ETV Bharat / state

ಸ್ಪೀಕರ್​ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ರಮೇಶ್​ ಕುಮಾರ್​ಗೆ ರೇಣುಕಾಚಾರ್ಯ ಒತ್ತಾಯ -

ಅತೃಪ್ತ ಶಾಸಕರ ರಾಜೀನಾಮೆಯಿಂದಾಗಿ ಸ್ಪೀಕರ್ ಕೂಡ ಬಹುಮತ ಕಳೆದುಕೊಂಡಿದ್ದಾರೆ. ಅವರೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಮಾಜಿ ಸಚಿವ, ಶಾಸಕ ಎಂ.ಪಿ ರೇಣುಕಾಚಾರ್ಯ ಒತ್ತಾಯಿಸಿದ್ದಾರೆ.

ರಮೇಶ್​ ಕುಮಾರ್​ ಸ್ಪೀಕರ್​ ಸ್ಥಾನಕ್ಕೆ ರಾಜೀನಾಮೆ ನೀಡಬೇಕು: ರೇಣುಕಾಚಾರ್ಯ
author img

By

Published : Jul 11, 2019, 10:56 AM IST

ಬೆಂಗಳೂರು: ಅತೃಪ್ತ ಶಾಸಕರ ರಾಜೀನಾಮೆಯಿಂದಾಗಿ ಸ್ಪೀಕರ್ ಕೂಡ ಬಹುಮತ ಕಳೆದುಕೊಂಡಿದ್ದು, ಅವರೂ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕೆಂದು ಶಾಸಕ ಎಂ ಪಿ ರೇಣುಕಾಚಾರ್ಯ ಒತ್ತಾಯಿಸಿದ್ದಾರೆ.

ಡಾಲರ್ಸ್​ ಕಾಲನಿಯಲ್ಲಿರುವ ಬಿಎಸ್​ವೈ ನಿವಾಸದೆದುರು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸ್ಪೀಕರ್​ ವಿರುದ್ಧವೂ ಅವಿಶ್ವಾಸ ನಿರ್ಣಯ ಮಂಡನೆ ಕುರಿತು ಬಿಜೆಪಿ ಚಿಂತನೆ ನಡೆಸಲಿದೆ ಎಂದರು.

ರಮೇಶ್​ ಕುಮಾರ್​ ಸ್ಪೀಕರ್​ ಸ್ಥಾನಕ್ಕೆ ರಾಜೀನಾಮೆ ನೀಡಬೇಕು: ರೇಣುಕಾಚಾರ್ಯ

ಸಭಾಧ್ಯಕ್ಷರಿಗೆ ಸಂಖ್ಯಾಬಲ ಕಡಿಮೆಯಾಗಿದೆ. ಸಿಎಂಗೆ ಸಂಖ್ಯಾಬಲ ಕಡಿಮೆಯಾಗಿರುವಾಗ ಸಭಾಧ್ಯಕ್ಷರಿಗೆ ಕಡಿಮೆಯಾಗದಿರುತ್ತದೆಯೇ? ಅವರು ಬಹಳ ಗೌರವದಿಂದ ಆ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಅವಿರೋಧವಾಗಿ ಸರ್ವಾನುಮತದಿಂದ ಸ್ಪೀಕರ್ ಆಯ್ಕೆ ಮಾಡಿದ್ದು ನಿಜ. ಆದರೆ ಅವರು ಈಗ ಒಂದು ಪಕ್ಷದ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಪಕ್ಷದ ಕಾರ್ಯಕರ್ತರಂತೆ ಕೆಲಸ ಮಾಡುತ್ತಿದ್ದಾರೆ ಎಂದು ರೇಣುಕಾಚಾರ್ಯ ಆರೋಪಿಸಿದರು.

ಶಾಸಕರ ರಾಜೀನಾಮೆಯನ್ನು ಪಡೆದುಕೊಳ್ಳುವ ವೇಳೆ ಸ್ಪೀಕರ್​ ನಡೆದುಕೊಂಡಿರುವ ರೀತಿ, ತಂಡವಾಗಿ ವಿವರಣೆ ನೀಡಲು ಬರುವಂತೆ ಹೇಳಿದ್ದು, ಸರ್ಕಾರ ಉಳಿಸುವ ಪ್ರಯತ್ನ ಆಗಿದೆ. ನಿನ್ನೆ ನಡೆದ ಘಟನಾವಳಿಗೆ ಸ್ಪೀಕರ್ ನೇರ ಹೊಣೆ ಎಂದು ಶಾಸಕ ರೇಣುಕಾಚಾರ್ಯ ಗಂಭೀರ ಆರೋಪ ಮಾಡಿದರು.

ಮೊದಲೇ ಸ್ಪೀಕರ್​​ ಅವರು ಶಾಸಕರ ರಾಜೀನಾಮೆ ಅಂಗೀಕಾರ ಮಾಡಿದ್ದರೆ, ಇಂತಹ ಸನ್ನಿವೇಶ ನಿರ್ಮಾಣ ಆಗುತ್ತಿರಲಿಲ್ಲ ಎಂದು ಮಾಜಿ ಸಚಿವ ಅಭಿಪ್ರಾಯಪಟ್ಟರು.

ಬೆಂಗಳೂರು: ಅತೃಪ್ತ ಶಾಸಕರ ರಾಜೀನಾಮೆಯಿಂದಾಗಿ ಸ್ಪೀಕರ್ ಕೂಡ ಬಹುಮತ ಕಳೆದುಕೊಂಡಿದ್ದು, ಅವರೂ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕೆಂದು ಶಾಸಕ ಎಂ ಪಿ ರೇಣುಕಾಚಾರ್ಯ ಒತ್ತಾಯಿಸಿದ್ದಾರೆ.

ಡಾಲರ್ಸ್​ ಕಾಲನಿಯಲ್ಲಿರುವ ಬಿಎಸ್​ವೈ ನಿವಾಸದೆದುರು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸ್ಪೀಕರ್​ ವಿರುದ್ಧವೂ ಅವಿಶ್ವಾಸ ನಿರ್ಣಯ ಮಂಡನೆ ಕುರಿತು ಬಿಜೆಪಿ ಚಿಂತನೆ ನಡೆಸಲಿದೆ ಎಂದರು.

ರಮೇಶ್​ ಕುಮಾರ್​ ಸ್ಪೀಕರ್​ ಸ್ಥಾನಕ್ಕೆ ರಾಜೀನಾಮೆ ನೀಡಬೇಕು: ರೇಣುಕಾಚಾರ್ಯ

ಸಭಾಧ್ಯಕ್ಷರಿಗೆ ಸಂಖ್ಯಾಬಲ ಕಡಿಮೆಯಾಗಿದೆ. ಸಿಎಂಗೆ ಸಂಖ್ಯಾಬಲ ಕಡಿಮೆಯಾಗಿರುವಾಗ ಸಭಾಧ್ಯಕ್ಷರಿಗೆ ಕಡಿಮೆಯಾಗದಿರುತ್ತದೆಯೇ? ಅವರು ಬಹಳ ಗೌರವದಿಂದ ಆ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಅವಿರೋಧವಾಗಿ ಸರ್ವಾನುಮತದಿಂದ ಸ್ಪೀಕರ್ ಆಯ್ಕೆ ಮಾಡಿದ್ದು ನಿಜ. ಆದರೆ ಅವರು ಈಗ ಒಂದು ಪಕ್ಷದ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಪಕ್ಷದ ಕಾರ್ಯಕರ್ತರಂತೆ ಕೆಲಸ ಮಾಡುತ್ತಿದ್ದಾರೆ ಎಂದು ರೇಣುಕಾಚಾರ್ಯ ಆರೋಪಿಸಿದರು.

ಶಾಸಕರ ರಾಜೀನಾಮೆಯನ್ನು ಪಡೆದುಕೊಳ್ಳುವ ವೇಳೆ ಸ್ಪೀಕರ್​ ನಡೆದುಕೊಂಡಿರುವ ರೀತಿ, ತಂಡವಾಗಿ ವಿವರಣೆ ನೀಡಲು ಬರುವಂತೆ ಹೇಳಿದ್ದು, ಸರ್ಕಾರ ಉಳಿಸುವ ಪ್ರಯತ್ನ ಆಗಿದೆ. ನಿನ್ನೆ ನಡೆದ ಘಟನಾವಳಿಗೆ ಸ್ಪೀಕರ್ ನೇರ ಹೊಣೆ ಎಂದು ಶಾಸಕ ರೇಣುಕಾಚಾರ್ಯ ಗಂಭೀರ ಆರೋಪ ಮಾಡಿದರು.

ಮೊದಲೇ ಸ್ಪೀಕರ್​​ ಅವರು ಶಾಸಕರ ರಾಜೀನಾಮೆ ಅಂಗೀಕಾರ ಮಾಡಿದ್ದರೆ, ಇಂತಹ ಸನ್ನಿವೇಶ ನಿರ್ಮಾಣ ಆಗುತ್ತಿರಲಿಲ್ಲ ಎಂದು ಮಾಜಿ ಸಚಿವ ಅಭಿಪ್ರಾಯಪಟ್ಟರು.

Intro:


ಬೆಂಗಳೂರು: ಅತೃಪ್ತ ಶಾಸಕರ ರಾಜೀನಾಮೆಯಿಂದಾಗಿ ಸ್ಪೀಕರ್ ಕೂಡ ಬಹುಮತ ಕಳೆದುಕೊಂಡಿದ್ದು ಅವರೂ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ ಮಾಡಬೇಕು ಇಲ್ಲದೇ ಇದ್ದಲ್ಲಿ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಕುರಿತು ಪಕ್ಷ ಚಿಂತನೆ ನಡೆಸಲಿದೆ ಎಂದು ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ ಹೇಳಿದ್ದಾರೆ.

ಡಾಲರ್ಸ್ ಕಾಲೋನಿಯಲ್ಲಿರುವ ಯಡಿಯೂರಪ್ಪ ನಿವಾಸದ ಬಳಿ ಮಾತನಾಡಿದ ಅವರು,ಸಭಾಧ್ಯಕ್ಷರಿಗೆ ಸಂಖ್ಯಾಬಲ ಕಡಿಮೆಯಾಗಿದೆ ಸಿಎಂಗೆ ಸಂಖ್ಯಾಬಲ ಕಡಿಮೆಯಾಗಿರುವಾಗ ಸಭಾಧ್ಯಕ್ಷರಿಗೆ ಕಡಿಮೆಯಾಗದಿರುತ್ತದೆಯೇ?ಅವರು ಬಹಳ ಗೌರವದಿಂದ ಆಸ್ಥಾನಕ್ಕೆ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಅವಿರೋಧವಾಗಿ ಸರ್ವಾನುಮತದಿಂದ ಸ್ಪೀಕರ್ ಆಯ್ಕೆ ಮಾಡಿದ್ದು ನಿಜ ಆದರೆ ಅವರು ಈಗ ಒಂದು ಪಕ್ಷದ ಪರವಾಗಿ ಕೆಲಸ ಮಾಡುತ್ತಿದ್ದಾರೆ,ಪಕ್ಷದ ಕಾರ್ಯಕರ್ತರಂತೆ ಕೆಲಸ ಮಾಡುತ್ತಿದ್ದಾರೆ ನಾನು ಯಾವುದೇ ಪಕ್ಷದ ಪರ ಇಲ್ಲ ನೂರು ಕಿಲೋಮೀಟರ್ ದೂರದಿಂದ ಬರುತ್ತೇನೆ ಎಲ್ಲರೂ ಬನ್ನಿ ಬನ್ನಿ ರಾಜೀನಾಮೆ ಕೊಡಿ ಸ್ವೀಕಾರ ಮಾಡುತ್ತೇನೆ ಎಂದು ವ್ಯಂಗ್ಯವಾಡಿದ್ದರು ಶಾಸಕರ ಬಗ್ಗೆ ಒಂದು ರೀತಿಯಲ್ಲಿ ಅವಮಾನದಿಂದ ಮಾತನಾಡಿದರು ಆದರೆ 6 ರಂದು ಶಾಸಕರ ರಾಜಿನಾಮೆಯನ್ನು ಪಡೆದುಕೊಳ್ಳುವ ವೇಳೆ ನಡೆದುಕೊಂಡಿದ್ದು, ಆದರೆ ತಂಡವಾಗಿ ವಿವರಣೆ ನೀಡಲು ಬರುವಂತೆ ಹೇಳಿದ್ದು ಸ್ಪೀಕರ್ ಕೂಡ ಶಾಸಕರ ಮನವೊಲಿಸಲು, ಸರ್ಕಾರ ಉಳಿಸಲು ಪ್ರಯತ್ನ ಪಡುತ್ತಿರುವುದಕ್ಕೆ ಸಾಕ್ಷಿಯಾಗಿದೆ,ನಿನ್ನೆ ನಡೆದ ಘಟನಾವಳಿಗೆ ಸ್ಪೀಕರ್ ನೇರ ಹೊಣೆ,ಮೊದಲೇ ಅವರು ರಾಜೀನಾಮೆ ಅಂಗೀಕಾರ ಮಾಡಿದ್ದರೆ ಇಂತಹ ಸನ್ನಿವೇಶ ನಿರ್ಮಾಣ ಆಗುತ್ತಿರಲಿಲ್ಲ, ಸ್ಪೀಕರ್ ಪೀಠದ ಪಾವಿತ್ರ್ಯತೆಯನ್ನು ರಮೇಶ್ ಕುಮಾರ್ ಹಾಳುಮಾಡಿದ್ದಾರೆ ಎಂದು ಟೀಕಿಸಿದರು.Body:.Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.