ETV Bharat / state

Jaggesh meets DK Shivakumar: ಸ್ನೇಹಿತನಾಗಿ ಡಿಕೆ ಶಿವಕುಮಾರ್​​ಗೆ ಶುಭ ಕೋರಿದ್ದೇನೆ: ಜಗ್ಗೇಶ್

ರಾಜ್ಯಸಭೆ ಸದಸ್ಯ ಜಗ್ಗೇಶ್ ಹಾಗೂ ಅವರ ಪತ್ನಿ ಪರಿಮಳ ಅವರು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ನಿವಾಸಕ್ಕೆ ಭೇಟಿ ನೀಡಿ, ಅಭಿನಂದನೆ ಸಲ್ಲಿಸಿದರು.

author img

By

Published : Jun 12, 2023, 3:36 PM IST

Updated : Jun 12, 2023, 3:59 PM IST

rajya-sabha-member-jaggesh-congratulates-dcm-shivakumar
ಸ್ನೇಹಿತನಾಗಿ ಡಿಕೆ ಶಿವಕುಮಾರ್​​ಗೆ ಶುಭ ಕೋರಿದ್ದೇನೆ: ಜಗ್ಗೇಶ್

ಬೆಂಗಳೂರು: ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಭೇಟಿ ಬಗ್ಗೆ ವಿಶೇಷ ಅರ್ಥ ಬೇಡ. ನಾನೊಬ್ಬ ಸ್ನೇಹಿತನಾಗಿ ಅವರನ್ನು ಅಭಿನಂದಿಸಲು ಬಂದಿದ್ದೇನಷ್ಟೆ ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಹಾಗು ನಟ ಜಗ್ಗೇಶ್ ಸ್ಪಷ್ಟಪಡಿಸಿದ್ದಾರೆ. ಕುಮಾರಪಾರ್ಕ್ ನಲ್ಲಿರುವ ಕುಮಾರಕೃಪಾ ಅತಿಥಿಗೃಹಕ್ಕೆ ನಟ, ರಾಜ್ಯಸಭೆ ಸದಸ್ಯ ಜಗ್ಗೇಶ್ ಹಾಗೂ ಅವರ ಪತ್ನಿ ಪರಿಮಳ ಭೇಟಿ ನೀಡಿದರು. ಡಿಸಿಎಂ ಡಿ ಕೆ ಶಿವಕುಮಾರ್​​ ಅಭಿನಂದನೆ ಸಲ್ಲಿಸಿ ಕೆಲಕಾಲ ಮಾತುಕತೆ ನಡೆಸಿದರು.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಜಗ್ಗೇಶ್, ಡಿ ಕೆ ಶಿವಕುಮಾರ್ ಭೇಟಿಗೆ ವಿಶೇಷ ಅರ್ಥ ಕಲ್ಪಿಸುವುದು ಬೇಡ. ಮೊದಲನೇಯದಾಗಿ ಸ್ನೇಹಿತನಾಗಿ ಡಿಸಿಎಂ ಡಿಕೆ ಶಿವಕುಮಾರ್​​ಗೆ ಅಭಿನಂದನೆ ಸಲ್ಲಿಸಲು ಬಂದಿದ್ದೇನಷ್ಟೆ. ಡಿಕೆ ಶಿವಕುಮಾರ್ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದಾಗ ನಾನು ಅಮೇರಿಕಾದಲ್ಲಿದ್ದೆ. ಹಾಗಾಗಿ ಈಗ ವಾಪಸ್ ಬಂದ ನಂತರ ಇಂದು ಬಂದು ಅಭಿನಂದನೆ ಸಲ್ಲಿದ್ದೇನಷ್ಟೆ. ಇದನ್ನು ಬಿಟ್ಟು ಇಂದಿನ ಭೇಟಿಯಲ್ಲಿ ಬೇರೆ ಏನೂ ಇಲ್ಲ. ಯಾವುದೇ ರೀತಿಯ ರಾಜಕೀಯ ಚರ್ಚೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

rajya-sabha-member-jaggesh-congratulates-dcm-shivakumar
ಶಿವಕುಮಾರ್ ನಿವಾಸಕ್ಕೆ ಜಗ್ಗೇಶ್​ ದಂಪತಿ ಭೇಟಿ, ಮಾತುಕತೆ

ಬಿಜೆಪಿಯಿಂದ ರಾಜ್ಯಸಭಾ ಸದಸ್ಯನಾಗಿ ಇಂದಿಗೆ ಒಂದು ವರ್ಷ ಪೂರೈಸಿದ್ದೇನೆ. ನನ್ನ ಕಾರ್ಯ ವ್ಯಾಪ್ತಿಯಲ್ಲಿ ನನಗೆ ಇನ್ನೂ ಏನೆಲ್ಲಾ ಮಾಡೋಕೆ ಸಾಧ್ಯವೋ ಅದೆಲ್ಲನ್ನೂ ನಾನು ಮಾಡುತ್ತೇನೆ. ಸದ್ಯ ತುಮಕೂರನ್ನು ನೋಡಲ್ ಜಿಲ್ಲೆಯಾಗಿ ನನಗೆ ನೀಡಲಾಗಿದೆ. ಅದರಲ್ಲಿ ಒಂದು ಗ್ರಾಮ, ಒಂದು ಹೋಬಳಿ ತೆಗೆದುಕೊಳ್ಳಬೇಕು, ಆ ಕೆಲಸ ಮಾಡುತ್ತೇನೆ. ಇದುವರೆಗೂ 16ರಿಂದ 17 ಕೋಟಿ ರೂಪಾಯಿ ವೆಚ್ಚದ ಕೆಲಸ ಮಾಡಿದ್ದೇನೆ. ಇನ್ನೂ ಮುಂದೆ ಸಾಕಷ್ಟು ಕೆಲಸ ಮಾಡುವುದಿದೆ. ನನ್ನ ವ್ಯಾಪ್ತಿಯ ಅಷ್ಟೂ ಅನುದಾನದ ಬಳಕೆ ಮಾಡುತ್ತೇನೆ ಎಂದು ಜಗ್ಗೇಶ್​ ವಿಶ್ವಾಸ ವ್ಯಕ್ತಪಡಿಸಿದರು.

MP raghavendra congratulates dcm shivakumar
ಡಿಸಿಎಂ ಶಿವಕುಮಾರ್​ಗೆ ಸಂಸದ ರಾಘವೇಂದ್ರ ಅಭಿನಂದನೆ

ಡಿಸಿಎಂ ಭೇಟಿಯಾದ ಬಿಎಸ್​ವೈ ಪುತ್ರ: ಮಾಜಿ ಸಿಎಂ ಯಡಿಯೂರಪ್ಪನವರ ಪುತ್ರ, ಶಿವಮೊಗ್ಗ ಸಂಸದ ಬಿ ವೈ ರಾಘವೇಂದ್ರ ಇಂದು ಡಿಸಿಎಂ ಡಿ ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದರು. ಕುಮಾರಕೃಪಾ ಅತಿಥಿ ಗೃಹಕ್ಕೆ ಭೇಟಿ ನೀಡಿದ ಅವರು, ಡಿಕೆ ಶಿವಕುಮಾರ್​​ಗೆ ಅಭಿನಂದನೆ ಸಲ್ಲಿಸಿದರು. ಉಪ ಮುಖ್ಯಮಂತ್ರಿಯಾದ ವೇಳೆ ಶುಭ ಕೋರಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಈಗ ಬಂದು ಶುಭ ಕೋರಿದ್ದೇನೆ ಎಂದು ರಾಘವೇಂದ್ರ ಸ್ಪಷ್ಟಪಡಿಸಿದ್ದಾರೆ. ಯಡಿಯೂರಪ್ಪ ಹಾಗೂ ಡಿಕೆ ಶಿವಕುಮಾರ್ ನಡುವೆ ರಾಜಕೀಯ ಹೊರತಾದ ಸ್ನೇಹ, ವಿಶ್ವಾಸ ಇರುವುದರಿಂದಾಗಿ ಶಿವಕುಮಾರ್ ಅವರನ್ನು ರಾಘವೇಂದ್ರ ಭೇಟಿ ಮಾಡಿದ್ದಾರೆ. ಡಿಸಿಎಂ ಆಗುತ್ತಿದ್ದಂತೆ ಶಿವಕುಮಾರ್ ಡಾಲರ್ಸ್ ಕಾಲೋನಿಯಲ್ಲಿರುವ ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

MP raghavendra meets minister lakshmi hebbalkar
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೇಟಿಯಾದ ಸಂಸದ ರಾಘವೇಂದ್ರ

ಹೆಬ್ಬಾಳ್ಕರ್ ಭೇಟಿಯಾದ ಸಂಸದ ರಾಘವೇಂದ್ರ: ಶಿವಮೊಗ್ಗ ಲೋಕಸಭಾ ಸದಸ್ಯ ಬಿ.ವೈ. ರಾಘವೇಂದ್ರ ಅವರು ಅವರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದರು. ಮಹಾರಾಷ್ಟ್ರ ಮಾಜಿ ಸಿಎಂ ವಿಲಾಸರಾವ್ ದೇಶಮುಖ್ ಅವರ ಪುತ್ರ, ಶಾಸಕ ಧೀರಜ್ ದೇಶಮುಖ್ ಉಪಸ್ಥಿತಿಯಲ್ಲಿ ಭೇಟಿ ಮಾಡಿ ಸಮಾಲೋಚನೆ ನಡೆಸಿದರು. ಇದು ರಾಜಕೀಯ ಭೇಟಿಯಲ್ಲ ಅನೌಪಚಾರಿಕ ಭೇಟಿ ಎಂದು ಎಂಪಿ ಕಚೇರಿ ಮೂಲಗಳು ಮಾಹಿತಿ ನೀಡಿವೆ.

ಇದನ್ನೂ ಓದಿ: Lok Sabha election: ಲೋಕಸಭಾ ಹೊಂದಾಣಿಕೆ ವಿಚಾರವಾಗಿ ಹೆಚ್​ಡಿಕೆ ಹೇಳಿದ್ದು ಹೀಗೆ

ಬೆಂಗಳೂರು: ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಭೇಟಿ ಬಗ್ಗೆ ವಿಶೇಷ ಅರ್ಥ ಬೇಡ. ನಾನೊಬ್ಬ ಸ್ನೇಹಿತನಾಗಿ ಅವರನ್ನು ಅಭಿನಂದಿಸಲು ಬಂದಿದ್ದೇನಷ್ಟೆ ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಹಾಗು ನಟ ಜಗ್ಗೇಶ್ ಸ್ಪಷ್ಟಪಡಿಸಿದ್ದಾರೆ. ಕುಮಾರಪಾರ್ಕ್ ನಲ್ಲಿರುವ ಕುಮಾರಕೃಪಾ ಅತಿಥಿಗೃಹಕ್ಕೆ ನಟ, ರಾಜ್ಯಸಭೆ ಸದಸ್ಯ ಜಗ್ಗೇಶ್ ಹಾಗೂ ಅವರ ಪತ್ನಿ ಪರಿಮಳ ಭೇಟಿ ನೀಡಿದರು. ಡಿಸಿಎಂ ಡಿ ಕೆ ಶಿವಕುಮಾರ್​​ ಅಭಿನಂದನೆ ಸಲ್ಲಿಸಿ ಕೆಲಕಾಲ ಮಾತುಕತೆ ನಡೆಸಿದರು.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಜಗ್ಗೇಶ್, ಡಿ ಕೆ ಶಿವಕುಮಾರ್ ಭೇಟಿಗೆ ವಿಶೇಷ ಅರ್ಥ ಕಲ್ಪಿಸುವುದು ಬೇಡ. ಮೊದಲನೇಯದಾಗಿ ಸ್ನೇಹಿತನಾಗಿ ಡಿಸಿಎಂ ಡಿಕೆ ಶಿವಕುಮಾರ್​​ಗೆ ಅಭಿನಂದನೆ ಸಲ್ಲಿಸಲು ಬಂದಿದ್ದೇನಷ್ಟೆ. ಡಿಕೆ ಶಿವಕುಮಾರ್ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದಾಗ ನಾನು ಅಮೇರಿಕಾದಲ್ಲಿದ್ದೆ. ಹಾಗಾಗಿ ಈಗ ವಾಪಸ್ ಬಂದ ನಂತರ ಇಂದು ಬಂದು ಅಭಿನಂದನೆ ಸಲ್ಲಿದ್ದೇನಷ್ಟೆ. ಇದನ್ನು ಬಿಟ್ಟು ಇಂದಿನ ಭೇಟಿಯಲ್ಲಿ ಬೇರೆ ಏನೂ ಇಲ್ಲ. ಯಾವುದೇ ರೀತಿಯ ರಾಜಕೀಯ ಚರ್ಚೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

rajya-sabha-member-jaggesh-congratulates-dcm-shivakumar
ಶಿವಕುಮಾರ್ ನಿವಾಸಕ್ಕೆ ಜಗ್ಗೇಶ್​ ದಂಪತಿ ಭೇಟಿ, ಮಾತುಕತೆ

ಬಿಜೆಪಿಯಿಂದ ರಾಜ್ಯಸಭಾ ಸದಸ್ಯನಾಗಿ ಇಂದಿಗೆ ಒಂದು ವರ್ಷ ಪೂರೈಸಿದ್ದೇನೆ. ನನ್ನ ಕಾರ್ಯ ವ್ಯಾಪ್ತಿಯಲ್ಲಿ ನನಗೆ ಇನ್ನೂ ಏನೆಲ್ಲಾ ಮಾಡೋಕೆ ಸಾಧ್ಯವೋ ಅದೆಲ್ಲನ್ನೂ ನಾನು ಮಾಡುತ್ತೇನೆ. ಸದ್ಯ ತುಮಕೂರನ್ನು ನೋಡಲ್ ಜಿಲ್ಲೆಯಾಗಿ ನನಗೆ ನೀಡಲಾಗಿದೆ. ಅದರಲ್ಲಿ ಒಂದು ಗ್ರಾಮ, ಒಂದು ಹೋಬಳಿ ತೆಗೆದುಕೊಳ್ಳಬೇಕು, ಆ ಕೆಲಸ ಮಾಡುತ್ತೇನೆ. ಇದುವರೆಗೂ 16ರಿಂದ 17 ಕೋಟಿ ರೂಪಾಯಿ ವೆಚ್ಚದ ಕೆಲಸ ಮಾಡಿದ್ದೇನೆ. ಇನ್ನೂ ಮುಂದೆ ಸಾಕಷ್ಟು ಕೆಲಸ ಮಾಡುವುದಿದೆ. ನನ್ನ ವ್ಯಾಪ್ತಿಯ ಅಷ್ಟೂ ಅನುದಾನದ ಬಳಕೆ ಮಾಡುತ್ತೇನೆ ಎಂದು ಜಗ್ಗೇಶ್​ ವಿಶ್ವಾಸ ವ್ಯಕ್ತಪಡಿಸಿದರು.

MP raghavendra congratulates dcm shivakumar
ಡಿಸಿಎಂ ಶಿವಕುಮಾರ್​ಗೆ ಸಂಸದ ರಾಘವೇಂದ್ರ ಅಭಿನಂದನೆ

ಡಿಸಿಎಂ ಭೇಟಿಯಾದ ಬಿಎಸ್​ವೈ ಪುತ್ರ: ಮಾಜಿ ಸಿಎಂ ಯಡಿಯೂರಪ್ಪನವರ ಪುತ್ರ, ಶಿವಮೊಗ್ಗ ಸಂಸದ ಬಿ ವೈ ರಾಘವೇಂದ್ರ ಇಂದು ಡಿಸಿಎಂ ಡಿ ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದರು. ಕುಮಾರಕೃಪಾ ಅತಿಥಿ ಗೃಹಕ್ಕೆ ಭೇಟಿ ನೀಡಿದ ಅವರು, ಡಿಕೆ ಶಿವಕುಮಾರ್​​ಗೆ ಅಭಿನಂದನೆ ಸಲ್ಲಿಸಿದರು. ಉಪ ಮುಖ್ಯಮಂತ್ರಿಯಾದ ವೇಳೆ ಶುಭ ಕೋರಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಈಗ ಬಂದು ಶುಭ ಕೋರಿದ್ದೇನೆ ಎಂದು ರಾಘವೇಂದ್ರ ಸ್ಪಷ್ಟಪಡಿಸಿದ್ದಾರೆ. ಯಡಿಯೂರಪ್ಪ ಹಾಗೂ ಡಿಕೆ ಶಿವಕುಮಾರ್ ನಡುವೆ ರಾಜಕೀಯ ಹೊರತಾದ ಸ್ನೇಹ, ವಿಶ್ವಾಸ ಇರುವುದರಿಂದಾಗಿ ಶಿವಕುಮಾರ್ ಅವರನ್ನು ರಾಘವೇಂದ್ರ ಭೇಟಿ ಮಾಡಿದ್ದಾರೆ. ಡಿಸಿಎಂ ಆಗುತ್ತಿದ್ದಂತೆ ಶಿವಕುಮಾರ್ ಡಾಲರ್ಸ್ ಕಾಲೋನಿಯಲ್ಲಿರುವ ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

MP raghavendra meets minister lakshmi hebbalkar
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೇಟಿಯಾದ ಸಂಸದ ರಾಘವೇಂದ್ರ

ಹೆಬ್ಬಾಳ್ಕರ್ ಭೇಟಿಯಾದ ಸಂಸದ ರಾಘವೇಂದ್ರ: ಶಿವಮೊಗ್ಗ ಲೋಕಸಭಾ ಸದಸ್ಯ ಬಿ.ವೈ. ರಾಘವೇಂದ್ರ ಅವರು ಅವರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದರು. ಮಹಾರಾಷ್ಟ್ರ ಮಾಜಿ ಸಿಎಂ ವಿಲಾಸರಾವ್ ದೇಶಮುಖ್ ಅವರ ಪುತ್ರ, ಶಾಸಕ ಧೀರಜ್ ದೇಶಮುಖ್ ಉಪಸ್ಥಿತಿಯಲ್ಲಿ ಭೇಟಿ ಮಾಡಿ ಸಮಾಲೋಚನೆ ನಡೆಸಿದರು. ಇದು ರಾಜಕೀಯ ಭೇಟಿಯಲ್ಲ ಅನೌಪಚಾರಿಕ ಭೇಟಿ ಎಂದು ಎಂಪಿ ಕಚೇರಿ ಮೂಲಗಳು ಮಾಹಿತಿ ನೀಡಿವೆ.

ಇದನ್ನೂ ಓದಿ: Lok Sabha election: ಲೋಕಸಭಾ ಹೊಂದಾಣಿಕೆ ವಿಚಾರವಾಗಿ ಹೆಚ್​ಡಿಕೆ ಹೇಳಿದ್ದು ಹೀಗೆ

Last Updated : Jun 12, 2023, 3:59 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.