ETV Bharat / state

ವಿಧಾನಸಭೆ ಮೊಗಸಾಲೆಯಲ್ಲಿ ಪತ್ರಕರ್ತರಿಗೆ ಹೇರಿದ್ದ ನಿರ್ಬಂಧ ತೆರವು - Restriction to media in assembly hall cleared

ವಿಧಾನಸಭೆ ಮೊಗಸಾಲೆಯಲ್ಲಿ ಪತ್ರಕರ್ತರಿಗೆ ಹೇರಿದ್ದ ನಿರ್ಬಂಧವನ್ನು ತೆರವುಗೊಳಿಸಲು ಸ್ಪೀಕರ್ ಕಾಗೇರಿ​ ಸೂಚನೆ ನೀಡಿದ್ದಾರೆ‌.

Restriction to media in assembly hall cleared
ಸ್ಪೀಕರ್ ಕಾಗೇರಿ​
author img

By

Published : Mar 9, 2020, 12:57 PM IST

ಬೆಂಗಳೂರು: ವಿಧಾನಸಭೆ ಮೊಗಸಾಲೆಯಲ್ಲಿ ಪತ್ರಕರ್ತರಿಗೆ ಹೇರಿದ್ದ ನಿರ್ಬಂಧವನ್ನು ತೆರವುಗೊಳಿಸಲು ಸ್ಪೀಕರ್ ಕಾಗೇರಿ​ ಸೂಚನೆ ನೀಡಿದ್ದಾರೆ‌.

ಪತ್ರಕರ್ತರಿಗೆ ಎಂದಿನಂತೆ ವಿಧಾನಸಭೆ ಮೊಗಸಾಲೆ ಪ್ರವೇಶಕ್ಕೆ ಅವಕಾಶ ನೀಡುವಂತೆ ಮಾರ್ಷಲ್​ಗಳಿಗೆ ಸೂಚಿಸಿದ್ದಾರೆ. ಶಾಸಕರ ಪಿಎಗಳಿಗೆ ಮಾತ್ರ ಮೊಗಸಾಲೆ ಪ್ರವೇಶ ನಿರ್ಬಂಧವಿದ್ದು, ಪರ್ತಕರ್ತರ ಪ್ರವೇಶಕ್ಕೆ ಅವಕಾಶ ನೀಡುವಂತೆ ಸೂಚಿಸಿದ್ದಾರೆ.

ಓದಿ : ವಿಧಾನಸಭೆ ಮೊಗಸಾಲೆಯಲ್ಲೂ ಪತ್ರಕರ್ತರಿಗೆ ನಿಷೇಧ!

ಇಂದು ಬೆಳಗ್ಗೆ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ಮೊಗಸಾಲೆಗಳಿಗೆ ಪತ್ರಕರ್ತರ ಪ್ರವೇಶವನ್ನು ನಿರ್ಬಂಧಿಸಾಲಾಗಿತ್ತು. ಈ ಸಂಬಂಧ ಪತ್ರಕರ್ತರಿಗೆ‌ ಸ್ಪೀಕರ್ ಕಾಗೇರಿ ನಿರ್ಬಂಧ ಹೇರಿ‌ ಮೌಖಿಕ ಆದೇಶ ಹೊರಡಿಸಿದ್ದರು. ಉಭಯ ಮೊಗಸಾಲೆಗಳಲ್ಲಿ ಪತ್ರಕರ್ತರನ್ನು ಹೊರಗೆ ಕಳುಹಿಸಲು ಮಾರ್ಷಲ್​ಗಳಿಗೆ ಸೂಚಿಸಲಾಗಿತ್ತು. ವಿಧಾನಸಭೆ ಮೊಗಸಾಲೆಯಲ್ಲಿ ಇರುವ ಕ್ಯಾಂಟೀನ್​ಗೆ ಮಾತ್ರ ಪತ್ರಕರ್ತರ ಪ್ರವೇಶಕ್ಕೆ ಅವಕಾಶ ನೀಡಲಾಗಿತ್ತು. ಈ ಸಂಬಂಧ ಪತ್ರಕರ್ತರಿಂದ ತೀವ್ರ ಆಕ್ಷೇಪ ವ್ಯಕ್ತವಾದ ಹಿನ್ನೆಲೆ ಇದೀಗ ನಿರ್ಬಂಧವನ್ನು ತೆರವು ಮಾಡಲಾಗಿದೆ.

ಬೆಂಗಳೂರು: ವಿಧಾನಸಭೆ ಮೊಗಸಾಲೆಯಲ್ಲಿ ಪತ್ರಕರ್ತರಿಗೆ ಹೇರಿದ್ದ ನಿರ್ಬಂಧವನ್ನು ತೆರವುಗೊಳಿಸಲು ಸ್ಪೀಕರ್ ಕಾಗೇರಿ​ ಸೂಚನೆ ನೀಡಿದ್ದಾರೆ‌.

ಪತ್ರಕರ್ತರಿಗೆ ಎಂದಿನಂತೆ ವಿಧಾನಸಭೆ ಮೊಗಸಾಲೆ ಪ್ರವೇಶಕ್ಕೆ ಅವಕಾಶ ನೀಡುವಂತೆ ಮಾರ್ಷಲ್​ಗಳಿಗೆ ಸೂಚಿಸಿದ್ದಾರೆ. ಶಾಸಕರ ಪಿಎಗಳಿಗೆ ಮಾತ್ರ ಮೊಗಸಾಲೆ ಪ್ರವೇಶ ನಿರ್ಬಂಧವಿದ್ದು, ಪರ್ತಕರ್ತರ ಪ್ರವೇಶಕ್ಕೆ ಅವಕಾಶ ನೀಡುವಂತೆ ಸೂಚಿಸಿದ್ದಾರೆ.

ಓದಿ : ವಿಧಾನಸಭೆ ಮೊಗಸಾಲೆಯಲ್ಲೂ ಪತ್ರಕರ್ತರಿಗೆ ನಿಷೇಧ!

ಇಂದು ಬೆಳಗ್ಗೆ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ಮೊಗಸಾಲೆಗಳಿಗೆ ಪತ್ರಕರ್ತರ ಪ್ರವೇಶವನ್ನು ನಿರ್ಬಂಧಿಸಾಲಾಗಿತ್ತು. ಈ ಸಂಬಂಧ ಪತ್ರಕರ್ತರಿಗೆ‌ ಸ್ಪೀಕರ್ ಕಾಗೇರಿ ನಿರ್ಬಂಧ ಹೇರಿ‌ ಮೌಖಿಕ ಆದೇಶ ಹೊರಡಿಸಿದ್ದರು. ಉಭಯ ಮೊಗಸಾಲೆಗಳಲ್ಲಿ ಪತ್ರಕರ್ತರನ್ನು ಹೊರಗೆ ಕಳುಹಿಸಲು ಮಾರ್ಷಲ್​ಗಳಿಗೆ ಸೂಚಿಸಲಾಗಿತ್ತು. ವಿಧಾನಸಭೆ ಮೊಗಸಾಲೆಯಲ್ಲಿ ಇರುವ ಕ್ಯಾಂಟೀನ್​ಗೆ ಮಾತ್ರ ಪತ್ರಕರ್ತರ ಪ್ರವೇಶಕ್ಕೆ ಅವಕಾಶ ನೀಡಲಾಗಿತ್ತು. ಈ ಸಂಬಂಧ ಪತ್ರಕರ್ತರಿಂದ ತೀವ್ರ ಆಕ್ಷೇಪ ವ್ಯಕ್ತವಾದ ಹಿನ್ನೆಲೆ ಇದೀಗ ನಿರ್ಬಂಧವನ್ನು ತೆರವು ಮಾಡಲಾಗಿದೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.