ETV Bharat / state

ಶಿವಾಜಿನಗರದಲ್ಲಿ ಕಾಟಾಚಾರಕ್ಕೆ ಸಿದ್ದರಾಮಯ್ಯ ಪ್ರಚಾರ..!?

ಶಿವಾಜಿನಗರದ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಪರವಾಗಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಾಟಾಚಾರಕ್ಕೆ ಪ್ರಚಾರ ಮಾಡಿದಂತಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ.

author img

By

Published : Dec 2, 2019, 6:59 AM IST

ಶಿವಾಜಿನಗರದಲ್ಲಿ ಕಾಟಚಾರದ ಸಿದ್ದರಾಮಯ್ಯ ಪ್ರಚಾರ
ಶಿವಾಜಿನಗರದಲ್ಲಿ ಕಾಟಚಾರದ ಸಿದ್ದರಾಮಯ್ಯ ಪ್ರಚಾರ

ಬೆಂಗಳೂರು: ಶಿವಾಜಿನಗರದ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಪರವಾಗಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಾಟಾಚಾರಕ್ಕೆ ಪ್ರಚಾರ ಮಾಡಿದಂತಾಯಿತು. ಭಾನುವಾರ ಸಾಯಂಕಾಲ 4 ಗಂಟೆಯಿಂದಲೇ ಶಿವಾಜಿನಗರದ ಹಲಸೂರು ವಾರ್ಡಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಹಾಗೂ ಶಾಂತಿನಗರ ಶಾಸಕ ಹ್ಯಾರಿಸ್ ಸೇರಿದಂತೆ ಅನೇಕ ಮುಖಂಡರು ಸಿದ್ದರಾಮಯ್ಯ ಅವರಿಗಾಗಿ ಕಾಯಬೇಕಾಯಿತು. ನಾಲ್ಕು ಗಂಟೆಗೆ ಶುರುವಾಗಬೇಕಿದ್ದ ಪ್ರಚಾರವನ್ನು, ಒಂದು ಗಂಟೆ ತಡವಾಗಿ ಆರಂಭಿಸಲಾಯಿತು.

ಶಿವಾಜಿನಗರದಲ್ಲಿ ಕಾಟಚಾರದ ಸಿದ್ದರಾಮಯ್ಯ ಪ್ರಚಾರ

ಶಿವಾಜಿನಗರದ ಚೌಕ ರಸ್ತೆಯಿಂದ ಕಾಂಗ್ರೆಸ್​​ ರೋಡ್ ಶೋ ಶುರುವಾಗಿದ್ದು, ಹಲಸೂರು ಕೆರೆ ಬಳಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ರೋಡ್ ಶೋಗೆ ಜೊತೆಯಾದರು. ಅಲ್ಲದೇ ಅಲ್ಲಿಂದ ಹಲಸೂರಿನ ತಿರುವಳ್ಳುವರ್ ಪ್ರತಿಮೆವರೆಗೂ ಸುಮಾರು ಅರ್ಧ ಕಿಮೀ ತೆರೆದ ವಾಹನದಲ್ಲಿ ಬಂದ ಸಿದ್ದರಾಮಯ್ಯ ಹಾಗೂ ದಿನೇಶ್ ಗುಂಡೂರಾವ್, ತಿರುವಳ್ಳುವರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಒಂದು ಕ್ಷಣವೂ ಅಲ್ಲಿರದೇ ಜಾಗ ಖಾಲಿ ಮಾಡಿದರು. ಶಿವಾಜಿನಗರದಲ್ಲಿ ಮನೆಮನೆಗೂ ಪ್ರಚಾರಕ್ಕೆ ತೆರಳುವ ಸಿದ್ದತೆಯಲ್ಲಿದ್ದ ರಿಜ್ವಾನ್, ಈ ಕಾರಣದಿಂದಾಗಿ ಅರ್ಧಕ್ಕೆ ತಮ್ಮ ಪ್ರಚಾರವನ್ನು ಮೊಟಕುಗೊಳಿಸಿದರು.

ಕಳೆದ ಹತ್ತು ದಿನಗಳಿಂದ ಕಾಂಗ್ರೆಸ್ ಅಭ್ಯರ್ಥಿ ಪರ ಭರ್ಜರಿ ರೋಡ್ ಶೋ ಮಾಡಿದ್ದ ಸಿದ್ದರಾಮಯ್ಯ, ಶಿವಾಜಿನಗರದಲ್ಲಿ ಮಾತ್ರ ಕಾಟಾಚಾರದ ಪ್ರಚಾರ ಮಾಡಿದ್ದಾರೆ. ಕೈ ನಾಯಕರು ಶಿವಾಜಿನಗರ ಕ್ಷೇತ್ರವನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂಬುದು ಇದರಿಂದ ಮೇಲ್ನೋಟಕ್ಕೆ ಕಾಣುತ್ತಿದೆ ಎಂಬ ಅಸಮಾಧಾನವೂ ವ್ಯಕ್ತವಾಗಿದೆ.

ಬೆಂಗಳೂರು: ಶಿವಾಜಿನಗರದ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಪರವಾಗಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಾಟಾಚಾರಕ್ಕೆ ಪ್ರಚಾರ ಮಾಡಿದಂತಾಯಿತು. ಭಾನುವಾರ ಸಾಯಂಕಾಲ 4 ಗಂಟೆಯಿಂದಲೇ ಶಿವಾಜಿನಗರದ ಹಲಸೂರು ವಾರ್ಡಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಹಾಗೂ ಶಾಂತಿನಗರ ಶಾಸಕ ಹ್ಯಾರಿಸ್ ಸೇರಿದಂತೆ ಅನೇಕ ಮುಖಂಡರು ಸಿದ್ದರಾಮಯ್ಯ ಅವರಿಗಾಗಿ ಕಾಯಬೇಕಾಯಿತು. ನಾಲ್ಕು ಗಂಟೆಗೆ ಶುರುವಾಗಬೇಕಿದ್ದ ಪ್ರಚಾರವನ್ನು, ಒಂದು ಗಂಟೆ ತಡವಾಗಿ ಆರಂಭಿಸಲಾಯಿತು.

ಶಿವಾಜಿನಗರದಲ್ಲಿ ಕಾಟಚಾರದ ಸಿದ್ದರಾಮಯ್ಯ ಪ್ರಚಾರ

ಶಿವಾಜಿನಗರದ ಚೌಕ ರಸ್ತೆಯಿಂದ ಕಾಂಗ್ರೆಸ್​​ ರೋಡ್ ಶೋ ಶುರುವಾಗಿದ್ದು, ಹಲಸೂರು ಕೆರೆ ಬಳಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ರೋಡ್ ಶೋಗೆ ಜೊತೆಯಾದರು. ಅಲ್ಲದೇ ಅಲ್ಲಿಂದ ಹಲಸೂರಿನ ತಿರುವಳ್ಳುವರ್ ಪ್ರತಿಮೆವರೆಗೂ ಸುಮಾರು ಅರ್ಧ ಕಿಮೀ ತೆರೆದ ವಾಹನದಲ್ಲಿ ಬಂದ ಸಿದ್ದರಾಮಯ್ಯ ಹಾಗೂ ದಿನೇಶ್ ಗುಂಡೂರಾವ್, ತಿರುವಳ್ಳುವರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಒಂದು ಕ್ಷಣವೂ ಅಲ್ಲಿರದೇ ಜಾಗ ಖಾಲಿ ಮಾಡಿದರು. ಶಿವಾಜಿನಗರದಲ್ಲಿ ಮನೆಮನೆಗೂ ಪ್ರಚಾರಕ್ಕೆ ತೆರಳುವ ಸಿದ್ದತೆಯಲ್ಲಿದ್ದ ರಿಜ್ವಾನ್, ಈ ಕಾರಣದಿಂದಾಗಿ ಅರ್ಧಕ್ಕೆ ತಮ್ಮ ಪ್ರಚಾರವನ್ನು ಮೊಟಕುಗೊಳಿಸಿದರು.

ಕಳೆದ ಹತ್ತು ದಿನಗಳಿಂದ ಕಾಂಗ್ರೆಸ್ ಅಭ್ಯರ್ಥಿ ಪರ ಭರ್ಜರಿ ರೋಡ್ ಶೋ ಮಾಡಿದ್ದ ಸಿದ್ದರಾಮಯ್ಯ, ಶಿವಾಜಿನಗರದಲ್ಲಿ ಮಾತ್ರ ಕಾಟಾಚಾರದ ಪ್ರಚಾರ ಮಾಡಿದ್ದಾರೆ. ಕೈ ನಾಯಕರು ಶಿವಾಜಿನಗರ ಕ್ಷೇತ್ರವನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂಬುದು ಇದರಿಂದ ಮೇಲ್ನೋಟಕ್ಕೆ ಕಾಣುತ್ತಿದೆ ಎಂಬ ಅಸಮಾಧಾನವೂ ವ್ಯಕ್ತವಾಗಿದೆ.

Intro:ಮಾಜಿ ಸಿಎಂ ಸಿದ್ದರಾಮಯ್ಯ ಇಂದು ಶಿವಾಜಿನಗರದ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಹರ್ಷದ್ ಪರ ಕಾಟಾಚಾರದ ಕ್ಯಾನ್ವಾಸ್ ಮಾಡಿದ್ರು. ಸಾಯಂಕಾಲ 4 ಗಂಟೆಯಿಂದಲೇ ಶಿವಾಜಿನಗರದ ಹಲಸೂರು ವಾರ್ಡಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಹರ್ಷದ್ ಮಾಜಿ ಸಚಿವ ಹ್ಯಾರಿಸ್ ಹಾಗೂ ತಮಿಳು ನಾಡಿನ ಕಾಂಗ್ರೆಸ್ ಅಧ್ಯಕ್ಷರು ಸೇರಿದಂತೆ ಸ್ಥಳೀಯ ಮುಖಂಡರು.ಸಾವಿರಾರು ಕಾರ್ಯಕರ್ತರ ಜೊತೆ ಸಿದ್ದರಾಮಯ್ಯನವರಿಗಾಗಿ ಕಾದು ,ಸುಸ್ತಾಗಿ 4 ಗಂಟೆಗೆ ಶುರುವಾಗ ಬೇಕಿದ್ದ ಪ್ರಚಾರವನ್ನು ಒಂದು ಗಂಟೆ ತಡವಾಗಿ ಆರಂಭಿಸಿದ್ರು.


Body:ಶಿವಾಜಿನಗರದ ಚೌಕ ರಸ್ತೆಯಿಂದ ಶುರುವಾದ ಕಾಂಗ್ರೆಸ್ ನ ರೋಡ್ ಶೋ ಹಲಸೂರು ಕೆರೆ ಬಳಿಗೆವರುವ ವೇಳೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ದಿನೇಶ್ ಗುಂಡುರಾವ್ ಬಂದು ರೋಡ್ ಶೋ ಗೆ ಜೊತೆಯಾದ್ರು.ಅಲ್ಲದೆ ಅಲ್ಲಿಂದ ಹಲಸೂರಿನ ತಿರುವಳ್ಳರು ಪ್ರತಿಮೆವರೆಗೂ ಸುಮಾರು ಅರ್ಧ ಕಿಮೀ ತೆರೆದ ವಾಹನದಲ್ಲಿ ಬಂದ ಸಿದ್ದರಾಮಯ್ಯ ಹಾಗೂ ದಿನೇಶ್ ಗುಂಡುರಾವ್ ತಿರುವಳ್ಳುವರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಒಂದು ಕ್ಷಣವೂ ಅಲ್ಲಿರಲು ಜಾಗ ಖಾಲಿ ಮಾಡಿದರು.ಅಲ್ಲದೆ ಶಿವಾಜಿನಗರದಲ್ಲಿ ಮನೆಮನೆಗೂ ಪ್ರಚಾರಕ್ಕೆ ತೆರಳುವ ಸಿದ್ದತೆಯಲ್ಲಿದ ರಿಜ್ವಾನ್ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರು ಈಗೆ ಬಂದು ಆಗೆ ಹೋದ ಕಾರಣ ಅರ್ಧಕ್ಕೆ ತಮ್ಮ ಪ್ರಚಾರವನ್ನು ಮೊಟಕುಗೊಳಿಸಿದ್ರು.

ಕಳೆದ ಹತ್ತು ದಿನಗಳಿಂದ ಕಾಂಗ್ರೆಸ್ ಅಭ್ಯರ್ಥಿ ಪರ ಭರ್ಜರಿ ರೋಡ್ ಶೋ ಮಾಡಿದ್ದ ಸಿದ್ದರಾಮಯ್ಯ ಇಂದು ಶಿವಾಜಿನಗರದಲ್ಲಿ ಮಾತ್ರ ಕಾಟಾಚಾರದ ಕ್ಯಾನ್ ವಾಸ್ ಮಾಡಿದ್ದು ,ಕೈ ನಾಯಕರು ಶಿವಾಜಿನಗರ ಕ್ಷೇತ್ರವನ್ನು ಗಂಭೀರವಾಗಿ ಪರಿಗಣಿಸಿದಂತೆ ಕಾಣ್ತಿಲ್ಲ.

ಸತೀಶ ಎಂಬಿ.




Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.