯನ್ನು ಪರಿಚಯಿಸಿದ್ದ. ಬಳಿಕ ಸಿಡಿ ಗ್ಯಾಂಗ್ ಒಡನಾಟ ಶುರುವಾಯಿತು ಎಂಬ ಮಾಹಿತಿ ದೊರೆತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.