ETV Bharat / state

ಹಥ್ರಾಸ್ ಅತ್ಯಾಚಾರ-ಕೊಲೆ ಘಟನೆ ಖಂಡಿಸಿ ಎಸ್​ಡಿಪಿಐ ಪ್ರತಿಭಟನೆ

author img

By

Published : Oct 7, 2020, 8:07 AM IST

ಹಥ್ರಾಸ್ ಅತ್ಯಾಚಾರ ಮತ್ತು ಕೊಲೆ ಘಟನೆ ಖಂಡಿಸಿ ಎಸ್​ಡಿಪಿಐ ಪ್ರತಿಭಟನೆ ನಡೆಸಿತು.

SDPI protest on Hathras rape and murder, SDPI protest on Hathras rape and murder incident, SDPI protest in Bangalore, Hathras rape and murder, Hathras rape and murder news, ಹಥ್ರಾಸ್ ಅತ್ಯಾಚಾರ ಮತ್ತು ಕೊಲೆ ಖಂಡಿಸಿ ಎಸ್​ಡಿಪಿಐ ಪ್ರತಿಭಟನೆ, ಬೆಂಗಲೂರಿನಲ್ಲಿ ಹಥ್ರಾಸ್ ಅತ್ಯಾಚಾರ ಮತ್ತು ಕೊಲೆ ಖಂಡಿಸಿ ಎಸ್​ಡಿಪಿಐ ಪ್ರತಿಭಟನೆ, ಹಥ್ರಾಸ್ ಅತ್ಯಾಚಾರ ಮತ್ತು ಕೊಲೆ, ಹಥ್ರಾಸ್ ಅತ್ಯಾಚಾರ ಮತ್ತು ಕೊಲೆ ಸುದ್ದಿ,
ಹಥ್ರಾಸ್ ಅತ್ಯಾಚಾರ, ಕೊಲೆ ಖಂಡಿಸಿ ಎಸ್​ಡಿಪಿಐ ಪ್ರತಿಭಟನೆ

ಬೆಂಗಳೂರು: ಉತ್ತರಪ್ರದೇಶದ ಹಥ್ರಾಸ್​ನಲ್ಲಿ ನಡೆದ ಯುವತಿಯ ಅತ್ಯಾಚಾರ ಪ್ರಕರಣ ಖಂಡಿಸಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಪಕ್ಷದ ಕಾರ್ಯಕರ್ತರು ನಗರದ ಮೈಸೂರು ಸರ್ಕಲ್​ನಲ್ಲಿ ಪ್ರತಿಭಟನೆ ನಡೆಸಿದರು.

ಪಕ್ಷದ ರಾಜ್ಯಾಧ್ಯಕ್ಷ ಇಲ್ಯಾಜ್ ಮಹಮ್ಮದ್ ತುಂಬೆ ಮಾತನಾಡಿ, ದೇಶದಲ್ಲಿ ಅಭಿವೃದ್ಧಿಗಾಗಿ ಬೀದಿಗೆ ಬರುವ ಬದಲಾಗಿ ನಮ್ಮ ಹೆಣ್ಣು ಮಕ್ಕಳ ಮಾನ ಉಳಿಸಿ ಎಂದು ಕೇಳಲು ಬೀದಿಗೆ ಬರುವಂತಾಗಿದೆ. ಉತ್ತರಪ್ರದೇಶ ಅತ್ಯಾಚಾರ-ಹತ್ಯೆಗಳ ಕೇಂದ್ರವಾಗಿದೆ. ಪ್ರಾಣಿಗಳನ್ನು ಕೊಂದು ತಿಂದ ಹಾಗೆ ದಲಿತ ಹೆಣ್ಣುಮಕ್ಕಳನ್ನು ಕೊಲ್ಲಲಾಗುತ್ತಿದೆ ಎಂದರು.

ಹಥ್ರಾಸ್ ಅತ್ಯಾಚಾರ, ಕೊಲೆ ಖಂಡಿಸಿ ಎಸ್​ಡಿಪಿಐ ಪ್ರತಿಭಟನೆ

ನ್ಯಾಷನಲ್ ಕ್ರೈಂ ರೆಕಾರ್ಡ್ ಪ್ರಕಾರ ಉತ್ತರಪ್ರದೇಶದಲ್ಲಿ 2018ರಲ್ಲಿ 37,000 ಅತ್ಯಾಚಾರ ನಡೆದಿದೆ. ಸಂಘ ಪರಿವಾರದ ಕಾರ್ಯಕರ್ತರಿಗೆ, ಬಿಜೆಪಿಯವರಿಗೆ, ಯೋಗಿಯ ಹಿಂಬಾಲಕರಿಗೆ ರೇಪ್ ಮಾಡುವುದು, ಕೊಲೆ ಮಾಡುವುದು ಮಾತ್ರ ಕೆಲಸವಾ ಎಂದು ಪ್ರಶ್ನಿಸಿದರು.

ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿ ಆಗುವ ಮೊದಲು ಕೂಡ ಮಹಿಳೆಯರ ಬಗ್ಗೆ ಕೀಳಾಗಿ ಮಾತನಾಡಿದ್ದಾರೆ. ಉತ್ತರಪ್ರದೇಶದ ಸಿಎಂ ಮೇಲೆ 18 ಕ್ರಿಮಿನಲ್ ಕೇಸ್​ಗಳಿವೆ. ಆದರೂ ಶಿಕ್ಷೆ ಸಿಗುತ್ತಿಲ್ಲ. ಸಿಎಂ ಆಗಿ ಅಧಿಕಾರ ಚಲಾಯಿಸ್ತಿದಾರೆ ಎಂದು ಆರೋಪಿಸಿದರು.

ಬೆಂಗಳೂರು: ಉತ್ತರಪ್ರದೇಶದ ಹಥ್ರಾಸ್​ನಲ್ಲಿ ನಡೆದ ಯುವತಿಯ ಅತ್ಯಾಚಾರ ಪ್ರಕರಣ ಖಂಡಿಸಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಪಕ್ಷದ ಕಾರ್ಯಕರ್ತರು ನಗರದ ಮೈಸೂರು ಸರ್ಕಲ್​ನಲ್ಲಿ ಪ್ರತಿಭಟನೆ ನಡೆಸಿದರು.

ಪಕ್ಷದ ರಾಜ್ಯಾಧ್ಯಕ್ಷ ಇಲ್ಯಾಜ್ ಮಹಮ್ಮದ್ ತುಂಬೆ ಮಾತನಾಡಿ, ದೇಶದಲ್ಲಿ ಅಭಿವೃದ್ಧಿಗಾಗಿ ಬೀದಿಗೆ ಬರುವ ಬದಲಾಗಿ ನಮ್ಮ ಹೆಣ್ಣು ಮಕ್ಕಳ ಮಾನ ಉಳಿಸಿ ಎಂದು ಕೇಳಲು ಬೀದಿಗೆ ಬರುವಂತಾಗಿದೆ. ಉತ್ತರಪ್ರದೇಶ ಅತ್ಯಾಚಾರ-ಹತ್ಯೆಗಳ ಕೇಂದ್ರವಾಗಿದೆ. ಪ್ರಾಣಿಗಳನ್ನು ಕೊಂದು ತಿಂದ ಹಾಗೆ ದಲಿತ ಹೆಣ್ಣುಮಕ್ಕಳನ್ನು ಕೊಲ್ಲಲಾಗುತ್ತಿದೆ ಎಂದರು.

ಹಥ್ರಾಸ್ ಅತ್ಯಾಚಾರ, ಕೊಲೆ ಖಂಡಿಸಿ ಎಸ್​ಡಿಪಿಐ ಪ್ರತಿಭಟನೆ

ನ್ಯಾಷನಲ್ ಕ್ರೈಂ ರೆಕಾರ್ಡ್ ಪ್ರಕಾರ ಉತ್ತರಪ್ರದೇಶದಲ್ಲಿ 2018ರಲ್ಲಿ 37,000 ಅತ್ಯಾಚಾರ ನಡೆದಿದೆ. ಸಂಘ ಪರಿವಾರದ ಕಾರ್ಯಕರ್ತರಿಗೆ, ಬಿಜೆಪಿಯವರಿಗೆ, ಯೋಗಿಯ ಹಿಂಬಾಲಕರಿಗೆ ರೇಪ್ ಮಾಡುವುದು, ಕೊಲೆ ಮಾಡುವುದು ಮಾತ್ರ ಕೆಲಸವಾ ಎಂದು ಪ್ರಶ್ನಿಸಿದರು.

ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿ ಆಗುವ ಮೊದಲು ಕೂಡ ಮಹಿಳೆಯರ ಬಗ್ಗೆ ಕೀಳಾಗಿ ಮಾತನಾಡಿದ್ದಾರೆ. ಉತ್ತರಪ್ರದೇಶದ ಸಿಎಂ ಮೇಲೆ 18 ಕ್ರಿಮಿನಲ್ ಕೇಸ್​ಗಳಿವೆ. ಆದರೂ ಶಿಕ್ಷೆ ಸಿಗುತ್ತಿಲ್ಲ. ಸಿಎಂ ಆಗಿ ಅಧಿಕಾರ ಚಲಾಯಿಸ್ತಿದಾರೆ ಎಂದು ಆರೋಪಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.