ETV Bharat / state

ಸದನದಲ್ಲಿ ಸಿದ್ದರಾಮಯ್ಯ v/s ಸಿ.ಟಿ.ರವಿ... ಆತ್ಮಸಾಕ್ಷಿ ನಮಗಿಲ್ಲ ಎಂದ ಎ.ಟಿ.ರಾಮಸ್ವಾಮಿ

author img

By

Published : Jul 22, 2019, 7:12 PM IST

ನನ್ನನ್ನು ಧರ್ಮಸಿಂಗ್​ ಡಿಸಿಎಂ ಸ್ಥಾನದಿಂದ ಉಚ್ಛಾಟಿಸಿದರು. ಬಾಯಿಗೆ ಬಂದಂತೆ ಏನೇನೋ ಮಾತನಾಡಬೇಡಿ. ಸುಮ್ನೆ ಕೂತ್ಕೋಳಪ್ಪ ಎಂದು ಸಿದ್ದರಾಮಯ್ಯ ಸಿ.ಟಿ. ರವಿಗೆ ತಿರುಗೇಟು ನೀಡಿದರು.

ಸಿದ್ದರಾಮಯ್ಯ v/s ಸಿ.ಟಿ.ರವಿ

ಬೆಂಗಳೂರು : ಭೋಜನ ವಿರಾಮದ ಬಳಿಕ ಕಲಾಪ ಪ್ರಾರಂಭದಲ್ಲಿಯೇ ಬಿಜೆಪಿ ಶಾಸಕ ಸಿ.ಟಿ. ರವಿ, ಅಲ್ಲಿರುವವರು ಬನ್ನಿ, ಉತ್ತಮ ಅವಕಾಶ ನಾವು ನೀಡುತ್ತೇವೆ ಎಂದು ಸಚಿವ ಕೃಷ್ಣಭೈರೇಗೌಡರಿಗೆ ಆಹ್ವಾನ ನೀಡಿದರು.

ಚೆಲುವರಾಯಸ್ವಾಮಿ, ಅಖಂಡ ಶ್ರೀನಿವಾಸಮೂರ್ತಿ, ಜಮೀರ್ ಅಹ್ಮದ್ ಸೇರಿ ಎಲ್ಲರನ್ನೂ ಹೇಗೆ ಕರೆದೊಯ್ದಿರಿ. ಆಗ ಇಲ್ಲದ ನೈತಿಕತೆ ಈಗ ಹೇಗೆ ಬರುತ್ತದೆ ಎಂದು ಸಿ.ಟಿ. ರವಿ ಮಾಜಿ ಸಿಎಂ ಸಿದ್ದರಾಮಯ್ಯರ ಕಾಲೆಳೆದರು. ಈ ವೇಳೆ ಮಧ್ಯಪ್ರವೇಶಿಸದ ಜೆಡಿಎಸ್ ಶಾಸಕ ಶಿವಲಿಂಗೇಗೌಡರು, ಅವರನ್ನು ಸರ್ಕಾರ ಬೀಳಿಸಿ ಕರೆದೊಯ್ಯಲಿಲ್ಲ. ನಿಮ್ಮಂತೆ ಅವರು ಮಾಡಲಿಲ್ಲ ಬಿಡಪ್ಪ ಎಂದು ಸಿ.ಟಿ. ರವಿಗೆ ಟಾಂಗ್ ನೀಡಿದರು.

ಮುಂದುವರೆದು ಮಾತನಾಟಿದ ಸಿ.ಟಿ.ರವಿ, ಹಿಂದೆ ದೇವೇಗೌಡರ ಬಗ್ಗೆ ಏನು ಹೇಳಿದ್ರಿ. ಆಗ ಬೈಯ್ದವರು, ಈಗ ಹೊಗಳೋಕೆ ಹೋಗ್ತಿರಲ್ಲ ಎಂದಾಗ, ನಾನು ಡಿಸಿಎಂ ಆಗಿದ್ದೆ. ಜೆಡಿಎಸ್​ನಿಂದ ನಾನಾಗಿಯೇ ಹೊರಬರಲಿಲ್ಲ. ನನ್ನನ್ನು ಧರ್ಮಸಿಂಗ್​ ಡಿಸಿಎಂ ಸ್ಥಾನದಿಂದ ಉಚ್ಛಾಟಿಸಿದರು. ಬಾಯಿಗೆ ಬಂದಂತೆ ಏನೇನೋ ಮಾತನಾಡಬೇಡಿ. ಸುಮ್ನೆ ಕೂತ್ಕೋಳಪ್ಪ ಎಂದು ಸಿದ್ದರಾಮಯ್ಯ ಸಿ.ಟಿ.ರವಿಗೆ ತಿರುಗೇಟು ನೀಡಿದರು.

ಸಿದ್ದರಾಮಯ್ಯ v/s ಸಿ.ಟಿ.ರವಿ

ಇದರ ನಡುವೆ ಮಾತನಾಡಿದ ಜೆಡಿಎಸ್ ಶಾಸಕ ಎ.ಟಿ.ರಾಮಸ್ವಾಮಿ, ಆತ್ಮಸಾಕ್ಷಿ ನಮಗಿಲ್ಲ. ನಮ್ಮ ನಾಲ್ಕೈದು ಶಾಸಕರು ರಾಜೀನಾಮೆ ನೀಡಿದ್ದಾರೆ. ಸ್ವಇಚ್ಛೆಯಿಂದ ರಾಜೀನಾಮೆ ನೀಡಿದ್ದೇವೆ ಅಂತಾರೆ. ಆಸೆ, ಆಮಿಷಗಳಿಗೆ ಒಳಗಾಗಿಲ್ಲವೆಂದು ಅಲ್ಲಿಂದಲೇ ಹೇಳುತ್ತಿದ್ದಾರೆ. ಯಾವುದೇ ಒತ್ತಡ ನಿಮಗಿಲ್ಲವಾದರೆ ಯಾಕೆ ಅಲ್ಲಿದ್ದೀರಾ?‌ ಸ್ವಾಭಿಮಾನಿಗಳಾಗಿದ್ದರೆ ಕರ್ನಾಟಕದಲ್ಲಿಯೇ ಇರಬೇಕಿತ್ತು. ರಾಜ್ಯ ಬಿಟ್ಟು ಹೋಗುವಂತ ಪರಿಸ್ಥಿತಿ ಬಂದಿತ್ತಾ? ಈಗ ರಾಜ್ಯವನ್ನು ಹರಾಜು ಹಾಕಿದ್ದೀರಲ್ಲವೇ. ಇಲ್ಲಿ ನಿಮಗೆ ರಕ್ಷಣೆ, ಗೌರವ ಸಿಗುತ್ತಿರಲಿಲ್ಲವೇ, ಅಲ್ಲಿಗೆ ಹೋಗುವಷ್ಟು ಅರಾಜಕತೆ ಇಲ್ಲಿತ್ತಾ? ಎಂದು ಅತೃಪ್ತ ಶಾಸಕರಿಗೆ ಎ.ಟಿ.ರಾಮಸ್ವಾಮಿ ಪ್ರಶ್ನಿಸಿದರು.

ಪಕ್ಷಾಂತರ ನಿಷೇಧ ಕಾಯ್ದೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನವೂ ನಡೆದಿದೆ. ಹೀಗಾಗಿ ಒಂದು ಐತಿಹಾಸಿಕ ನಿರ್ಣಯ ನೀವು ಮಾಡಬೇಕು ಎಂದು ಸ್ಪೀಕರ್​ಗೆ ಎ.ಟಿ.ರಾಮಸ್ವಾಮಿ ಮನವಿ ಮಾಡಿದರು.

ಬೆಂಗಳೂರು : ಭೋಜನ ವಿರಾಮದ ಬಳಿಕ ಕಲಾಪ ಪ್ರಾರಂಭದಲ್ಲಿಯೇ ಬಿಜೆಪಿ ಶಾಸಕ ಸಿ.ಟಿ. ರವಿ, ಅಲ್ಲಿರುವವರು ಬನ್ನಿ, ಉತ್ತಮ ಅವಕಾಶ ನಾವು ನೀಡುತ್ತೇವೆ ಎಂದು ಸಚಿವ ಕೃಷ್ಣಭೈರೇಗೌಡರಿಗೆ ಆಹ್ವಾನ ನೀಡಿದರು.

ಚೆಲುವರಾಯಸ್ವಾಮಿ, ಅಖಂಡ ಶ್ರೀನಿವಾಸಮೂರ್ತಿ, ಜಮೀರ್ ಅಹ್ಮದ್ ಸೇರಿ ಎಲ್ಲರನ್ನೂ ಹೇಗೆ ಕರೆದೊಯ್ದಿರಿ. ಆಗ ಇಲ್ಲದ ನೈತಿಕತೆ ಈಗ ಹೇಗೆ ಬರುತ್ತದೆ ಎಂದು ಸಿ.ಟಿ. ರವಿ ಮಾಜಿ ಸಿಎಂ ಸಿದ್ದರಾಮಯ್ಯರ ಕಾಲೆಳೆದರು. ಈ ವೇಳೆ ಮಧ್ಯಪ್ರವೇಶಿಸದ ಜೆಡಿಎಸ್ ಶಾಸಕ ಶಿವಲಿಂಗೇಗೌಡರು, ಅವರನ್ನು ಸರ್ಕಾರ ಬೀಳಿಸಿ ಕರೆದೊಯ್ಯಲಿಲ್ಲ. ನಿಮ್ಮಂತೆ ಅವರು ಮಾಡಲಿಲ್ಲ ಬಿಡಪ್ಪ ಎಂದು ಸಿ.ಟಿ. ರವಿಗೆ ಟಾಂಗ್ ನೀಡಿದರು.

ಮುಂದುವರೆದು ಮಾತನಾಟಿದ ಸಿ.ಟಿ.ರವಿ, ಹಿಂದೆ ದೇವೇಗೌಡರ ಬಗ್ಗೆ ಏನು ಹೇಳಿದ್ರಿ. ಆಗ ಬೈಯ್ದವರು, ಈಗ ಹೊಗಳೋಕೆ ಹೋಗ್ತಿರಲ್ಲ ಎಂದಾಗ, ನಾನು ಡಿಸಿಎಂ ಆಗಿದ್ದೆ. ಜೆಡಿಎಸ್​ನಿಂದ ನಾನಾಗಿಯೇ ಹೊರಬರಲಿಲ್ಲ. ನನ್ನನ್ನು ಧರ್ಮಸಿಂಗ್​ ಡಿಸಿಎಂ ಸ್ಥಾನದಿಂದ ಉಚ್ಛಾಟಿಸಿದರು. ಬಾಯಿಗೆ ಬಂದಂತೆ ಏನೇನೋ ಮಾತನಾಡಬೇಡಿ. ಸುಮ್ನೆ ಕೂತ್ಕೋಳಪ್ಪ ಎಂದು ಸಿದ್ದರಾಮಯ್ಯ ಸಿ.ಟಿ.ರವಿಗೆ ತಿರುಗೇಟು ನೀಡಿದರು.

ಸಿದ್ದರಾಮಯ್ಯ v/s ಸಿ.ಟಿ.ರವಿ

ಇದರ ನಡುವೆ ಮಾತನಾಡಿದ ಜೆಡಿಎಸ್ ಶಾಸಕ ಎ.ಟಿ.ರಾಮಸ್ವಾಮಿ, ಆತ್ಮಸಾಕ್ಷಿ ನಮಗಿಲ್ಲ. ನಮ್ಮ ನಾಲ್ಕೈದು ಶಾಸಕರು ರಾಜೀನಾಮೆ ನೀಡಿದ್ದಾರೆ. ಸ್ವಇಚ್ಛೆಯಿಂದ ರಾಜೀನಾಮೆ ನೀಡಿದ್ದೇವೆ ಅಂತಾರೆ. ಆಸೆ, ಆಮಿಷಗಳಿಗೆ ಒಳಗಾಗಿಲ್ಲವೆಂದು ಅಲ್ಲಿಂದಲೇ ಹೇಳುತ್ತಿದ್ದಾರೆ. ಯಾವುದೇ ಒತ್ತಡ ನಿಮಗಿಲ್ಲವಾದರೆ ಯಾಕೆ ಅಲ್ಲಿದ್ದೀರಾ?‌ ಸ್ವಾಭಿಮಾನಿಗಳಾಗಿದ್ದರೆ ಕರ್ನಾಟಕದಲ್ಲಿಯೇ ಇರಬೇಕಿತ್ತು. ರಾಜ್ಯ ಬಿಟ್ಟು ಹೋಗುವಂತ ಪರಿಸ್ಥಿತಿ ಬಂದಿತ್ತಾ? ಈಗ ರಾಜ್ಯವನ್ನು ಹರಾಜು ಹಾಕಿದ್ದೀರಲ್ಲವೇ. ಇಲ್ಲಿ ನಿಮಗೆ ರಕ್ಷಣೆ, ಗೌರವ ಸಿಗುತ್ತಿರಲಿಲ್ಲವೇ, ಅಲ್ಲಿಗೆ ಹೋಗುವಷ್ಟು ಅರಾಜಕತೆ ಇಲ್ಲಿತ್ತಾ? ಎಂದು ಅತೃಪ್ತ ಶಾಸಕರಿಗೆ ಎ.ಟಿ.ರಾಮಸ್ವಾಮಿ ಪ್ರಶ್ನಿಸಿದರು.

ಪಕ್ಷಾಂತರ ನಿಷೇಧ ಕಾಯ್ದೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನವೂ ನಡೆದಿದೆ. ಹೀಗಾಗಿ ಒಂದು ಐತಿಹಾಸಿಕ ನಿರ್ಣಯ ನೀವು ಮಾಡಬೇಕು ಎಂದು ಸ್ಪೀಕರ್​ಗೆ ಎ.ಟಿ.ರಾಮಸ್ವಾಮಿ ಮನವಿ ಮಾಡಿದರು.

Intro:ಬೆಂಗಳೂರು : ಭೋಜನ ವಿರಾಮದ ಬಳಿಕವೂ ವಿಶ್ವಾಸಮತದ ಮೇಲೆ ಚರ್ಚೆ ಮುಂದುವರಿದಿದ್ದು, ಕಲಾಪ ಪ್ರಾರಂಭದಲ್ಲಿಯೇ ಬಿಜೆಪಿ ಅದಸ್ಯ ಸಿ.ಟಿ. ರವಿ ಮಾತನಾಡಿ, ಅಲ್ಲಿರುವವರು ಬನ್ನಿ, ಉತ್ತಮ ಅವಕಾಶ ನಾವು ನೀಡುತ್ತೇವೆ ಎಂದು ಸಚಿವ ಕೃಷ್ಣಭೈರೇಗೌಡರಿಗೆ ಆಹ್ವಾನ ನೀಡಿದರು.Body:ಚೆಲುವರಾಯಸ್ವಾಮಿ,ಅಖಂಡ ಶ್ರೀನಿವಾಸಮೂರ್ತಿ, ಜಮೀರ್ ಅಹ್ಮದ್ ಸೇರಿ ಎಲ್ಲರನ್ನೂ ಹೇಗೆ ಕರೆದೋಯ್ದಿರಿ. ಆಗ ಇಲ್ಲದ ನೈತಿಕತೆ ಈಗ ಹೇಗೆ ಬರುತ್ತದೆ ಎಂದು ಸಿ.ಟಿ.ರವಿ ಅವರು ಮಾಜಿ ಸಿಎಂ ಸಿದ್ದರಾಮಯ್ಯರನ್ನೂ ಕಿಚಾಯಿಸಿದರು.
ಇದರ ಮಧ್ಯಪ್ರವೇಶಿಸದ ಜೆಡಿಎಸ್ ಶಾಸಕ ಶಿವಲಿಂಗೇಗೌಡರು, ಅವರ್ಯಾರು ಸರ್ಕಾರ ಬೀಳಿಸಿ ಕರೆದೊಯ್ಯಲಿಲ್ಲ. ನಿಮ್ಮಂತೆ ಅವರು ಮಾಡಲಿಲ್ಲ ಬಿಡಪ್ಪ ಎಂದು ಸಿ.ಟಿ.ರವಿಗೆ ಟಾಂಗ್ ನೀಡಿದರು.
ಮಂದುವರೆದು ಮಾತನಾಟಿದ ರವಿ, ಹಿಂದೆ ದೇವೇಗೌಡರ ಬಗ್ಗೆ ಏನು ಹೇಳಿದ್ರಿ. ಆಗ ಬೈಯ್ದವರು, ಈಗ ಹೊಗಳೋಕೆ ಹೋಗ್ತಿರಲ್ಲ ಮತ್ತೆ ಸಿದ್ದರಾಮಯ್ಯನವರನ್ನು ಕಿಚಾಯಿಸಿದರು.
ಆಗ ಸಿದ್ದರಾಮಯ್ಯನವರು ಮಧ್ಯೆ ಪ್ರವೇಶಿಸಿ, ನಾನು ಉಪ ಮುಖ್ಯಮಂತ್ರಿಯಾಗಿದ್ದೆ. ಆಗ ನಾನಾಗಿಯೇ ಹೊರಬರಲಿಲ್ಲ, ಉಚ್ಚಾಟಿಸಿದ್ರು. ಅದಕ್ಕೆ ನಾನು ಅಹಿಂದ ಕಟ್ಟಿ ಹೊರಬಂದೆ.
ಕಾಂಗ್ರೆಸ್ ಗೆ ಬಂದಿದ್ದು ನಾನು ಉಚ್ಚಾಟನೆಯಾದ ಮೇಲೆ.
ಬಾಯಿಗೆ ಬಂದಂತೆ ಏನೇನೋ ಮಾತನಾಡಬೇಡ.
ಸುಮ್ನೆ ಕೂತ್ಕೋಳಪ್ಪ ಎಂದು ಸಿ.ಟಿ.ರವಿ ಅವರಿಗೆ ತಿರುಗೇಟು ನೀಡಿದರು.
ಇದರ ನಡುವೆ ಜೆಡಿಎಸ್ ಶಾಸಕ ಎ.ಟಿ.ರಾಮಸ್ವಾಮಿ, ಆತ್ಮಸಾಕ್ಷಿ ನ್ಯಾಯಾಲಯ ನಮಗಿಲ್ಲ. ನಮ್ಮ ನಾಲ್ಕೈ ದು ಶಾಸಕರು ರಾಜೀನಾಮೆ ನೀಡಿದ್ದಾರೆ. ಸ್ವಇಚ್ಚೆಯಿಂದ ರಾಜೀನಾಮೆ ನೀಡಿದ್ದೇವೆ ಅಂತಾರೆ. ಆಸೆ, ಅಮಿಷಗಳಿಗೆ ಒಳಗಾಗಿಲ್ಲವೆಂದು ಅಲ್ಲಿಂದಲೇ ಹೇಳುತ್ತಿದ್ದಾರೆ. ಯಾವುದೇ ಒತ್ತಡ ನಿಮಗಿಲ್ಲವಾದರೆ ಯಾಕೆ ಅಲ್ಲಿದ್ದೀರಾ?‌ ಎಂದು ಪ್ರಶ್ನಿಸಿದರು.
ಸ್ವಾಭಿಮಾನಿಗಳಾಗಿದ್ದರೆ ಕರ್ನಾಟಕದಲ್ಲಿಯೇ ಇರಬೇಕಿತ್ತು
ರಾಜ್ಯ ಬಿಟ್ಟು ಹೋಗುವಂತೆ ಪರಿಸ್ಥಿತಿ ಬಂದಿತ್ತಾ?. ಈಗ ರಾಜ್ಯವನ್ನು ಹರಾಜಾಕಿದ್ದೀರಲ್ಲವೇ. ಇಲ್ಲಿ ನಿಮಗೆ ರಕ್ಷಣೆ, ಗೌರವ ಸಿಗುತ್ತಿರಲಿಲ್ಲವೇ, ಅಲ್ಲಿಗೆ ಹೋಗುವಷ್ಟು ಹರಾಜಕತೆ ಇಲ್ಲಿತ್ತಾ? ಎಂದು ಅತೃಪ್ತ ಶಾಸಕರಿಗೆ ಎ.ಟಿ.ರಾಮಸ್ವಾಮಿ ಪ್ರಶ್ನಿಸಿದರು.
ಇನ್ನು ಸಂವಿಧಾನ ರಕ್ಷಣೆ ಮಾಡುವವರು ಯಾರು?. ಪಕ್ಷಾಂತರ ನಿಷೇದ ಕಾಯ್ದೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನವೂ ನಡೆದಿದೆ
ಹೀಗಾಗಿ ಒಂದು ಐತಿಹಾಸಿಕ ನಿರ್ಣಯ ನೀವು ಮಾಡಬೇಕು ಎಂದು ಸ್ಪೀಕರ್ ಗೆ ಮನವಿ ಮಾಡಿದರು.
ಪ್ರತಿ ಪಕ್ಷಕ್ಕೆ ಸೇವೆ ಮಾಡುವ ಭಾಗ್ಯ ಅಲ್ಲೇ ಇತ್ತು.
ಸರ್ಕಾರವನ್ನು ತಿದ್ದಿ ತೀಡುವ ಅವಕಾಶವಿತ್ತು. ಆದರೆ ಅಂತಹ ವಾತಾವರಣ ಕಾಣುತ್ತಿಲ್ಲ. ಶಾಸಕರ ಮೇಲೆ ಯಾವುದೋ ಒತ್ತಡ ಇದ್ದಂತಿದೆ ಎಂದು ರಾಮಸ್ವಾಮಿ ಅವರು ಆತಂಕ ವ್ಯಕ್ತಪಡಿಸಿದರು.
ಮುಂಬೈಗೆ ತೆರಳುತ್ತಿದ್ದ ವೇಳೆ ಅತೃಪ್ತ ಶಾಸಕರಿಗೆ ಜೀರೋ ಟ್ರಾಫಿಕ್ ನೀಡಲಾಗಿದೆ. ಪ್ರೋಟೋ ಕಾಲ್ ನಲ್ಲಿ ಜೀರೋ ಟ್ರಾಫಿಕ್ ಇದೆಯೇ?.
ಅತೃಪ್ತ ಶಾಸಕರಿಗೆ ಜೀರೋ ಟ್ರಾಫಿಕ್ ಕೊಟ್ಟಿದ್ದು ಏಕೆ, ಕೈ ಕಾಲು ಮುರಿದುಕೊಂಡವರಿಗೆ, ಗರ್ಭಿಣಿಗೆ ಜೀರೋ ಟ್ರಾಫಿಕ್ ಮಾಡಿಕೊಡ್ತೀರಾ? ಎಂದು ಪ್ರಶ್ನಿಸಿದರು.
ಕಾನೂನು, ಸಂವಿಧಾನಕ್ಕಿಂತ ದೊಡ್ಡವರು ಯಾರೂ ಇಲ್ಲ.
ಯಾವ ಘನ ಉದ್ದೇಶಕ್ಕಾಗಿ ಜೀರೋ ಟ್ರಾಫಿಕ್ ಕೊಟ್ಟಿದ್ದೀರಾ.
ಇದೊಂದು ಸಣ್ಣ ವಿಷಯವೇ ಅಲ್ಲ. ಗಂಭೀರವಾದ ವಿಷಯ ಎಂದರು.
ರಾಜ್ಯಪಾಲರು ಎರಡು ಭಾರಿ ಸಿಎಂಗೆ ನೊಟೀಸ್ ನೀಡಿದ್ದಾರೆ.
ನೊಟೀಸ್ ಕೊಟ್ಟಿದ್ದು ಒತ್ತಡದ ತಂತ್ರವೇ?. ನಾವು ರಾಜಕಾರಣಿಗಳು, ತಂತ್ರಗಾರಿಕೆ ಮಾಡಬಹುದು. ಆದರೆ ಕಾರ್ಯಾಂಗದ ಮುಖ್ಯಸ್ಥರು ತಂತ್ರಗಾರಿಕೆ ಮಾಡಬಹುದೇ?. ಕಾಪಾಡುವ ದೇವರೇ ವಿಷ ಕೊಟ್ಟರೆ ಕಾಪಾಡುವವರು ಯಾರು? ಎಂದು ರಾಜ್ಯಪಾಲರ ನಡೆಯನ್ನೂ ರಾಮಸ್ವಾಮಿ ಪ್ರಶ್ನಿಸಿದರು. Conclusion:

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.