ETV Bharat / state

ಬೇರೆ ಏರಿಯಾಗೆ ಬಂದವನ ಫಾಲೋ ಮಾಡಿದ್ದ ಹಂತಕ.. ಗುಟ್ಕಾ ಪ್ಯಾಕೆಟ್ ತೆಗೆಯುವಷ್ಟರಲ್ಲೇ ಕುತ್ತಿಗೆ ಸೀಳಿಬಿಟ್ಟ!

ಕುತ್ತಿಗೆಗೆ ಕೊಯ್ದಿದ್ದರಿಂದ ಮಿಸುಕಾಡಲೂ ಸಾಧ್ಯವಾಗದೆ ವಿಶ್ವ ನೆಲಕ್ಕುರುಳಿದ್ದ. ಸ್ಥಳದಲ್ಲಿನ ಸಿಸಿಟಿವಿ ಪ್ರಕಾರ, ಒಬ್ಬನೇ ಈ ಹತ್ಯೆ ಮಾಡಿದ್ದಾನೆ. ಆ ವಿಡಿಯೋ ಆಧರಿಸಿ ಹಂತಕನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ..

author img

By

Published : Feb 9, 2022, 3:56 PM IST

Updated : Feb 9, 2022, 8:02 PM IST

person-murdered-on road at-bengaluru
ಬೆಂಗಳೂರು ವ್ಯಕ್ತಿ ಕೊಲೆ

ಬೆಂಗಳೂರು : ಸ್ನೇಹಿತನ ಮನೆಗೆ ಹೋಗಿ ಬರುವಾಗ ದುಷ್ಕರ್ಮಿಗಳು ಮಾರಕಾಸ್ತ್ರದಿಂದ ಕುತ್ತಿಗೆ ಸೀಳಿ ಪರಾರಿಯಾಗಿರುವ ಘಟನೆ ನಂದಿನಿಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ನರಸಿಂಹ ಸ್ವಾಮಿಲೇಔಟ್ ವ್ಯಾಪ್ತಿಯಲ್ಲಿ ನಡೆದಿದೆ.

ವಿದ್ಯಾರಣ್ಯಪುರ ನಿವಾಸಿ ವಿಶ್ವನಾಥ ಕೊಲೆಯಾದವ‌. ಈ ಹಿಂದೆ ಇದೇ ನರಸಿಂಹಸ್ವಾಮಿ ಲೇಔಟ್​​​ನಲ್ಲಿ ಈತ ವಾಸವಾಗಿದ್ದ. ಇತ್ತೀಚೆಗೆ ವಿದ್ಯಾರಣ್ಯಪುರಕ್ಕೆ ತೆರಳಿದ್ದ. ಇಂದು ಘಟನೆ ನಡೆದ ಜಾಗದಲ್ಲೇ ಪರಿಚಯಸ್ಥನಾಗಿದ್ದ ರವಿ ಎಂಬಾತನೊಂದಿಗೆ ಮಾತನಾಡಲು ಬಂದಿದ್ದನಂತೆ. ಈ ಹಿಂದೆ ಇದೇ ಏರಿಯಾದಲ್ಲಿದ್ದ ವೇಳೆ ರವಿ ಕುಟುಂಬದೊಂದಿಗೆ ಒಂದಷ್ಟು ಕಿರಿಕ್ ನಡೆದಿತ್ತು ಎನ್ನಲಾಗಿದೆ.

ಈ ಹಿಂದೊಮ್ಮೆ ವಿವಾಹೇತರ ಸಂಬಂಧದ ವಿಚಾರಗಳ ಬಗ್ಗೆ ಕೂಡ ಗಲಾಟೆ ನಡೆದಿತ್ತು. ಹೀಗಾಗಿ, ಇದೇ ವಿಚಾರವಾಗಿ ವಿಶ್ವನಾಥ್​, ರವಿಯ ಮನೆಗೆ ಬಂದಿರುವ ಸಾಧ್ಯತೆಯಿದೆ. ಸ್ಥಳೀಯರು ಹೇಳುವ ಪ್ರಕಾರ, ಇಂದು ಬೆಳಗಿನ ಜಾವ ಕೂಡ ಸ್ವಲ್ಪ ಮಟ್ಟಿಗೆ ಅವರ ನಡುವೆ ಕಿರಿಕ್ ನಡೆದಿತ್ತಂತೆ.

ಮಾರಕಾಸ್ತ್ರದಿಂದ ಕುತ್ತಿಗೆ ಸೀಳಿ ವ್ಯಕ್ತಿ ಕೊಲೆ

ನಂತರ ವಿಶ್ವನಾಥ್,​ ರವಿಯ ಮನೆಯಿಂದ ಹೊರ ಬಂದು ಜೇಬಿನಲ್ಲಿದ್ದ ಗುಟ್ಕಾ ಪ್ಯಾಕೆಟ್ ಹರಿದು ಬಾಯಿಗಿಡುವಷ್ಟರಲ್ಲಿ ಬೈಕ್​ನಲ್ಲಿ ಬಂದ ಹಂತಕ ವಾಹನ ರನ್ನಿಂಗ್​ನಲ್ಲಿದ್ದಾಗಲೇ ಮಾರಕಾಸ್ತ್ರದಿಂದ ಕುತ್ತಿಗೆ ಸೀಳಿ ಕ್ಷಣಾರ್ಧದಲ್ಲೇ ಎಸ್ಕೇಪ್ ಆಗಿದ್ದಾನೆ ಎಂದು ತಿಳಿದು ಬಂದಿದೆ.

ಕುತ್ತಿಗೆಗೆ ಕೊಯ್ದಿದ್ದರಿಂದ ಮಿಸುಕಾಡಲೂ ಸಾಧ್ಯವಾಗದೆ ವಿಶ್ವ ನೆಲಕ್ಕುರುಳಿದ್ದ. ಸ್ಥಳದಲ್ಲಿನ ಸಿಸಿಟಿವಿ ಪ್ರಕಾರ, ಒಬ್ಬನೇ ಈ ಹತ್ಯೆ ಮಾಡಿದ್ದಾನೆ. ಆ ವಿಡಿಯೋ ಆಧರಿಸಿ ಹಂತಕನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಇನ್ನೊಂದೆಡೆ ವಿಶ್ವನಾಥ್​ ಮನೆಗೆ ಬಂದ ವೇಳೆ ಇದ್ದ ರವಿ ಕೊಲೆಯಾದ ಬಳಿಕ ಎಸ್ಕೇಪ್ ಆಗಿದ್ದಾನೆ. ಹೀಗಾಗಿ, ಅವರ ಮನೆಯವರನ್ನ ಪೊಲೀಸರು ಠಾಣೆಗೆ ಕರೆ ತಂದು ವಿಚಾರಣೆ ನಡೆಸುತ್ತಿದ್ದಾರೆ. ಈ ಬಗ್ಗೆ ನಂದಿನಿಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಉತ್ತರ ವಿಭಾಗದ ಡಿಸಿಪಿ ವಿನಾಯಕ್ ಪಾಟೀಲ್ ತಿಳಿಸಿದ್ದಾರೆ.

ಇದನ್ನೂ ಓದಿ: ಅಂತರ್ಜಾತಿ ವಿವಾಹಕ್ಕೆ ವಿರೋಧ: ಪ್ರೇಮಿಗಳ ದಿನಕ್ಕೂ ಮುನ್ನವೇ ನೇಣಿಗೆ ಶರಣಾದ ಜೋಡಿ

ಬೆಂಗಳೂರು : ಸ್ನೇಹಿತನ ಮನೆಗೆ ಹೋಗಿ ಬರುವಾಗ ದುಷ್ಕರ್ಮಿಗಳು ಮಾರಕಾಸ್ತ್ರದಿಂದ ಕುತ್ತಿಗೆ ಸೀಳಿ ಪರಾರಿಯಾಗಿರುವ ಘಟನೆ ನಂದಿನಿಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ನರಸಿಂಹ ಸ್ವಾಮಿಲೇಔಟ್ ವ್ಯಾಪ್ತಿಯಲ್ಲಿ ನಡೆದಿದೆ.

ವಿದ್ಯಾರಣ್ಯಪುರ ನಿವಾಸಿ ವಿಶ್ವನಾಥ ಕೊಲೆಯಾದವ‌. ಈ ಹಿಂದೆ ಇದೇ ನರಸಿಂಹಸ್ವಾಮಿ ಲೇಔಟ್​​​ನಲ್ಲಿ ಈತ ವಾಸವಾಗಿದ್ದ. ಇತ್ತೀಚೆಗೆ ವಿದ್ಯಾರಣ್ಯಪುರಕ್ಕೆ ತೆರಳಿದ್ದ. ಇಂದು ಘಟನೆ ನಡೆದ ಜಾಗದಲ್ಲೇ ಪರಿಚಯಸ್ಥನಾಗಿದ್ದ ರವಿ ಎಂಬಾತನೊಂದಿಗೆ ಮಾತನಾಡಲು ಬಂದಿದ್ದನಂತೆ. ಈ ಹಿಂದೆ ಇದೇ ಏರಿಯಾದಲ್ಲಿದ್ದ ವೇಳೆ ರವಿ ಕುಟುಂಬದೊಂದಿಗೆ ಒಂದಷ್ಟು ಕಿರಿಕ್ ನಡೆದಿತ್ತು ಎನ್ನಲಾಗಿದೆ.

ಈ ಹಿಂದೊಮ್ಮೆ ವಿವಾಹೇತರ ಸಂಬಂಧದ ವಿಚಾರಗಳ ಬಗ್ಗೆ ಕೂಡ ಗಲಾಟೆ ನಡೆದಿತ್ತು. ಹೀಗಾಗಿ, ಇದೇ ವಿಚಾರವಾಗಿ ವಿಶ್ವನಾಥ್​, ರವಿಯ ಮನೆಗೆ ಬಂದಿರುವ ಸಾಧ್ಯತೆಯಿದೆ. ಸ್ಥಳೀಯರು ಹೇಳುವ ಪ್ರಕಾರ, ಇಂದು ಬೆಳಗಿನ ಜಾವ ಕೂಡ ಸ್ವಲ್ಪ ಮಟ್ಟಿಗೆ ಅವರ ನಡುವೆ ಕಿರಿಕ್ ನಡೆದಿತ್ತಂತೆ.

ಮಾರಕಾಸ್ತ್ರದಿಂದ ಕುತ್ತಿಗೆ ಸೀಳಿ ವ್ಯಕ್ತಿ ಕೊಲೆ

ನಂತರ ವಿಶ್ವನಾಥ್,​ ರವಿಯ ಮನೆಯಿಂದ ಹೊರ ಬಂದು ಜೇಬಿನಲ್ಲಿದ್ದ ಗುಟ್ಕಾ ಪ್ಯಾಕೆಟ್ ಹರಿದು ಬಾಯಿಗಿಡುವಷ್ಟರಲ್ಲಿ ಬೈಕ್​ನಲ್ಲಿ ಬಂದ ಹಂತಕ ವಾಹನ ರನ್ನಿಂಗ್​ನಲ್ಲಿದ್ದಾಗಲೇ ಮಾರಕಾಸ್ತ್ರದಿಂದ ಕುತ್ತಿಗೆ ಸೀಳಿ ಕ್ಷಣಾರ್ಧದಲ್ಲೇ ಎಸ್ಕೇಪ್ ಆಗಿದ್ದಾನೆ ಎಂದು ತಿಳಿದು ಬಂದಿದೆ.

ಕುತ್ತಿಗೆಗೆ ಕೊಯ್ದಿದ್ದರಿಂದ ಮಿಸುಕಾಡಲೂ ಸಾಧ್ಯವಾಗದೆ ವಿಶ್ವ ನೆಲಕ್ಕುರುಳಿದ್ದ. ಸ್ಥಳದಲ್ಲಿನ ಸಿಸಿಟಿವಿ ಪ್ರಕಾರ, ಒಬ್ಬನೇ ಈ ಹತ್ಯೆ ಮಾಡಿದ್ದಾನೆ. ಆ ವಿಡಿಯೋ ಆಧರಿಸಿ ಹಂತಕನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಇನ್ನೊಂದೆಡೆ ವಿಶ್ವನಾಥ್​ ಮನೆಗೆ ಬಂದ ವೇಳೆ ಇದ್ದ ರವಿ ಕೊಲೆಯಾದ ಬಳಿಕ ಎಸ್ಕೇಪ್ ಆಗಿದ್ದಾನೆ. ಹೀಗಾಗಿ, ಅವರ ಮನೆಯವರನ್ನ ಪೊಲೀಸರು ಠಾಣೆಗೆ ಕರೆ ತಂದು ವಿಚಾರಣೆ ನಡೆಸುತ್ತಿದ್ದಾರೆ. ಈ ಬಗ್ಗೆ ನಂದಿನಿಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಉತ್ತರ ವಿಭಾಗದ ಡಿಸಿಪಿ ವಿನಾಯಕ್ ಪಾಟೀಲ್ ತಿಳಿಸಿದ್ದಾರೆ.

ಇದನ್ನೂ ಓದಿ: ಅಂತರ್ಜಾತಿ ವಿವಾಹಕ್ಕೆ ವಿರೋಧ: ಪ್ರೇಮಿಗಳ ದಿನಕ್ಕೂ ಮುನ್ನವೇ ನೇಣಿಗೆ ಶರಣಾದ ಜೋಡಿ

Last Updated : Feb 9, 2022, 8:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.