ETV Bharat / state

ಚಿನ್ನಸ್ವಾಮಿಯಲ್ಲೂ ಅಣ್ಣಾವ್ರಿಗೆ ಗೌರವ.. ಆರ್​ಸಿಬಿ ವಿನಯತೆಗೆ ಕನ್ನಡಿಗರು ಫಿದಾ..

author img

By

Published : Apr 25, 2019, 9:34 AM IST

ಡಾ.ರಾಜ್​ ಕುಮಾರ್​ ಹುಟ್ಟುಹಬ್ಬಕ್ಕೆ ಹಲವು ಗಣ್ಯರು ಟೀಟ್​ ಮಾಡಿ ಶುಭಕೋರಿದ್ದಾರೆ. ಈ ಮಧ್ಯೆ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಕೂಡಾ ನಿನ್ನೆ ನಡೆದ ಪಂದ್ಯದಲ್ಲಿ ಅಣ್ಣಾವ್ರಿಗೆ ವಿಶೇಷ ಗೌರವ ಸಲ್ಲಿಸಿ ಕನ್ನಡಿಗರ ಮನಗೆದ್ದಿದೆ.

ಚಿನ್ನಸ್ವಾಮಿಯಲ್ಲೂ ಅಣ್ಣಾವ್ರಿಗೆ ಗೌರವ

ಬೆಂಗಳೂರು: ನಿನ್ನೆ ನಡೆದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಹಾಗೂ ಕಿಂಗ್ಸ್​ ಇಲೆವೆನ್​​ ಪಂಜಾಬ್​ ನಡುವಿನ ಪಂದ್ಯದಲ್ಲಿ ಅಭಿಮಾನಿಗಳು ಕ್ರಿಕೆಟ್​ ಜೊತೆಯಲ್ಲಿ ವರನಟ ಡಾ. ರಾಜಕುಮಾರ್ ಅವರ ಜಪ ಮಾಡಿದ್ದಾರೆ.

ಚಿನ್ನಸ್ವಾಮಿಯಲ್ಲೂ ಅಣ್ಣಾವ್ರಿಗೆ ಗೌರವ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಐಪಿಎಲ್​ ಪಂದ್ಯವನ್ನ ಆರ್​ಸಿಬಿ ತಂಡ ನಮ್ಮೆಲ್ಲರ ನೆಚ್ಚಿನ ಅಣ್ಣಾವ್ರಿಗೆ ಅರ್ಪಿಸಿದೆ. ಟ್ವೀಟ್​ ಮೂಲಕ ಅಣ್ಣಾವ್ರ ಜನ್ಮದಿನದ ಶುಭಕೋರಿ ಕನ್ನಡಿಗರ ಮನಗೆದ್ದಿದ್ದ ಬೆಂಗಳೂರು ಟೀಂ, ಸ್ಟೇಡಿಯಂನಲ್ಲಿ ರಾಜಕುಮಾರ್ ಅವರಿಗೆ ವಿಶೇಷ ಗೌರವ ಸಲ್ಲಿಸಿತು. ಪಂದ್ಯ ನೋಡಲು ಬಂದಿದ್ದ ಪ್ರತಿಯೊಬ್ಬರೂ ಸ್ಟೇಡಿಯಂನ ಎಲ್ಇಡಿ ಸ್ಕ್ರೀನ್​ಗಳಲ್ಲಿ ಅಣ್ಣಾವ್ರನ್ನ ಕಣ್ತುಂಬಿಕೊಂಡು ಹುಟ್ಟು ಹಬ್ಬದ ಶುಭ ಕೋರಿದರು.

  • On the 91st anniversary of his birth, we send all our love to Karnataka's jewel, Dr. Rajkumar! ಕನ್ನಡದ ಕಣ್ಮಣಿ ನಟ ಸಾರ್ವ‌ಭೌಮ ದಿ| ಡಾ. ರಾಜ್ ಕುಮಾರ್ ಅವರ 91ನೆಯ ಜನ್ಮ ದಿನದ ಹಾರ್ದಿಕ ಶುಭಾಶಯಗಳು! pic.twitter.com/4GmBlfWF7o

    — Royal Challengers (@RCBTweets) April 24, 2019 " class="align-text-top noRightClick twitterSection" data=" ">

ಇನ್ನು ಈ ಸಂದರ್ಭದಲ್ಲಿ ಅಣ್ಣಾವ್ರ ಮಗ ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ ಕುಮಾರ್ ಪಂದ್ಯಕ್ಕೆ ಸಾಕ್ಷಿಯಾಗಿದ್ದು ವಿಶೇಷವಾಗಿತ್ತು.

RCB
ಸ್ಟೇಡಿಯಂಗೆ ಆಗಮಿಸಿ ಪಂದ್ಯ ವೀಕ್ಷಿಸಿದ ಶಿವಣ್ಣ

ಎಬಿ ಡಿ ವಿಲಿಯರ್ಸ್​​ ಉತ್ತಮ ಬ್ಯಾಟಿಂಗ್ ನೆರವಿನಿಂದ ಮತ್ತು ಡೆತ್ ಓವರ್​ನಲ್ಲಿ ಬೌಲರ್​ಗಳು ತೋರಿದ ಅದ್ಭುತ ಪ್ರದರ್ಶನದಿಂದ ಆರ್​ಸಿಬಿ ತಂಡ ಗೆಲವು ದಾಖಲಿಸಿತು. ಇದೇ ವೇಳೆ, ಟ್ವೀಟ್​ ಮಾಡಿರುವ ಆರ್​ಸಿಬಿ ಟೀಂ ಪಂದ್ಯದ ಗೆಲುವನ್ನ ಡಾ.ರಾಜ್​ಗೆ ಅರ್ಪಿಸಿದೆ.

ಬೆಂಗಳೂರು: ನಿನ್ನೆ ನಡೆದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಹಾಗೂ ಕಿಂಗ್ಸ್​ ಇಲೆವೆನ್​​ ಪಂಜಾಬ್​ ನಡುವಿನ ಪಂದ್ಯದಲ್ಲಿ ಅಭಿಮಾನಿಗಳು ಕ್ರಿಕೆಟ್​ ಜೊತೆಯಲ್ಲಿ ವರನಟ ಡಾ. ರಾಜಕುಮಾರ್ ಅವರ ಜಪ ಮಾಡಿದ್ದಾರೆ.

ಚಿನ್ನಸ್ವಾಮಿಯಲ್ಲೂ ಅಣ್ಣಾವ್ರಿಗೆ ಗೌರವ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಐಪಿಎಲ್​ ಪಂದ್ಯವನ್ನ ಆರ್​ಸಿಬಿ ತಂಡ ನಮ್ಮೆಲ್ಲರ ನೆಚ್ಚಿನ ಅಣ್ಣಾವ್ರಿಗೆ ಅರ್ಪಿಸಿದೆ. ಟ್ವೀಟ್​ ಮೂಲಕ ಅಣ್ಣಾವ್ರ ಜನ್ಮದಿನದ ಶುಭಕೋರಿ ಕನ್ನಡಿಗರ ಮನಗೆದ್ದಿದ್ದ ಬೆಂಗಳೂರು ಟೀಂ, ಸ್ಟೇಡಿಯಂನಲ್ಲಿ ರಾಜಕುಮಾರ್ ಅವರಿಗೆ ವಿಶೇಷ ಗೌರವ ಸಲ್ಲಿಸಿತು. ಪಂದ್ಯ ನೋಡಲು ಬಂದಿದ್ದ ಪ್ರತಿಯೊಬ್ಬರೂ ಸ್ಟೇಡಿಯಂನ ಎಲ್ಇಡಿ ಸ್ಕ್ರೀನ್​ಗಳಲ್ಲಿ ಅಣ್ಣಾವ್ರನ್ನ ಕಣ್ತುಂಬಿಕೊಂಡು ಹುಟ್ಟು ಹಬ್ಬದ ಶುಭ ಕೋರಿದರು.

  • On the 91st anniversary of his birth, we send all our love to Karnataka's jewel, Dr. Rajkumar! ಕನ್ನಡದ ಕಣ್ಮಣಿ ನಟ ಸಾರ್ವ‌ಭೌಮ ದಿ| ಡಾ. ರಾಜ್ ಕುಮಾರ್ ಅವರ 91ನೆಯ ಜನ್ಮ ದಿನದ ಹಾರ್ದಿಕ ಶುಭಾಶಯಗಳು! pic.twitter.com/4GmBlfWF7o

    — Royal Challengers (@RCBTweets) April 24, 2019 " class="align-text-top noRightClick twitterSection" data=" ">

ಇನ್ನು ಈ ಸಂದರ್ಭದಲ್ಲಿ ಅಣ್ಣಾವ್ರ ಮಗ ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ ಕುಮಾರ್ ಪಂದ್ಯಕ್ಕೆ ಸಾಕ್ಷಿಯಾಗಿದ್ದು ವಿಶೇಷವಾಗಿತ್ತು.

RCB
ಸ್ಟೇಡಿಯಂಗೆ ಆಗಮಿಸಿ ಪಂದ್ಯ ವೀಕ್ಷಿಸಿದ ಶಿವಣ್ಣ

ಎಬಿ ಡಿ ವಿಲಿಯರ್ಸ್​​ ಉತ್ತಮ ಬ್ಯಾಟಿಂಗ್ ನೆರವಿನಿಂದ ಮತ್ತು ಡೆತ್ ಓವರ್​ನಲ್ಲಿ ಬೌಲರ್​ಗಳು ತೋರಿದ ಅದ್ಭುತ ಪ್ರದರ್ಶನದಿಂದ ಆರ್​ಸಿಬಿ ತಂಡ ಗೆಲವು ದಾಖಲಿಸಿತು. ಇದೇ ವೇಳೆ, ಟ್ವೀಟ್​ ಮಾಡಿರುವ ಆರ್​ಸಿಬಿ ಟೀಂ ಪಂದ್ಯದ ಗೆಲುವನ್ನ ಡಾ.ರಾಜ್​ಗೆ ಅರ್ಪಿಸಿದೆ.

Intro:Dr Rajkumar birthday specialBody:ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಹಾಗೂ ಕಿಂಗ್ಸ್​ ಇಲೆವೆನ್​​ ಪಂಜಾಬ್​ ನಡುವಿನ ಪಂದ್ಯದಲ್ಲಿ ವರನಟ, ಗಾನಗಂಧರ್ವ, ದೇವತಾ ಮನುಷ್ಯ, ಪದ್ಮಭೂಷಣ ಡಾಕ್ಟರ್ ರಾಜಕುಮಾರ್ ಅವರ ಜಪ ಮಾಡಿದ ಅಭಿಮಾನಿಗಳು!!

ಹೌದು ಇಂದಿನ ಪಂದ್ಯವನ್ನು, ನಮ್ಮೆಲ್ಲರ ನೆಚ್ಚಿನ ಅಣ್ಣಾವ್ರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅರ್ಪಿಸಿದೆ, ಇಂದು ಮುಂಜಾನೆಯೇ ಆರ್ಸಿಬಿ ಫೇಸ್ ಬುಕ್ ಪೇಜ್ ನಲ್ಲಿ ಗೌರವ ಸಲ್ಲಿಸಿ ಮ್ ಕನ್ನಡಿಗರ ಮನಗೆದ್ದಿದ್ದ ಬೆಂಗಳೂರು ತಂಡ, ಸ್ಟೇಡಿಯಂನಲ್ಲಿ ರಾಜಕುಮಾರ್ ರವರಿಗೆ ವಿಶೇಷ ಗೌರವ ಅರ್ಪಿಸಲಾಯಿತು, ಪಂದ್ಯ ನೋಡಲು ಬಂದಿದ್ದ ಪ್ರತಿಯೊಬ್ಬರು ಸ್ಟೇಡಿಯಂ ನ ಎಲ್ಇಡಿ ಸ್ಕ್ರೀನ್ ಗಳಲ್ಲಿ ಅಣ್ಣಾವ್ರನ್ನ ಕಣ್ತುಂಬಿಕೊಂಡು ಹುಟ್ಟು ಹಬ್ಬದ ಶುಭ ಕೋರಿದರು ಇನ್ನು ಈ ಸಂದರ್ಭಕ್ಕೆ ಅಣ್ಣಾವ್ರ ಮಗ ಹ್ಯಾಟ್ರಿಕ್ ಹೀರೋ ಡಾಕ್ಟರ್ ಶಿವರಾಜ್ ಕುಮಾರ್ ಸಾಕ್ಷಿಯಾಗಿದ್ದು ವಿಶೇಷ.

ಇನ್ನು ಎ ಬಿ ಡಿವಿಲಿಯರ್ಸ ಉತ್ತಮ ಬ್ಯಾಟಿಂಗ್ ನೆರವಿನಿಂದ ಮತ್ತು ಡೆತ್ ಓವರ್ಗಳಲ್ಲಿ ಬಂದಂತಹ ಅದ್ಭುತ ಬೌಲಿಂಗ್ ನಿಂದ ಆರ್ಸಿಬಿ ತಂಡ ಗೆದ್ದ ನಂತರ ಆರ್ಸಿಬಿ ಆಫೀಸಿಯಲ್ ಟ್ವಿಟರ್ ಪೇಜ್ ನಲ್ಲಿ ಗೆಲುವನ್ನು ಅವರಿಗೆ ಅರ್ಪಿಸಿದೆ, ಇದು ಪ್ರತಿಯೊಬ್ಬ ಕನ್ನಡಿಗರ ಮನಸ್ಸನ್ನು ಗೆದ್ದಿರುವುದು ಸುಳ್ಳಲ್ಲ.Conclusion:Special

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.