ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕು ಹರಡುವುದನ್ನು ನಿಯಂತ್ರಿಸಲು ಏರಿಯಲ್ ವರ್ಕ್ಸ್ ಏರೋ ಎಲ್ಎಲ್ಪಿ (Aerialworks Aero LLP) ವತಿಯಿಂದ ಸಾವಯವ ಸೋಂಕು ನಿವಾರಕವನ್ನು ಪ್ರಾಯೋಗಿಕವಾಗಿ ವೈಮಾನಿಕ ಸಿಂಪಡಣೆಗೆ ಕಂದಾಯ ಸಚಿವ ಆರ್.ಅಶೋಕ್ ಚಾಲನೆ ನೀಡಿದ್ದಾರೆ.
ಇಲ್ಲಿನ ಜಕ್ಕೂರು ಏರೋಡ್ರಮ್ ಆವರಣದಲ್ಲಿ ಒಂದು ಲಘು ವಿಮಾನದ ಮೂಲಕ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ.
![R Ashok drives aerial spray in the city for infection control](https://etvbharatimages.akamaized.net/etvbharat/prod-images/kn-bng-02-ashok-sanitisation-7202707_29052021174254_2905f_1622290374_24.jpg)
ಬಳಿಕ ಮಾತನಾಡಿದ ಕಂದಾಯ ಸಚಿವ ಆರ್ ಅಶೋಕ್, ಮಾರ್ಕೆಟ್ಗಳಲ್ಲಿ ನಾಳೆಯಿಂದ ದ್ರಾವಣ ಸ್ಪ್ರೇ ಮಾಡಲಾಗುತ್ತದೆ. ಶಿವಾಜಿನಗರ, ಕಲಾಸಿಪಾಳ್ಯ, ಕೆ ಆರ್ ಮಾರ್ಕೆಟ್ಗಳಲ್ಲಿ ಸೋಮವಾರದಿಂದ ದ್ರಾವಣ ಸಿಂಪಡಣೆ ಆರಂಭವಾಗುತ್ತದೆ. ಬೆಳಗ್ಗೆ 8-10ರವರೆಗೆ ಆರ್ಗ್ಯಾನಿಕ್ ದ್ರಾವಣ ಸಿಂಪಡಣೆ ಮಾಡಲಾಗುತ್ತದೆ.
ಈ ಪೈಲೆಟ್ ಪ್ರಾಜೆಕ್ಟ್ಗೆ ಸರ್ಕಾರ ಯಾವುದೇ ಹಣ ಕೊಡ್ತಿಲ್ಲ. ಪೈಲೆಟ್ ಪ್ರಾಜೆಕ್ಟ್ ಆಗಿದ್ದು, ಫಲಿತಾಂಶ ನೋಡಿಕೊಂಡು ಸರ್ಕಾರ ನಿರ್ಧರಿಸಲಿದೆ. ಇದು ಪರಿಣಾಮಕಾರಿಯಾದರೆ ಅಳವಡಿಕೆ ಮಾಡುತ್ತೇವೆ ಎಂದರು.
![R Ashok drives aerial spray in the city for infection control](https://etvbharatimages.akamaized.net/etvbharat/prod-images/kn-bng-02-ashok-sanitisation-7202707_29052021174254_2905f_1622290374_453.jpg)
ಇನ್ನು, ಲಾಕ್ಡೌನ್ ವಿಸ್ತರಣೆ ಕುರಿತು ಪ್ರತಿಕ್ರಿಯಿಸಿ, ಬೆಂಗಳೂರಿನಲ್ಲಿ ಕೋವಿಡ್ ನಿಯಂತ್ರಣಕ್ಕೆ ಬರ್ತಿದೆ. ಲಾಕ್ಡೌನ್ನಿಂದ ಒಳ್ಳೆಯದಾಗಿದೆ. ಜೂನ್ 7ರವರೆಗೆ ಲಾಕ್ಡೌನ್ ಜಾರಿಯಲ್ಲಿದೆ.
ಮುಂದಿನ ನಿರ್ಧಾರ ಸಿಎಂ ಕೈಗೊಳ್ಳುತ್ತಾರೆ. ನಾವು ಒಮ್ಮೆಲೆ ರಿಲ್ಯಾಕ್ಸೇಷನ್ ಕೊಡಲಾಗುವುದಿಲ್ಲ. ಹಂತ ಹಂತವಾಗಿ ರಿಲ್ಯಾಕ್ಸೇಷನ್ ಕೊಡಿ ಅಂತ ಸಿಎಂಗೆ ನಾವು ಸಲಹೆ ಕೊಟ್ಟಿದ್ದೇವೆ.
ಜಿಲ್ಲೆಗಳಲ್ಲಿ ಇನ್ನೂ ಸೋಂಕು ತಡೆಗೆ ಬಂದಿಲ್ಲ. ಹಾಗಾಗಿ, ಹಂತ ಹಂತವಾಗಿ ಲಾಕ್ಡೌನ್ ತೆರವಿನ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ಸಲಹೆ ಕೊಟ್ಟಿದ್ದೇವೆ ಎಂದರು.